ಹಾವೇರಿ ಸಿಂದಗಿಮಠದಿಂದ ಸಹಸ್ರಾರು ಭಕ್ತರಿಗೆ ಊರೂಟ

Date:

ಹಾವೇರಿ ಸಿಂದಗಿಮಠದಿಂದ ಸಹಸ್ರಾರು ಭಕ್ತರಿಗೆ ಊರೂಟ
ಹಾವೇರಿ; ಮರಿಕಲ್ಯಾಣ ಖ್ಯಾತಿಯ ಹಾವೇರಿನಗರದಲ್ಲಿ ೬೩ಕ್ಕೂ ಹೆಚ್ಚಿನಮಠಗಳಿದ್ದು, ಈಮಠಗಳಲ್ಲಿ ಭಕ್ತಿಗೆ ಹುಕ್ಕೇರಿಮಠ, ಜ್ಞಾನಕ್ಕೆ ಹೊಸಮಠ, ದಸೋಹಕ್ಕೆ ಸಿಂದಗಿಮಠ ಹೆಸರಾಗಿದ್ದು, ಹಸಿದು ಬಂದವರಿಗೆ ಸದಾ ಪ್ರಸಾದ ನೀಡುವ ಸಿಂದಗಿಮಠಕ್ಕೆ ಹಾವೇರಿ ಸೇರಿದಂತೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಭಕ್ತರಿದ್ದಾರೆ.   ಸಿಂದಗಿಮಠದಲ್ಲಿ ಲಿಂ. ಶಾಂತವೀರೇಶ್ವರ ಶ್ರೀಗಳ ಸ್ಮರಣೋತ್ಸವದ ಹಿನ್ನಲೆಯಲ್ಲಿ ಶನಿವಾರ ಮಠದಲ್ಲಿ  ಸಹಸ್ರಾರು ಸಂಖ್ಯೆಯಲ್ಲಿ ಭಕ್ತರಿಗೆ ಊರೂಟ ಬಡಿಸಲಾಯಿತು.
ವೀರಶೈವ-ಲಿಂಗಾಯತ ಸಮುದಾಯದ ಪರಂಪರೆಯಲ್ಲಿ ಸ್ವಾಮೀಜಿಗಳನ್ನು ಮನೆಗೆ ಕರೆದು ಪ್ರಸಾದ ನೀಡುವ ಪದ್ಧತಿ ಇದೆ. ಆದರೆ ಸ್ವಾಮೀಜಿಯೇ ಭಕ್ತರನ್ನು ಮಠಕ್ಕೆ ಕರೆದು ಪ್ರಸಾದ ನೀಡುವುದು ವಿರಳ. ಇಂಥ ವಿಶಿಷ್ಠ ಪರಂಪರೆ ಹಾವೇರಿಯ ಸಿಂದಗಿಮಠದಲ್ಲಿದೆ. ಮಠದ ವಟುಗಳು ಮನೆಮನೆಗೆ ತೆರಳಿ ಭಕ್ತರನ್ನು ಊರೂಟಕ್ಕೆ ಬರುವಂತೆ ಆಹ್ವಾನಿಸುತ್ತಾರೆ. ಶನಿವಾರ ಶಾಂತವೀರೇಶ್ವರರ ಗದ್ದುಗೆಯನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಭಕ್ತರು ಗದ್ದುಗೆ ದರ್ಶನ ನಂತರ ಪ್ರಸಾದ ಸ್ವೀಕರಿಸುತ್ತಾರೆ. ಮಠಕ್ಕೆ ಹತ್ತಾರು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಬಂದು ಪ್ರಸಾದ ಸವಿ೦ರು. ಭಕ್ತರನ್ನು ಮಠದ ವಟುಗಳೇ ಸ್ವಾಗತಿಸಿದರು. ವಟುಗಳು ತಯಾರಿಸಿದ ಭೋಜನವನ್ನು ಭಕ್ತರಿಗೆ ವಟುಗಳೇ ಬಡಿಸಿದ್ದು ವಿಶೇಷವಾಗಿತ್ತು.
