ಹೀಗೊಂದು ಸರಳ ವಿವಾಹ- ಸಾಹಿತಿ ಸತೀಶ ಕುಲಕರ್ಣಿಗೆ ಸನ್ಮಾನ
ಹಾವೇರಿ; ಇತ್ತೀಚಿಗೆ ಆಡಂಬರ ಮತ್ತು ಅದ್ದೂರಿತನ ಇಲ್ಲದೆ ಮದುವೆಗಳು ನಡೆದರೆ ಅದೊಂದು ಅಚ್ಚರಿ. ನಾವು ನಮ್ಮವರಿಗಿಂತ ಏನು ಕಡಿಮೆ ಇಲ್ಲದೇ ಮದುವೆಯನ್ನು ಅದ್ದೂರಿಯಾಗಿ ಮಾಡಬೇಕು ಎನ್ನುವ ವ್ಯಾಧಿಯಾಗಿ ಹೆಚ್ಚುತ್ತಿದೆ. ಈ ಮಧ್ಯೆ ಜಿಲ್ಲಾ ಪಂಚಾಯತಿಯ ಮಾಜಿ ಅಧ್ಯಕ್ಷ, ಸಮಾಜ ಸೇವಕ ಪರಮೇಶ್ವರಪ್ಪ ಮೇಗಳಮನಿ ಅವರು ತಮ್ಮ ಪುತ್ರ ಹಾಗೂ ಪುತ್ರಿಯ ಮದುವೆಯನ್ನು ನ.೩೦ರಂದು ನಗರದ ಶಿವಬಸವ ಕಲ್ಯಾಣ ಮಂಟಪದಲ್ಲಿ ಗ್ರಾಮೀಣ ಸೊಗಡಿನಲ್ಲಿ ನಡೆಸಿ ಮದುವೆ ಮಂಟಪದಲ್ಲಿ ನವ ವಧು-ವರರ ನಡುವೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಖ್ಯಾತ ಸಾಹಿತಿ ಸತೀಶ ಕುಲಕರ್ಣಿ ಅವರನ್ನು ಸನ್ಮಾನಿಸುವ ಮೂಲಕ ಸಾರ್ಥಕತೆ ಮೆರೆದರು.
ಪರಮೇಶ್ವರಪ್ಪ ಮೇಗಳಮನಿ ಹಾಗೂ ಅವರ ಶ್ರೀಮತಿ ಹೊನ್ನಮ್ಮ ಅವರು ತಮ್ಮ ಪುತ್ರ ಶಶಿಧರ ಜೊತೆ ಪ್ರಣೀತಾ ಮತ್ತು ಪುತ್ರಿ ಸುಮಾ ಜೊತೆ ನಾಗರಾಜ್ ಎಚ್.ಕೆ.ಅವರ ವಿವಾಹವನ್ನು ಆಯೋಜಿಸಿದ್ದರು. ಜನರ ಮಧ್ಯ ಇದ್ದು ಬಡ ಜನರ ಕಷ್ಟಗಳಿಗೆ ಸದಾಸ್ಪಂದಿಸುವ ಮೇಗಳಮನಿ ಅವರ ಪುತ್ರ ಹಾಗೂ ಪುತ್ರಿಯ ಮದುವೆಗೆ ನಾಡಿನಪ್ರಖ್ಯಾತ ಮಠಾಧೀಶರು, ರಾಜಕಾರಣಿಗಳು, ಸಾಹಿತಿಗಳು ಎರಡುಕಡೆಯ ಬೀಗರು ಮತ್ತು ಅವರ ಬಂಧು-ಬಳಗದವರು ಆಗಮಿಸಿದ್ದರು. ಹಾಗೇನೆ ಮದುವೆಗೆ ಬಡವರು, ನಿರ್ಗತಿಕರನ್ನು ಪರಮೇಶ್ವರಪ್ಪ ಮೇಗಳಮನಿ ದಂಪತಿಗಳು ಆಹ್ವಾನಿಸಿ ಅವರಿಗೆ ಬಗೆಬಗೆಯ ಸಿಹಿ ತಿನಿಸಿನ ಊಟ ನೀಡುವ ಔದಾರ್ಯತೆ ಮೆರೆದರು.
ಕೆಲವು ಮದುವೆಗಳಲ್ಲಿ ಆಡಂಬರ, ಅಂತಸ್ತನ್ನು ಪ್ರದರ್ಶನ ಕಾಣುತ್ತೇವೆ. ಆದರೆ ಈ ಮದುವೆಯ ಸಮಾರಂಭದಲ್ಲಿ ಆಡಂಬರಕ್ಕಿಂದ ಸರಳತೆ ಇತ್ತು. ಮದುವೆಗೆ
ಬಂಧವರ ಕೊರಳಿಗೆ ಏಲಕ್ಕಿಹಾರ, ಮೈಸೂರು ಪೇಠ ಜೊತೆಗೆ ಭೋರಿ ಭೋಜನ ಉಣಬಡಿಸಲಾಯಿತು. ಈ ಮದುವೆಗೆ ಸಹಸ್ರಾರು ಜನರು ಆಗಮಿಸಿದ್ದರೂ ಸಹ ಎಲ್ಲಿಯೂ ಸಹ ಸಣ್ಯ ವ್ಯತ್ಯಾಸವಾಗದಂತೆ ಪರಮೇಶ್ವರಪ್ಪ ಮೇಗಳಮನಿ ನೋಡಿಕೊಂಡಿದ್ದರು.
