
ಹಾವೇರಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದರವರು ಹಾಗೂ ಕಾರ್ಯಧ್ಯಕ್ಷ ಚಂದ್ರಶೇಖರ ಅವರ ನಿರ್ದೇಶನದ ಮೇರೆಗೆ ಹಾವೇರಿಜಿಲ್ಲಾ ಕಾಂಗ್ರೆಸ್ ಸಮಿತಿಯ ಜಿಲ್ಲಾ ಸಂಘಟನಾ ಕಾರ್ಯದರ್ಶಿಯನ್ನಾಗಿ ಸಂಜಯಗಾಂಧಿ ಪು ಸಂಜೀವಣ್ಣನವರ ಅವರನ್ನು ನೇಮಿಸಿ ತಕ್ಷಣದಿಂದ ನೇಮಕ ಮಾಡಲಾಗಿದೆ.
ಕಾಂಗ್ರೆಸ್ ಪಕ್ಷದ ಸಂಘಟನೆ, ಪಕ್ಷದ ಸಿದ್ಧಾಂತಗಳನ್ನು ಪಾಲಿಸುವ ನಿಟ್ಟಿನಲ್ಲಿ ಪಕ್ಷದ ಶಾಸಕರ ಹಾಗೂ ಹಿರಿಯ ಮುಖಂಡರ ಸಲಹೆ ಮತ್ತು ಮಾರ್ಗದರ್ಶನದಲ್ಲಿ ಮತ್ತು ಜಿಲ್ಲಾ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಕಾರ್ಯೋನ್ಮಕವಾಗಿ ಕೆಲಸ ಮಾಡಬೇಕೆಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಆದೇಶ ಹೊರಡಿಸಿದ್ದಾರೆ .
ಸಾಮನ್ಯ ಕಾರ್ಯಕರ್ತನಾದ ತಮ್ಮನ್ನು ಗುರುತಿಸಿ ಜಿಲ್ಲಾ ಸಂಘಟನಾ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಿದ್ದಕ್ಕಾಗಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಸಂಜೀವ ಕುಮಾರ್ ಎಂ ನೀರಲಗಿ ,ಅವರಿಗೂ ಹಾಗೂ ಹಿರಿಯರು, ಮಾರ್ಗದರ್ಶಿಕರಾದ ವಿಧಾನಸಭೆ ಸಭಾಪತಿ ರುದ್ರಪ್ಪ ಲಮಾಣಿ, ಹಾಗೂ ಬ್ಯಾಡಗಿ ಕ್ಷೇತ್ರದ ಜನಪ್ರಿಯ ಶಾಸಕರಾದ ಬಸವರಾಜ್ ಶಿವಣ್ಣನವರ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಆನಂದ ಸ್ವಾಮಿ ಗಡ್ಡದೇವರ ಮಠ , ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೊಟ್ರೇಶಣ್ಣ ಬಸಗಣ್ಣಿ, ಗ್ರಾಮೀಣ ಘಟಕದ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರಾದ ಸಿದ್ದಪ್ಪ ಬಾಲಣ್ಣನವರ,ಯೂಥ್ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ದರ್ಶನ್ ಕುಮಾರ್ ಲಮಾಣಿ, ನಿಂಗಪ್ಪ ಕಡೂರು ಮರಿಯಪ್ಪ ನಡುವಿನಮನಿ, ರವಿ ದಂಡಿನ ಮಂಜು ದಡ್ಡೂರು ಮತ್ತಿತರರಿಗೆ ಸಂಜಯಗಾಂಧಿ ಸಂಜೀವಣ್ಣನವರ ಧನ್ಯವಾದ ಅರ್ಪಿಸಿದ್ದಾರೆ.

