೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಮಾಧ್ಯಮ ಕೇಂದ್ರ ಅಚ್ಚುಕಟ್ಟು, ಊಟದ ಕೌಂಟರ್ನಲ್ಲಿ ಎಡವಟ್ಟು!
ಹಾವೇರಿ: ಹಾವೇರಿಯಲ್ಲಿ ನಡೆದಿರುವ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಕೆಲವು ಸಣ್ಣ-ಪುಟ್ಟ ನೂನ್ಯತೆಗಳನ್ನು ಹೊರತುಪಡಿಸಿದರೇ ಅಚ್ಚುಕಟ್ಟಾಗಿತ್ತು. ನಾಡಿನ ವಿವಿಧಭಾಗಗಳಿಂದ ಆಗಮಿಸಿದ್ದ ೪೦೦ಕ್ಕೂ ಅಧಿಕ ಪತ್ರಕರ್ತರಿಗೆ ವರದಿ ಸಿದ್ದಪಡಿಸಲು ೧೦೦ ಹೆಚ್ಚು ಗಣಕಯಂತ್ರಗಳನ್ನು ಅಳವಡಿಸಿ, ಅವುಗಳಿಗೆ ಇಂಟರ್ನೆಟ್ ಸಲಭ್ಯ ಕಲ್ಪಿಸಿ ಸುವ್ಯವಸ್ಥಿತ ವಾಗಿ ಮಾಧ್ಯಮ ಕೇಂದ್ರವನ್ನು ನಿರ್ವಹಣೆಮಾಡಲಾಗಿತ್ತು. ಮುದ್ರಣ ಹಾಗೂ ವಿವಿಧವಾಹಿನಿಗಳ ವರದಿಗಾರರು ಕ್ಷಣಾರ್ಧದಲ್ಲಿ ಸುದ್ದಿ ಬಿತ್ತರಿಸುವ ಕೆಲಸವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದರು.
ಆದರೆ ಇದೇ ವಿಷಯ ಪತ್ರಕರ್ತರಿಗೆ ನಿಗದಿಪಡಿಸಲಾಗಿದ್ದ ಊಟದ ಕೌಂಟರ್ ಬಗ್ಗೆ ಹೇಳಲು ಬರುವುದಿಲ್ಲ. ಊಟದ ಕಂಟರ್ನಲ್ಲಿ ಪತ್ರಕರ್ತಗಿಂತ ಅನ್ಯರ ಅಂದರೆ ರಾಜಕೀಯ ಪಕ್ಷದ ಕಾರ್ಯಕರ್ತರು, ಕಸಾಪದ ಕೆಲವು ಪದಾಧಿಕಾರಿಗಳು, ಕೆಲವು ರೈತಸಂಘದ ಪದಾಧಿಕಾರಿಗಳು ಊಟದ ಕೌಂಟರಿಗೆ ನುಗ್ಗಿ ಪತ್ರಕರ್ತರ ಜೊತೆಗೆ ಕೆಟ್ಟದ್ದಾಗಿ ನಡೆದುಕೊಂಡ ಘಟನೆಗಳು ನಡೆದವು. ನೀವು ಯಾವ ಸೀಮೆ ಪರ್ತಕರ್ತರು, ನಾವು ಇಲ್ಲಿಯೇ ಊಟಮಾಡುವೆವು. ನಿಮಗೆ ಪ್ರತ್ಯೇಕ ಊಟದ ವ್ಯವಸ್ಥೆಯಾಕೆ ? ಎಂದು ತರಲೆ ಪ್ರಶ್ನೆಗಳು ಕೇಳಿ ವಾಗ್ವಾದ ನಡೆಸಿದರು.
