
ಎಸಿಸಿ ಸಿಮೇಂಟ್ ಅದಾನಿ ಸಂಸ್ಥೆಯಿಂದ ಕಾರ್ಮಿಕರ ಸಂಘದ ಪದಾಧಿಕಾರಿಗಳಿಗೆ ಸನ್ಮಾನ
ಹಾವೇರಿ: ಹಾವೇರಿ ಜಿಲ್ಲಾ ಬಿಲ್ಡಿಂಗ್ ಕಟ್ಟಡ ಕಟ್ಟುವ ಕಾರ್ಮಿಕರ ಸಂಘದ ಪದಾಧಿಕಾರಿಗಳನ್ನು ಎಸಿಸಿ ಸಿಮೇಂಟ್ ಅದಾನಿ ಸಂಸ್ಥೆಯಿಂದ ನಗರದಲ್ಲಿ ಆಯೋಜಿಸಲಾಗಿದ್ದ ಮನರಂಜನಾ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ತಾಂತ್ರೀಕ ಅಧಿಕಾರಿ ಪ್ರಸಾದ ಕಾರ್ಯಕ್ರಮದಲ್ಲಿ ತಾಂತ್ರೀಕ ಮಾಹಿತಿ ನೀಡಿದರು. ಎಸಿಸಿ ಸಿಮೆಂಟ್ ಜಿಲ್ಲಾ ಮಟ್ಟದ ಅಧಿಕಾರಿ ವಿಪೋಳ ಲದ್ವಾ, ತಾಂತ್ರೀಕ ಅಧಿಕಾರಿ ಅನ್ವೇಕರ ಎಸಿಸಿ ಸಿಮೆಂಟ್ನ ಸಿಬ್ಬಂದಿಗಳು ಕಟ್ಟಡ ಕಟ್ಟುವ ಕಾರ್ಮಿಕರ ಸಂಘದ ಪದಾಧಿಕಾರಿಗಳಾದ ದಾವಲಸಾಬ ಹಿರೇಮೂಗದೂರು, ನಜೀರಸಾಬ ಪಟೇಲ್, ಸಂಜೀವಪ್ಪ ಹರಪನಹಳ್ಳಿ,ನಾಗೇಶ ಮಲಗೋಡ, ಬಸಯ್ಯ ಕುಲಕರ್ಣಿ, ಮಾರುತಿ ಕದರಮಂಡಲಗಿಮತ್ತಿತರರನ್ನು ಸನ್ಮಾನಿಸಿ ಗೌರವಿಸಿದರು.
ಈಸಂದರ್ಭದಲ್ಲಿ ಬ್ಯಾಡಗಿ ಟ್ರೇಡರ್ಸ್ನ ಜಮೀರಹ್ಮದ್, ಮಖ್ಬೂಲ್ಅಹ್ಮದ್ ಬ್ಯಾಡಗಿ ಹಾಗೂ ಸಂಘದ ಪದಾಧಿಕಾರಿಗಳು ಮೇಸ್ತಿಗಳು ಭಾಗವಹಿಸಿದ್ದರು.