ಹಾವೇರಿಯ ಪ್ರಮುಖಸ್ಥಳಗಳಲ್ಲಿ ಮುಂಬೈ-ಪೂನಾ ಮಾದರಿಯಲ್ಲಿ ಗಣೇಶನ ವಿಗ್ರಹಗಳ ಪ್ರತಿಷ್ಠಾಪನೆ

Date:

 

ಹಾವೇರಿಯ ಪ್ರಮುಖಸ್ಥಳಗಳಲ್ಲಿ ಮುಂಬೈ-ಪೂನಾ ಮಾದರಿಯಲ್ಲಿ ಗಣೇಶನ ವಿಗ್ರಹಗಳ ಪ್ರತಿಷ್ಠಾಪನೆ
ಹಾವೇರಿ: ಗಣೇಶೋತ್ವ ಎಂದರೆ ನೆನಪಿಗೆ ಬರುವುದು ಮುಂಬೈ, ಪೂನಾ ಹಾಗೂ ಹುಬ್ಬಳ್ಳಿಯಲ್ಲಿ ಪ್ರತಿಷ್ಠಾಪಿಸಲಾಗುವು ಬ್ರಹತ್ ಗಾತ್ರದ ಗಣೇಶನ ವಿಗ್ರಹಗಳು. ಈಬಾರಿ ಹಾವೇರಿಯಲ್ಲಿ ಬೃಹದಾಕಾರದ ಗಣೇಶನವಿಗ್ರಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಇಲ್ಲಿನ ಗಣೇಶನ ವಿಗ್ರಹಗಳನ್ನು ನೋಡಿದರೆ, ದೂರದ ಮುಂಬೈ, ಪೂನಾ ಮಾದರಿಯಲ್ಲಿ ಗಣೇಶ ವಿಗ್ರಹಗಳನ್ನು ನೋಡಿದಂತಾಗುತ್ತದೆ.
ಹಾವೇರಿ ಸುಭಾಸ್ ಸರ್ಕಲ್‌ನಲ್ಲಿ ೧೫ಅಡಿಗೂ ಹೆಚ್ಚು ಎತ್ತರ ಇರುವ ’ಹಾವೇರಿಕಾರಾಜಾ” ಗಜಾನನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಹಾವೇರಿನಗರದ ಅತಿ ಎತ್ತರದ ಹಾಗೂ ಅಷ್ಟೇ ಆಕಾರ್ಷಣೆಯವಾಗಿರುವ ಲಂಭೋದರ ವಿಗ್ರಹವನ್ನು ಕಲಾವಿದ ಸೃಷ್ಟಿಸಿದ್ದಾನೆ. ಇನ್ನು ನಗರದ ಇನ್ನೊಂದು ಪ್ರಮುಖ ಆಕರ್ಷಣೆಯಾಗಿರುವ ಇಲ್ಲಿನ ಎಂ.ಜಿ.ರಸ್ತೆಗೆ ಹೊಂದಿಕೊಂಡಿರುವ ವೈದ್ಯ ಸರ್ಕಲ್‌ನಲ್ಲಿ “ವ್ಯೆದ್ಯ ಸರ್ಕಲ್ ರಾಜಾ ಲಂಭೋದರನ ಮೂರ್ತಿ” ಸಾರ್ವಜನಿಕರ ಗಮನ ಸೆಳೆದಿದೆ.
ಹುಕ್ಕೇರಿಮಠದಬಳಿ ಇರುವ ಪುರದ ಓಣಿಯಲ್ಲಿ “ಗೌರಿತನಯ” ಡಾ.ಅಂಬೇಡ್ಕರ್ ಸರ್ಕಲ್ ಬಳಿಯ ವಿಘ್ನೇಶ್ವರ, ಗೌಳಿಗಲ್ಲಿಯ ವಿನಾಯಕ, ಎಂ.ಜಿ.ರಸ್ತೆಯಲ್ಲಿನ ಗಣೇಶ, ಕಾಗಿನೆಲೆ ಬಸ್ ನಿಲ್ದಾಣದ ಬಳಿ ಹಿಂದುಮಹಾಸಭಾ ಗಣೇಶ, ಹೆಸ್ಕಾಂ ಕಚೇರಿಯಲ್ಲಿನ ವಿಘ್ನೇಶ್ವರ, ನಗರಸಭೆಯ ಕಾರ್ಯಾಲಯದಲ್ಲಿ ಪರಿಸರ ಸ್ನೇಹಿ ಗಣೇಶ ಸೇರಿದಂತೆ ಶಿವಾಜಿನಗರ, ಕೇಂದ್ರ ಬಸ್ ನಿಲ್ದಾಣ, ವಿದ್ಯಾನಗರ, ಬಸವೇಶ್ವರನಗರ, ನಾಗೇಂದ್ರನಮಟ್ಟಿ ಸೇರಿದಂತೆ ನಗರದ ಅನೇಕ ಕಡೆಗಳಲ್ಲಿ ಗಣೇಶ ಪೂಜೆಗೊಳ್ಳುತ್ತಿದ್ದಾನೆ.
ಅನೇಕ ವಿನಾಯಕ ಸಮಿತಿಗಳು ಈಬಾರಿ ಡಿಜೆ ಸಂಸ್ಕ್ರತಿಯನ್ನು ಕೈಬಿಟ್ಟು, ಜಾನಪದ ಕಲಾತಂಡಗಳನ್ನು, ಜಾನಪದ ಕಲಾವಿದರನ್ನು ಕರೆಸಿ ಅವರಿಗೆ ಪ್ರೋತ್ಸಾಹ ನೀಡುವ ಮೂಲಕ ಅನ್ನ ಸಂತರ್ಪಣೆ, ರಕ್ತದಾನ ಶಿಬಿರ, ವೈದ್ಯಕೀಯ ತಪಾಸಣೆ, ನೇತ್ರ ತಪಸಣೆ, ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಹಾವೇರಿಯ ಗಣೇಶೋತ್ಸವಕ್ಕೆ ಸಾಂಸ್ಕ್ರತಿಕ ನೀಡಲು ಮುಂದಾಗಿರುವುದು ಸ್ವಾಗತಾರ್ಹವಾಗಿದೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