ಹಾವೇರಿಯ ಹಿರಿಯ ಪತ್ರಕರ್ತ ಬಸವರಾಜ ಮರಳಿಹಳ್ಳಿ ಅವರು ಸೇರಿದಂತೆ ಕೆಲವು ಪತ್ರಕರ್ತರು ಊಟಕ್ಕೆಂದು ಕೌಂಟರಿಗೆ ತೆರಳಿದ ಸಂದರ್ಭದಲ್ಲಿ ರೈತ ಸಂಘದ ಕೆಲವು ಪದಾಧಿಕಾರಿಗಳು ಮರಳಿಹಳ್ಳಿ ಅವರಿಗೆ ಅಮಾನಿಸಿದ ಘಟನೆ ನಡೆಯಿತು. ಈ ವೇಳೆ ಊಟಮಾಡದೇ ಬಸವರಾಜ ಮರಳಿಹಳ್ಳಿ ಅವರು ತಮಗಾದ ಅವಮಾನಕ್ಕೆ ಬೇಸತ್ತು ಹೊರನಡೆದರು. ಈ ವೇಳೆ ಅವರನ್ನು ಸಮಾದಾನ ಪಡಿಸಲಾಯಿತು.
ಇದೇ ಸಂದರ್ಭದಲ್ಲಿ ರಾಜಕೀಯ ಪಕ್ಷದ ಪ್ರಮುಖ ಕಾರ್ಯಕರ್ತ ಹಾಘೂ ಕಸಾಪ ಪದಾಧಿಕಾರಿಯೋರ್ವ ನಾನು ಪತ್ರಕರ್ತರ ಕೌಂಟರ್ನಲ್ಲಿಯೇ ಊಟಮಾಡುವೆ. ರೈತ ಸಂಘದವರಿಗೆ ಊಟ ಕೊಟ್ಟಿದ್ದಾರೆ. ನನಗೇಕಿಲ್ಲ. ನಾನು ಇಲ್ಲಯೇ ಊಟಮಾಡುವೆ ಎಂದು ಪಟ್ಟು ಹಿಡಿದ ಘಟನೆ ನಡೆಯಿತು.
೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಮಾಧ್ಯಮ ಕೇಂದ್ರ ಅಚ್ಚುಕಟ್ಟು, ಊಟದ ಕೌಂಟರ್ನಲ್ಲಿ ಎಡವಟ್ಟು!
Date:
೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಮಾಧ್ಯಮ ಕೇಂದ್ರ ಅಚ್ಚುಕಟ್ಟು, ಊಟದ ಕೌಂಟರ್ನಲ್ಲಿ ಎಡವಟ್ಟು!
ಹಾವೇರಿ: ಹಾವೇರಿಯಲ್ಲಿ ನಡೆದಿರುವ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಕೆಲವು ಸಣ್ಣ-ಪುಟ್ಟ ನೂನ್ಯತೆಗಳನ್ನು ಹೊರತುಪಡಿಸಿದರೇ ಅಚ್ಚುಕಟ್ಟಾಗಿತ್ತು. ನಾಡಿನ ವಿವಿಧಭಾಗಗಳಿಂದ ಆಗಮಿಸಿದ್ದ ೪೦೦ಕ್ಕೂ ಅಧಿಕ ಪತ್ರಕರ್ತರಿಗೆ ವರದಿ ಸಿದ್ದಪಡಿಸಲು ೧೦೦ ಹೆಚ್ಚು ಗಣಕಯಂತ್ರಗಳನ್ನು ಅಳವಡಿಸಿ, ಅವುಗಳಿಗೆ ಇಂಟರ್ನೆಟ್ ಸಲಭ್ಯ ಕಲ್ಪಿಸಿ ಸುವ್ಯವಸ್ಥಿತ ವಾಗಿ ಮಾಧ್ಯಮ ಕೇಂದ್ರವನ್ನು ನಿರ್ವಹಣೆಮಾಡಲಾಗಿತ್ತು. ಮುದ್ರಣ ಹಾಗೂ ವಿವಿಧವಾಹಿನಿಗಳ ವರದಿಗಾರರು ಕ್ಷಣಾರ್ಧದಲ್ಲಿ ಸುದ್ದಿ ಬಿತ್ತರಿಸುವ ಕೆಲಸವನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದರು.
