ವಯೋನಿವೃತ್ತಿ: ವಾರ್ತಾ ಇಲಾಖೆ ಚಾಲಕ ನಾಯಕ ಬೀಳ್ಕೊಡುಗೆ
ಹಾವೇರಿ : ವಯೋನಿವೃತ್ತಿ ಹೊಂದಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಚಾಲಕರಾದ ಎಚ್.ಎಂ.ನಾಯಕ ಅವರಿಗೆ ಆತ್ಮೀಯವಾಗಿ ಬೀಳ್ಕೊಡಲಾಯಿತು. ನಗರದ ಜಿಲ್ಲಾ ವಾರ್ತಾ ಭವನದಲ್ಲಿ ಸೋಮವಾರ ವಾರ್ತಾ ಇಲಾಖೆ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ವಾರ್ತಾಧಿಕಾರಿ ಡಾ.ಬಿ.ಆರ್.ರಂಗನಾಥ್ ಅವರು ಮಾತನಾಡಿ, ಸರ್ಕಾರಿ ವೃತ್ತಿಯಲ್ಲಿ ೨೯ ವರ್ಷಗಳ ಸೇವಾ ಅವಧಿ ಪೂರ್ಣಗೊಳಿಸಿದ ಚಾಲಕ ನಾಯಕ ಅವರು ಹಾವೇರಿ ವಾರ್ತಾ ಕಚೇರಿಯಲ್ಲಿ ೧೯ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅವರು ಅತ್ಯಂತ ಶಿಸ್ತಿನಿಂದ ಹಾಗೂ ಬಹಳ ತಾಳ್ಮೆಯಿಂದ ಕಾರ್ಯನಿರ್ವಹಿಸುವ ಮೂಲಕ ಇಲಾಖೆ ಘನತೆ ಹೆಚ್ಚಿಸಿದ್ದಾರೆ. ಮುಖ್ಯಮಂತ್ರಿಗಳ, ಸಚಿವರ ಕಾರ್ಯಕ್ರಮದ ಒತ್ತಡದ ಸಂದರ್ಭದಲ್ಲಿ ತಾಳ್ಮೆಯಿಂದ ಮಾಧ್ಯಮದವರೊಂದಿಗೆ ಸ್ನೇಹಪೂರ್ವಕವಾಗಿ ಸೌಜನ್ಯವಾಗಿ ನಡೆದುಕೊಂಡು ಯಾವುದೇ ಗೊಂದಲ ಉಂಟಾಗದಂತೆ ಉತ್ತಮ ಕಾರ್ಯನಿರ್ವಹಿಸಿದ್ದಾರೆ. ಅವರ ನಿವೃತ್ತಿ ಜೀವನ ಸುಖರವಾಗಿರಲಿ ಎಂದು ಶುಭ ಹಾರೈಸಿದರು.
ಮಾಧ್ಯಮ ಪ್ರತಿನಿಧಿಗಳಾದ ನಿಂಗಪ್ಪ ಚಾವಡಿ, ಫಕ್ಕೀರಯ್ಯ ಗಣಾಚಾರಿ, ನಾಗರಾಜ ಕುರುವತ್ತೇರ, ನಾರಾಯಣ ಹೆಗಡೆ, ಮಾಲತೇಶ ಅಂಗೂರ, ಸಿದ್ದು ಆರ್.ಜಿ.ಹಳ್ಳಿ, ಪವನಕುಮಾರ, ಸಂಕನಗೌಡ ಎಂ.ಸಿ, ವಿರೇಶ ಬಾರ್ಕಿ, ಪರಶುರಾಮ ಡೂಗನವರ, ಮಹಾನುಭಾವಿಮಠ, ರವಿ ಹೂಗಾರ ಇತರೆ ಮಾಧ್ಯಮ ಪ್ರತಿನಿಧಿಗಳು ಶ್ರೀಯುತರ ಸೇವೆಯನ್ನು ಸ್ಮರಿಸಿದರು.
ಮಾಧ್ಯಮ ಪ್ರತಿನಿಧಿಗಳಾದ ಸೂರಜ ಉತ್ತೂರೆ, ರಮೇಶ ಹುಣಸಿಮರದ, ವಿರೇಶ ಮಡ್ಲೂರ, ಶಿವಾನಂದ ಮಡಿವಾಳ, ಸುರೇಶ ನಾಯ್ಕ್, ಕೊಟ್ರಯ್ಯ ಬಳ್ಳಾರಿಮಠ, ಪ್ರಭುಗೌಡ ಪಾಟೀಲ, ನಾಗರಾಜ ಮೈದೂರ ಇತರರು ಹಾಗೂ ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು. ನಿಂಗಪ್ಪ ಆರೇರ ಕಾರ್ಯಕ್ರಮ ನಿರೂಪಿಸಿದರು.