ಹೆಚ್ಚುತ್ತಿರುವ ಬಾಣಂತಿಯರ-ಶಿಶುಗಳ ಸಾವು, ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ
ಹಾವೇರಿ: ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವು ಮತ್ತು ಶಿಶುಗಳ ಸಾವು ಸಂಭವಿಸುತ್ತಿದ್ದರೂ ಸಹ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿ ಶನಿವಾರ ಇಲ್ಲಿನ ಹೊಸಮನಿ ಸಿದ್ದಪ್ಪ ಸರ್ಕಲ್ನಲ್ಲಿ ಸರ್ಕಾರದ ವಿರುದ್ಧ ಬಿಜೆಪಿಜಿಲ್ಲಾ ಮಹಿಳಾ ಮೋರ್ಚಾವತಿಯಿಂದ ಪತ್ರಿಭಟನೆ ನಡೆsಸಿ ತಹಶೀಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಅರ್ಪಿಸಲಾಯಿತು.
ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿಶೋಭಾ ನಿಸ್ಸಿಮಗೌಡ್ರ ಮಾತನಾಡಿ ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ವರೆಗೂ ಒಟ್ಟು ೩೪೮ ಬಾಣಂತಿಯರು ಹಾಗೂ ೫೦೦ ನವಜಾತ ಶಿಶುಗಳು ಸಾವನ್ನಪ್ಪಿವೆ. ಇದಕ್ಕೆ ಸರ್ಕಾರಿ ಆಸ್ಪತ್ರೆಯಲ್ಲಿ ಕೊಡುತ್ತಿರುವ ಕಳಪೆ ಗುಣಮಟ್ಟದ ಔಷಧಿಗಳು ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಬಾಣಂತಿಯರಿಗೆ ಮತ್ತು ಶಿಶುಗಳಿಗೆ ಸರಿಯಾದ ಸೌಲಭ್ಯಗಳು ಸಿಗುತ್ತಿಲ್ಲ, ಕೇಂದ್ರ ಸರ್ಕಾರ ನೀಡಿದ ಸೌಲಭ್ಯಗಳನ್ನು ರಾಜ್ಯ ಸರ್ಕಾರ ನೀಡುತ್ತಿಲ್ಲ ಎಂದು ಆರೋಪಿಸಿದರು.
ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸೃಷ್ಟಿ ಪಾಟೀಲ ಮಾತನಾಡಿ ರಾಜ್ಯದಲಿ ಆರೋಗ್ಯ ಕೇಂದ್ರಗಳ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ, ಸಿಬ್ಬಂದಿಗಳ ಕೊರತೆಯಿಂದ ಪಿ.ಎಚ್.ಸಿ ಗಳು ಸೊರಗುತ್ತಿವೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಐ.ಸಿ.ಯು, ಬ್ಲಡ್ ಬ್ಯಾಂಕ ಕೊರತೆ ಇದೆ. ಹಲವು ಕಾರಣಗಳಿಂದ ಬಾಣಂತಿಯರ ಮತ್ತು ಶಿಶುಗಳ ಸಾವು ಹೆಚ್ಚುತ್ತಿದ್ದು ಮುಖ್ಯಮಂತ್ರಿಗಳು, ಸಂಬಂಧಿಸಿದ ಸಚಿವರು ತಕ್ಷಣ ಈ ಬಗ್ಗೆ ಗಮನ ಹರಿಸಿ ಸಾವನ್ನಪಿದ ಬಾಣಂತಿಯರ ಹಾಗೂ ನವಜಾತ ಶಿಶುಗಳ ಕುಟುಂಬಕ್ಕೆ ೨೫ ಲಕ್ಷ ಪರಿಹಾರ ನೀಡಬೇಕು, ಅನಾಥ ಮಕ್ಕಳಿಗೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಭದ್ರತೆ ಒದಗಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಡಾ. ಸಂತೋಷ ಆಲದಕಟ್ಟಿ, ರಾಜೇಶ್ವರಿ ಬಿಷ್ಠನಗೌಡ್ರ, ಲಲಿತಾ ಗುಂಡೇನಹಳ್ಳಿ, ವಿದ್ಯಾ ಶೆಟ್ಟಿ, ಸುಜಾತಾ ಆರಾಧ್ಯಮಠ, ಸರೋಜಾ ವಳ್ಳಾಗಡ್ಡಿ, ಉಷಾ ಬಿಳೆಕುದರಿ, ಇಂದಿರಾ ಪುಟ್ಟನಗೌಡ್ರ, ಶಿಲ್ಪಾ ಮರಳಪ್ಪನವರ, ಲತಾ ಬಡ್ನಿಮಠ, ಪುಷ್ಪಾ ಚಕ್ರಸಾಲಿ, ಚನ್ನಮ್ಮ ಗುರುಪಾದಮಠ, ಲಕ್ಷ್ಮೀ ತೋಟದ, ರತ್ನಾ ಬನ್ನಿಕೊಪ್ಪ, ವೀಣಾ ಹಿರೇಮಠ, ಭಾಗ್ಯಶ್ರೀ ಮೋರೆ, ಜಗದೀಶ ಕನವಳ್ಳಿ, ಶಿವಬಸವ ಚೌಶೆಟ್ಟಿ, ಶಂಬು ಹತ್ತಿ, ಫಕ್ಕಿರೇಶ ಹಾವನೂರ ಮತ್ತಿತರರು ಭಾಗವಹಿಸಿದ್ದರು.