ಹಾವೇರಿಯಲ್ಲಿ ನಡೆದ ಸರಳ ವಿವಾಹಕ್ಕೆ ಹೊಸಮಠದ ಬಸವಶಾಂತಲಿಂಗಶ್ರೀ, ಹುಕ್ಕೇರಿಮಠದ ಸದಾಶಿವಶ್ರೀ, ಅಗಡಿಯ ಅಕ್ಕಿಮಠದಶ್ರೀ, ಪ್ರಭುಸ್ವಾಮಿಮಠದ ಶ್ರೀ, ಗೌರಿಮಠದಶ್ರೀ, ಸಾಹಿತಿ ಸತೀಶ ಕುಲಕರ್ಣಿ, ಉಪಸಭಾಪತಿ ರುದ್ರಪ್ಪ ಲಮಾಣಿ, ಶಾಸಕರಾದ ಬಸವರಾಜ ಶಿವಣ್ಣನವರ, ಮಾಜಿ ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಸುರೇಶಗೌಡ ಪಾಟೀಲ, ಸೋಮಣ್ಣ ಬೇವಿನಮರದ, ಶಿವರಾಜ ಸಜ್ಜನರ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಕೆ.ಇ.ಕಾಂತೇಶ, ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಪರಿಮಳಾ ಜೈನ್, ರೇಣುಕಾ ಗುಡಿಮನಿ, ನಾಗರಾಜ ನಡುವಿನಮಠ ಹೀಗೆ ಗಣ್ಯರ ಜೊತೆಗೆ ಜೊತೆಗೆ ಅಲೆಮಾರಿಗಳು, ಗುಡಿಸಲುವಾಸಿಗಳು ಸಹ ಆಗಮಿಸುವ ಮೂಲಕ ವಧು-ವರರನ್ನು ಹರಸಿದರು.
ಹೀಗೊಂದು ಸರಳ ವಿವಾಹ- ಸಾಹಿತಿ ಸತೀಶ ಕುಲಕರ್ಣಿಗೆ ಸನ್ಮಾನ
Date:
ಹೀಗೊಂದು ಸರಳ ವಿವಾಹ- ಸಾಹಿತಿ ಸತೀಶ ಕುಲಕರ್ಣಿಗೆ ಸನ್ಮಾನ
ಹಾವೇರಿ; ಇತ್ತೀಚಿಗೆ ಆಡಂಬರ ಮತ್ತು ಅದ್ದೂರಿತನ ಇಲ್ಲದೆ ಮದುವೆಗಳು ನಡೆದರೆ ಅದೊಂದು ಅಚ್ಚರಿ. ನಾವು ನಮ್ಮವರಿಗಿಂತ ಏನು ಕಡಿಮೆ ಇಲ್ಲದೇ ಮದುವೆಯನ್ನು ಅದ್ದೂರಿಯಾಗಿ ಮಾಡಬೇಕು ಎನ್ನುವ ವ್ಯಾಧಿಯಾಗಿ ಹೆಚ್ಚುತ್ತಿದೆ. ಈ ಮಧ್ಯೆ ಜಿಲ್ಲಾ ಪಂಚಾಯತಿಯ ಮಾಜಿ ಅಧ್ಯಕ್ಷ, ಸಮಾಜ ಸೇವಕ ಪರಮೇಶ್ವರಪ್ಪ ಮೇಗಳಮನಿ ಅವರು ತಮ್ಮ ಪುತ್ರ ಹಾಗೂ ಪುತ್ರಿಯ ಮದುವೆಯನ್ನು ನ.೩೦ರಂದು ನಗರದ ಶಿವಬಸವ ಕಲ್ಯಾಣ ಮಂಟಪದಲ್ಲಿ ಗ್ರಾಮೀಣ ಸೊಗಡಿನಲ್ಲಿ ನಡೆಸಿ ಮದುವೆ ಮಂಟಪದಲ್ಲಿ ನವ ವಧು-ವರರ ನಡುವೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತ ಖ್ಯಾತ ಸಾಹಿತಿ ಸತೀಶ ಕುಲಕರ್ಣಿ ಅವರನ್ನು ಸನ್ಮಾನಿಸುವ ಮೂಲಕ ಸಾರ್ಥಕತೆ ಮೆರೆದರು.
