ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಇರುವುದೊಂದೆ ಅಧ್ಯಕ್ಷ ಹುದ್ದೆ, ಯಾರೇಲ್ಲಾ ರೇಸ್‌ನಲ್ಲಿದ್ದಾರೆ……..

Date:

ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಇರುವುದೊಂದೆ ಅಧ್ಯಕ್ಷ ಹುದ್ದೆ, ಯಾರೇಲ್ಲಾ ರೇಸ್‌ನಲ್ಲಿದ್ದಾರೆ……..
ಹಾವೇರಿ: ಹಾವೇರಿನಗರಾಭಿಪ್ರಾಧಿಕಾರಕ್ಕೆ ಯಾರಾಗುತ್ತಾರೆ ಅಧ್ಯಕ್ಷರು? ಎನ್ನುವುದು ಈಗ ಭಾರಿ ಚರ್ಚೆಯಾಗುತ್ತಿರುವ ವಿಷಯವಾಗಿದೆ. ಕಾಂಗ್ರೆಸ್ ಸರ್ಕಾರ ಭಾರೀ ಬಹುಮತದೊಂದಿಗೆ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಹಾವೇರಿ ಮೀಸಲು ಕ್ಷೇತ್ರದಲ್ಲಿ ಸಜ್ಜನ ರಾಜಕಾರಣಿ ರುದ್ರಪ್ಪ ಲಮಾಣಿ ಅವರು ಶಾಸಕರಾಗಿ ಆಯ್ಕೆಯಾದಾಗಿನಿಂದ ಪ್ರಾಧಿಕಾರಕ್ಕೆ ಅಧ್ಯಕ್ಷರು ಯಾರು? ಎನ್ನುವ ಚರ್ಚೆ ಜೋರಾಗಿದೆ.
ರಾಜಕಾರಣದಲ್ಲಿ ಮಾತೊಂದಿದೆ, “ಗೆಲುವಿಗೆ ಹಲವಾರು ಅಪ್ಪಂದಿರು, ಸೋಲಿಗೆ ಯಾರು ಅಪ್ಪಂದಿರುಗಳು ಇರುವುದಿಲ್ಲ”. ರುದ್ರಪ್ಪ ಲಮಾಣಿ ಅವರು ಗೆದ್ದಾಗಿದೆ, ಅವರ ಗೆಲುವಿಗೆ ನಾನಾ ನಮೂನಿಯ ಜನ ತಾವೇ ಕಾರಣರು, ತಮ್ಮಂದಲೇ ರುದ್ರಪ್ಪ ಲಮಾಣಿ ಗೆದ್ದಿರುವುದು, ತಾವು ಪ್ರಚಾರ ಮಾಡಿದ್ದರಿಂದಲೇ ಅವರ ಗೆಲ್ಲುವುದು ಸಾಧ್ಯವಾಯಿತು ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ರುದ್ರಪ್ಪ ಲಮಾಣಿ ಅವರ ವಿರುದ್ಧ ಚುನಾವಣೆ ಮಾಡಿದವರಲ್ಲಿ ಬಹುತೇಕರು ಶಾಲು-ಮಾಲೆ ಹಿಡಿದು ನೂತನ ಶಾಸಕ ಲಮಾಣಿ ಅವರಿಗೆ ಸನ್ಮಾನ ಮಾಡಲು ಪಾಳೆ ಹಚ್ಚಿರುವು ದೃಶ್ಯಗಳ ಸಾಮಾನ್ಯವಾಗಿವೆ.