ಭಕ್ತರ ತಟ್ಟೆಗಳನ್ನೂ ತೊಳೆಯುವ ವಟುಗಳು:ಶ್ರೀಗಳು ಅನ್ನದಲ್ಲಿ ದೇವರನ್ನು ಕಂಡವರು. ಹೀಗಾಗಿ ಈ ಪದ್ಧತಿ ಹುಟ್ಟುಹಾಕಿದ್ದಾರೆ. ಅಂದಿನಿಂದ ಮಠದಲ್ಲಿ ದಿನನಿತ್ಯ ನೂರಾರು ಭಕ್ತರು ಪ್ರಸಾದ ಸ್ವೀಕರಿಸುತ್ತಾರೆ ಊರುಟದ ಈ ದಿನ ಮಠಕ್ಕೆ ಈ ಹಿಂದೆ ವ್ಯಾಸಂಗ ಮಾಡಿದ ಮಾಜಿ ವಿದ್ಯಾರ್ಥಿಗಳೂ ಬರುತ್ತಾರೆ. ಎಲ್ಲ ವಟುಗಳು ಸೇರಿ ಭಕ್ತರಲ್ಲಿ ದೇವರನ್ನು ಕಾಣುತ್ತಾರೆ. ಭಕ್ತರ ಪ್ರಸಾದದ ತಟ್ಟೆಯನ್ನೂ ವಟುಗಳೇ ತೊಳೆಯುತ್ತಾರೆ. ಇಂಥದ್ದೊಂದು ವಿಶಿಷ್ಠ ಪರಂಪರೆಯನ್ನು ಲಿಂಗೈಕ್ಯ ಶಾಂತವೀರೇಶ್ವರ ಶ್ರೀಗಳು ಆಚರಣೆಗೆ ತಂದಿದ್ದರಂತೆ. ಅವರು ಲಿಂಗೈಕ್ಯರಾದ ನಂತರ ವಟುಗಳು ಪದ್ಧತಿಯನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಅದೇ ಪರಂಪರೆಯನ್ನು ಅವರ ನಂತರವೂ ಸಹ ಮಠದಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಮಠದಲ್ಲಿ ಈ ದಿನ ಉತ್ತರ ಕರ್ನಾಟಕದ ಖಡಕ್ ರೊಟ್ಟಿ, ಕರಿಂಡಿ ಪಾಯಸ ಸೇರಿದಂತೆ ವಿವಿಧ ಭಕ್ಷ್ಯಗಳನ್ನು ಉಣಬಡಿಸಲಾಗುತ್ತದೆ.
ಊರೂಟಾ ಇರುವಾಗ ಕೆಲವು ಗ್ರಾಮಗಳ, ನಗರದ ಭಕ್ತರು ಕಡಕ್ ರೊಟ್ಟಿ ಸೇರಿದಂತೆ ಸಿಹಿ ಪದಾರ್ಥಗಳನ್ನು ಮಠಕ್ಕೆ ನೀಡುತ್ತಾರೆ. ಒಂದೇ ದಿನ ಹತ್ತಾರು ಸಾವಿರ ಜನರಿಗೆ ಎಲ್ಲಿಯೂ ಯಾವುದೇ ರೀತಿಯ ತೊಂದರೆಯಾಗದಂತೆ ಮಠದ ವಟುಗಳು ನೋಡಿಕೊಳ್ಳುತ್ತಾರೆ. ಈ ವರ್ಷ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ವಟುಗಳು ಉಣಬಡಿಸುವ ಪ್ರಸಾದ ಸ್ವೀಕರಿಸಿದರು. ಹಾವೇರಿ ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಊರೂಟದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಕಲ್ಯಾಣದಲ್ಲಿರುವ ಮಠಗಳಿಗಿಂತ ಕೇವಲ ಒಂದು ಮಠ ಕಡಿಮೆ ಇರುವ ಕಾರಣ ಹಾವೇರಿಗೆ ಮರಿಕಲ್ಯಾಣ ಅಥವಾ ಎರಡನೇಯ ಕಲ್ಯಾಣ ಎಂಬ ಹೆಸರಿದೆ. ರಾಜ್ಯದಲ್ಲಿರುವ ಕೆಲವೇ ಕೆಲವು ಕಜ್ಜಾಯ ಮಠಗಳಲ್ಲಿ ಹಾವೇರಿ ಸಿಂದಗಿಮಠವೂ ಒಂದು. ಇಲ್ಲಿ ನಿತ್ಯ ವಟುಗಳು ಮನೆಮನೆಗೆ ತೆರಳಿ ಪ್ರಸಾದ ಸಂಗ್ರಹಿಸುತ್ತಾರೆ. ಹಾವೇರಿ ನಗರದಲ್ಲಿ ಸಂಚರಿಸುವ ವಟುಗಳು ತಂದ ಆಹಾರದಿಂದ ಮಠ ನಡೆಯುತ್ತದೆ.