 

ಹಾವೇರಿಯ ಪ್ರಮುಖಸ್ಥಳಗಳಲ್ಲಿ ಮುಂಬೈ-ಪೂನಾ ಮಾದರಿಯಲ್ಲಿ ಗಣೇಶನ ವಿಗ್ರಹಗಳ ಪ್ರತಿಷ್ಠಾಪನೆ
ಹಾವೇರಿ: ಗಣೇಶೋತ್ವ ಎಂದರೆ ನೆನಪಿಗೆ ಬರುವುದು ಮುಂಬೈ, ಪೂನಾ ಹಾಗೂ ಹುಬ್ಬಳ್ಳಿಯಲ್ಲಿ ಪ್ರತಿಷ್ಠಾಪಿಸಲಾಗುವು ಬ್ರಹತ್ ಗಾತ್ರದ ಗಣೇಶನ ವಿಗ್ರಹಗಳು. ಈಬಾರಿ ಹಾವೇರಿಯಲ್ಲಿ ಬೃಹದಾಕಾರದ ಗಣೇಶನವಿಗ್ರಗಳನ್ನು ಪ್ರತಿಷ್ಠಾಪಿಸಲಾಗಿದ್ದು, ಇಲ್ಲಿನ ಗಣೇಶನ ವಿಗ್ರಹಗಳನ್ನು ನೋಡಿದರೆ, ದೂರದ ಮುಂಬೈ, ಪೂನಾ ಮಾದರಿಯಲ್ಲಿ ಗಣೇಶ ವಿಗ್ರಹಗಳನ್ನು ನೋಡಿದಂತಾಗುತ್ತದೆ.
ಹಾವೇರಿ ಸುಭಾಸ್ ಸರ್ಕಲ್‌ನಲ್ಲಿ ೧೫ಅಡಿಗೂ ಹೆಚ್ಚು ಎತ್ತರ ಇರುವ ’ಹಾವೇರಿಕಾರಾಜಾ” ಗಜಾನನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಹಾವೇರಿನಗರದ ಅತಿ ಎತ್ತರದ ಹಾಗೂ ಅಷ್ಟೇ ಆಕಾರ್ಷಣೆಯವಾಗಿರುವ ಲಂಭೋದರ ವಿಗ್ರಹವನ್ನು ಕಲಾವಿದ ಸೃಷ್ಟಿಸಿದ್ದಾನೆ. ಇನ್ನು ನಗರದ ಇನ್ನೊಂದು ಪ್ರಮುಖ ಆಕರ್ಷಣೆಯಾಗಿರುವ ಇಲ್ಲಿನ ಎಂ.ಜಿ.ರಸ್ತೆಗೆ ಹೊಂದಿಕೊಂಡಿರುವ ವೈದ್ಯ ಸರ್ಕಲ್‌ನಲ್ಲಿ “ವ್ಯೆದ್ಯ ಸರ್ಕಲ್ ರಾಜಾ ಲಂಭೋದರನ ಮೂರ್ತಿ” ಸಾರ್ವಜನಿಕರ ಗಮನ ಸೆಳೆದಿದೆ.
ಹುಕ್ಕೇರಿಮಠದಬಳಿ ಇರುವ ಪುರದ ಓಣಿಯಲ್ಲಿ “ಗೌರಿತನಯ” ಡಾ.ಅಂಬೇಡ್ಕರ್ ಸರ್ಕಲ್ ಬಳಿಯ ವಿಘ್ನೇಶ್ವರ, ಗೌಳಿಗಲ್ಲಿಯ ವಿನಾಯಕ, ಎಂ.ಜಿ.