ಹಾವೇರಿ:ಹೆಸ್ಕಾಂ ನಿರ್ಲಕ್ಷ್ಯಕ್ಕೆ ಓರ್ವ ಯುವಕ ಬಲಿ, ಸೆಕ್ಷನ್ ಅಧಿಕಾರಿ ಮರಿಗೌಡ್ರ, ಲೈನ್ಮನ್ ಇನಾಂದಾರ್, ಎಲೆಕ್ಟ್ರಿಕಲ್ ಕಾಂಟಾಕ್ಷರ ಪಟ್ಟಣಶೆಟ್ಟಿ ಅವರ ಮೇಲೆ ದೂರು ದಾಖಲು
ಹಾವೇರಿ: ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಓರ್ವ ಯುವಕ ವಿದ್ಯುತ್ ತಂತಿಯ ಮೇಲೆ ಸುಟ್ಟು ಸಾವನ್ನಪ್ಪಿದ್ದು, ಇನ್ನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಹಾವೇರಿ ನಗರದಲ್ಲಿ ಶನಿವಾರ ಸಂಜೆ ೦೬-೨೫ ಗಂಟೆ ಸುಮಾರಿಗೆ ನಗರದ ಮಣಿಗಾರ ಓಣಿಯಲ್ಲಿ ನಡೆದಿದೆ.
ಮೃತನನ್ನು ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಹೂವಿನ ಶಿಗ್ಲಿಯ ಸುರೇಶ ಹನುಂತಪ್ಪ ಬಳ್ಳಾರಿ (೩೪)ಎಂದು ತಿಳಿದು ಬಂದಿದೆ. ಗಾಯಾಳು ನಿಂಗ್ಪ ಗುಡ್ಡಪ್ಪ ಕಟಗಿ ಸಹ ಹೂನಿನ ಶಿಗ್ಲಿಗ್ರಾಮದವನಾಗಿದ್ದಾನೆ. ಹಾವೇರಿ ನಗರದ ಮಣಿಗಾರ ಓಣಿಯಲ್ಲಿ ಬೋರ್ ವೇಲ್ಗೆ ತ್ರೀ ಪೇಸ್ ಲೈನ್ ಅವಳಿಡಿಸುವಾಗ ರ್ಯಾಬಿಟ್ ವೈರಿಂಗ್ ಮಾಡುತ್ತಿರುವಾಗ ಈ ಅವಘಡ ನಡೆದಿದೆ.
ವಿದ್ಯುತ್ ಖಡಿತ ಗೊಳಿಸಿಲೈನ್ ಮನ್ ಕಾಮಗಾರಿ ಮಾಡುತ್ತಿದ್ದ , ಇಬ್ಬರು ಹೊಸ ಲೈನ್ ಎಳೆಯುವ ಕೆಲಸ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ವಿದ್ಯುತ್ ಸಂಪರ್ಕ ಮಾಡಿದ್ದರಿಂದ ವಿದ್ಯುತ್ ಹರಿದು ಸುರೇಶ ಸಾವನ್ನಪ್ಪಿದ್ದಾನೆ. ಇನ್ನೊಬ್ಬ ಕಂಬದಿಂಧ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದು, ಇವನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾತ್ರಿ ೮ರವರೆಗೂ ಸಹ ಕಂಬದಲ್ಲಿಯೇ ಲೈನ್ ಎಳೆಯುವ ಗುತ್ತಿಗೆ ಕಾರ್ಮಿಕನ ಶವ ನೇತಾಡುತ್ತಿತ್ತು. ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೆ ಈ ಅವಘಡಕ್ಕೆ ಕಾರಣ ಎಂದು ಆರೋಪಿಸಲಾಗಿದೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಸಂಚಾರ ದಟ್ಟಣೆ ಯನ್ನು ನಿಯಂತ್ರಿಸಿದರು.
