ಹುಕ್ಕೇರಿಮಠದ ಆವರಣದಲ್ಲಿ ಇಂದಿನಿಂದ ಮೂರು ದಿನ ಫಲ-ಪುಷ್ಪ ಪ್ರದರ್ಶನ
ಹಾವೇರಿ:ನಮ್ಮೂರ ಜಾತ್ರೆ ಅಂಗವಾಗಿ ಜ. ೧೮ರಿಂದ ೨೦ರವರಗೆ ಹುಕ್ಕೇರಿಮಠದಆವರಣದಲ್ಲಿ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಹಾವೇರಿ ತೋಟಗಾರಿಕೆ ಇಲಾಖೆ ಕಚೇರಿಯ ಅಧಿಕಾರಿ ರಂಗಪ್ಪ ಸಿ.ಎನ್.ತಿಳಿಸಿದರು.
ನಗರದ ಹುಕ್ಕೇರಿಮಠದಲ್ಲಿ ಬುಧವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಫಲಪುಷ್ಪ ಪ್ರದರ್ಶನದ ತಯಾರಿ ನಡೆಸಲಾಗಿದೆ. ಪ್ರದರ್ಶನದಲ್ಲಿ ವಿವಿಧ ಬಣ್ಣದ ಗುಲಾಬಿ ಹೂವುಗಳಿಂದ ತಯಾರಿಸಿದ ಬಸವೇಶ್ವರರ ಪ್ರತಿಮೆ, ಇಸ್ರೋ ಉಪಗ್ರಹಗಳು, ಆನೆ, ಕಾರಂಜಿ, ಹೂವಿನಗಡಿಯಾರ, ಗೋಡಂಬಿ ಹಣ್ಣಿನ ಸೆಲ್ಪಿಪಾಯಿಂಟ್ಗಳನ್ನು, ನವಿಲುಗಳನ್ನು ವಿವಿಧ ಪುಷ್ಪಗಳಿಂದ ರಚಿಸಲಾಗಿದೆ, ರೈತರು ಬೆಳೆದಿರುವ ವಿವಿದ ತರಕಾರಿಗಳಲ್ಲಿ ಹುಕ್ಕೇರಿಮಠದ ಲಿಂ.ಶಿವಬಸವಶ್ರೀ ಹಾಗೂ ಶಿವಲಿಂಗಶ್ರೀಗಳ ಚಿತ್ರ, ಸದಾಶಿವಶ್ರೀಗಳು ಸೇರಿ ಇತರ ಗಣ್ಯರ ಚಿತ್ರಗಳನ್ನು ಕಲಾವಿದರ ಚಿತ್ರಿಸಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸದಾಶಿವಶ್ರೀ ವಿವಿಧ ಹಣ್ಣು, ತರಕಾರಿಗಳಲ್ಲಿ ಗಣ್ಯರ ಮೂರ್ತಿಗಳನ್ನು ರಚಿಸಲಾಗಿದೆ. ಜಿಲ್ಲೆಯ ೭ ತಾಲೂಕುಗಳಿಂದ ರೈತರು ಬೆಳೆದ ತೋಟಗಾರಿಕೆ ಬೆಳೆಗಳು ಪ್ರದರ್ಶನದಲ್ಲಿರಲಿವೆ. ಭಕ್ತಾದಿಗಳು,ಜನರು ಮೂರುದಿನಗಳವರೆಗೆ ನಡೆಯುವ ಫಲ-ಪುಷ್ಪ ಪ್ರದರ್ಶನ ವೀಕ್ಷಿಸುವಂತೆ ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಸ್.ಎಸ್.ಮುಷ್ಠಿ, ಪಿ.ಡಿ.ಶಿರೂರ, ಆರ್.ಎಸ್.ಮಾಗನೂರ, ಆನಂದ ಅಟವಾಳಗಿ, ಕರಬಸಪ್ಪ ಹಲಗಣ್ಣನವರ, ಗಿರೀಶ ತುಪ್ಪದ, ಎಮ್.ಸಿ.ಮಳಿಮo, ಬಿ.ಬಸವರಾಜಪ್ಪ, ತೋಟಗಾರಿಕೆ ಇಲಾಖೆಯ ಅಧಿಕಾರಿ ಬಸವರಾಜ ಬರಿಗಾರ ಮತ್ತಿತರರು ಇದ್ದರು.