ಆದರೆ ಇದೇ ವಿಷಯ ಪತ್ರಕರ್ತರಿಗೆ ನಿಗದಿಪಡಿಸಲಾಗಿದ್ದ ಊಟದ ಕೌಂಟರ್ ಬಗ್ಗೆ ಹೇಳಲು ಬರುವುದಿಲ್ಲ. ಊಟದ ಕಂಟರ್ನಲ್ಲಿ ಪತ್ರಕರ್ತಗಿಂತ ಅನ್ಯರ ಅಂದರೆ ರಾಜಕೀಯ ಪಕ್ಷದ ಕಾರ್ಯಕರ್ತರು, ಕಸಾಪದ ಕೆಲವು ಪದಾಧಿಕಾರಿಗಳು, ಕೆಲವು ರೈತಸಂಘದ ಪದಾಧಿಕಾರಿಗಳು ಊಟದ ಕೌಂಟರಿಗೆ ನುಗ್ಗಿ ಪತ್ರಕರ್ತರ ಜೊತೆಗೆ ಕೆಟ್ಟದ್ದಾಗಿ ನಡೆದುಕೊಂಡ ಘಟನೆಗಳು ನಡೆದವು. ನೀವು ಯಾವ ಸೀಮೆ ಪರ್ತಕರ್ತರು, ನಾವು ಇಲ್ಲಿಯೇ ಊಟಮಾಡುವೆವು. ನಿಮಗೆ ಪ್ರತ್ಯೇಕ ಊಟದ ವ್ಯವಸ್ಥೆಯಾಕೆ ? ಎಂದು ತರಲೆ ಪ್ರಶ್ನೆಗಳು ಕೇಳಿ ವಾಗ್ವಾದ ನಡೆಸಿದರು.
ಹಾವೇರಿಯ ಹಿರಿಯ ಪತ್ರಕರ್ತ ಬಸವರಾಜ ಮರಳಿಹಳ್ಳಿ ಅವರು ಸೇರಿದಂತೆ ಕೆಲವು ಪತ್ರಕರ್ತರು ಊಟಕ್ಕೆಂದು ಕೌಂಟರಿಗೆ ತೆರಳಿದ ಸಂದರ್ಭದಲ್ಲಿ ರೈತ ಸಂಘದ ಕೆಲವು ಪದಾಧಿಕಾರಿಗಳು ಮರಳಿಹಳ್ಳಿ ಅವರಿಗೆ ಅಮಾನಿಸಿದ ಘಟನೆ ನಡೆಯಿತು. ಈ ವೇಳೆ ಊಟಮಾಡದೇ ಬಸವರಾಜ ಮರಳಿಹಳ್ಳಿ ಅವರು ತಮಗಾದ ಅವಮಾನಕ್ಕೆ ಬೇಸತ್ತು ಹೊರನಡೆದರು. ಈ ವೇಳೆ ಅವರನ್ನು ಸಮಾದಾನ ಪಡಿಸಲಾಯಿತು.
ಇದೇ ಸಂದರ್ಭದಲ್ಲಿ ರಾಜಕೀಯ ಪಕ್ಷದ ಪ್ರಮುಖ ಕಾರ್ಯಕರ್ತ ಹಾಘೂ ಕಸಾಪ ಪದಾಧಿಕಾರಿಯೋರ್ವ ನಾನು ಪತ್ರಕರ್ತರ ಕೌಂಟರ್ನಲ್ಲಿಯೇ ಊಟಮಾಡುವೆ. ರೈತ ಸಂಘದವರಿಗೆ ಊಟ ಕೊಟ್ಟಿದ್ದಾರೆ. ನನಗೇಕಿಲ್ಲ. ನಾನು ಇಲ್ಲಯೇ ಊಟಮಾಡುವೆ ಎಂದು ಪಟ್ಟು ಹಿಡಿದ ಘಟನೆ ನಡೆಯಿತು.