೬೩೦ ರೂಗಳ ಕರೆಂಟ್ಬಿಲ್ಗಾಗಿ ವಿದ್ಯುತ್ ಸರಬರಾಜ ನಿಲ್ಲಿಸಿದ ಹಾವೇರಿ ಹೆಸ್ಕಾಂ!
ಸ್ಪೈನಲ್ ಮಸ್ಕ್ಯೂಲರ್ ಆಟ್ರೋಪಿ ಕಾಯಿಲೆಯ ಮಗುವಿನ ಜೀವದ ಜೊತೆ ಹೆಸ್ಕಾಂ ಚೆಲ್ಲಾಟ ?
ಹಾವೇರಿ : ಸಾವಿರಾರು ರೂಗಳ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವವರ ಬಗ್ಗೆ ಮೃದು ಧೋರಣೆ ತೋರುವ ಹೆಸ್ಕಾಂ ಅಧಿಕಾರಿಗಳ ಕೆಲವೊಮ್ಮೆ ಸಣ್ಣ-ಪಟ್ಟ ಬಾಕಿ ಉಳಿಸಿಕೊಂಡಿರುವವರಿಂದ ಬಾಕಿ ವಸೋಲಿಗಾಗಿ ಕಲ್ಲು ಹೃದಯದವರಂತೆ ನಡೆದುಕೊಳ್ಳುವುದು ಹೊಸದೇನಲ್ಲ. ಆದರೆ ಹಾವೇರಿ ಹೆಸ್ಕಾಂ ಅಧಿಕಾರಿಗಳು ೬೩೦ರೂಗಳ ವಿದ್ಯುತ್ ಬಿಲ್ ಕಟ್ಟಿಲ್ಲ ಎನ್ನುವ ಕಾರಣಕ್ಕೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಿ ಸ್ಪೈನಲ್ ಮಸ್ಕ್ಯೂಲರ್ ಆಟ್ರೋಪಿ ಕಾಯಿಲೆಯಿಂದ ಬಳಲುತ್ತಿರವ ಮಗುವಿನ ಜೀವದ ಜೊತೆ ಚಲ್ಲಾಟವಾಡಿರುವ ಘಟನೆ ಗುರುವಾರ ನಗರದ ದ್ಯಾಮವ್ವನಗುಡಿ ಓಣಿಯಲ್ಲಿ ನಡೆದಿದೆ.
ಗುರುವಾರ ಸಂಜೆ ದ್ಯಾಮವ್ವನಗುಡಿ ಓಣಿಯಲ್ಲಿರವ ಬಾಡಗಿಮನೆಯಲ್ಲಿರುವ ಅನಿಲರಾಜ್ ಬೆಟಗೇರಿ ಅವರ ಮನೆಯ ವಿದ್ಯುತ್ ಸ್ಥಗಿತಗೊಳಿಸಿರುವ ಕಾರಣಕ್ಕೆ ಮಗುವಿಗೆ ಚಿಕಿತ್ಸೆ ನೀಡುವ ಬೈಪಾಪ್ ಮಷೀನ್ ಸ್ಥಗಿತಗೊಂಡಿದ್ದು, ಪಟ್ಟ ಮಗುವು ಚಿಕಿತ್ಸೆ ಸಿಗದೇ ಒದ್ದಾಡತ್ತಿದೆ. ಕಲ್ಲು ಹೃದಯದ ಹೆಸ್ಕಾಂ ಅಧಿಕಾರಿ ಸಿಬ್ಬಂದಿಗೆ ಮಗುವಿನ ಪಾಲಕರು ಪರಿಪರಿಯಾಗಿ ಕೇಳಿಕೊಂಡ, “ಕಾಲವಕಾಶ ನೀಡಿ, ವಿದ್ಯುತ್ ಬಿಲ್ಲ ಕಟ್ಟುತ್ತೇವೆ ಎಂದರು ಸಹ ಕಲ್ಲು ಹೃದಯದ ಅಧಿಕಾರಿಗಳ ಮತ್ತು ಸಿಬ್ಬಂದಿಯವರು ಬಿಲ್ ಕಟ್ಟಿ ನಂತರ ವಿದ್ಯುತ್ ಸರಬರಾಜು ಮಾಡುತ್ತೇವೆ ಎಂದಿದ್ದಾರೆ”.
