ಬ್ಯಾಡಗಿಯ ಮೆಣಸಿನಕಾಯಿ ದರ ಕುಸಿತದ ಗಲಾಟೆಯಲ್ಲಿ ಹೊತ್ತಿ ಉರಿದ ೧೨ ಹೆಚ್ಚುವಾಹನಗಳ ಮೌಲ್ಯ ಬರೋಬ್ಬರಿ ೨.೫೦ ಕೋಟಿರೂಗಳಿಗೂ ಅಧಿಕ

Date:

ಬ್ಯಾಡಗಿಯ ಮೆಣಸಿನಕಾಯಿ ದರ ಕುಸಿತದ ಗಲಾಟೆಯಲ್ಲಿ ಹೊತ್ತಿ ಉರಿದ ೧೨ ಹೆಚ್ಚುವಾಹನಗಳ ಮೌಲ್ಯ ಬರೋಬ್ಬರಿ ೨.೫೦ ಕೋಟಿರೂಗಳಿಗೂ ಅಧಿಕ
ಹಾವೇರಿ: ಒಣ ಮೆಣಸಿನಕಾಯಿಯ ಬೆಲೆ ಕುಸಿತದ ಪರಿಣಾಮ ಮಾ.೧೧ರಂದು ಸೋಮವಾರ ನಡೆದ ಗಲಾಟೆಯಲ್ಲಿ ಅಗ್ನಿಶಾಮಕವಾಹನ ಸೇರಿದಂತೆ ವಿವಿಧ ಇಲಾಖೆಗಳು ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು, ಈ ಗಲಾಟೆಯಲ್ಲಿ ಬರೋಬ್ಬರಿಗೆ ೨ಕೋಟಿರೂಗಳಿಗೂ ಅಧಿಕ ಮೌಲ್ಯದವಾಹನಗಳು ಬೆಂಕಿಗೆ ಆಹತಿಯಾಗಿವೆ.
ದರ ಕುಸಿತದಿಂದ ಆಕ್ರೋಶಗೊಂಡ ಎಪಿಎಂಸಿಗೆ ನುಗ್ಗಿದ ರೈತರು ಕಲ್ಲು ತೂರಾಟ ನಡೆಸಿ, ಎಪಿಎಂಸಿಯ ಕಚೇರಿಗೆ ಬೆಂಕಿ ಹಚ್ಚಿ ಕಿಟಿಕಿ, ಬಾಗಿಲುಗಳನ್ನು ಒಡೆದುಹಾಕಿ ಎಪಿಎಂಸಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ಅವರ ಮೇಲೆ ಹಲ್ಲೆ ನಡೆಸಿ ಪೀಠೋಪಕರಣಗಳನ್ನು, ಕಂಪೂಟರಗಳನ್ನು ಧ್ವಂಸಗೊಳಿಸಿದ್ದಲ್ಲದೇ ಅಗ್ನಿಶಾಮಕ ವಾಹನಕ್ಕೆ, ಮಾರುಕಟ್ಟೆಯಲ್ಲಿನ ಚೀಪು, ಕಾರಗಳಿಗೆ ಬೆಂಕಿ ಹಚ್ಚಿದ್ದರು.