ಉತ್ತರ ಕರ್ನಾಟಕದ ಬಹುತೇಕ ಗ್ರಾಮಗಳಲ್ಲಿ ಅಯ್ಯಾಚಾರ ಅಥವಾ ಗ್ರಾಮದಲ್ಲಿ ಜಂಗಮರಾಗಿ ಕಾರ್ಯ ನಿರ್ವಹಿಸುವವರು ಹಾವೇರಿ ಸಿಂದಗಿಮಠದ ಹಳೆ ವಿದ್ಯಾರ್ಥಿಗಳು. ಲಿಂಗದೀಕ್ಷೆ ಸೇರಿದಂತೆ ವಿವಿಧ ಪಾಠೋಪಚಾರ ಕಲಿತ ನಂತರ ಅಲ್ಲಿಯ ಗ್ರಾಮಗಳಲ್ಲಿನ ವೀರಶೈವರ ಸಂಸ್ಕಾರಗಳನ್ನು ಇಲ್ಲಿನ ವಿದ್ಯಾರ್ಥಿಗಳೇ ಮಾಡುವುದು ವಿಶೇಷ. ಸಿಂದಗಿಮಠದ ವಿವಿಧ ಶಾಖಾಮಠಗಳು ಬ್ಯಾಡಗಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿವೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

ಹಾವೇರಿ ಸಿಂದಗಿಮಠದಿಂದ ಸಹಸ್ರಾರು ಭಕ್ತರಿಗೆ ಊರೂಟ
ಹಾವೇರಿ; ಮರಿಕಲ್ಯಾಣ ಖ್ಯಾತಿಯ ಹಾವೇರಿನಗರದಲ್ಲಿ ೬೩ಕ್ಕೂ ಹೆಚ್ಚಿನಮಠಗಳಿದ್ದು, ಈಮಠಗಳಲ್ಲಿ ಭಕ್ತಿಗೆ ಹುಕ್ಕೇರಿಮಠ, ಜ್ಞಾನಕ್ಕೆ ಹೊಸಮಠ, ದಸೋಹಕ್ಕೆ ಸಿಂದಗಿಮಠ ಹೆಸರಾಗಿದ್ದು, ಹಸಿದು ಬಂದವರಿಗೆ ಸದಾ ಪ್ರಸಾದ ನೀಡುವ ಸಿಂದಗಿಮಠಕ್ಕೆ ಹಾವೇರಿ ಸೇರಿದಂತೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಭಕ್ತರಿದ್ದಾರೆ.   ಸಿಂದಗಿಮಠದಲ್ಲಿ ಲಿಂ. ಶಾಂತವೀರೇಶ್ವರ ಶ್ರೀಗಳ ಸ್ಮರಣೋತ್ಸವದ ಹಿನ್ನಲೆಯಲ್ಲಿ ಶನಿವಾರ ಮಠದಲ್ಲಿ  ಸಹಸ್ರಾರು ಸಂಖ್ಯೆಯಲ್ಲಿ ಭಕ್ತರಿಗೆ ಊರೂಟ ಬಡಿಸಲಾಯಿತು.
