ಹಾವೇರಿಯಲ್ಲಿ ಬಿತ್ತನೆ ಬೀಜ ಖರೀದಿಸಲು ಮುಗಿದಿದ್ದ ರೈತರು, ನೂಕ ನುಗ್ಗಲುಹಾವೇರಿ: ಮುಂಗಾರು ಉತ್ತಮ ಆರಂಭದಲ್ಲಿ ಉತ್ತಮ ಹದ ಮಳೆಯಾಗಿದೆ. ರೈತರು ಬಿತ್ತನೆಗಾಗಿ ಸೋಯಾಬಿನ್ ಬಿತ್ತನೆ ಬೀಜ ಹಾಗೂ ಗೋವಿನ ಜೋಳ ಖರೀದಿಗೆ ಸೋಮವಾರ ಬೆಳಗ್ಗಿನಿಂದಲೇ ಕೃಷಿ ಇಲಾಖೆಯ ಬೀಜ ವಿತರಣಾ ಕೇಂದ್ರದ ಮುಂದೆ ರೈತರು ಸರದಿ ಸಾಲಿನಲ್ಲಿ ನಿಂತು ಬಿತ್ತನೆ ಬೀಜ ಖರೀದಿ ಸುವ ದೃಶ್ಯ ಕಂಡು ಬಂದವು.ಹಾವೇರಿಯ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಆವರಣದಲ್ಲಿ ಎರಡು ಕಡೆಗಳಲ್ಲಿ ಸೋಯಾಬೀನ್ ಬಿತ್ತನೆ ಬೀಜ ವಿತರಿಸಲಾಗುತ್ತಿದ್ದು ನೂರಾರು ಸಂಖ್ಯೆಯಲ್ಲಿ ರೈತರು ಆಧಾರ್ ಕಾರ್ಡ್ಗಳೊಂದಿಗೆ ಸರದಿ ಸಾಲಿನಲ್ಲಿ ನಿಂತು ಬಿತ್ತನೆ ಬೀಜ ಖರೀದಿಸುತ್ತಿದ್ದಾರೆ .25 ಕೆಜಿಯ ಸೋಯಾಬಿನ್ ಬಿತ್ತನೆ ಬೀಜಕ್ಕೆ 1170 ಹಾಗೂ ಇನ್ನೊಂದು ಕಂಪನಿಯ ಬಿತ್ತನೆ ಬೀಜಕ್ಕೆ 12 50ರೂ ಗಳಂತೆ ಮಾರಾಟ ಮಾಡಲಾಗುತ್ತಿದೆ. ನೂರಾರು ಸಂಖ್ಯೆಯಲ್ಲಿ ರೈತರು ನೆರೆದಿರುವುದರಿಂದ ರೈತ ಸಂಪರ್ಕ ಕೇಂದ್ರದ ಎರಡು ಕಡೆಗಳಲ್ಲಿ ಸಹಜವಾಗಿ ನೂಕು ನುಗ್ಗಲು ಇದೆ.ಇಬ್ಬರು ಪೊಲೀಸ್ ಸಿಬ್ಬಂದಿ ಜನರನ್ನು ನಿಯಂತ್ರಿಸಲು ಪ್ರಯಾಸ ಪಡುತ್ತಿದ್ದಾರೆ.ಬಿತ್ತನೆ ಬೀಜದ ಸಂಗ್ರಹ ಹಾಗೂ ಮಾರಾಟದ ಬಗ್ಗೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ಮೊಬೈಲ್ ಗೆ ಕರೆ ಮಾಡಿದರೆ ಅವರು ಕರೆ ಸ್ವೀಕರಿಸಲ್ಲ.ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಹಾವೇರಿಯಲ್ಲಿ ಬಿತ್ತನೆ ಬೀಜ ಖರೀದಿಸಲು ಮುಗಿದಿದ್ದ ರೈತರು, ನೂಕ ನುಗ್ಗಲು
Date:
ಹಾವೇರಿಯಲ್ಲಿ ಬಿತ್ತನೆ ಬೀಜ ಖರೀದಿಸಲು ಮುಗಿದಿದ್ದ ರೈತರು, ನೂಕ ನುಗ್ಗಲುಹಾವೇರಿ: ಮುಂಗಾರು ಉತ್ತಮ ಆರಂಭದಲ್ಲಿ ಉತ್ತಮ ಹದ ಮಳೆಯಾಗಿದೆ. ರೈತರು ಬಿತ್ತನೆಗಾಗಿ ಸೋಯಾಬಿನ್ ಬಿತ್ತನೆ ಬೀಜ ಹಾಗೂ ಗೋವಿನ ಜೋಳ ಖರೀದಿಗೆ ಸೋಮವಾರ ಬೆಳಗ್ಗಿನಿಂದಲೇ ಕೃಷಿ ಇಲಾಖೆಯ ಬೀಜ ವಿತರಣಾ ಕೇಂದ್ರದ ಮುಂದೆ ರೈತರು ಸರದಿ ಸಾಲಿನಲ್ಲಿ ನಿಂತು ಬಿತ್ತನೆ ಬೀಜ ಖರೀದಿ ಸುವ ದೃಶ್ಯ ಕಂಡು ಬಂದವು.ಹಾವೇರಿಯ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿ ಆವರಣದಲ್ಲಿ ಎರಡು ಕಡೆಗಳಲ್ಲಿ ಸೋಯಾಬೀನ್ ಬಿತ್ತನೆ ಬೀಜ ವಿತರಿಸಲಾಗುತ್ತಿದ್ದು ನೂರಾರು ಸಂಖ್ಯೆಯಲ್ಲಿ ರೈತರು ಆಧಾರ್ ಕಾರ್ಡ್ಗಳೊಂದಿಗೆ ಸರದಿ ಸಾಲಿನಲ್ಲಿ ನಿಂತು ಬಿತ್ತನೆ ಬೀಜ ಖರೀದಿಸುತ್ತಿದ್ದಾರೆ .25 ಕೆಜಿಯ ಸೋಯಾಬಿನ್ ಬಿತ್ತನೆ ಬೀಜಕ್ಕೆ 1170 ಹಾಗೂ ಇನ್ನೊಂದು ಕಂಪನಿಯ ಬಿತ್ತನೆ ಬೀಜಕ್ಕೆ 12 50ರೂ ಗಳಂತೆ ಮಾರಾಟ ಮಾಡಲಾಗುತ್ತಿದೆ. ನೂರಾರು ಸಂಖ್ಯೆಯಲ್ಲಿ ರೈತರು ನೆರೆದಿರುವುದರಿಂದ ರೈತ ಸಂಪರ್ಕ ಕೇಂದ್ರದ ಎರಡು ಕಡೆಗಳಲ್ಲಿ ಸಹಜವಾಗಿ ನೂಕು ನುಗ್ಗಲು ಇದೆ.ಇಬ್ಬರು ಪೊಲೀಸ್ ಸಿಬ್ಬಂದಿ ಜನರನ್ನು ನಿಯಂತ್ರಿಸಲು ಪ್ರಯಾಸ ಪಡುತ್ತಿದ್ದಾರೆ.ಬಿತ್ತನೆ ಬೀಜದ ಸಂಗ್ರಹ ಹಾಗೂ ಮಾರಾಟದ ಬಗ್ಗೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರ ಮೊಬೈಲ್ ಗೆ ಕರೆ ಮಾಡಿದರೆ ಅವರು ಕರೆ ಸ್ವೀಕರಿಸಲ್ಲ.ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.