ಈ ಬಗ್ಗೆ ಬ್ಯಾಡಗಿ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಲಂ: ೬೧/೨೦೨೪-೧೪೩, ೧೪೭, ೩೨೩, ೩೦೭, ೩೫೩, ೪೩೬, ೫೦೪, ೫೦೬ ಸಹ ಕಲಂ: ೧೪೯
ಐಪಿಸಿ ಅಡಿ ಪ್ರಕರಣವನ್ನು ದಾಖಲಿಸಲಾಗಿದೆ. ಎಪಿಎಂಸಿ ಸಹಾಯಕ ಕಾರ್ಯದರ್ಶಿ ಬಿ.ಎಸ್. ಗೌಡರ ಈಬಗ್ಗೆ ದೂರು ನೀಡಿದ್ದು, ಸುಮಾರು ೧೦೦೦ ಜನ
ರೈತರಿಂದ ೧೧-೦೩-೨೦೨೪ ರಂದು ಬ್ಯಾಡಗಿ ಎಪಿಎಂಸಿಯಲ್ಲಿ ಒಟ್ಟು ೩,೧೩,೧೫೬ ಮೆಣಸಿನಕಾಯಿ ಚೀಲಗಳು ಅವಾಕ ಬಂದಿದ್ದು, ಅದರಂತೆ ಬೇರೆ ಬೇರೆ ವ್ಯಾಪಾರಸ್ಥರು ಬಂದು ಸದರಿ ರೈತರು ತೆಗೆದುಕೊಂಡು ಬಂದ ಮೆಣಸಿನಕಾಯಿ ಚೀಲಗಳಿಗೆ ಟೆಂಡರ ಹಾಕಿದ್ದು, ಆಗ ಕಡ್ಡಿ ಒಣ ಮೆಣಸಿನ ಕಾಯಿಗೆ ಪ್ರತಿ ಕ್ವಿಂಟಲಗೆ ೨೦೮೯/-ರಿಂದ ೩೨೦೯೧/- ರೂಪಾಯಿಗಳು, ಡಬ್ಬಿ ಒಣ ಮೆಣಸಿನ ಕಾಯಿಗೆ ಪ್ರತಿ ಕ್ವಿಂಟಲಗೆ ೨೬೦೯ /- ರಿಂದ ೩೯೮೮೯/- ರೂ, ಗುಂಟೂರ ಒಣ ಮೆಣಸಿನ ಕಾಯಿಗೆ ಪ್ರತಿ ಕ್ವಿಂಟಲಗೆ ೧೦೮೯/- ರಿಂದ ೧೭೬೯೯/- ರೂಪಾಯಿಗಳ ವರೆಗೆ ಮಾರುಕಟ್ಟೆ ಮೌಲ್ಯ ನಿಗದಿ ಆಗಿದ್ದು, ಮಧ್ಹಾಹ್ನ ೦೩-೩೦ ಗಂಟೆ ಸುಮಾರಿಗೆ
ಎಪಿಎಂಸಿ ಕಛೇರಿ ಹತ್ತಿರ ಸುಮಾರು ೪೦೦-೫೦೦ ಜನ ರೈತರು ಕೂಡಿಕೊಂಡು ಬಂದು ನಾವು ಬೆಳೆದು ತಂದ ಒಣ ಮೆಣಸಿನ ಕಾಯಿಗೆ ಸರಿಯಾದ ಬೆಲೆ ನಿಗದಿ ಮಾಡಿರುವುದಿಲ್ಲಾ ಎಂದು ಬೈದಾಡುತ್ತಾ ರೈತರಿಗೆ ತುಂಬ ಅನ್ಯಾಯವಾಗಿದೆ ಎಂದು ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ನಮ್ಮನ್ನು ಇವತ್ತು ಜೀವಂತ ಬಿಡುವುದಿಲ್ಲ ಎಂದು ಕೊಲೆ ಮಾಡುವ ಉದ್ದೇಶದಿಂದ ಎಪಿಎಂಸಿ ಆಫೀಸ್‌ಗೆ ಬಂದು ತನಗೂ ಹಾಗೂ ಸಿಬ್ಬಂದಿ ಜನರಿಗೆ ಕೈಗಳಿಂದ ದೂಡಾಡಿದ್ದು ಆಗ
ಆಫೀಸನಲ್ಲಿದ್ದ ಸಿಬ್ಬಂದಿ ಜನರು ಸಮಾಧಾನ ಹೇಳುತ್ತಿರುವಾಗ ಅವರು ಕೇಳದೆ ಬೈದಾಡುತ್ತಾ ಸರಕಾರಿ ಕೆಲಸಕ್ಕೆ ಅಡ್ಡಿ ಪಡಿಸಿದರು.
ರೈತರು ಏಕಾ ಏಕಿ ಎಪಿಎಂಸಿ ಆಪೀಸನಿಂದ ಹೊರಗೆ ಹೋಗಿ ಕಲ್ಲುಗಳಿಂದ ಆಪೀಸಿನ ಕಟ್ಟಡದ ಗ್ಲಾಸಿಗೆ ಹೊಡೆಯಲು ಸುರು ಮಾಡಿದರು. ಆಪೀಸಿನಲ್ಲಿದ್ದ ಎಲ್ಲಾ ಸಿಬ್ಬಂದಿ ಜನರು ಹೆದರಿ ಎದ್ದು ಹೊರೆಗೆ ಹೋಗಿದ್ದು, ಆಗ ರೈತರು ಅವರ ಮೇಲೆ ಹಲ್ಲೆ ಮಾಡಲು ಪ್ರಯತ್ನ ಮಾಡಿದ್ದು ಆಗ ಅವರು ತಪ್ಪಿಸಿಕೊಂಡು ಹೋದರು. ನಂತರ ರೈತರು ಎಪಿಎಂಸಿ ಆಪೀಸನ ಒಳಗೆ ಇದ್ದ ಎಲ್ಲಾ ಕಂಪ್ಯೂಟರಗಳು, ದಾಖಲಾತಿಗಳು, ಝರಾಕ್ಸ್ ಮಿಷನ್, ಪ್ರಿಂಟರ್, ಪಿಠೋಪಕರಣಗಳನ್ನು ಒಡೆದು ಬೆಂಕಿ ಹಚ್ಚಿ ಲುಕ್ಸಾನ ಮಾಡಿದ್ದು ಅಲ್ಲದೆ ಆಪೀಸಿನ ಹೊರಗೆ ಇದ್ದ ನಮ್ಮ ಇಲಾಖೆಯ ವಾಹನಗಳಾದ .
೧) ಕೆಎ;೬೮ಎಂ:೦೬೩೨ ಸ್ಕಾರ್ಪಿಯೋ ಕಾರ,
೨) ಕೆಎ:೨೭ ಎನ್:೮೯೬೦ ಸ್ಕಾರ್ಪಿಯೋ ಕಾರ,
೩) ಕೆಎ:೨೭ ಎನ್:೧೧೭೨ ಜೈಲೋಕಾರ,
೪)ಕೆಎ:೨೭ಎಂ:೪೯೮೨ ಬೂಲೇರೋ ವಾಹನ,
೫) ಕೆಎ:೨೭ಎಂ:೭೭೭೩ ಕ್ಲಿನಿಂಗ ಮಿಷಿನ,
೬) ಕೆಎ: ೨೭ಬಿ:೫೮೯೯ ಟಾಟಾ ಏಸಿ ಇವುಗಳು ಹಾಗೂ ಇಲಾಖೆಯ ಸಿಬ್ಬಂದಿ ಜನರ ವಾಹನಗಳಾದ
೧)ಕೆಎ:೨೭ ಎನ್: ೪೩೦೫ ಐ ೨೦ ಕಾರ
೨)ಕೆಎ:೧೮ ೦೮೦೩ ಇಯಾನ ಕಾರ
೩)ಕೆಎ:೨೭ಇಜೆ:೮೦೯೧ ಸಿಟಿ೧೦೦ ಬೈಕ
೪)ಕೆಎ:೨೭ವಿ:೦೭೩೩ ಹೊಂಡಾ ಶೈನ ಬೈಕ
೫)ಕೆಎ:೬೮ಕೆ:೧೭೮೩ ಹೊಂಡಾ ಶೈನ ಬೈಕ
೬)ಕೆಎ:೨೭ ಇಆರ್:೪೫೦೯ ಸ್ಪ್ಲೆಂಡರ್ ಪ್ಲಸ್ ಬೈಕ ಇವುಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿ ಸುಮಾರು ೨ಕೋಟಿ ಲುಕ್ಸಾನ ಮಾಡಿದ್ದು ಈ ಘಟನೆ ಈ ದಿವಸ ಮಾ.೧೧ರಂದು ಮಧ್ಹಾಹ್ನ ೦೩-೩೦ ಗಂಟೆಯಿಂದ ರಾತ್ರಿ
೦೭-೦೦ ಗಂಟೆ ನಡುವಿನ ಅವಧಿಯಲ್ಲಿ ನಡೆದಿರುತ್ತದೆ ಎಂದು ದೂರಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ ಕುಮಾರಸ್ವಾಮಿ
