ಹೋರಾಟಕ್ಕೆ ಮಣಿದ ಜಿ.ಎಂ.ಶುಗರ್ಸ್, ೪ಕೋಟಿ ಕಬ್ಬಿನ ಬಾಕಿ ರೈತರ ಖಾತೆಗೆ ಜಮಾ
ಹಾವೇರಿ: ಸಂಗೂರಬಳಿ ಕರ್ನಾಟಕ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಗುತ್ತಿಗೆ ಪಡೆದಿರುವ ಜಿ.ಎಂ. ಶುಗರ್ಸ್ನವರು ಕಬ್ಬು ಸರಬರಾಜು ಮಾಡಿದ ರೈತರಿಗೆ ಕಬ್ಬಿನ ಬಾಕಿ ಹಣ ಪಾವತಿಸಲು ವಿಳಂಭಮಾಡಿದ ಹಿನ್ನಲೆಯಲ್ಲಿ ಸೋಮವಾರ ರೈತರು ಕರೆ ನೀಡಿದ್ದ ಹಾವೇರಿ-ಹಾನಗಲ್ಲ ರಾಜ್ಯ ಹೆದ್ದಾರಿ ಬಂದ್ ಕರೆಗೆ ಮಣಿದು ರೈತರ ಖಾತೆಗೆ ೪ಕೋಟಿ ರೂ ಹಣವನ್ನು ಜಮೆ ಮಾಡಿದ್ದಾರೆ.
ಸಕ್ಕರೆ ಕಾರ್ಖಾನೆ ಎದುರು ಸೋಮವಾರ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕದ ಅಡಿ ರೈತರು ರಾಜ್ಯ ಹೆದ್ದಾರಿ ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಸಕ್ಕರೆ ಕಾರ್ಖಾನೆ ಅಧಿಕಾರಿಗಳು, ಜಿಲ್ಲಾ ಫುಡ್ ಡಿ ಡಿ ಅವರು ಹಾಗೂ ಪೊಲೀಸ್ ಇಲಾಖೆಯವರು ಆಗಮಿಸಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ಎರಡು ದಿನಗಳ ಒಳಗಾಗಿ ನಾಲ್ಕು ಕೋಟಿ ರೂಗಳನ್ನು ರೈತರಿಗೆ ಜಮಾ ಮಾಡಿರುತ್ತಾರೆ. ಫೆ. ೨೮ ರ ಒಳಗಾಗಿ ಎಲ್ಲ ರೈತರ ಕಬ್ಬಿನ ಬಾಕಿ ಹಣವನ್ನುಉ ಪಾವತಿಸುತ್ತೇವೆ ಎಂದು ಭರವಸೆ ನೀಡಿದರು.
ಈಗಾಗಲೇ ನಾಲ್ಕು ಕೋಟಿ ಹಣವನ್ನು ಪಾವತಿಸಲಾಗಿದೆ, ಉಳಿದ ಹಣವನ್ನು ತಕ್ಷಣವೇ ಬಿಡುಗಡೆ ಮಾಡುತ್ತೇವೆ ಎಂದು ಕಾರ್ಖಾನೆಯ ಅಧಿಕಾರಿಗಳು ಜಿಲ್ಲಾಡಳಿತದ ಅಧಿಕಾರಿಗಳು ಹಾಗೂ ರೈತರ ಸಮಕ್ಷಮ ಭರವಸೆ ನೀಡಿದ ಕಾರಣ ಹೋರಾಟವನ್ನು ರೈತರು ಹೋರಾಟವನ್ನು ಹಿಂಪಡೆದರು.
ಈ ಸಂದರ್ಭದಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪೂರ, ರಾಜಶೇಖರ್ ಬೆಟಗೆರಿ, ದಾನೇಶಪ್ಪ ಕೆಂಗೊಂಡ, ಮಂಜುನಾಥ ಅಸುಂಡಿ, ನಾಗಪ್ಪ ಕೆಮ್ಮಗೊಂಡ, ಮಲ್ಲಪ್ಪ ಬೈಲನಾಯಕರ, ಎಸ್. ವ್ಹಿ. ಸಂಗೂರಮಠ , ಬಸಣ್ಣ ಕಳಸೂರ , ಗುರ್ನಂಜಪ್ಪ ವರದಿ, ಗಿರೀಶ ಕೆರೆಗೊಂಡರ, ಸೇರಿ ಅನೇಕ ನೂರಾರು ಕಬ್ಬು ಬೆಳೆಗಾರರು ಹಾಜರಿದ್ದರು.