ಮೂವರ ಮೇಲೆ ಪ್ರಕರಣ ದಾಖಲು: ಸೂಕ್ತ ಮುಂಜಾಗ್ರತೆ ವಹಿಸದೆ ದುಡುಕಿನಿಂದ, ನಿರ್ಲಕ್ಷ್ಯತನದಿಂದ ಸುರೇಶ ಹನುಮಂತಪ್ಪ ಬಳ್ಳಾರಿ ಈತನ ಸಾವಿಗೆ ಹಾಗೂ ನಿಂಗಪ್ಪ ಗುಡ್ಡಪ್ಪ ಕಟಗಿ ಇವರ ತಲೆಗೆ ತೀವ್ರ ಗಾಯವಾಗಲು ಕಾರಣರಾದ ಹಾವೇರಿಯ ದೇಸಾಯಿಗಲ್ಲಿ ಎಲೆಕ್ಟ್ರಿಕಲ್ ಕಾಂಟಾಕ್ಟರ್ ಬಸವರಾಜ ಪುಟ್ಟಪ್ಪ ಪಟ್ಟಣಶೆಟ್ಟಿ, ಹೆಸ್ಕಾಂ ಹಾವೇರಿ ೧ ನೇ ಸೆಕ್ಷನ್ ಆಫೀಸರ್ ವಿ.ಎಸ್.ಮರಿಗೌಡ್ರ,ಹೆಸ್ಕಾಂ ಹಾವೇರಿ ಲೈನಮನ್ ಸೈಯದಅಹ್ಮದ ಸೈಯದಮೈನುದ್ದೀನ ಇನಾಂದಾರ ಇವರ ಮೇಲೆ ೩೦/೨೦೨೪೩೦೪ (ಂ) ಸಹ ಕಲಂ ೩೪ ಐಪಿಸಿ ಅಡಿ ಹಾವೇರಿ ಶಹರ ಪೊಲೀಸ್ಠಾಣೆಯಲ್ಲಿ ದೂರು ದಾಲಾಗಿದೆ.
ಹಾವೇರಿ:ಹೆಸ್ಕಾಂ ನಿರ್ಲಕ್ಷ್ಯಕ್ಕೆ ಓರ್ವ ಯುವಕ ಬಲಿ, ಸೆಕ್ಷನ್ ಅಧಿಕಾರಿ ಮರಿಗೌಡ್ರ, ಲೈನ್ಮನ್ ಇನಾಂದಾರ್, ಎಲೆಕ್ಟ್ರಿಕಲ್ ಕಾಂಟಾಕ್ಷರ ಪಟ್ಟಣಶೆಟ್ಟಿ ಅವರ ಮೇಲೆ ದೂರು ದಾಖಲು
Date:
ಹಾವೇರಿ:ಹೆಸ್ಕಾಂ ನಿರ್ಲಕ್ಷ್ಯಕ್ಕೆ ಓರ್ವ ಯುವಕ ಬಲಿ, ಸೆಕ್ಷನ್ ಅಧಿಕಾರಿ ಮರಿಗೌಡ್ರ, ಲೈನ್ಮನ್ ಇನಾಂದಾರ್, ಎಲೆಕ್ಟ್ರಿಕಲ್ ಕಾಂಟಾಕ್ಷರ ಪಟ್ಟಣಶೆಟ್ಟಿ ಅವರ ಮೇಲೆ ದೂರು ದಾಖಲು
ಹಾವೇರಿ: ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಓರ್ವ ಯುವಕ ವಿದ್ಯುತ್ ತಂತಿಯ ಮೇಲೆ ಸುಟ್ಟು ಸಾವನ್ನಪ್ಪಿದ್ದು, ಇನ್ನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಹಾವೇರಿ ನಗರದಲ್ಲಿ ಶನಿವಾರ ಸಂಜೆ ೦೬-೨೫ ಗಂಟೆ ಸುಮಾರಿಗೆ ನಗರದ ಮಣಿಗಾರ ಓಣಿಯಲ್ಲಿ ನಡೆದಿದೆ.