ಎಸ್ ಮಲ್ಲಯ್ಯಾ ದೂರು ನೀಡಿದ್ದು, ತಾವು ೧೧-೦೩-೨೦೨೪ ರಂದು ಕರ್ತವ್ಯದಲ್ಲಿರುವಾಗ ಅಗ್ನಿಶಾಮಕ ಇಲಾಖೆಗೆ ಯಾರೋ ಒಬ್ಬ ಸಂಜೆ ೧೭-೦೦ ಗಂಟೆಯ ಸುಮಾರಿಗೆ ಪೋನ್ ಕರೆ ಮಾಡಿ ಬ್ಯಾಡಗಿ ಎಪಿಎಂಸಿಯಲ್ಲಿ ವಾಹನಗಳಿಗೆ ಬೆಂಕಿ ಹಚ್ಚಿರುತ್ತಾರೆ ಕೂಡಲೇ ಸ್ಥಳಕ್ಕೆ ಬನ್ನಿ ಅಂತಾ ತಿಳಿಸಿದ ಮೇರೆಗೆಠಾಣಾಧಿಕಾರಿ ಸಿಬ್ಬಂದಿ ಜನರು ಕೂಡಿಕೊಂಡು ಅಗ್ನಿಶಾಮಕ ವಾಹನ (ನಂ ಕೆಎ೪೨/ಜಿ೪೨೮೦ ದಲ್ಲಿ ಬೆಂಕಿ ಆರಿಸುವ ಎಲ್ಲಾ ಸಾಮಗ್ರಿಗಳನ್ನು ತುಂಬಿಕೊಂಡು ಬ್ಯಾಡಗಿ ಶಹರದಲ್ಲಿ ಎಪಿಎಂಸಿ ೨ ನೇ ಗೇಟ ಹತ್ತಿರ ೧೭-೦೫ ಗಂಟೆಗೆ ಹೋಗಿ ವಾಹನಗಳಿಗೆ ಹತ್ತಿದ ಬೆಂಕಿ
ಆರಿಸುತ್ತಿರುವಾಗ, ಸುಮಾರು ೧೦೦೦ ರೈತರು ಗುಂಪು ಕಟ್ಟಿಕೊಂಡು ಬಂದವರೆ ಬೆಂಕಿ ಆರಿಸುತ್ತಿದ್ದ ಕುಮಾರಸ್ವಾಮಿ ಮತ್ತು ಸಿಬ್ಬಂದಿಗಳಿಗೆ ಕೊಲೆ ಮಾಡುವ ಉದ್ದೇಶದಿಂದ ಕಲ್ಲುಗಳನ್ನು ತೂರುತ್ತಾ ಬೆಂಕಿಯನ್ನು ನಂದಿಸ ಬೇಡಿ ಅಂತಾ ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ಬೆಂಕಿ ನಂದಿಸುವ
ಸಾಮಗ್ರಿಗಳನ್ನು ಕಸಿದುಕೊಂಡು ಸರಕಾರಿ ಕರ್ತವ್ಯೆಕ್ಕೆ ಅಡ್ಡಿಪಡಿಸಿದ್ದಾರೆ.
ಅಗ್ನಿಶಾಮಕ ಠಾಣೆಯ ಸಿಬ್ಬಂದಿಯನ್ನು ಹೊಡಿ ಬಡಿ ಮಾಡಿದ್ದು ಆಗ ಕುಮಾರಸ್ವಾಮಿ ಹಾಗೂ ಸಿಬ್ಬಂದಿ ಹೆದರಿ ತಪ್ಪಿಸಿಕೊಂಡು ಓಡಿ ಹೋಗುವಾಗ ಕೆಲವರು ಅವರನ್ನು ಹಿಂಬಾಲಿಸಿಕೊಂಡು ಓಡೋಡಿ ಬಂದು ಕಲ್ಲುಗಳಿಂದ ಹೊಡೆದರು, ಕೆಲವರು ವಾಹನದ ಗ್ಲಾಸಿಗೆ ಕಲ್ಲಿನಿಂದ ಹೊಡೆದು ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ. ಇದರಿಂದ ಸುಮಾರು ೫೦,೦೦,೦೦೦/- ರೂ ಕಿಮ್ಮತ್ತು ಲುಕ್ಷಾನ ಆಗಿದ್ದು, ಈ ಘಟನೆ ಸಂಜೆ ೧೭-೦೫ ಗಂಟೆಯಿಂದ ೧೯-೦೦ ಗಂಟೆಯನಡುವಿನ ಅವಧಿಂಯಲ್ಲಿ ಆಗಿದೆ ಎಂದು ದೂರಿದ್ದಾರೆ.

 

LEAVE A REPLY

Please enter your comment!