ಪರಮೇಶ್ವರಪ್ಪ ಮೇಗಳಮನಿ ಹಾಗೂ ಅವರ ಶ್ರೀಮತಿ ಹೊನ್ನಮ್ಮ ಅವರು ತಮ್ಮ ಪುತ್ರ ಶಶಿಧರ ಜೊತೆ ಪ್ರಣೀತಾ ಮತ್ತು ಪುತ್ರಿ ಸುಮಾ ಜೊತೆ ನಾಗರಾಜ್ ಎಚ್.ಕೆ.ಅವರ ವಿವಾಹವನ್ನು ಆಯೋಜಿಸಿದ್ದರು. ಜನರ ಮಧ್ಯ ಇದ್ದು ಬಡ ಜನರ ಕಷ್ಟಗಳಿಗೆ ಸದಾಸ್ಪಂದಿಸುವ ಮೇಗಳಮನಿ ಅವರ ಪುತ್ರ ಹಾಗೂ ಪುತ್ರಿಯ ಮದುವೆಗೆ ನಾಡಿನಪ್ರಖ್ಯಾತ ಮಠಾಧೀಶರು, ರಾಜಕಾರಣಿಗಳು, ಸಾಹಿತಿಗಳು ಎರಡುಕಡೆಯ ಬೀಗರು ಮತ್ತು ಅವರ ಬಂಧು-ಬಳಗದವರು ಆಗಮಿಸಿದ್ದರು. ಹಾಗೇನೆ ಮದುವೆಗೆ ಬಡವರು, ನಿರ್ಗತಿಕರನ್ನು ಪರಮೇಶ್ವರಪ್ಪ ಮೇಗಳಮನಿ ದಂಪತಿಗಳು ಆಹ್ವಾನಿಸಿ ಅವರಿಗೆ ಬಗೆಬಗೆಯ ಸಿಹಿ ತಿನಿಸಿನ ಊಟ ನೀಡುವ ಔದಾರ್ಯತೆ ಮೆರೆದರು.
ಕೆಲವು ಮದುವೆಗಳಲ್ಲಿ ಆಡಂಬರ, ಅಂತಸ್ತನ್ನು ಪ್ರದರ್ಶನ ಕಾಣುತ್ತೇವೆ. ಆದರೆ ಈ ಮದುವೆಯ ಸಮಾರಂಭದಲ್ಲಿ ಆಡಂಬರಕ್ಕಿಂದ ಸರಳತೆ ಇತ್ತು. ಮದುವೆಗೆ
ಬಂಧವರ ಕೊರಳಿಗೆ ಏಲಕ್ಕಿಹಾರ, ಮೈಸೂರು ಪೇಠ ಜೊತೆಗೆ ಭೋರಿ ಭೋಜನ ಉಣಬಡಿಸಲಾಯಿತು. ಈ ಮದುವೆಗೆ ಸಹಸ್ರಾರು ಜನರು ಆಗಮಿಸಿದ್ದರೂ ಸಹ ಎಲ್ಲಿಯೂ ಸಹ ಸಣ್ಯ ವ್ಯತ್ಯಾಸವಾಗದಂತೆ ಪರಮೇಶ್ವರಪ್ಪ ಮೇಗಳಮನಿ ನೋಡಿಕೊಂಡಿದ್ದರು.
ಹಾವೇರಿಯಲ್ಲಿ ನಡೆದ ಸರಳ ವಿವಾಹಕ್ಕೆ ಹೊಸಮಠದ ಬಸವಶಾಂತಲಿಂಗಶ್ರೀ, ಹುಕ್ಕೇರಿಮಠದ ಸದಾಶಿವಶ್ರೀ, ಅಗಡಿಯ ಅಕ್ಕಿಮಠದಶ್ರೀ, ಪ್ರಭುಸ್ವಾಮಿಮಠದ ಶ್ರೀ, ಗೌರಿಮಠದಶ್ರೀ, ಸಾಹಿತಿ ಸತೀಶ ಕುಲಕರ್ಣಿ, ಉಪಸಭಾಪತಿ ರುದ್ರಪ್ಪ ಲಮಾಣಿ, ಶಾಸಕರಾದ ಬಸವರಾಜ ಶಿವಣ್ಣನವರ, ಮಾಜಿ ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಸುರೇಶಗೌಡ ಪಾಟೀಲ, ಸೋಮಣ್ಣ ಬೇವಿನಮರದ, ಶಿವರಾಜ ಸಜ್ಜನರ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಕೆ.ಇ.ಕಾಂತೇಶ, ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಪರಿಮಳಾ ಜೈನ್, ರೇಣುಕಾ ಗುಡಿಮನಿ, ನಾಗರಾಜ ನಡುವಿನಮಠ ಹೀಗೆ ಗಣ್ಯರ ಜೊತೆಗೆ ಜೊತೆಗೆ ಅಲೆಮಾರಿಗಳು, ಗುಡಿಸಲುವಾಸಿಗಳು ಸಹ ಆಗಮಿಸುವ ಮೂಲಕ ವಧು-ವರರನ್ನು ಹರಸಿದರು.