ವೈದ್ಯಕೀಯ ರಂಗದಲ್ಲೇ ಅಪರೂಪದ ಕಾಯಿಲೆಗಳಲ್ಲಿ ಒಂದಾದ ಸೈನಲ್ ಮಸ್ಕೂಲರ್ ಆಟ್ರೋಫಿ (sಠಿiಟಿಚಿಟ musಛಿuಟಚಿಡಿ ಚಿಣಡಿoಠಿhಥಿ)ಯಿಂದ ನಗರದ ಪ್ರತಿಮಾ ಹಾಗೂ ಅನಿಲರಾಜ್ ಬೇಟಗೇರಿ ಅವರ ಮಗು ಯುವಿಕ ಈ ಕಾಯಿಲೆಯಿಂದ ಬಳಲುತ್ತಿದ್ದು, ಈ ಮಗುವಿಗೆ ತಗುಲಿರುವ ಕಾಯಿಲೆಗಳಿಗೆ ಚಿಕಿತ್ಸೆಗೆ ಬೇಕಾದ ಔಷಧಿ ೧೬ ಕೋಟಿ ಬೆಲೆ ಬಾಳುವ ಅತ್ಯಂತ ದುಬಾರಿಯದ್ದಾಗಿದೆ. ಈ ಮಗುವಿಗೆ ಚಿಕಿತ್ಸೆಗೆ ಬೇಕಾದ ಔಷಧಿಯು ಅಮೇರಿಕಾದಿಂದ ಉಚಿತವಾಗಿ ದೊರೆತಿದ್ದು. ಪ್ರಸಕ್ತ ಈ ಮಗುವಿಗೆ ಚಿಕಿತ್ಸೆ ನೀಡುತ್ತಿರುವ ಬೆಂಗಳೂರಿನ ಬಾಪಿಸ್ ಹಾಸ್ಪಿಟಲ್ ವೈದ್ಯರು ಅಮೇರಿಕಾದಲ್ಲಿನ ವ್ಯದ್ಯರನ್ನು ಸಂಪರ್ಕಿಸಿ ಇಷ್ಟೊಂದು ಬೆಲೆ ಬಾಳುವ ಔಷಧಿ ಉಚಿತವಾಗಿ ದೊರೆಯುವ ವ್ಯವಸ್ಥೆ ಮಾಡಿದ್ದಾರೆ. ಕೋಟ್ಯಾಂತರ ಮೌಲ್ಯದ ಔಷಧಿಯನ್ನು ದೂರದ ಅಮೇರಿಕಾದೇಶದವರು ಚಿತವಾಗಿ ಮಗುವಿನ ಚಿಕಿತ್ಸೆಗೆ ಕಳಿಸಿದ್ದಾರೆ.ನಮ್ಮವರೆಆಗಿರುವ ಹೆಸ್ಕಾಂನಅಧಿಕಾರಿಗಳುಈರೀತಿನಡೆದುಕೊಳ್ಳುವ ಮೂಲಕತಮ್ಮ ಮನಸ್ಥಿತಿಯನ್ನುಹೊರಹಾಕಿದ್ದಾರೆ.
ಈ ಮಗುವಿನ ಪಾಲಕರು ಆರ್ಥಿವಾಗಿ ಸದೃಢರಲ್ಲದ ಕಾರಣಕ್ಕೆ ಇವರು ನಗರದ ಚಿಕ್ಕ ಪಾದರಕ್ಷೆಯ ಗೂಡಂಗಡಿಯೊಂದನ್ನು ಇಟ್ಟುಕೊಂಡು, ಅಲ್ಲಿನೇ ರಿಪೇರಿಯನ್ನು ಮಾಡಿಕೊಂಡು ಬಾಡಿಗೆ ಮನೆಯಲ್ಲಿ ಜೀವನ ಕಳೆಯುತ್ತಿದ್ದು. ಮನೆಯಲ್ಲಿಯೇ “ಬೈಪಾಪ್ ಮಷೀನ್”ಇಟ್ಟುಕೊಂಡು ವೈದ್ಯರ ಸಲಹೆಯ ಮೇರೆಗೆ ಚಿಕಿತ್ಸೆ ಮುಂದುವರೆಸಿದ್ದಾರೆ. ಇವರ ಆರ್ಥಿಕ ಸ್ಥಿತಿ ಸರಿಯಾಗಿರದ ಕಾರಣಕ್ಕೆ ಮಾರ್ಚ ತಿಂಗಳ ವಿದ್ಯುತ್ ಬಿಲ್ ೬೩೦ರೂಗಳನ್ನು ಕಟ್ಟುವುದು ವಿಳಂಬವಾಗಿದೆ. ಇದನ್ನೆ ಮುಂದಿಟ್ಟುಕೊಂಡು ಪುಟ್ಟಮಗುವಿನ ಆರೋಗ್ಯವನ್ನುಲೆಕ್ಕಿಸಿದೇ ವಿದ್ಯುತ್ ಸ್ಥಗಿತಗೊಳಿಸಿರುವ ಹಾವೇರಿ ಹೆಸ್ಕಾಂನವರ ನಡೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಈ ಮಗು ಸ್ಟೈನಲ್ ಮಸ್ಕೂಲರ್ ಆಟ್ರೋಫಿ ಕಾಯಿಲೆಯಿಂದ ಬಳಲುತ್ತಿರುವುದರಿಂದ ಮಗುವಿನ ಯಾವುದೇ ಅಂಗಾಗಳು ಕೆಲಸ ಮಾಡುವುದಿಲ್ಲ. ಉಸಿರಾಟ ಮಾಡಲು ಕಷ್ಟ ಆಗುತ್ತಿದೆ. ಕೃತಕ ಉಸಿರಾಟದ ಮೂಲಕ ಉಸಿರಾಡುತ್ತಿದೆ. ವಿದ್ಯುತ್ ಸ್ಥಗಿತಗೊಳಿಸುವ ಮೂಲಕ ಉಸಿರಾಟದ ಯಂತ್ರ ಬೈಪಾಪ್ ಮಷೀನ್ ಸ್ಥ ಕೈ ಕಾರಣರಾಗಿರುವ ಹಾವೇರಿ ಹೆಸ್ಕಾಂನ ಅಧಿಕಾರಿಗಳಿಗೆ ಏನು ಹೇಳಬೇಕು?
೬೩೦ ರೂಗಳ ಕರೆಂಟ್ಬಿಲ್ಗಾಗಿ ವಿದ್ಯುತ್ ಸರಬರಾಜ ನಿಲ್ಲಿಸಿದ ಹಾವೇರಿ ಹೆಸ್ಕಾಂ! ಸ್ಪೈನಲ್ ಮಸ್ಕ್ಯೂಲರ್ ಆಟ್ರೋಪಿ ಕಾಯಿಲೆಯ ಮಗುವಿನ ಜೀವದ ಜೊತೆ ಹೆಸ್ಕಾಂ ಚೆಲ್ಲಾಟ ?
Date:
೬೩೦ ರೂಗಳ ಕರೆಂಟ್ಬಿಲ್ಗಾಗಿ ವಿದ್ಯುತ್ ಸರಬರಾಜ ನಿಲ್ಲಿಸಿದ ಹಾವೇರಿ ಹೆಸ್ಕಾಂ!
ಸ್ಪೈನಲ್ ಮಸ್ಕ್ಯೂಲರ್ ಆಟ್ರೋಪಿ ಕಾಯಿಲೆಯ ಮಗುವಿನ ಜೀವದ ಜೊತೆ ಹೆಸ್ಕಾಂ ಚೆಲ್ಲಾಟ ?
ಹಾವೇರಿ : ಸಾವಿರಾರು ರೂಗಳ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವವರ ಬಗ್ಗೆ ಮೃದು ಧೋರಣೆ ತೋರುವ ಹೆಸ್ಕಾಂ ಅಧಿಕಾರಿಗಳ ಕೆಲವೊಮ್ಮೆ ಸಣ್ಣ-ಪಟ್ಟ ಬಾಕಿ ಉಳಿಸಿಕೊಂಡಿರುವವರಿಂದ ಬಾಕಿ ವಸೋಲಿಗಾಗಿ ಕಲ್ಲು ಹೃದಯದವರಂತೆ ನಡೆದುಕೊಳ್ಳುವುದು ಹೊಸದೇನಲ್ಲ. ಆದರೆ ಹಾವೇರಿ ಹೆಸ್ಕಾಂ ಅಧಿಕಾರಿಗಳು ೬೩೦ರೂಗಳ ವಿದ್ಯುತ್ ಬಿಲ್ ಕಟ್ಟಿಲ್ಲ ಎನ್ನುವ ಕಾರಣಕ್ಕೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಿ ಸ್ಪೈನಲ್ ಮಸ್ಕ್ಯೂಲರ್ ಆಟ್ರೋಪಿ ಕಾಯಿಲೆಯಿಂದ ಬಳಲುತ್ತಿರವ ಮಗುವಿನ ಜೀವದ ಜೊತೆ ಚಲ್ಲಾಟವಾಡಿರುವ ಘಟನೆ ಗುರುವಾರ ನಗರದ ದ್ಯಾಮವ್ವನಗುಡಿ ಓಣಿಯಲ್ಲಿ ನಡೆದಿದೆ.