ಇರಲಿ ನೂತನ ಶಾಸಕರು ಗೆದ್ದಾಗ ಸನ್ಮಾನಿಸಿ ಗೌರವಿಸುವುದು ನಮ್ಮ ಸಂಸ್ಕೃತಿ. ಆದರೆ ಕೆಲವರು ಒಂದು ಕೈಯಲ್ಲಿ ಶಾಲು-ಮಾಲೆ, ಮತ್ತೊಂದು ಕೈಯಲ್ಲಿ ಬೇಕು ಬೇಡಿಕೆಗಳ ಮನವಿಯನ್ನು, ವರ್ಗಾವಣೆಯಪತ್ರ ಹಿಡಿದುಕೊಂಡು ಶಾಸಕರ ಮರ್ಜಿಕಾಯುತ್ತಿದ್ದಾರೆ. ಇತ್ತ ರುದ್ರಪ್ಪ ಲಮಾಣಿ ಅವರ ಗೆಲುವಿಗೆ ಶ್ರಮಿಸಿದ ಮತಹಾಕಿದ ಸಾಮಾನ್ಯ ಕಾರ್ಯಕರ್ತ ಶಾಸಕರಮನೆಯ ಹೊರಗಡೆ ಇವರೆಲ್ಲರ ನಟನೆಗಳನ್ನು ನೋಡುತ್ತಾ ದೂರಲ್ಲಿ ನಿಂತು ನಿಟ್ಟುಸಿರು ಬಿಡುತ್ತಾ ನಿಂತಿರುತ್ತಾನೆ. ಇದೇಲ್ಲ ರಾಜಕಾರಣದಲ್ಲಿ ಮಾಮೂಲಿನ ಸಂಗತಿಯಾಗಿದೆ.
ಇದಲ್ಲಾ ಇರಲಿ, ಇದೀಗ ಹಾವೇರಿನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಪೈಪೋಟಿ ನಡೆದಿದ್ದು ಚುನಾವಣೆಯ ಪೂರ್ವದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರುದ್ರಪ್ಪ ಲಮಾಣಿ ಅವರ ಗೆಲುವಿಗೆ ಶ್ರಮಿಸಿದ ಕಾಂಗ್ರೆಸ್ ಮುಖಂಡರುಗಳಾದ ಹಲವಾರು ಪ್ರಮುಖರ ಹೆಸರುಗಳು ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಕೇಳಳಿಬರುತ್ತಿವೆ. ಮೊದಲನೆಯದಾಗಿ ರುದ್ರಪ್ಪ ಲಮಾಣಿ ಅವರ ನಿಕಟವರ್ತಿ, ಶಹರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು, ನ್ಯಾಯವಾದಿ. ಯುವ ಮುಂದಾಳು ಪ್ರಭು ಬಿಷ್ಟನಗೌಡ್ರ ಅವರ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ಮೇಲಾಗಿ ಪ್ರಭು ಬಿಷ್ಟನಗೌಡ್ರ ಪಂಚಮಸಾಲಿ ಸಮಾಜದ ಪ್ರಭಲ ಮುಖಂಡರಾಗಿದ್ದಾರೆ.
ಇನ್ನು ನಗರಸಭೆಯ ಮಾಜಿ ಅಧ್ಯಕ್ಷರಾಗಿರುವ ಇನ್ನೋರ್ವ ಪ್ರಭಾವಿ ಮುಖಂಡ ಪರಶುರಾಮ ಅಡಕಿ, ಉದ್ಯಮಿ ಬಸವರಾಜ ಬಳ್ಳಾರಿ, ಅವರ ಹೆಸರು ಸಹ ಮೂಂಚೂಣಿಯಲ್ಲಿ ಕೇಳಿಬರುತ್ತದೆ. ರುದ್ರಪ್ಪ ಲಮಾಣಿ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಉಮೀದ್ ನದಾಫ, ಬಸವರಾಜ ಮಾಳಗಿ, ಜಗದೀಶ ಬೆಟಗೇರಿ, ದಾಸಪ್ಪ ಕರಜಗಿ ಸೇರಿದಂತೆ ಇನ್ನೂ ಹಲವರು ತೆರೆಮರೆಯ ಪ್ರಯತ್ನ ನಡೆಸಿರುಬವುದು ಗುಟ್ಟಾಗಿ ಉಳಿದಿಲ್ಲ. ಇನ್ನೊಂದು ಸಂಗತಿಎಂದರೆ ಕಾಂಗ್ರೆಸ್ ಪ್ರಭಾವಿ ಮುಖಂಡ ಈಗಾಗಲೇ ಪ್ರಾಧಿಕಾರ ಹಾಗೂ ನಗರಸಭೆಯ ಅಧ್ಯಕ್ಷ ಸ್ಥಾನ ಅಲಂಕಿರಿಸಿರುವ ಸಂಜೀವಕುಮಾರ ನೀರಲಗಿ ಅವರ ಹೆಸರು ಸಹ ಅಧ್ಯಕ್ಷಸ್ಥಾನಕ್ಕೆ ಕೇಳಿಬರುತ್ತಿದೆ.
ಪ್ರಾಧಿಕಾರದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಲ್ಲಿ ಯಾರನ್ನಾದರೂ ಒಬ್ಬರನ್ನು ಆಯ್ಕೆ ಮಾಡುವುದು ಹೇಗೆ ಎನ್ನುವುದೇ ದೊಡ್ಡ ಸಮಸ್ಯೆಗೆ ಕಾರಣವಾಗಿದೆ. ಯಾರನ್ನೇ ಆಯ್ಕೆ ಮಾಡಿದರೂ ಉಳಿದವರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಇದಕ್ಕೆ ಪರಿಹಾರ ಕಂಡುಕೊಂಡು, ನಂತರವೇ ಅಧ್ಯಕ್ಷರನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆಯಲ್ಲಿ ಕಾಂಗ್ರೆಸ್ ಮುಖಂಡರಿದ್ದಾರೆ. ಈ ಹಿಂದಿನ ಕಾಂಗ್ರೆಸ್‌ಸರ್ಕಾರದ ಅವಧಿಯಲ್ಲಿ ಮೇಲವರ್ಗದವರಿಗೆ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ನೀಡುತ್ತಾ ಬರಲಾಗಿದೆ. ಹಾವೇರಿ ಮೀಸಲು ಕ್ಷೇತ್ರವಾಗಿರುವುದರಿಂದ ಎರಡನೆ ಎಂಎಲ್‌ಎ ಎಂದು ಕರೆಯುವ ಪ್ರಾಧಿಕಾರದ ಅಧ್ಯಕ್ಷ ಸ್ಥಾನವು ಮೇಲವರ್ಗಕ್ಕಿರಲಿ ಎನ್ನುವ ಆಶಯವು ಇದರಲ್ಲಿದೆ.
ಹಾವೇರಿ ನಗರಸಭೆ ಅಧ್ಯಕ್ಷ ಸ್ಥಾನ ಯಾವ ಸಮಾಜಕ್ಕೆ ಮೀಸಲಾಗಲಿದೆ ಎನ್ನುವುದು ಸಹ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಯಾರಿಗೆ ನೀಡಬೇಕೆನ್ನುವುದು ನಿರ್ಣಯವಾದರೂ ಅಚ್ಚರಿಪಡಬೇಕಿಲ್ಲ. ನಗರಸಭೆ ಅಧ್ಯಕ್ಷ ಸ್ಥಾನವನ್ನು ಹಿಂದುಳಿದ ವರ್ಗಕ್ಕೆ, ಅಥವಾ ಪರಿಶಿಷ್ಟ ಪಂಗಡಕ್ಕೆ ಸಮುದಾಯಕ್ಕೆ ನೀಡಿದ್ದೇ ಆದಲ್ಲಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ಬೇರೆ ಸಮಾಜಕ್ಕೆ ನೀಡಬೇಕಾಗುವ ಸನ್ನಿವೇಶ ಎದುರಾಗುತ್ತದೆ. ನಗರಸಭೆ ಮೇಲುವರ್ಗ ಹೊರತುಪಡಿಸಿ ಬೇರೆ ಸಮುದಾಯಕ್ಕೆ ಹೋದರೆ ಯಾರಿಗೆ, ಯಾವ ಸಮುದಾಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ಸಿಗುವ ಸಾಧ್ಯತೆಯನ್ನು ಕಾದುನೋಡಬೇಕಿದೆ.
