
ಹಾವೇರಿ:- ನಗರದ ಹುಕ್ಕೇರಿಮಠದ ಲಿಂ. ಶಿವಬಸವ ಸ್ವಾ”ಗಳ ೭೭ ನೇ ಮತ್ತು ಲಿಂ. ಶಿವಲಿಂಗ ಸ್ವಾ”ಗಳ ೧೪ ನೇ ಪುಣ್ಯ ಸ್ಮರಣೊತ್ಸವದ ಅಂಗವಾಗಿ, ಉಭಯ ಶ್ರೀಗಳ ಭಾವಚಿತ್ರದ ಮೆರವಣಿಗೆ ಪ್ರಾತಃಕಾಲ ೪.೦೦ ಗಂಟೆಗೆ ಶ್ರೀಮಠದಿಂದ ಆರಂಭವಾತು.
ಹುಕ್ಕೇರಿಮಠದ ಸದಾಶಿವಸ್ವಾ”ಜಿ, ಅಕ್ಕಿಆಲೂರಿನಶ್ರೀ, ಕೂಡಲದಶ್ರೀಗಳು, ಶಾಸಕ ನೆಹರು ಓಲೇಕಾರ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿಸೇರಿದಂತೆ ಅನೇಕರು ಮೆರವಣಿಗೆಯಲ್ಲಿ ಭಾಗವ”ಸಿದ್ದರು. ಹುಕ್ಕೇರಿಮಠದಿಂದ ಆರಂಭವಾದ ಮೆರವಣಿಗೆಯು ನಗರದ ಪ್ರಮುಖಬೀದಿಗಳಲ್ಲಿ ಸಂಚರಿಸಿತು.
ಮೆರವಣಿಗೆಯಲ್ಲಿ ಕುಪ್ಪೇಲೂರಿನ ಸಮ್ಮಾಳ ತಂಡ, ರಾಣೆಬೆನ್ನೂರಿನ ಬ್ಯಾಂಡ್, ಇಜಾರಿಲಕ್ಮಾಪುರದ ಜಾಂಜ್ ಮೇಳ. ದಾವಣಗೇರಿಯ ನಂದಿಕೋಲ ಕುಣಿತ, ಚಂಡಿ ಕುಣಿತ, ಬೇಡರ ವೇಷ, ಅರಳೇಶ್ವರ ಡೊಳ್ಳು ಕುಣಿತ, ಹುಬ್ಬಳ್ಲಿಯ ಜಗ್ಗಳಗಿ ತಂಡ, ಗೊಂಬೆ ಆಟ, ಆನೆ ಸೇರಿದಂತೆ ಹಲವಾರು ಕಲಾ ತಂಡಗಳು ಭಾಗವ”ಸಿದ್ದವು. ಮುಂಜಾನೆ ಉಭಯ ಶ್ರೀಗಳ ಗದ್ದುಗೆಗೆ ಮಹಾಭಿಷೇಕ ನಡೆತು. ಶ್ರೀಮಠದಲ್ಲಿ ಉಭಯ ಶ್ರೀಗಳ ಗದ್ದುಗೆಯನ್ನು ಹೂವು, ಹಣ್ಣುಗಳಿಂದ ಅಲಂಕಾರಗೊಳಿಸಲಾಗಿತ್ತು. ಬೆಳಗ್ಗೆ ೧೧.೦೦ ಗಂಟೆಂದಲೇ ಮಹಾದಾಸೋಹ ಪ್ರಾರಂಭಿಸಲಾತು. ಸಾ”ರಾರು ಭಕ್ತರು ಶ್ರೀಗಳ ಗದ್ದುಗೆ ದರ್ಶನ ಮತ್ತು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.