ರಸ್ತೆಯಲ್ಲಿನ ಗಣೇಶ, ಕಾಗಿನೆಲೆ ಬಸ್ ನಿಲ್ದಾಣದ ಬಳಿ ಹಿಂದುಮಹಾಸಭಾ ಗಣೇಶ, ಹೆಸ್ಕಾಂ ಕಚೇರಿಯಲ್ಲಿನ ವಿಘ್ನೇಶ್ವರ, ನಗರಸಭೆಯ ಕಾರ್ಯಾಲಯದಲ್ಲಿ ಪರಿಸರ ಸ್ನೇಹಿ ಗಣೇಶ ಸೇರಿದಂತೆ ಶಿವಾಜಿನಗರ, ಕೇಂದ್ರ ಬಸ್ ನಿಲ್ದಾಣ, ವಿದ್ಯಾನಗರ, ಬಸವೇಶ್ವರನಗರ, ನಾಗೇಂದ್ರನಮಟ್ಟಿ ಸೇರಿದಂತೆ ನಗರದ ಅನೇಕ ಕಡೆಗಳಲ್ಲಿ ಗಣೇಶ ಪೂಜೆಗೊಳ್ಳುತ್ತಿದ್ದಾನೆ.
ಅನೇಕ ವಿನಾಯಕ ಸಮಿತಿಗಳು ಈಬಾರಿ ಡಿಜೆ ಸಂಸ್ಕ್ರತಿಯನ್ನು ಕೈಬಿಟ್ಟು, ಜಾನಪದ ಕಲಾತಂಡಗಳನ್ನು, ಜಾನಪದ ಕಲಾವಿದರನ್ನು ಕರೆಸಿ ಅವರಿಗೆ ಪ್ರೋತ್ಸಾಹ ನೀಡುವ ಮೂಲಕ ಅನ್ನ ಸಂತರ್ಪಣೆ, ರಕ್ತದಾನ ಶಿಬಿರ, ವೈದ್ಯಕೀಯ ತಪಾಸಣೆ, ನೇತ್ರ ತಪಸಣೆ, ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಹಾವೇರಿಯ ಗಣೇಶೋತ್ಸವಕ್ಕೆ ಸಾಂಸ್ಕ್ರತಿಕ ನೀಡಲು ಮುಂದಾಗಿರುವುದು ಸ್ವಾಗತಾರ್ಹವಾಗಿದೆ.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ನನಗೆ ಸಚಿವ ಸ್ಥಾನ ಸಿಗದಿದ್ದರೆ ನಿಗಮ ಮಂಡಳಿಗೆ ರಾಜೀನಾme: ಶಾಸಕ ಬಸವರಾಜ್ ಶಿವಣ್ಣನವರ

ನನಗೆ ಸಚಿವ ಸ್ಥಾನ ಸಿಗದಿದ್ದರೆ ನಿಗಮ ಮಂಡಳಿಗೆ ರಾಜೀನಾme: ಶಾಸಕ ಬಸವರಾಜ್...

ಮಳೆ ಕೊರತೆ: ಹಸಿ ಬರ ಘೋಷಣೆಗೆ ರೈತರ ಮನವಿ

  ಮಳೆ ಕೊರತೆ: ಹಸಿ ಬರ ಘೋಷಣೆಗೆ ರೈತರ ಮನವಿ ಹಾವೇರಿ : ಜಿಲ್ಲಾ...

ಅಭಿವೃದ್ಧಿಪರ ಕೆಲಸಕ್ಕೆ ಸದಾ ಸಹಕಾರ : ಉಡಚಪ್ಪ ಮಾಳಗಿ

  ಅಭಿವೃದ್ಧಿಪರ ಕೆಲಸಕ್ಕೆ ಸದಾ ಸಹಕಾರ : ಉಡಚಪ್ಪ ಮಾಳಗಿ ಹಾವೇರಿ: ಜಿಲ್ಲೆಯ ಸರ್ವಾಂಗಿಣ...