ಗುರುವಾರ ಸಂಜೆ ದ್ಯಾಮವ್ವನಗುಡಿ ಓಣಿಯಲ್ಲಿರವ ಬಾಡಗಿಮನೆಯಲ್ಲಿರುವ ಅನಿಲರಾಜ್ ಬೆಟಗೇರಿ ಅವರ ಮನೆಯ ವಿದ್ಯುತ್ ಸ್ಥಗಿತಗೊಳಿಸಿರುವ ಕಾರಣಕ್ಕೆ ಮಗುವಿಗೆ ಚಿಕಿತ್ಸೆ ನೀಡುವ ಬೈಪಾಪ್ ಮಷೀನ್ ಸ್ಥಗಿತಗೊಂಡಿದ್ದು, ಪಟ್ಟ ಮಗುವು ಚಿಕಿತ್ಸೆ ಸಿಗದೇ ಒದ್ದಾಡತ್ತಿದೆ. ಕಲ್ಲು ಹೃದಯದ ಹೆಸ್ಕಾಂ ಅಧಿಕಾರಿ ಸಿಬ್ಬಂದಿಗೆ ಮಗುವಿನ ಪಾಲಕರು ಪರಿಪರಿಯಾಗಿ ಕೇಳಿಕೊಂಡ, “ಕಾಲವಕಾಶ ನೀಡಿ, ವಿದ್ಯುತ್ ಬಿಲ್ಲ ಕಟ್ಟುತ್ತೇವೆ ಎಂದರು ಸಹ ಕಲ್ಲು ಹೃದಯದ ಅಧಿಕಾರಿಗಳ ಮತ್ತು ಸಿಬ್ಬಂದಿಯವರು ಬಿಲ್ ಕಟ್ಟಿ ನಂತರ ವಿದ್ಯುತ್ ಸರಬರಾಜು ಮಾಡುತ್ತೇವೆ ಎಂದಿದ್ದಾರೆ”.
ವೈದ್ಯಕೀಯ ರಂಗದಲ್ಲೇ ಅಪರೂಪದ ಕಾಯಿಲೆಗಳಲ್ಲಿ ಒಂದಾದ ಸೈನಲ್ ಮಸ್ಕೂಲರ್ ಆಟ್ರೋಫಿ (sಠಿiಟಿಚಿಟ musಛಿuಟಚಿಡಿ ಚಿಣಡಿoಠಿhಥಿ)ಯಿಂದ ನಗರದ ಪ್ರತಿಮಾ ಹಾಗೂ ಅನಿಲರಾಜ್ ಬೇಟಗೇರಿ ಅವರ ಮಗು ಯುವಿಕ ಈ ಕಾಯಿಲೆಯಿಂದ ಬಳಲುತ್ತಿದ್ದು, ಈ ಮಗುವಿಗೆ ತಗುಲಿರುವ ಕಾಯಿಲೆಗಳಿಗೆ ಚಿಕಿತ್ಸೆಗೆ ಬೇಕಾದ ಔಷಧಿ ೧೬ ಕೋಟಿ ಬೆಲೆ ಬಾಳುವ ಅತ್ಯಂತ ದುಬಾರಿಯದ್ದಾಗಿದೆ. ಈ ಮಗುವಿಗೆ ಚಿಕಿತ್ಸೆಗೆ ಬೇಕಾದ ಔಷಧಿಯು ಅಮೇರಿಕಾದಿಂದ ಉಚಿತವಾಗಿ ದೊರೆತಿದ್ದು. ಪ್ರಸಕ್ತ ಈ ಮಗುವಿಗೆ ಚಿಕಿತ್ಸೆ ನೀಡುತ್ತಿರುವ ಬೆಂಗಳೂರಿನ ಬಾಪಿಸ್ ಹಾಸ್ಪಿಟಲ್ ವೈದ್ಯರು ಅಮೇರಿಕಾದಲ್ಲಿನ ವ್ಯದ್ಯರನ್ನು ಸಂಪರ್ಕಿಸಿ ಇಷ್ಟೊಂದು ಬೆಲೆ ಬಾಳುವ ಔಷಧಿ ಉಚಿತವಾಗಿ ದೊರೆಯುವ ವ್ಯವಸ್ಥೆ ಮಾಡಿದ್ದಾರೆ. ಕೋಟ್ಯಾಂತರ ಮೌಲ್ಯದ ಔಷಧಿಯನ್ನು ದೂರದ ಅಮೇರಿಕಾದೇಶದವರು ಚಿತವಾಗಿ ಮಗುವಿನ ಚಿಕಿತ್ಸೆಗೆ ಕಳಿಸಿದ್ದಾರೆ.ನಮ್ಮವರೆಆಗಿರುವ ಹೆಸ್ಕಾಂನಅಧಿಕಾರಿಗಳುಈರೀತಿನಡೆದುಕೊಳ್ಳುವ ಮೂಲಕತಮ್ಮ ಮನಸ್ಥಿತಿಯನ್ನುಹೊರಹಾಕಿದ್ದಾರೆ.