ವೀರಶೈವ-ಲಿಂಗಾಯತ ಸಮುದಾಯದ ಪರಂಪರೆಯಲ್ಲಿ ಸ್ವಾಮೀಜಿಗಳನ್ನು ಮನೆಗೆ ಕರೆದು ಪ್ರಸಾದ ನೀಡುವ ಪದ್ಧತಿ ಇದೆ. ಆದರೆ ಸ್ವಾಮೀಜಿಯೇ ಭಕ್ತರನ್ನು ಮಠಕ್ಕೆ ಕರೆದು ಪ್ರಸಾದ ನೀಡುವುದು ವಿರಳ. ಇಂಥ ವಿಶಿಷ್ಠ ಪರಂಪರೆ ಹಾವೇರಿಯ ಸಿಂದಗಿಮಠದಲ್ಲಿದೆ. ಮಠದ ವಟುಗಳು ಮನೆಮನೆಗೆ ತೆರಳಿ ಭಕ್ತರನ್ನು ಊರೂಟಕ್ಕೆ ಬರುವಂತೆ ಆಹ್ವಾನಿಸುತ್ತಾರೆ. ಶನಿವಾರ ಶಾಂತವೀರೇಶ್ವರರ ಗದ್ದುಗೆಯನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಭಕ್ತರು ಗದ್ದುಗೆ ದರ್ಶನ ನಂತರ ಪ್ರಸಾದ ಸ್ವೀಕರಿಸುತ್ತಾರೆ. ಮಠಕ್ಕೆ ಹತ್ತಾರು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಬಂದು ಪ್ರಸಾದ ಸವಿ೦ರು. ಭಕ್ತರನ್ನು ಮಠದ ವಟುಗಳೇ ಸ್ವಾಗತಿಸಿದರು. ವಟುಗಳು ತಯಾರಿಸಿದ ಭೋಜನವನ್ನು ಭಕ್ತರಿಗೆ ವಟುಗಳೇ ಬಡಿಸಿದ್ದು ವಿಶೇಷವಾಗಿತ್ತು.
ಭಕ್ತರ ತಟ್ಟೆಗಳನ್ನೂ ತೊಳೆಯುವ ವಟುಗಳು:ಶ್ರೀಗಳು ಅನ್ನದಲ್ಲಿ ದೇವರನ್ನು ಕಂಡವರು. ಹೀಗಾಗಿ ಈ ಪದ್ಧತಿ ಹುಟ್ಟುಹಾಕಿದ್ದಾರೆ. ಅಂದಿನಿಂದ ಮಠದಲ್ಲಿ ದಿನನಿತ್ಯ ನೂರಾರು ಭಕ್ತರು ಪ್ರಸಾದ ಸ್ವೀಕರಿಸುತ್ತಾರೆ ಊರುಟದ ಈ ದಿನ ಮಠಕ್ಕೆ ಈ ಹಿಂದೆ ವ್ಯಾಸಂಗ ಮಾಡಿದ ಮಾಜಿ ವಿದ್ಯಾರ್ಥಿಗಳೂ ಬರುತ್ತಾರೆ. ಎಲ್ಲ ವಟುಗಳು ಸೇರಿ ಭಕ್ತರಲ್ಲಿ ದೇವರನ್ನು ಕಾಣುತ್ತಾರೆ. ಭಕ್ತರ ಪ್ರಸಾದದ ತಟ್ಟೆಯನ್ನೂ ವಟುಗಳೇ ತೊಳೆಯುತ್ತಾರೆ. ಇಂಥದ್ದೊಂದು ವಿಶಿಷ್ಠ ಪರಂಪರೆಯನ್ನು ಲಿಂಗೈಕ್ಯ ಶಾಂತವೀರೇಶ್ವರ ಶ್ರೀಗಳು ಆಚರಣೆಗೆ ತಂದಿದ್ದರಂತೆ. ಅವರು ಲಿಂಗೈಕ್ಯರಾದ ನಂತರ ವಟುಗಳು ಪದ್ಧತಿಯನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಅದೇ ಪರಂಪರೆಯನ್ನು ಅವರ ನಂತರವೂ ಸಹ ಮಠದಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಮಠದಲ್ಲಿ ಈ ದಿನ ಉತ್ತರ ಕರ್ನಾಟಕದ ಖಡಕ್ ರೊಟ್ಟಿ, ಕರಿಂಡಿ ಪಾಯಸ ಸೇರಿದಂತೆ ವಿವಿಧ ಭಕ್ಷ್ಯಗಳನ್ನು ಉಣಬಡಿಸಲಾಗುತ್ತದೆ.
