
ಹಾವೇರಿಯಲ್ಲಿ ಶ್ರದ್ಧಾ-ಭಕ್ತಿಯಿಂದ ರಾಮನವಮಿ ಆಚರಣೆ
ಹಾವೇರಿ: ಶ್ರೀರಾಮಚಂದ್ರನ ಜನ್ಮ ದಿನವನ್ನು ಶುಕ್ರವಾರ ಶ್ರದ್ಧಾ-ಭಕ್ತಿಯಿಂದ ಹಾಗೂ ಅತ್ಯಂತ ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.. ನಗರ, ಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲಿ ರಾಮ ಭಕ್ತರು ಎಲ್ಲಡೆ ಪಾನಕ, ಮಜ್ಜಿಗೆ ಹಾಗೂ ಕೋಸಂಬರಿ ಸಿಹಿ ತಿನಿಸು ಹಂಚಿ ಸಂಭ್ರಮಿಸಿದರು.
ನಗರದ ಶ್ರೀರಾಮಮಂದಿರದಲ್ಲಿ ಮರ್ಯಾದಾ ಪುರಷೋತ್ತಮನಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಮುಂಜಾನೆ ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜಾ ವಿಧಿವಿಧಾನಗಳನ್ನು ಅನುಸರಿಸಲಾಯಿತು. ಶ್ರೀರಾಮ, ಲಕ್ಷ್ಮಣ, ಸೀತಾಮಾತೆ ಮತ್ತು ಆಂಜನೇಯ ಮೂರ್ತಿಗಳಿಗೆ ವಿವಿಧ ದ್ರವ್ಯಗಳಿಂದ ಅಭಿಷೇಕ ನಡೆಸಲಾಯಿತು. ನಂತರ ವಿವಿಧ ವೇಷಭೂಷಣಗಳ ಆಭರಣಗಳ ಪುಷ್ಪಮಾಲೆಗಳಿಂದ ಅಲಂಕರಿಸಿ ಪೂಜೆ ನಡೆದವು.
ರಾಮನವಮಿ ಅಂಗವಾಗಿ ನಗರದ ನಾಗೇಂದ್ರನಮಟ್ಟಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನಂ: ೮ ಮತ್ತು ಶ್ರಿ ಶಕ್ತಿ ವೃದ್ಧಾಶ್ರಮದಲ್ಲಿ ಪ್ರಯುಕ್ತ ನಾಗೇಂದ್ರನಮಟ್ಟಿಯ ಯುವಕ ಸಂಘದಿಂದ
ಮಕ್ಕಳಿಗೆ ಮತ್ತು ಹಿರಿಯರಿಗೆ ಸಿಹಿ ಹಂಚಲಾಯಿತು. ಈವೇಳೆ ಯುವ ಮುಖಂಡ ವೀರೇಶ್ ಹ್ಯಾಡ್ಲ ಮಾತನಾಡಿ ನಾವೇಲ್ಲರೂ ಶ್ರೀ ರಾಮನ ಸತ್ಯಸಂಧತೆ ಮತ್ತು ಆರ್ದಶ ಗುಣಗಳನ್ನು ಅಳವಡಿಸಿಕೊಂಡು, ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬದುಕಿ ತಂದೆ- ತಾಯಿಗಳಿಗೆ ಕಿರ್ತಿ ತರುವ ಮಕ್ಕಳಾಗಿ ಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಶಿವಕುಮಾರ್ ಬಣಕಾರ, ಮಂಜುನಾಥ ಕಂಬಾಳಿ, ಅನಿಲ್ ಮುದ್ದಿ, ಮಾರುತಿ ಕೊಂಡೆಮ್ಮನರ, ಸುಲೇಮಾನ್ ಜಮಾದಾರ, ಈರಣ್ಣ ಹುಬ್ಬಳ್ಳಿ, ನಾಗರಾಜ್ ಡಿಳ್ಳೆಪ್ಪನವರ, ಶ್ರೀಧರ್ ಬ್ಯಾಡಗಿ, ಮಕಬುಲ್ ತಿಳವಳ್ಳಿ, ಗೋವಿಂದಪ್ಪ ದೊಡ್ಡಮನಿ, ಮುಖ್ಯೋಪಾಧ್ಯಾಯ ಕೋಳಿ ನಿಂಗಣ್ಣಾ ಮತ್ತು ಶಾಲಾ ಸಿಬ್ಬಂದಿ ಸಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.