ಈ ನಡುವೆ ಹಲವರ ಹೆಸರೂ ಪೈಪೋಟಿಯಲ್ಲಿವೆ ಎಂದು ಹೇಳಲಾಗುತ್ತಿದೆ. ಆದರೂ ಕೊನೆ ಗಳಿಗೆಯಲ್ಲಿ ಯಾರಾದರೂ ಆಗಬಹುದು ಎನ್ನಲಾಗುತ್ತಿದೆ. ಈಗಲೇ ಎಲ್ಲವನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲವಾದರೂ ನಗರಸಭೆ ಅಧ್ಯಕ್ಷರ ಚುನಾವಣೆ ಮುಗಿಯುತ್ತಿದ್ದಂತೆ ಇದಕ್ಕೆ ಮುಹೂರ್ತ ಕೂಡಿ ಬರಲಿದೆ. ಅಧ್ಯಕ್ಷಸ್ಥಾನದ ಆಕಾಂಕ್ಷಿಗಳು ನಾನಾ ಮಠಾಧೀಶರ ಮೂಲಕ ಶಾಸಕರ ಮೇಲೆ ಅಧ್ಯಕ್ಷಸ್ಥಾನಕ್ಕೆ ನೇಮಕಮಾಡಲು ಒತ್ತಡ ತರುತ್ತಿದ್ದಾರೆ.
ನಗರಾಭಿವೃದ್ಧಿ ಪ್ರಾಧಿಕಾರ ಎನ್ನುವುದು ಅಕ್ಷರಶಃ ಬಿಳಿ ಆನೆಯಾಗಿದೆ. ಇಲ್ಲಿವರೆಗೂ ಆಗಿರುವ ಅಧ್ಯಕ್ಷರ ಬಾಬತ್ತಿನ ಖರ್ಚಿಗೆ ಪ್ರಾಧಿಕಾರ ಲಕ್ಷಾಂತರ ಹಣ ವೆಚ್ಚ ಮಾಡಿದೆ. ಆದರೆ, ಪ್ರಾಧಿಕಾರದಿಂದ ಒಂದೇ ಒಂದೇ ಹೇಳಿಕೊಳ್ಳುವಂತಹ ಕೆಲಸ ಆಗಿಲ್ಲ. ಹಲವು ವರ್ಷಗಳ ಯೋಜನೆಗಳು ಕುಂಟುತ್ತ ಸಾಗಿದೆ. ನೂತನವಾಗಿ ಪ್ರಾಧಿಕಾರಕ್ಕೆ ಅಧ್ಯಕ್ಷರಾಗುವವರ ಮೇಲೆ ಮಹತ್ವದ ಜವಾಬ್ದಾರಿಯಂತು ಇದೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

ಹಾವೇರಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಇರುವುದೊಂದೆ ಅಧ್ಯಕ್ಷ ಹುದ್ದೆ, ಯಾರೇಲ್ಲಾ ರೇಸ್‌ನಲ್ಲಿದ್ದಾರೆ……..
ಹಾವೇರಿ: ಹಾವೇರಿನಗರಾಭಿಪ್ರಾಧಿಕಾರಕ್ಕೆ ಯಾರಾಗುತ್ತಾರೆ ಅಧ್ಯಕ್ಷರು? ಎನ್ನುವುದು ಈಗ ಭಾರಿ ಚರ್ಚೆಯಾಗುತ್ತಿರುವ ವಿಷಯವಾಗಿದೆ. ಕಾಂಗ್ರೆಸ್ ಸರ್ಕಾರ ಭಾರೀ ಬಹುಮತದೊಂದಿಗೆ ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಹಾವೇರಿ ಮೀಸಲು ಕ್ಷೇತ್ರದಲ್ಲಿ ಸಜ್ಜನ ರಾಜಕಾರಣಿ ರುದ್ರಪ್ಪ ಲಮಾಣಿ ಅವರು ಶಾಸಕರಾಗಿ ಆಯ್ಕೆಯಾದಾಗಿನಿಂದ ಪ್ರಾಧಿಕಾರಕ್ಕೆ ಅಧ್ಯಕ್ಷರು ಯಾರು? ಎನ್ನುವ ಚರ್ಚೆ ಜೋರಾಗಿದೆ.