ಮೃತನನ್ನು ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಹೂವಿನ ಶಿಗ್ಲಿಯ ಸುರೇಶ ಹನುಂತಪ್ಪ ಬಳ್ಳಾರಿ (೩೪)ಎಂದು ತಿಳಿದು ಬಂದಿದೆ. ಗಾಯಾಳು ನಿಂಗ್ಪ ಗುಡ್ಡಪ್ಪ ಕಟಗಿ ಸಹ ಹೂನಿನ ಶಿಗ್ಲಿಗ್ರಾಮದವನಾಗಿದ್ದಾನೆ. ಹಾವೇರಿ ನಗರದ ಮಣಿಗಾರ ಓಣಿಯಲ್ಲಿ ಬೋರ್ ವೇಲ್ಗೆ ತ್ರೀ ಪೇಸ್ ಲೈನ್ ಅವಳಿಡಿಸುವಾಗ ರ್ಯಾಬಿಟ್ ವೈರಿಂಗ್ ಮಾಡುತ್ತಿರುವಾಗ ಈ ಅವಘಡ ನಡೆದಿದೆ.
ವಿದ್ಯುತ್ ಖಡಿತ ಗೊಳಿಸಿಲೈನ್ ಮನ್ ಕಾಮಗಾರಿ ಮಾಡುತ್ತಿದ್ದ , ಇಬ್ಬರು ಹೊಸ ಲೈನ್ ಎಳೆಯುವ ಕೆಲಸ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ವಿದ್ಯುತ್ ಸಂಪರ್ಕ ಮಾಡಿದ್ದರಿಂದ ವಿದ್ಯುತ್ ಹರಿದು ಸುರೇಶ ಸಾವನ್ನಪ್ಪಿದ್ದಾನೆ. ಇನ್ನೊಬ್ಬ ಕಂಬದಿಂಧ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದು, ಇವನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾತ್ರಿ ೮ರವರೆಗೂ ಸಹ ಕಂಬದಲ್ಲಿಯೇ ಲೈನ್ ಎಳೆಯುವ ಗುತ್ತಿಗೆ ಕಾರ್ಮಿಕನ ಶವ ನೇತಾಡುತ್ತಿತ್ತು. ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೆ ಈ ಅವಘಡಕ್ಕೆ ಕಾರಣ ಎಂದು ಆರೋಪಿಸಲಾಗಿದೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಸಂಚಾರ ದಟ್ಟಣೆ ಯನ್ನು ನಿಯಂತ್ರಿಸಿದರು.
ಮೂವರ ಮೇಲೆ ಪ್ರಕರಣ ದಾಖಲು: ಸೂಕ್ತ ಮುಂಜಾಗ್ರತೆ ವಹಿಸದೆ ದುಡುಕಿನಿಂದ, ನಿರ್ಲಕ್ಷ್ಯತನದಿಂದ ಸುರೇಶ ಹನುಮಂತಪ್ಪ ಬಳ್ಳಾರಿ ಈತನ ಸಾವಿಗೆ ಹಾಗೂ ನಿಂಗಪ್ಪ ಗುಡ್ಡಪ್ಪ ಕಟಗಿ ಇವರ ತಲೆಗೆ ತೀವ್ರ ಗಾಯವಾಗಲು ಕಾರಣರಾದ ಹಾವೇರಿಯ ದೇಸಾಯಿಗಲ್ಲಿ ಎಲೆಕ್ಟ್ರಿಕಲ್ ಕಾಂಟಾಕ್ಟರ್ ಬಸವರಾಜ ಪುಟ್ಟಪ್ಪ ಪಟ್ಟಣಶೆಟ್ಟಿ, ಹೆಸ್ಕಾಂ ಹಾವೇರಿ ೧ ನೇ ಸೆಕ್ಷನ್ ಆಫೀಸರ್ ವಿ.ಎಸ್.ಮರಿಗೌಡ್ರ,ಹೆಸ್ಕಾಂ ಹಾವೇರಿ ಲೈನಮನ್ ಸೈಯದಅಹ್ಮದ ಸೈಯದಮೈನುದ್ದೀನ ಇನಾಂದಾರ ಇವರ ಮೇಲೆ ೩೦/೨೦೨೪೩೦೪ (ಂ) ಸಹ ಕಲಂ ೩೪ ಐಪಿಸಿ ಅಡಿ ಹಾವೇರಿ ಶಹರ ಪೊಲೀಸ್ಠಾಣೆಯಲ್ಲಿ ದೂರು ದಾಲಾಗಿದೆ.