Please enter your name here

Subscribe

spot_imgspot_img

Popular

ಬ್ಯಾಡಗಿಯ ಮೆಣಸಿನಕಾಯಿ ದರ ಕುಸಿತದ ಗಲಾಟೆಯಲ್ಲಿ ಹೊತ್ತಿ ಉರಿದ ೧೨ ಹೆಚ್ಚುವಾಹನಗಳ ಮೌಲ್ಯ ಬರೋಬ್ಬರಿ ೨.೫೦ ಕೋಟಿರೂಗಳಿಗೂ ಅಧಿಕ
ಹಾವೇರಿ: ಒಣ ಮೆಣಸಿನಕಾಯಿಯ ಬೆಲೆ ಕುಸಿತದ ಪರಿಣಾಮ ಮಾ.೧೧ರಂದು ಸೋಮವಾರ ನಡೆದ ಗಲಾಟೆಯಲ್ಲಿ ಅಗ್ನಿಶಾಮಕವಾಹನ ಸೇರಿದಂತೆ ವಿವಿಧ ಇಲಾಖೆಗಳು ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು, ಈ ಗಲಾಟೆಯಲ್ಲಿ ಬರೋಬ್ಬರಿಗೆ ೨ಕೋಟಿರೂಗಳಿಗೂ ಅಧಿಕ ಮೌಲ್ಯದವಾಹನಗಳು ಬೆಂಕಿಗೆ ಆಹತಿಯಾಗಿವೆ.
ದರ ಕುಸಿತದಿಂದ ಆಕ್ರೋಶಗೊಂಡ ಎಪಿಎಂಸಿಗೆ ನುಗ್ಗಿದ ರೈತರು ಕಲ್ಲು ತೂರಾಟ ನಡೆಸಿ, ಎಪಿಎಂಸಿಯ ಕಚೇರಿಗೆ ಬೆಂಕಿ ಹಚ್ಚಿ ಕಿಟಿಕಿ, ಬಾಗಿಲುಗಳನ್ನು ಒಡೆದುಹಾಕಿ ಎಪಿಎಂಸಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು ಅವರ ಮೇಲೆ ಹಲ್ಲೆ ನಡೆಸಿ ಪೀಠೋಪಕರಣಗಳನ್ನು, ಕಂಪೂಟರಗಳನ್ನು ಧ್ವಂಸಗೊಳಿಸಿದ್ದಲ್ಲದೇ ಅಗ್ನಿಶಾಮಕ ವಾಹನಕ್ಕೆ, ಮಾರುಕಟ್ಟೆಯಲ್ಲಿನ ಚೀಪು, ಕಾರಗಳಿಗೆ ಬೆಂಕಿ ಹಚ್ಚಿದ್ದರು.
ಈ ಬಗ್ಗೆ ಬ್ಯಾಡಗಿ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಲಂ: ೬೧/೨೦೨೪-೧೪೩, ೧೪೭, ೩೨೩, ೩೦೭, ೩೫೩, ೪೩೬, ೫೦೪, ೫೦೬ ಸಹ ಕಲಂ: ೧೪೯
ಐಪಿಸಿ ಅಡಿ ಪ್ರಕರಣವನ್ನು ದಾಖಲಿಸಲಾಗಿದೆ. ಎಪಿಎಂಸಿ ಸಹಾಯಕ ಕಾರ್ಯದರ್ಶಿ ಬಿ.ಎಸ್. ಗೌಡರ ಈಬಗ್ಗೆ ದೂರು ನೀಡಿದ್ದು, ಸುಮಾರು ೧೦೦೦ ಜನ
ರೈತರಿಂದ ೧೧-೦೩-೨೦೨೪ ರಂದು ಬ್ಯಾಡಗಿ ಎಪಿಎಂಸಿಯಲ್ಲಿ ಒಟ್ಟು ೩,೧೩,೧೫೬ ಮೆಣಸಿನಕಾಯಿ ಚೀಲಗಳು ಅವಾಕ ಬಂದಿದ್ದು, ಅದರಂತೆ ಬೇರೆ ಬೇರೆ ವ್ಯಾಪಾರಸ್ಥರು ಬಂದು ಸದರಿ ರೈತರು ತೆಗೆದುಕೊಂಡು ಬಂದ ಮೆಣಸಿನಕಾಯಿ ಚೀಲಗಳಿಗೆ ಟೆಂಡರ ಹಾಕಿದ್ದು, ಆಗ ಕಡ್ಡಿ ಒಣ ಮೆಣಸಿನ ಕಾಯಿಗೆ ಪ್ರತಿ ಕ್ವಿಂಟಲಗೆ ೨೦೮೯/-ರಿಂದ ೩೨೦೯೧/- ರೂಪಾಯಿಗಳು, ಡಬ್ಬಿ ಒಣ ಮೆಣಸಿನ ಕಾಯಿಗೆ ಪ್ರತಿ ಕ್ವಿಂಟಲಗೆ ೨೬೦೯ /- ರಿಂದ ೩೯೮೮೯/- ರೂ, ಗುಂಟೂರ ಒಣ ಮೆಣಸಿನ ಕಾಯಿಗೆ ಪ್ರತಿ ಕ್ವಿಂಟಲಗೆ ೧೦೮೯/- ರಿಂದ ೧೭೬೯೯/- ರೂಪಾಯಿಗಳ ವರೆಗೆ ಮಾರುಕಟ್ಟೆ ಮೌಲ್ಯ ನಿಗದಿ ಆಗಿದ್ದು, ಮಧ್ಹಾಹ್ನ ೦೩-೩೦ ಗಂಟೆ ಸುಮಾರಿಗೆ
ಎಪಿಎಂಸಿ ಕಛೇರಿ ಹತ್ತಿರ ಸುಮಾರು ೪೦೦-೫೦೦ ಜನ ರೈತರು ಕೂಡಿಕೊಂಡು ಬಂದು ನಾವು ಬೆಳೆದು ತಂದ ಒಣ ಮೆಣಸಿನ ಕಾಯಿಗೆ ಸರಿಯಾದ ಬೆಲೆ ನಿಗದಿ ಮಾಡಿರುವುದಿಲ್ಲಾ ಎಂದು ಬೈದಾಡುತ್ತಾ ರೈತರಿಗೆ ತುಂಬ ಅನ್ಯಾಯವಾಗಿದೆ ಎಂದು ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ನಮ್ಮನ್ನು ಇವತ್ತು ಜೀವಂತ ಬಿಡುವುದಿಲ್ಲ ಎಂದು ಕೊಲೆ ಮಾಡುವ ಉದ್ದೇಶದಿಂದ ಎಪಿಎಂಸಿ ಆಫೀಸ್‌ಗೆ ಬಂದು ತನಗೂ ಹಾಗೂ ಸಿಬ್ಬಂದಿ ಜನರಿಗೆ ಕೈಗಳಿಂದ ದೂಡಾಡಿದ್ದು ಆಗ
ಆಫೀಸನಲ್ಲಿದ್ದ ಸಿಬ್ಬಂದಿ ಜನರು ಸಮಾಧಾನ ಹೇಳುತ್ತಿರುವಾಗ ಅವರು ಕೇಳದೆ ಬೈದಾಡುತ್ತಾ ಸರಕಾರಿ ಕೆಲಸಕ್ಕೆ ಅಡ್ಡಿ ಪಡಿಸಿದರು.
ರೈತರು ಏಕಾ ಏಕಿ ಎಪಿಎಂಸಿ ಆಪೀಸನಿಂದ ಹೊರಗೆ ಹೋಗಿ ಕಲ್ಲುಗಳಿಂದ ಆಪೀಸಿನ ಕಟ್ಟಡದ ಗ್ಲಾಸಿಗೆ ಹೊಡೆಯಲು ಸುರು ಮಾಡಿದರು. ಆಪೀಸಿನಲ್ಲಿದ್ದ ಎಲ್ಲಾ ಸಿಬ್ಬಂದಿ ಜನರು ಹೆದರಿ ಎದ್ದು ಹೊರೆಗೆ ಹೋಗಿದ್ದು, ಆಗ ರೈತರು ಅವರ ಮೇಲೆ ಹಲ್ಲೆ ಮಾಡಲು ಪ್ರಯತ್ನ ಮಾಡಿದ್ದು ಆಗ ಅವರು ತಪ್ಪಿಸಿಕೊಂಡು ಹೋದರು. ನಂತರ ರೈತರು ಎಪಿಎಂಸಿ ಆಪೀಸನ ಒಳಗೆ ಇದ್ದ ಎಲ್ಲಾ ಕಂಪ್ಯೂಟರಗಳು, ದಾಖಲಾತಿಗಳು, ಝರಾಕ್ಸ್ ಮಿಷನ್, ಪ್ರಿಂಟರ್, ಪಿಠೋಪಕರಣಗಳನ್ನು ಒಡೆದು ಬೆಂಕಿ ಹಚ್ಚಿ ಲುಕ್ಸಾನ ಮಾಡಿದ್ದು ಅಲ್ಲದೆ ಆಪೀಸಿನ ಹೊರಗೆ ಇದ್ದ ನಮ್ಮ ಇಲಾಖೆಯ ವಾಹನಗಳಾದ .
