ಕ್ರಾಂತಿವೀರ ಸಿಂಧೂರ ಲಕ್ಷ್ಮಣನ ಶೌರ್ಯ, ಸಾಧನೆ, ದೇಶಾಭಿಮಾನ ಪಠ್ಯದಲ್ಲಿ ಸೇರಬೇಕು
ಹಾವೇರಿ ಸಿಂಧೂರ ಲಕ್ಷ್ಮಣ ಅವರ ಕುರಿತು ಚಿತ್ರ ನಿರ್ಮಾಣವಾಗಬೇಕು, ವೀರ ಸಿಂಧೂರ ಲಕ್ಷ್ಮಣನ ಶೌರ್ಯ, ಸಾಧನೆ, ದೇಶಾಭಿಮಾನದ ವಿಚಾರಗಳು ಪಠ್ಯವನ್ನು ಸೇರಬೇಕು. ಸ್ವಾತಂತ್ರ್ಯಕ್ಕಾಗಿ ಜೀವನವನ್ನೇ ತ್ಯಾಗ ಮಾಡಿದ ಧೀಮಂತ ರಾಷ್ಟ್ರಭಕ್ತನ ವಿಚಾರಗಳು ಎಲ್ಲ ಕಡೆ ಪಸರಿಸುವಂತಾಗಬೇಕು ಎಂದು ಜಿಲ್ಲಾ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಹಾಗೂ ವಾಲ್ಮೀಕಿ ನಾಯಕ ಮಹಾಸಭಾದ ಜಿಲ್ಲಾ ಅಧ್ಯಕ್ಷ ರಮೇಶ ಆನವಟ್ಟಿ ಹೇಳಿದರು.
ಗುರುವಾರ ನಗರದಲ್ಲಿ ಕ್ರಾಂತಿವೀರ ಸಿಂಧೂರ ಲಕ್ಷ್ಮಣ ಸಂಘ ಆಯೋಜಿಸಿದ್ದ ವೀರ ಸಿಂಧೂರ ಲಕ್ಷ್ಮಣ ಅವರ ೧೨೫ನೇ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ ಮೂಲಕ ವಿದ್ಯಾರ್ಥಿಗಳಿಗೆ ಲಕ್ಷ್ಮಣನ ಸಾಧನೆ ತಿಳಿಸುವ ಕೆಲಸವಾಗಬೇಕು ಎಂದರು.
ವಾಲ್ಮೀಕಿ ಮಹಾಸಭಾದ ಜಿಲ್ಲಾ ಗೌರವಾಧ್ಯಕ್ಷ ನ್ಯಾಯವಾದಿ ಬಸವರಾಜ ಹಾದಿಮನಿ ಮಾತ ಸಿಂಧೂರ ಲಕ್ಷ್ಮಣನ ಜಯಂತಿ ರಾಜ್ಯಾದ್ಯಂತ ಆಚರಣೆ ಮಾಡುವಂತಾಗಬೇಕು. ಸ್ವಾತಂತ್ರ್ಯ ಹೋರಾಟಗಾರು ಮಹಾನ್ ನಾಯಕರು ಒಂದೇ ಸಮುದಾಯಕ್ಕೆ ಸೀಮಿತವಲ್ಲ. ಆ ಕಾರಣಕ್ಕಾಗಿ ಎಲ್ಲ ಸಮೂದಾಯದವರು ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿಂಧೂರ ಲಕ್ಷ್ಮಣ ಸಂಘದ ಜಿಲ್ಲಾಧ್ಯಕ್ಷ ಮಾರುತಿ ಕನವಳ್ಳಿ ವಹಿಸಿದ್ದರು, ವಾಲ್ಮೀಕಿ ಯುವ ಘಟಕದ ಜಿಲ್ಲಾ ಅಧ್ಯಕ್ಷ ನಾಗರಾಜ ಬಡಮ್ಮನವರ , ಮಾಲತೇಶ ರಿತ್ತಿ, ಶ್ರೀಕಾಂತ್ ಕುಡಪಲಿ, ರಮೇಶ ಕರಬಸಮ್ಮನವರ್, ಮಹಾಂತೇಶ್ ಹೊಳೆಮ್ಮನವರ್, ಜಗದೀಶ ಕೊಂಡಮ್ಮನವರ, ಮಲ್ಲಿಕಾರ್ಜುನ ಬುದಗಟ್ಟಿ , ರಮೇಶ್ ಇಟ್ಟಿಗೆ, ವಿನಾಯಕ ತಳವಾರ ಮತ್ತಿತರರು ಭಾಗವಹಿಸಿದ್ದರು.
ಕ್ರಾಂತಿವೀರ ಸಿಂಧೂರ ಲಕ್ಷ್ಮಣನ ಶೌರ್ಯ, ಸಾಧನೆ, ದೇಶಾಭಿಮಾನ ಪಠ್ಯದಲ್ಲಿ ಸೇರಬೇಕು
Date:
ಕ್ರಾಂತಿವೀರ ಸಿಂಧೂರ ಲಕ್ಷ್ಮಣನ ಶೌರ್ಯ, ಸಾಧನೆ, ದೇಶಾಭಿಮಾನ ಪಠ್ಯದಲ್ಲಿ ಸೇರಬೇಕು
ಹಾವೇರಿ ಸಿಂಧೂರ ಲಕ್ಷ್ಮಣ ಅವರ ಕುರಿತು ಚಿತ್ರ ನಿರ್ಮಾಣವಾಗಬೇಕು, ವೀರ ಸಿಂಧೂರ ಲಕ್ಷ್ಮಣನ ಶೌರ್ಯ, ಸಾಧನೆ, ದೇಶಾಭಿಮಾನದ ವಿಚಾರಗಳು ಪಠ್ಯವನ್ನು ಸೇರಬೇಕು. ಸ್ವಾತಂತ್ರ್ಯಕ್ಕಾಗಿ ಜೀವನವನ್ನೇ ತ್ಯಾಗ ಮಾಡಿದ ಧೀಮಂತ ರಾಷ್ಟ್ರಭಕ್ತನ ವಿಚಾರಗಳು ಎಲ್ಲ ಕಡೆ ಪಸರಿಸುವಂತಾಗಬೇಕು ಎಂದು ಜಿಲ್ಲಾ ವಾಲ್ಮೀಕಿ ನಾಯಕ ಕ್ಷೇಮಾಭಿವೃದ್ಧಿ ಸಂಘದ ಹಾಗೂ ವಾಲ್ಮೀಕಿ ನಾಯಕ ಮಹಾಸಭಾದ ಜಿಲ್ಲಾ ಅಧ್ಯಕ್ಷ ರಮೇಶ ಆನವಟ್ಟಿ ಹೇಳಿದರು.
ಗುರುವಾರ ನಗರದಲ್ಲಿ ಕ್ರಾಂತಿವೀರ ಸಿಂಧೂರ ಲಕ್ಷ್ಮಣ ಸಂಘ ಆಯೋಜಿಸಿದ್ದ ವೀರ ಸಿಂಧೂರ ಲಕ್ಷ್ಮಣ ಅವರ ೧೨೫ನೇ ಜಯಂತ್ಯುತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ ಮೂಲಕ ವಿದ್ಯಾರ್ಥಿಗಳಿಗೆ ಲಕ್ಷ್ಮಣನ ಸಾಧನೆ ತಿಳಿಸುವ ಕೆಲಸವಾಗಬೇಕು ಎಂದರು.
ವಾಲ್ಮೀಕಿ ಮಹಾಸಭಾದ ಜಿಲ್ಲಾ ಗೌರವಾಧ್ಯಕ್ಷ ನ್ಯಾಯವಾದಿ ಬಸವರಾಜ ಹಾದಿಮನಿ ಮಾತ ಸಿಂಧೂರ ಲಕ್ಷ್ಮಣನ ಜಯಂತಿ ರಾಜ್ಯಾದ್ಯಂತ ಆಚರಣೆ ಮಾಡುವಂತಾಗಬೇಕು. ಸ್ವಾತಂತ್ರ್ಯ ಹೋರಾಟಗಾರು ಮಹಾನ್ ನಾಯಕರು ಒಂದೇ ಸಮುದಾಯಕ್ಕೆ ಸೀಮಿತವಲ್ಲ. ಆ ಕಾರಣಕ್ಕಾಗಿ ಎಲ್ಲ ಸಮೂದಾಯದವರು ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿಂಧೂರ ಲಕ್ಷ್ಮಣ ಸಂಘದ ಜಿಲ್ಲಾಧ್ಯಕ್ಷ ಮಾರುತಿ ಕನವಳ್ಳಿ ವಹಿಸಿದ್ದರು, ವಾಲ್ಮೀಕಿ ಯುವ ಘಟಕದ ಜಿಲ್ಲಾ ಅಧ್ಯಕ್ಷ ನಾಗರಾಜ ಬಡಮ್ಮನವರ , ಮಾಲತೇಶ ರಿತ್ತಿ, ಶ್ರೀಕಾಂತ್ ಕುಡಪಲಿ, ರಮೇಶ ಕರಬಸಮ್ಮನವರ್, ಮಹಾಂತೇಶ್ ಹೊಳೆಮ್ಮನವರ್, ಜಗದೀಶ ಕೊಂಡಮ್ಮನವರ, ಮಲ್ಲಿಕಾರ್ಜುನ ಬುದಗಟ್ಟಿ , ರಮೇಶ್ ಇಟ್ಟಿಗೆ, ವಿನಾಯಕ ತಳವಾರ ಮತ್ತಿತರರು ಭಾಗವಹಿಸಿದ್ದರು.