ರಾಜಕಾರಣದಲ್ಲಿ ಮಾತೊಂದಿದೆ, “ಗೆಲುವಿಗೆ ಹಲವಾರು ಅಪ್ಪಂದಿರು, ಸೋಲಿಗೆ ಯಾರು ಅಪ್ಪಂದಿರುಗಳು ಇರುವುದಿಲ್ಲ”. ರುದ್ರಪ್ಪ ಲಮಾಣಿ ಅವರು ಗೆದ್ದಾಗಿದೆ, ಅವರ ಗೆಲುವಿಗೆ ನಾನಾ ನಮೂನಿಯ ಜನ ತಾವೇ ಕಾರಣರು, ತಮ್ಮಂದಲೇ ರುದ್ರಪ್ಪ ಲಮಾಣಿ ಗೆದ್ದಿರುವುದು, ತಾವು ಪ್ರಚಾರ ಮಾಡಿದ್ದರಿಂದಲೇ ಅವರ ಗೆಲ್ಲುವುದು ಸಾಧ್ಯವಾಯಿತು ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ರುದ್ರಪ್ಪ ಲಮಾಣಿ ಅವರ ವಿರುದ್ಧ ಚುನಾವಣೆ ಮಾಡಿದವರಲ್ಲಿ ಬಹುತೇಕರು ಶಾಲು-ಮಾಲೆ ಹಿಡಿದು ನೂತನ ಶಾಸಕ ಲಮಾಣಿ ಅವರಿಗೆ ಸನ್ಮಾನ ಮಾಡಲು ಪಾಳೆ ಹಚ್ಚಿರುವು ದೃಶ್ಯಗಳ ಸಾಮಾನ್ಯವಾಗಿವೆ.
ಇರಲಿ ನೂತನ ಶಾಸಕರು ಗೆದ್ದಾಗ ಸನ್ಮಾನಿಸಿ ಗೌರವಿಸುವುದು ನಮ್ಮ ಸಂಸ್ಕೃತಿ. ಆದರೆ ಕೆಲವರು ಒಂದು ಕೈಯಲ್ಲಿ ಶಾಲು-ಮಾಲೆ, ಮತ್ತೊಂದು ಕೈಯಲ್ಲಿ ಬೇಕು ಬೇಡಿಕೆಗಳ ಮನವಿಯನ್ನು, ವರ್ಗಾವಣೆಯಪತ್ರ ಹಿಡಿದುಕೊಂಡು ಶಾಸಕರ ಮರ್ಜಿಕಾಯುತ್ತಿದ್ದಾರೆ. ಇತ್ತ ರುದ್ರಪ್ಪ ಲಮಾಣಿ ಅವರ ಗೆಲುವಿಗೆ ಶ್ರಮಿಸಿದ ಮತಹಾಕಿದ ಸಾಮಾನ್ಯ ಕಾರ್ಯಕರ್ತ ಶಾಸಕರಮನೆಯ ಹೊರಗಡೆ ಇವರೆಲ್ಲರ ನಟನೆಗಳನ್ನು ನೋಡುತ್ತಾ ದೂರಲ್ಲಿ ನಿಂತು ನಿಟ್ಟುಸಿರು ಬಿಡುತ್ತಾ ನಿಂತಿರುತ್ತಾನೆ. ಇದೇಲ್ಲ ರಾಜಕಾರಣದಲ್ಲಿ ಮಾಮೂಲಿನ ಸಂಗತಿಯಾಗಿದೆ.
ಇದಲ್ಲಾ ಇರಲಿ, ಇದೀಗ ಹಾವೇರಿನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ ಪೈಪೋಟಿ ನಡೆದಿದ್ದು ಚುನಾವಣೆಯ ಪೂರ್ವದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರುದ್ರಪ್ಪ ಲಮಾಣಿ ಅವರ ಗೆಲುವಿಗೆ ಶ್ರಮಿಸಿದ ಕಾಂಗ್ರೆಸ್ ಮುಖಂಡರುಗಳಾದ ಹಲವಾರು ಪ್ರಮುಖರ ಹೆಸರುಗಳು ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಕೇಳಳಿಬರುತ್ತಿವೆ. ಮೊದಲನೆಯದಾಗಿ ರುದ್ರಪ್ಪ ಲಮಾಣಿ ಅವರ ನಿಕಟವರ್ತಿ, ಶಹರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು, ನ್ಯಾಯವಾದಿ. ಯುವ ಮುಂದಾಳು ಪ್ರಭು ಬಿಷ್ಟನಗೌಡ್ರ ಅವರ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ. ಮೇಲಾಗಿ ಪ್ರಭು ಬಿಷ್ಟನಗೌಡ್ರ ಪಂಚಮಸಾಲಿ ಸಮಾಜದ ಪ್ರಭಲ ಮುಖಂಡರಾಗಿದ್ದಾರೆ.