೧) ಕೆಎ;೬೮ಎಂ:೦೬೩೨ ಸ್ಕಾರ್ಪಿಯೋ ಕಾರ,
೨) ಕೆಎ:೨೭ ಎನ್:೮೯೬೦ ಸ್ಕಾರ್ಪಿಯೋ ಕಾರ,
೩) ಕೆಎ:೨೭ ಎನ್:೧೧೭೨ ಜೈಲೋಕಾರ,
೪)ಕೆಎ:೨೭ಎಂ:೪೯೮೨ ಬೂಲೇರೋ ವಾಹನ,
೫) ಕೆಎ:೨೭ಎಂ:೭೭೭೩ ಕ್ಲಿನಿಂಗ ಮಿಷಿನ,
೬) ಕೆಎ: ೨೭ಬಿ:೫೮೯೯ ಟಾಟಾ ಏಸಿ ಇವುಗಳು ಹಾಗೂ ಇಲಾಖೆಯ ಸಿಬ್ಬಂದಿ ಜನರ ವಾಹನಗಳಾದ
೧)ಕೆಎ:೨೭ ಎನ್: ೪೩೦೫ ಐ ೨೦ ಕಾರ
೨)ಕೆಎ:೧೮ ೦೮೦೩ ಇಯಾನ ಕಾರ
೩)ಕೆಎ:೨೭ಇಜೆ:೮೦೯೧ ಸಿಟಿ೧೦೦ ಬೈಕ
೪)ಕೆಎ:೨೭ವಿ:೦೭೩೩ ಹೊಂಡಾ ಶೈನ ಬೈಕ
೫)ಕೆಎ:೬೮ಕೆ:೧೭೮೩ ಹೊಂಡಾ ಶೈನ ಬೈಕ
೬)ಕೆಎ:೨೭ ಇಆರ್:೪೫೦೯ ಸ್ಪ್ಲೆಂಡರ್ ಪ್ಲಸ್ ಬೈಕ ಇವುಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿ ಸುಮಾರು ೨ಕೋಟಿ ಲುಕ್ಸಾನ ಮಾಡಿದ್ದು ಈ ಘಟನೆ ಈ ದಿವಸ ಮಾ.೧೧ರಂದು ಮಧ್ಹಾಹ್ನ ೦೩-೩೦ ಗಂಟೆಯಿಂದ ರಾತ್ರಿ
೦೭-೦೦ ಗಂಟೆ ನಡುವಿನ ಅವಧಿಯಲ್ಲಿ ನಡೆದಿರುತ್ತದೆ ಎಂದು ದೂರಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಪ್ರಭಾರ ಅಗ್ನಿಶಾಮಕ ಠಾಣಾಧಿಕಾರಿ ಕುಮಾರಸ್ವಾಮಿ
ಎಸ್ ಮಲ್ಲಯ್ಯಾ ದೂರು ನೀಡಿದ್ದು, ತಾವು ೧೧-೦೩-೨೦೨೪ ರಂದು ಕರ್ತವ್ಯದಲ್ಲಿರುವಾಗ ಅಗ್ನಿಶಾಮಕ ಇಲಾಖೆಗೆ ಯಾರೋ ಒಬ್ಬ ಸಂಜೆ ೧೭-೦೦ ಗಂಟೆಯ ಸುಮಾರಿಗೆ ಪೋನ್ ಕರೆ ಮಾಡಿ ಬ್ಯಾಡಗಿ ಎಪಿಎಂಸಿಯಲ್ಲಿ ವಾಹನಗಳಿಗೆ ಬೆಂಕಿ ಹಚ್ಚಿರುತ್ತಾರೆ ಕೂಡಲೇ ಸ್ಥಳಕ್ಕೆ ಬನ್ನಿ ಅಂತಾ ತಿಳಿಸಿದ ಮೇರೆಗೆಠಾಣಾಧಿಕಾರಿ ಸಿಬ್ಬಂದಿ ಜನರು ಕೂಡಿಕೊಂಡು ಅಗ್ನಿಶಾಮಕ ವಾಹನ (ನಂ ಕೆಎ೪೨/ಜಿ೪೨೮೦ ದಲ್ಲಿ ಬೆಂಕಿ ಆರಿಸುವ ಎಲ್ಲಾ ಸಾಮಗ್ರಿಗಳನ್ನು ತುಂಬಿಕೊಂಡು ಬ್ಯಾಡಗಿ ಶಹರದಲ್ಲಿ ಎಪಿಎಂಸಿ ೨ ನೇ ಗೇಟ ಹತ್ತಿರ ೧೭-೦೫ ಗಂಟೆಗೆ ಹೋಗಿ ವಾಹನಗಳಿಗೆ ಹತ್ತಿದ ಬೆಂಕಿ
