ಹಾವೇರಿಯಲ್ಲಿ ಫೆ.೨೪ರಂದು ಶಿವರಾತ್ರಿ ಸಂಭ್ರಮ-೨೦೨೫
ಹಾವೇರಿ: ಇಲ್ಲಿನ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಫೆ.೨೫ರಂದು ರಾತ್ರಿ ಎಂಟಗಂಟೆಯಿಂದ ಬೆಳಿಗ್ಗೆ ೪ಎರವರೆಗೆ ಶಿವರಾತ್ರಿ ಸಂಭ್ರಮ-೨೦೨೫ ಕಾರ್ಯಕ್ರಮವನ್ನು ದರ್ಶನಕುಮಾರ ರುದ್ರಪ್ಪ ಲಮಾಣಿ ಅಭಿಮಾನಿಗಳ ಬಳಗದ ವತಿಯಿಂದ ಆಯೋಜಿಸಲಾಗಿದೆ.
ಈವಿಷಯವನ್ನು ಸೋಮವಾರ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ ಜಿಲ್ಲಾ ಯುವಕಾಂಗ್ರೆಸ್ ಅಧ್ಯಕ್ಷ ದರ್ಶನ ಲಮಾಣಿ, ಶಿರಹಟ್ಟಿ ಶ್ರೀಫಕ್ಕೀರೇಶ್ವರ ಸಂಸ್ಥಾನಮಠದ ದಿಂಗಾಲೇಶ್ವರ ಸ್ವಾಮಿಜಿ,ಹುಕ್ಕೇರಿಮಠದ ಸದಾಶಿವ ಸ್ವಾಮಿಜಿ,ಹೊಸಮಠದ ಬಸವಶಾಂತಲಿಂಗ ಸ್ವಾಮಿಜಿ ಸಾನಿಧ್ಯವಹಿಸುವರು, ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಉದ್ಘಾಟಿಸಲಿದ್ದಾರೆ. ಮುಖ್ಯಅತಿಥಿಗಳಾಗಿ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಮುಖ್ಯಸಚೇತಕ ಸಲೀಂ ಅಹಮ್ಮದ, ಶಾಸಕರಾ ಬಸವರಾಜ ಶಿವಣ್ಣನವರ ಸೇರಿದಂತೆ ಅನೇಕರು ಆಗಮಿಸುವರು, ಯುವಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ ಅಧ್ಯಕ್ಷತೆ ವಹಿಸಲಿದ್ದಾರೆ.
ಶಿವರಾತ್ರಿ ಸಂಭ್ರಮ ಕಾರ್ಯಕ್ರಮದಲ್ಲಿ ನಾಡಿನ ಉದಯೋನ್ಮಕ ಗಾಯಕರಾದ ರಿಗಮಪ ಖ್ಯಾತಿ ಪುನಿತ್, ರಶ್ಮಿಶ್ರೀ, ಮಿಥುನ್ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿಶೇಷವಾಗಿ ಮಂಗಳೂರಿನ ಹುಲಿಕುಣಿತ ತಂಡದವರು ಹುಲಿಕುಣಿತ ಪ್ರದರ್ಶನ ನೀಡುವರು. ಸಮಾರಂಭದಲ್ಲಿ ಭಾಗವಹಿಸುವ ಜನರಿಗೆ ವಿವಿಧ ಹಣ್ಣುಗಳನ್ನು ವಿತರಿಸಲಾಗುವುದು. ಹಾವೇರಿ ಹಾಗೂ ಸುತ್ತ ಮುತ್ತಲಿನ ಜನತೆ ಶಿವರಾತ್ರಿ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಜಿಲ್ಲಾ ಯುವಕಾಂಗ್ರೆಸ್ ಅಧ್ಯಕ್ಷ ದರ್ಶನ ಲಮಾಣಿ ಕೋರಿದರು.
ಪತ್ರಿಕಾಗೋಷ್ಠಿಯಲ್ಲಿ ಯುವಕಾಂಗ್ರೆಸ್ ಪ್ರಮುಖರಾದ ಸುದೀರ ಲಮಾಣಿ, ವಿನಯ ಪಾಲನಕರ, ನಾಗರಾಝ ಬಡಮ್ಮನವರ, ಅತಾವುಲ್ಲಾ ಖಾಜಿ,ಸಾದೀಕ್ ಮೇಲ್ಮೂರಿ.ಇಮಾಮ ಹಿರೇಮೂಗದೂರು, ಜಮೀರ ಜಿಗರಿ ಮತ್ತಿತರರು ಇದ್ದರು.