ಹಾವೇರಿ ನಗರದಲ್ಲಿ ಶೃದ್ಧಾ ಭಕ್ತಿಯಿಂದ ಜರುಗಿದ ಪುರಸಿದ್ದೇಶ್ವರಸ್ವಾಮಿಯ ರಥೋತ್ಸವ
ಹಾವೇರಿ: ನಗರದ ಐತಿಹಾಸಿಕ ಪುರಸಿದ್ದೇಶ್ವರ ದೇವಸ್ಥಾನದ ರಥೋತ್ವವು ಭಾನುವಾರ ಸಂಜೆ ನಗರದಲ್ಲಿ ಸಾವಿರಾರು ಭಕ್ತರ ಶೃದ್ಧಾ ಭಕ್ತಿಯ ನಡುವೆ ಅದ್ದೂರಿಯಾಗಿ ಜರುಗಿತು. ಇಲ್ಲಿನ ಪುರಸಿದ್ದೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಹುಕ್ಕೇರಿಮಠದ ಸದಾಶಿವಶ್ರೀಗಳು ಪುರಸಿದ್ದೇಶ್ವರಸ್ವಾಮಿಗೆ ಪೂಜೆ ಸಲ್ಲಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.
ಪುರಸಿದ್ದೇಶ್ವರ ದೇವಸ್ಥಾನದಿಂದ ಆರಂಭಗೊಂಡ ರಥವನ್ನು ಪುರದ ಓಣಿಯ ಗಜಾನನ ಸರ್ಕಲ್ವರೆಗೆ ಭಕ್ತರು ಎಳೆದು ನಂತರ ದೇವಸ್ಥಾನಕ್ಕೆ ತಂದರು. ಮೆರವಣಿಗೆಯಲ್ಲಿ ವಿವಿಧ ಜಾನಪದ ಕಲಾ ತಂಡಗಳು ಭಾಗವಹಿಸಿದ್ದವು.
ಸಿಡಿಮದ್ದಿನ ಆಕರ್ಷಣೆ: ರಥೋತ್ವವ ಆರಂಭಕ್ಕೂ ಮುನ್ನ ೨೦೦ಅಡಿವರೆಗೆ ಸಿಡಿಮದ್ದಿನ ಸರವನ್ನು ಸುಡಲಾಯಿತು. ಸಹಸ್ರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದ್ದರು.
ಗಣ್ಯರಾದ ಮಲ್ಲಿಕಾರ್ಜುನ ಸಾತೇನಹಳ್ಳಿ, ಶಿವಬಸಪ್ಪ ಹಲಗಣ್ಣನವರ, ಮಲ್ಲೇಶಪ್ಪ ಪಟ್ಟಣಶೆಟ್ಟಿ, ಈರಣ್ಣ ಶಿಲವಂತರ, ಶಿವಲೀಮಗಪ್ಪ ಕಲ್ಯಾನಿ, ಜಗದೀಶ ಕನವಳ್ಳಿ, ಗುರಣ್ಣ ಸೀಮಿಕೇರಿ, ಜಾಬೀನ ಸೇರಿದಂತೆ ಸಾವಿರಾರು ಭಕ್ತಾದಿಗಳು ರಥೋತ್ಸವದಲ್ಲಿ ಭಾಗವಹಿಸಿದ್ದರು.
ಭಾನುವಾರ ಬೆಳಿಗ್ಗೆ ಪುರಸಿದ್ದೇಶ್ವರಸ್ವಾಮಿಯ ಹೂವಿನ ತೇರು, ವೀರಭದ್ರೇಶ್ವರಸ್ವಾಮಿಯ ಗುಗ್ಗಳ ಪೂಜಾ ಕಾರ್ಯಕ್ರಮಗಳು ನಡೆದವು.