ಆರೋಪ ಹೊತ್ತ ಕೈದಿಗಳಿಗೆ ಸಾಹಿತ್ಯ ಊರುಗೋಲು-ಐಜಿಪಿ ಡಾ.ರವಿಕಾಂತೇಗೌಡ
ಹಾವೇರಿ: ಅಪರಾಧ ಆರೋಪ ಹೊತ್ತ ಕೈದಿಗಳಿಗೆ ಸಾಹಿತ್ಯ ಊರುಗೋಲಾಗುತ್ತದೆ ಎಂದು ಪೂರ್ವ ವಲಯ ಐಜಿಪಿ ಡಾ.ಬಿ.ಆರ್.ರವಿಕಾಂತೇಗೌಡ ಹೇಳಿದರು.
ಹಾವೇರಿ ಜೈಲಿನಲ್ಲಿ ಗುರುವಾರ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಮೂರು ದಿನಗಳವರೆಗೆ ಹಮ್ಮಿಕೊಳ್ಳಲಾದ ಕೈದಿಗಳಿಗೆ ಸಾಹಿತ್ಯ ಕಮ್ಮಟದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಗಿಸಿ ಅವರು ಮಾತನಾಡಿದರು.
ಮೂರು ದಿನಗಳ ಸಾಹಿತ್ಯ ಕಮ್ಮಟದ ಸದುಪಯೋಗಪಡೆದುಕೊಳ್ಳಿ. ಭಜನೆ ನಂತರ ಕೊಡುವ ಪ್ರಸಾದವನ್ನು ತಿಂದು ಕೈ ಒರೆಸಿಕೊಂಡ ಹಾಗೆ ಮಾಡದೆ, ನಿಮ್ಮ ಬದುಕನ್ನು ಒರೆಗೆ ಹಚ್ಚಿರಿ. ಜೊತೆಗೆ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಸಿಟ್ಟನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ಸಿಟ್ಟಿನ ಮನು?ರಾಗಿದ್ದ ನನ್ನ ತಂದೆ ಹಾಗೂ ಕಥೆಗಾರ ಡಾ.ಬೆಸಗರಹಳ್ಳಿ ರಾಮಣ್ಣ ಸಾಹಿತ್ಯ ಓದದಿದ್ದರೆ ಕ್ರಿಮಿನಲ್ ಆಗುತ್ತಿದ್ದೆ ಎಂದು ಹೇಳುತ್ತಿದ್ದರು. ಸಿಟ್ಟಿನ ನಿಯಂತ್ರಣಕ್ಕೆ ಮತ್ತು ಬದುಕು ಕಟ್ಟಿಕೊಳ್ಳಲು ಸಮೃದ್ಧವಾದ ಸಾಹಿತ್ಯ ಓದಿರಿ ಎಂದು ಕಿವಿಮಾತು ಹೇಳಿದರು
ಆರೋಪ ಹೊತ್ತ ಕೈದಿಗಳಿಗೆ ಸಾಹಿತ್ಯ ಊರುಗೋಲು-ಐಜಿಪಿ ಡಾ.ರವಿಕಾಂತೇಗೌಡ
Date:
ಆರೋಪ ಹೊತ್ತ ಕೈದಿಗಳಿಗೆ ಸಾಹಿತ್ಯ ಊರುಗೋಲು-ಐಜಿಪಿ ಡಾ.ರವಿಕಾಂತೇಗೌಡ
ಹಾವೇರಿ: ಅಪರಾಧ ಆರೋಪ ಹೊತ್ತ ಕೈದಿಗಳಿಗೆ ಸಾಹಿತ್ಯ ಊರುಗೋಲಾಗುತ್ತದೆ ಎಂದು ಪೂರ್ವ ವಲಯ ಐಜಿಪಿ ಡಾ.ಬಿ.ಆರ್.ರವಿಕಾಂತೇಗೌಡ ಹೇಳಿದರು.
ಹಾವೇರಿ ಜೈಲಿನಲ್ಲಿ ಗುರುವಾರ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಮೂರು ದಿನಗಳವರೆಗೆ ಹಮ್ಮಿಕೊಳ್ಳಲಾದ ಕೈದಿಗಳಿಗೆ ಸಾಹಿತ್ಯ ಕಮ್ಮಟದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಗಿಸಿ ಅವರು ಮಾತನಾಡಿದರು.
ಮೂರು ದಿನಗಳ ಸಾಹಿತ್ಯ ಕಮ್ಮಟದ ಸದುಪಯೋಗಪಡೆದುಕೊಳ್ಳಿ. ಭಜನೆ ನಂತರ ಕೊಡುವ ಪ್ರಸಾದವನ್ನು ತಿಂದು ಕೈ ಒರೆಸಿಕೊಂಡ ಹಾಗೆ ಮಾಡದೆ, ನಿಮ್ಮ ಬದುಕನ್ನು ಒರೆಗೆ ಹಚ್ಚಿರಿ. ಜೊತೆಗೆ ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ಸಿಟ್ಟನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ಸಿಟ್ಟಿನ ಮನು?ರಾಗಿದ್ದ ನನ್ನ ತಂದೆ ಹಾಗೂ ಕಥೆಗಾರ ಡಾ.ಬೆಸಗರಹಳ್ಳಿ ರಾಮಣ್ಣ ಸಾಹಿತ್ಯ ಓದದಿದ್ದರೆ ಕ್ರಿಮಿನಲ್ ಆಗುತ್ತಿದ್ದೆ ಎಂದು ಹೇಳುತ್ತಿದ್ದರು. ಸಿಟ್ಟಿನ ನಿಯಂತ್ರಣಕ್ಕೆ ಮತ್ತು ಬದುಕು ಕಟ್ಟಿಕೊಳ್ಳಲು ಸಮೃದ್ಧವಾದ ಸಾಹಿತ್ಯ ಓದಿರಿ ಎಂದು ಕಿವಿಮಾತು ಹೇಳಿದರು