ಈ ಮಗುವಿನ ಪಾಲಕರು ಆರ್ಥಿವಾಗಿ ಸದೃಢರಲ್ಲದ ಕಾರಣಕ್ಕೆ ಇವರು ನಗರದ ಚಿಕ್ಕ ಪಾದರಕ್ಷೆಯ ಗೂಡಂಗಡಿಯೊಂದನ್ನು ಇಟ್ಟುಕೊಂಡು, ಅಲ್ಲಿನೇ ರಿಪೇರಿಯನ್ನು ಮಾಡಿಕೊಂಡು ಬಾಡಿಗೆ ಮನೆಯಲ್ಲಿ ಜೀವನ ಕಳೆಯುತ್ತಿದ್ದು. ಮನೆಯಲ್ಲಿಯೇ “ಬೈಪಾಪ್ ಮಷೀನ್”ಇಟ್ಟುಕೊಂಡು ವೈದ್ಯರ ಸಲಹೆಯ ಮೇರೆಗೆ ಚಿಕಿತ್ಸೆ ಮುಂದುವರೆಸಿದ್ದಾರೆ. ಇವರ ಆರ್ಥಿಕ ಸ್ಥಿತಿ ಸರಿಯಾಗಿರದ ಕಾರಣಕ್ಕೆ ಮಾರ್ಚ ತಿಂಗಳ ವಿದ್ಯುತ್ ಬಿಲ್ ೬೩೦ರೂಗಳನ್ನು ಕಟ್ಟುವುದು ವಿಳಂಬವಾಗಿದೆ. ಇದನ್ನೆ ಮುಂದಿಟ್ಟುಕೊಂಡು ಪುಟ್ಟಮಗುವಿನ ಆರೋಗ್ಯವನ್ನುಲೆಕ್ಕಿಸಿದೇ ವಿದ್ಯುತ್ ಸ್ಥಗಿತಗೊಳಿಸಿರುವ ಹಾವೇರಿ ಹೆಸ್ಕಾಂನವರ ನಡೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಈ ಮಗು ಸ್ಟೈನಲ್ ಮಸ್ಕೂಲರ್ ಆಟ್ರೋಫಿ ಕಾಯಿಲೆಯಿಂದ ಬಳಲುತ್ತಿರುವುದರಿಂದ ಮಗುವಿನ ಯಾವುದೇ ಅಂಗಾಗಳು ಕೆಲಸ ಮಾಡುವುದಿಲ್ಲ. ಉಸಿರಾಟ ಮಾಡಲು ಕಷ್ಟ ಆಗುತ್ತಿದೆ. ಕೃತಕ ಉಸಿರಾಟದ ಮೂಲಕ ಉಸಿರಾಡುತ್ತಿದೆ. ವಿದ್ಯುತ್ ಸ್ಥಗಿತಗೊಳಿಸುವ ಮೂಲಕ ಉಸಿರಾಟದ ಯಂತ್ರ ಬೈಪಾಪ್ ಮಷೀನ್ ಸ್ಥ ಕೈ ಕಾರಣರಾಗಿರುವ ಹಾವೇರಿ ಹೆಸ್ಕಾಂನ ಅಧಿಕಾರಿಗಳಿಗೆ ಏನು ಹೇಳಬೇಕು?