ಆರಿಸುತ್ತಿರುವಾಗ, ಸುಮಾರು ೧೦೦೦ ರೈತರು ಗುಂಪು ಕಟ್ಟಿಕೊಂಡು ಬಂದವರೆ ಬೆಂಕಿ ಆರಿಸುತ್ತಿದ್ದ ಕುಮಾರಸ್ವಾಮಿ ಮತ್ತು ಸಿಬ್ಬಂದಿಗಳಿಗೆ ಕೊಲೆ ಮಾಡುವ ಉದ್ದೇಶದಿಂದ ಕಲ್ಲುಗಳನ್ನು ತೂರುತ್ತಾ ಬೆಂಕಿಯನ್ನು ನಂದಿಸ ಬೇಡಿ ಅಂತಾ ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ಬೆಂಕಿ ನಂದಿಸುವ
ಸಾಮಗ್ರಿಗಳನ್ನು ಕಸಿದುಕೊಂಡು ಸರಕಾರಿ ಕರ್ತವ್ಯೆಕ್ಕೆ ಅಡ್ಡಿಪಡಿಸಿದ್ದಾರೆ.
ಅಗ್ನಿಶಾಮಕ ಠಾಣೆಯ ಸಿಬ್ಬಂದಿಯನ್ನು ಹೊಡಿ ಬಡಿ ಮಾಡಿದ್ದು ಆಗ ಕುಮಾರಸ್ವಾಮಿ ಹಾಗೂ ಸಿಬ್ಬಂದಿ ಹೆದರಿ ತಪ್ಪಿಸಿಕೊಂಡು ಓಡಿ ಹೋಗುವಾಗ ಕೆಲವರು ಅವರನ್ನು ಹಿಂಬಾಲಿಸಿಕೊಂಡು ಓಡೋಡಿ ಬಂದು ಕಲ್ಲುಗಳಿಂದ ಹೊಡೆದರು, ಕೆಲವರು ವಾಹನದ ಗ್ಲಾಸಿಗೆ ಕಲ್ಲಿನಿಂದ ಹೊಡೆದು ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ. ಇದರಿಂದ ಸುಮಾರು ೫೦,೦೦,೦೦೦/- ರೂ ಕಿಮ್ಮತ್ತು ಲುಕ್ಷಾನ ಆಗಿದ್ದು, ಈ ಘಟನೆ ಸಂಜೆ ೧೭-೦೫ ಗಂಟೆಯಿಂದ ೧೯-೦೦ ಗಂಟೆಯನಡುವಿನ ಅವಧಿಂಯಲ್ಲಿ ಆಗಿದೆ ಎಂದು ದೂರಿದ್ದಾರೆ.

 

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಯಾಲಕ್ಕಿ ಕಂಪಿನ ನಗರ ಹಾವೇರಿಗೆ ಅಂಟುತ್ತಿರುವ ರೌಡಿಗಳ ರಕ್ತವಾಸನೆಯ ನಂಟು!

ಯಾಲಕ್ಕಿ ಕಂಪಿನ ನಗರ ಹಾವೇರಿಗೆ ಅಂಟುತ್ತಿರುವ ರೌಡಿಗಳ ರಕ್ತವಾಸನೆಯ ನಂಟು! ಹಾವೇರಿ: ದಾಸರು,...

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...