ಇನ್ನು ನಗರಸಭೆಯ ಮಾಜಿ ಅಧ್ಯಕ್ಷರಾಗಿರುವ ಇನ್ನೋರ್ವ ಪ್ರಭಾವಿ ಮುಖಂಡ ಪರಶುರಾಮ ಅಡಕಿ, ಉದ್ಯಮಿ ಬಸವರಾಜ ಬಳ್ಳಾರಿ, ಅವರ ಹೆಸರು ಸಹ ಮೂಂಚೂಣಿಯಲ್ಲಿ ಕೇಳಿಬರುತ್ತದೆ. ರುದ್ರಪ್ಪ ಲಮಾಣಿ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಉಮೀದ್ ನದಾಫ, ಬಸವರಾಜ ಮಾಳಗಿ, ಜಗದೀಶ ಬೆಟಗೇರಿ, ದಾಸಪ್ಪ ಕರಜಗಿ ಸೇರಿದಂತೆ ಇನ್ನೂ ಹಲವರು ತೆರೆಮರೆಯ ಪ್ರಯತ್ನ ನಡೆಸಿರುಬವುದು ಗುಟ್ಟಾಗಿ ಉಳಿದಿಲ್ಲ. ಇನ್ನೊಂದು ಸಂಗತಿಎಂದರೆ ಕಾಂಗ್ರೆಸ್ ಪ್ರಭಾವಿ ಮುಖಂಡ ಈಗಾಗಲೇ ಪ್ರಾಧಿಕಾರ ಹಾಗೂ ನಗರಸಭೆಯ ಅಧ್ಯಕ್ಷ ಸ್ಥಾನ ಅಲಂಕಿರಿಸಿರುವ ಸಂಜೀವಕುಮಾರ ನೀರಲಗಿ ಅವರ ಹೆಸರು ಸಹ ಅಧ್ಯಕ್ಷಸ್ಥಾನಕ್ಕೆ ಕೇಳಿಬರುತ್ತಿದೆ.
ಪ್ರಾಧಿಕಾರದ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಲ್ಲಿ ಯಾರನ್ನಾದರೂ ಒಬ್ಬರನ್ನು ಆಯ್ಕೆ ಮಾಡುವುದು ಹೇಗೆ ಎನ್ನುವುದೇ ದೊಡ್ಡ ಸಮಸ್ಯೆಗೆ ಕಾರಣವಾಗಿದೆ. ಯಾರನ್ನೇ ಆಯ್ಕೆ ಮಾಡಿದರೂ ಉಳಿದವರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಇದಕ್ಕೆ ಪರಿಹಾರ ಕಂಡುಕೊಂಡು, ನಂತರವೇ ಅಧ್ಯಕ್ಷರನ್ನು ಆಯ್ಕೆ ಮಾಡಬೇಕಾದ ಅನಿವಾರ್ಯತೆಯಲ್ಲಿ ಕಾಂಗ್ರೆಸ್ ಮುಖಂಡರಿದ್ದಾರೆ. ಈ ಹಿಂದಿನ ಕಾಂಗ್ರೆಸ್‌ಸರ್ಕಾರದ ಅವಧಿಯಲ್ಲಿ ಮೇಲವರ್ಗದವರಿಗೆ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ನೀಡುತ್ತಾ ಬರಲಾಗಿದೆ. ಹಾವೇರಿ ಮೀಸಲು ಕ್ಷೇತ್ರವಾಗಿರುವುದರಿಂದ ಎರಡನೆ ಎಂಎಲ್‌ಎ ಎಂದು ಕರೆಯುವ ಪ್ರಾಧಿಕಾರದ ಅಧ್ಯಕ್ಷ ಸ್ಥಾನವು ಮೇಲವರ್ಗಕ್ಕಿರಲಿ ಎನ್ನುವ ಆಶಯವು ಇದರಲ್ಲಿದೆ.
