ಹಾವೇರಿಯ ಹೆಗ್ಗೇರೆಕೆರೆಯ ಬಳಿ ನೀರುನಾಯಿ ಹತ್ಯೆ
ಹಾವೇರಿ: ಇಲ್ಲಿನ ಐತಿಹಾಸಿಕ ಹೆಗ್ಗೇರೆಕರೆಯಲ್ಲಿ ಕಂಡು ಬಂದಿದ್ದ ಸಹಿ ನೀರುನಾಯಿಗಳಿಗೆ ಕಂಟಕ ಎದುರಾಗಿದೆ. ನೀರುನಾಯಿಯ ಮರಿಯೊಂದನ್ನು ಹತ್ಯೆ ಮಾಡಿರುವ ದುಷ್ಕರ್ಮಿಗಳು ನೀರುನಾಯಿಯ ಕಳೆಬರವನ್ನು ಗಿಡಗಂಟೆಗಳ ಮಧ್ಯೆ ಎಸೆದು ಪರಾರಿಯಾಗಿದ್ದಾರೆ. ಬುಧವಾರ ಕೆರೆಯ ದಂಡೆಯಲ್ಲಿ ನೀರುನಾಯಿಯ ಶವ ಪತ್ತೆಯಾಗಿದ್ದು, ನೀರುನಾಯಿಯ ಶವದ ಮೇಲೆ ಗಾಯದ ಗುರುತುಗಳು ಕಂಡು ಬಂದಿವೆ.
ಫೆ.೨೪ರಂದು ಹೆಗ್ಗೆರೆಕೆರೆಯಲ್ಲಿ ಕಂಡು ಬಂದಿದ್ದ ನೀರು ನಾಯಿಗಳು ಗುಂಪು ಕೆರೆಯ ಪರಿಸರದಲ್ಲಿ ಸ್ವಚ್ಚಂದವಾಗಿ ವಿಹರಿಸುತ್ತಿದ್ದವು. ಇವುಗಳು ನಿರುಪದ್ರವಿಯಾಗಿದ್ದವು, ಬೇಸಿಗೆಯ ಕಾಲವಾಗಿರುವುದರಿಂದ ಸಾಕಷ್ಟು ಸಂಖ್ಯೆಯಲ್ಲಿ ಜನರು ಈಜು ಹೊಡೆಯುತ್ತಿದ್ದರು ಸಹ ಜನರ ಹತ್ತಿರಬಾರದೇ ದೂರದಲ್ಲಿ ಮೀನು ಬೇಟೆಯಾಡುತ್ತಿದ್ದ ನೀರುನಾಯಿಗಳ ವೀಕ್ಷಣೆ ದೂರದ ಊರಗಳಿಂದ ಪರಿಸರ ಪ್ರೇಮಿಗಳು ಹೆಗ್ಗೇರೆಕೆರೆಗೆ ಆಗಮಿಸುತ್ತಿದ್ದರು. ಕಾಯ್ದಿದ್ದು ನೀರು ನಾಯಿಗಳನ್ನು ವೀಕ್ಷಿಸಿ ಹೋಗುತ್ತಿದ್ದರು.
ಯಾರೋ ದುಷ್ಕರ್ಮಿಗಳು ನೀರುನಾಯಿ ಅಪರೂಪದ ಜೀವ ಸರಪಳಿ ಎನ್ನುವದನ್ನು ಮರೆತು ಯಾವುದೋ ಕಾರಣಕ್ಕೆ ನೀರುನಾಯಿಯನ್ನು ಹತ್ಯೆಮಾಡಿರುವುದು ಕಳವಳಕಾರಿ ಸಂಗತಿಯಾಗಿದೆ. ನೀರುನಾಯಿಗಳ ಕಂಡು ಬಂದ ಹಿನ್ನಲೆಯಲ್ಲಿ ಅವುಗಳ ರಕ್ಷಣೆಗೆ ಜಿಲ್ಲಾಡಳಿತ, ಅರಣ್ಯ ಇಲಾಖೆ ಸೂಕ್ತ ಕ್ರಮ ಜರುಗಿಸಬೇಕೆಂದು ಮನವಿ ಮಾಡಿದರೂ ಸಹ ಜಿಲ್ಲಾಡಳಿತ, ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಯಾವುದೇ ಮುನ್ನಚ್ಚರಿಕೆ ಕ್ರಮ ಕೈಗೊಳ್ಳದ ಹಿನ್ನೆಂiiಲ್ಲಿ ನೀರು ನಾಯಿಯ ಹತ್ಯೆ ನಡೆದಿದೆ. ಈಗಲಾದರೂ ಸಂಬಂಧಿಸಿವರು ಎಚ್ಚೆತ್ತುಕೊಂಡು ಕೆರೆಯಲ್ಲಿರುವ ಹಾವೇರಿಯ ಅತಿಥಿಯಾಗಿರುವ ಅಳುವಿನಂಚಿನಲ್ಲಿರುವ ನೀರುನಾಯಿಗಳ ರಕ್ಷಣೆಗೆ ಅಗತ್ಯ ಮಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ವನ್ಯಜೀವಿ ಛಾಯಾಗ್ರಾಹ ಮಾಲತೇಶ ಅಂಗೂರ ಒತ್ತಾಯಿಸಿದ್ದಾರೆ.