ಊರೂಟಾ ಇರುವಾಗ ಕೆಲವು ಗ್ರಾಮಗಳ, ನಗರದ ಭಕ್ತರು ಕಡಕ್ ರೊಟ್ಟಿ ಸೇರಿದಂತೆ ಸಿಹಿ ಪದಾರ್ಥಗಳನ್ನು ಮಠಕ್ಕೆ ನೀಡುತ್ತಾರೆ. ಒಂದೇ ದಿನ ಹತ್ತಾರು ಸಾವಿರ ಜನರಿಗೆ ಎಲ್ಲಿಯೂ ಯಾವುದೇ ರೀತಿಯ ತೊಂದರೆಯಾಗದಂತೆ ಮಠದ ವಟುಗಳು ನೋಡಿಕೊಳ್ಳುತ್ತಾರೆ. ಈ ವರ್ಷ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ವಟುಗಳು ಉಣಬಡಿಸುವ ಪ್ರಸಾದ ಸ್ವೀಕರಿಸಿದರು. ಹಾವೇರಿ ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಊರೂಟದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಕಲ್ಯಾಣದಲ್ಲಿರುವ ಮಠಗಳಿಗಿಂತ ಕೇವಲ ಒಂದು ಮಠ ಕಡಿಮೆ ಇರುವ ಕಾರಣ ಹಾವೇರಿಗೆ ಮರಿಕಲ್ಯಾಣ ಅಥವಾ ಎರಡನೇಯ ಕಲ್ಯಾಣ ಎಂಬ ಹೆಸರಿದೆ. ರಾಜ್ಯದಲ್ಲಿರುವ ಕೆಲವೇ ಕೆಲವು ಕಜ್ಜಾಯ ಮಠಗಳಲ್ಲಿ ಹಾವೇರಿ ಸಿಂದಗಿಮಠವೂ ಒಂದು. ಇಲ್ಲಿ ನಿತ್ಯ ವಟುಗಳು ಮನೆಮನೆಗೆ ತೆರಳಿ ಪ್ರಸಾದ ಸಂಗ್ರಹಿಸುತ್ತಾರೆ. ಹಾವೇರಿ ನಗರದಲ್ಲಿ ಸಂಚರಿಸುವ ವಟುಗಳು ತಂದ ಆಹಾರದಿಂದ ಮಠ ನಡೆಯುತ್ತದೆ.
ಉತ್ತರ ಕರ್ನಾಟಕದ ಬಹುತೇಕ ಗ್ರಾಮಗಳಲ್ಲಿ ಅಯ್ಯಾಚಾರ ಅಥವಾ ಗ್ರಾಮದಲ್ಲಿ ಜಂಗಮರಾಗಿ ಕಾರ್ಯ ನಿರ್ವಹಿಸುವವರು ಹಾವೇರಿ ಸಿಂದಗಿಮಠದ ಹಳೆ ವಿದ್ಯಾರ್ಥಿಗಳು. ಲಿಂಗದೀಕ್ಷೆ ಸೇರಿದಂತೆ ವಿವಿಧ ಪಾಠೋಪಚಾರ ಕಲಿತ ನಂತರ ಅಲ್ಲಿಯ ಗ್ರಾಮಗಳಲ್ಲಿನ ವೀರಶೈವರ ಸಂಸ್ಕಾರಗಳನ್ನು ಇಲ್ಲಿನ ವಿದ್ಯಾರ್ಥಿಗಳೇ ಮಾಡುವುದು ವಿಶೇಷ. ಸಿಂದಗಿಮಠದ ವಿವಿಧ ಶಾಖಾಮಠಗಳು ಬ್ಯಾಡಗಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿವೆ.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...