ಜ.೧೮ ರಂದು ಸಂಜೆ ೬ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಉದ್ಘಾಟಿಸುವರು. ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಜಿಲ್ಲೆಯ ಜನಪ್ರತಿನಿಧಿಗಳು, ಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಹುಕ್ಕೇರಿಮಠದ ಆವರಣದಲ್ಲಿ ಇಂದಿನಿಂದ ಮೂರು ದಿನ ಫಲ-ಪುಷ್ಪ ಪ್ರದರ್ಶನ
Date:
ಹುಕ್ಕೇರಿಮಠದ ಆವರಣದಲ್ಲಿ ಇಂದಿನಿಂದ ಮೂರು ದಿನ ಫಲ-ಪುಷ್ಪ ಪ್ರದರ್ಶನ
ಹಾವೇರಿ:ನಮ್ಮೂರ ಜಾತ್ರೆ ಅಂಗವಾಗಿ ಜ. ೧೮ರಿಂದ ೨೦ರವರಗೆ ಹುಕ್ಕೇರಿಮಠದಆವರಣದಲ್ಲಿ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದು ಹಾವೇರಿ ತೋಟಗಾರಿಕೆ ಇಲಾಖೆ ಕಚೇರಿಯ ಅಧಿಕಾರಿ ರಂಗಪ್ಪ ಸಿ.ಎನ್.ತಿಳಿಸಿದರು.
ನಗರದ ಹುಕ್ಕೇರಿಮಠದಲ್ಲಿ ಬುಧವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಫಲಪುಷ್ಪ ಪ್ರದರ್ಶನದ ತಯಾರಿ ನಡೆಸಲಾಗಿದೆ. ಪ್ರದರ್ಶನದಲ್ಲಿ ವಿವಿಧ ಬಣ್ಣದ ಗುಲಾಬಿ ಹೂವುಗಳಿಂದ ತಯಾರಿಸಿದ ಬಸವೇಶ್ವರರ ಪ್ರತಿಮೆ, ಇಸ್ರೋ ಉಪಗ್ರಹಗಳು, ಆನೆ, ಕಾರಂಜಿ, ಹೂವಿನಗಡಿಯಾರ, ಗೋಡಂಬಿ ಹಣ್ಣಿನ ಸೆಲ್ಪಿಪಾಯಿಂಟ್ಗಳನ್ನು, ನವಿಲುಗಳನ್ನು ವಿವಿಧ ಪುಷ್ಪಗಳಿಂದ ರಚಿಸಲಾಗಿದೆ, ರೈತರು ಬೆಳೆದಿರುವ ವಿವಿದ ತರಕಾರಿಗಳಲ್ಲಿ ಹುಕ್ಕೇರಿಮಠದ ಲಿಂ.ಶಿವಬಸವಶ್ರೀ ಹಾಗೂ ಶಿವಲಿಂಗಶ್ರೀಗಳ ಚಿತ್ರ, ಸದಾಶಿವಶ್ರೀಗಳು ಸೇರಿ ಇತರ ಗಣ್ಯರ ಚಿತ್ರಗಳನ್ನು ಕಲಾವಿದರ ಚಿತ್ರಿಸಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸದಾಶಿವಶ್ರೀ ವಿವಿಧ ಹಣ್ಣು, ತರಕಾರಿಗಳಲ್ಲಿ ಗಣ್ಯರ ಮೂರ್ತಿಗಳನ್ನು ರಚಿಸಲಾಗಿದೆ. ಜಿಲ್ಲೆಯ ೭ ತಾಲೂಕುಗಳಿಂದ ರೈತರು ಬೆಳೆದ ತೋಟಗಾರಿಕೆ ಬೆಳೆಗಳು ಪ್ರದರ್ಶನದಲ್ಲಿರಲಿವೆ. ಭಕ್ತಾದಿಗಳು,ಜನರು ಮೂರುದಿನಗಳವರೆಗೆ ನಡೆಯುವ ಫಲ-ಪುಷ್ಪ ಪ್ರದರ್ಶನ ವೀಕ್ಷಿಸುವಂತೆ ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಸ್.ಎಸ್.ಮುಷ್ಠಿ, ಪಿ.ಡಿ.ಶಿರೂರ, ಆರ್.ಎಸ್.ಮಾಗನೂರ, ಆನಂದ ಅಟವಾಳಗಿ, ಕರಬಸಪ್ಪ ಹಲಗಣ್ಣನವರ, ಗಿರೀಶ ತುಪ್ಪದ, ಎಮ್.ಸಿ.ಮಳಿಮo, ಬಿ.ಬಸವರಾಜಪ್ಪ, ತೋಟಗಾರಿಕೆ ಇಲಾಖೆಯ ಅಧಿಕಾರಿ ಬಸವರಾಜ ಬರಿಗಾರ ಮತ್ತಿತರರು ಇದ್ದರು.
ಜ.೧೮ ರಂದು ಸಂಜೆ ೬ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಉದ್ಘಾಟಿಸುವರು. ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಜಿಲ್ಲೆಯ ಜನಪ್ರತಿನಿಧಿಗಳು, ಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.