ಹಾವೇರಿಯಲ್ಲಿ ಭಾರಿ ಮಳೆ, ನೀರಿಗೆ ಕೊಚ್ಚಿಕೊಂಡು ಹೋದ 11 ವರ್ಷದ ಬಾಲಕ
ಹಾವೇರಿ: ಕಳೆದ ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆ ಹಾವೇರಿಯಲ್ಲಿ ಬಹುದೊಡ್ಡ ಅವಾಂತರ ಸ್ರಸ್ಟಿಸಿದೆ. ಹಳೆ ಪಿ.ಬಿ.ರಸ್ತೆಯ ಎರಡು ರಸ್ತೆಗಳ ಮೇಲೆ ನೀರು ನದಿಯಂತೆ ಹರಿಯುತ್ತಿದ್ದು, ಹರಿವ ನೀರಿನ ಸೆಳೆತಕ್ಕೆ ಸಿಲುಕಿ ಬಾಲಕನೋರ್ವ ಕೊಚ್ಚಿ ಕೊಂಡು ಹೋಗಿರುವ ಘಟನೆ ಗುರುವಾರ ಬೆಳಿಗ್ಗೆ ಇಲ್ಲಿ ನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಮುಂದೆ ೮-೪೫ರ ಸುಮಾರಿಗೆ ನಡೆದಿದೆ.
ಸ್ಥಳಕ್ಕೆ ಜಿಲ್ಲಾಧಿಕಾರಿ ವಿಜಯ ಮಹಾಂತೇಶ್ ದಾನಮ್ಮನವರ್ ನಗರಸಭೆ ಅಧ್ಯಕ್ಷ ಶಶಿಕಲಾ ಮಾಳಗಿ ಸದಸ್ಯರಾದ ಪ್ರಸನ್ನ ಧಾರವಾಡ
ಮತ್ತಿತರರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.ಸ್ಥಳದಲ್ಲಿ ಸಾವಿರಾರು ಜನ ನೆರೆದಿದ್ದಾರೆ. ರಸ್ತೆ ಸಂಚಾರ ಬ
ಂದ್ ಆಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಎಡಬಿಡದೆ ಸುರಿದಮಳೆ ನೀರು ತಗ್ಗು ಪ್ರದೇಶಗಳಲ್ಲಿ ನ ಮನೆಗಳಿಗೆ ನುಗ್ಗಿ ಮನೆಗಳಿಗೆ ತೀವ್ರಹಾನಿ ಸಂಭವಿಸಿದೆ.
ನಿರಂತರ ಇದೇ ಸ್ಥಳದಲ್ಲಿ ಸಾಕಷ್ಟು ಅನಾಹುತಗಳು ಸಂಭವಿಸುತ್ತವೆ ಆದರೂ ನಮ್ಮನ್ನು ಆಳುವವರಿಗೆ ಇದರಬಗ್ಗೆ ಕಾಳಜಿ ಇಲ್ಲಾ