ಹೋರಾಟಕ್ಕೆ ಮಣಿದ ಜಿ.ಎಂ.ಶುಗರ್ಸ್, ೪ಕೋಟಿ ಕಬ್ಬಿನ ಬಾಕಿ ರೈತರ ಖಾತೆಗೆ ಜಮಾ
Date:
ಹೋರಾಟಕ್ಕೆ ಮಣಿದ ಜಿ.ಎಂ.ಶುಗರ್ಸ್, ೪ಕೋಟಿ ಕಬ್ಬಿನ ಬಾಕಿ ರೈತರ ಖಾತೆಗೆ ಜಮಾ
ಹಾವೇರಿ: ಸಂಗೂರಬಳಿ ಕರ್ನಾಟಕ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಗುತ್ತಿಗೆ ಪಡೆದಿರುವ ಜಿ.ಎಂ. ಶುಗರ್ಸ್ನವರು ಕಬ್ಬು ಸರಬರಾಜು ಮಾಡಿದ ರೈತರಿಗೆ ಕಬ್ಬಿನ ಬಾಕಿ ಹಣ ಪಾವತಿಸಲು ವಿಳಂಭಮಾಡಿದ ಹಿನ್ನಲೆಯಲ್ಲಿ ಸೋಮವಾರ ರೈತರು ಕರೆ ನೀಡಿದ್ದ ಹಾವೇರಿ-ಹಾನಗಲ್ಲ ರಾಜ್ಯ ಹೆದ್ದಾರಿ ಬಂದ್ ಕರೆಗೆ ಮಣಿದು ರೈತರ ಖಾತೆಗೆ ೪ಕೋಟಿ ರೂ ಹಣವನ್ನು ಜಮೆ ಮಾಡಿದ್ದಾರೆ.
ಸಕ್ಕರೆ ಕಾರ್ಖಾನೆ ಎದುರು ಸೋಮವಾರ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕದ ಅಡಿ ರೈತರು ರಾಜ್ಯ ಹೆದ್ದಾರಿ ಬಂದ್ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಸಕ್ಕರೆ ಕಾರ್ಖಾನೆ ಅಧಿಕಾರಿಗಳು, ಜಿಲ್ಲಾ ಫುಡ್ ಡಿ ಡಿ ಅವರು ಹಾಗೂ ಪೊಲೀಸ್ ಇಲಾಖೆಯವರು ಆಗಮಿಸಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ಎರಡು ದಿನಗಳ ಒಳಗಾಗಿ ನಾಲ್ಕು ಕೋಟಿ ರೂಗಳನ್ನು ರೈತರಿಗೆ ಜಮಾ ಮಾಡಿರುತ್ತಾರೆ. ಫೆ. ೨೮ ರ ಒಳಗಾಗಿ ಎಲ್ಲ ರೈತರ ಕಬ್ಬಿನ ಬಾಕಿ ಹಣವನ್ನುಉ ಪಾವತಿಸುತ್ತೇವೆ ಎಂದು ಭರವಸೆ ನೀಡಿದರು.
ಈಗಾಗಲೇ ನಾಲ್ಕು ಕೋಟಿ ಹಣವನ್ನು ಪಾವತಿಸಲಾಗಿದೆ, ಉಳಿದ ಹಣವನ್ನು ತಕ್ಷಣವೇ ಬಿಡುಗಡೆ ಮಾಡುತ್ತೇವೆ ಎಂದು ಕಾರ್ಖಾನೆಯ ಅಧಿಕಾರಿಗಳು ಜಿಲ್ಲಾಡಳಿತದ ಅಧಿಕಾರಿಗಳು ಹಾಗೂ ರೈತರ ಸಮಕ್ಷಮ ಭರವಸೆ ನೀಡಿದ ಕಾರಣ ಹೋರಾಟವನ್ನು ರೈತರು ಹೋರಾಟವನ್ನು ಹಿಂಪಡೆದರು.
ಈ ಸಂದರ್ಭದಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪೂರ, ರಾಜಶೇಖರ್ ಬೆಟಗೆರಿ, ದಾನೇಶಪ್ಪ ಕೆಂಗೊಂಡ, ಮಂಜುನಾಥ ಅಸುಂಡಿ, ನಾಗಪ್ಪ ಕೆಮ್ಮಗೊಂಡ, ಮಲ್ಲಪ್ಪ ಬೈಲನಾಯಕರ, ಎಸ್. ವ್ಹಿ. ಸಂಗೂರಮಠ , ಬಸಣ್ಣ ಕಳಸೂರ , ಗುರ್ನಂಜಪ್ಪ ವರದಿ, ಗಿರೀಶ ಕೆರೆಗೊಂಡರ, ಸೇರಿ ಅನೇಕ ನೂರಾರು ಕಬ್ಬು ಬೆಳೆಗಾರರು ಹಾಜರಿದ್ದರು.