ಹಾವೇರಿ ನಗರಸಭೆ ಅಧ್ಯಕ್ಷ ಸ್ಥಾನ ಯಾವ ಸಮಾಜಕ್ಕೆ ಮೀಸಲಾಗಲಿದೆ ಎನ್ನುವುದು ಸಹ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಯಾರಿಗೆ ನೀಡಬೇಕೆನ್ನುವುದು ನಿರ್ಣಯವಾದರೂ ಅಚ್ಚರಿಪಡಬೇಕಿಲ್ಲ. ನಗರಸಭೆ ಅಧ್ಯಕ್ಷ ಸ್ಥಾನವನ್ನು ಹಿಂದುಳಿದ ವರ್ಗಕ್ಕೆ, ಅಥವಾ ಪರಿಶಿಷ್ಟ ಪಂಗಡಕ್ಕೆ ಸಮುದಾಯಕ್ಕೆ ನೀಡಿದ್ದೇ ಆದಲ್ಲಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನವನ್ನು ಬೇರೆ ಸಮಾಜಕ್ಕೆ ನೀಡಬೇಕಾಗುವ ಸನ್ನಿವೇಶ ಎದುರಾಗುತ್ತದೆ. ನಗರಸಭೆ ಮೇಲುವರ್ಗ ಹೊರತುಪಡಿಸಿ ಬೇರೆ ಸಮುದಾಯಕ್ಕೆ ಹೋದರೆ ಯಾರಿಗೆ, ಯಾವ ಸಮುದಾಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ಸಿಗುವ ಸಾಧ್ಯತೆಯನ್ನು ಕಾದುನೋಡಬೇಕಿದೆ.
ಈ ನಡುವೆ ಹಲವರ ಹೆಸರೂ ಪೈಪೋಟಿಯಲ್ಲಿವೆ ಎಂದು ಹೇಳಲಾಗುತ್ತಿದೆ. ಆದರೂ ಕೊನೆ ಗಳಿಗೆಯಲ್ಲಿ ಯಾರಾದರೂ ಆಗಬಹುದು ಎನ್ನಲಾಗುತ್ತಿದೆ. ಈಗಲೇ ಎಲ್ಲವನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲವಾದರೂ ನಗರಸಭೆ ಅಧ್ಯಕ್ಷರ ಚುನಾವಣೆ ಮುಗಿಯುತ್ತಿದ್ದಂತೆ ಇದಕ್ಕೆ ಮುಹೂರ್ತ ಕೂಡಿ ಬರಲಿದೆ. ಅಧ್ಯಕ್ಷಸ್ಥಾನದ ಆಕಾಂಕ್ಷಿಗಳು ನಾನಾ ಮಠಾಧೀಶರ ಮೂಲಕ ಶಾಸಕರ ಮೇಲೆ ಅಧ್ಯಕ್ಷಸ್ಥಾನಕ್ಕೆ ನೇಮಕಮಾಡಲು ಒತ್ತಡ ತರುತ್ತಿದ್ದಾರೆ.
ನಗರಾಭಿವೃದ್ಧಿ ಪ್ರಾಧಿಕಾರ ಎನ್ನುವುದು ಅಕ್ಷರಶಃ ಬಿಳಿ ಆನೆಯಾಗಿದೆ. ಇಲ್ಲಿವರೆಗೂ ಆಗಿರುವ ಅಧ್ಯಕ್ಷರ ಬಾಬತ್ತಿನ ಖರ್ಚಿಗೆ ಪ್ರಾಧಿಕಾರ ಲಕ್ಷಾಂತರ ಹಣ ವೆಚ್ಚ ಮಾಡಿದೆ. ಆದರೆ, ಪ್ರಾಧಿಕಾರದಿಂದ ಒಂದೇ ಒಂದೇ ಹೇಳಿಕೊಳ್ಳುವಂತಹ ಕೆಲಸ ಆಗಿಲ್ಲ. ಹಲವು ವರ್ಷಗಳ ಯೋಜನೆಗಳು ಕುಂಟುತ್ತ ಸಾಗಿದೆ. ನೂತನವಾಗಿ ಪ್ರಾಧಿಕಾರಕ್ಕೆ ಅಧ್ಯಕ್ಷರಾಗುವವರ ಮೇಲೆ ಮಹತ್ವದ ಜವಾಬ್ದಾರಿಯಂತು ಇದೆ.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಯಾಲಕ್ಕಿ ಕಂಪಿನ ನಗರ ಹಾವೇರಿಗೆ ಅಂಟುತ್ತಿರುವ ರೌಡಿಗಳ ರಕ್ತವಾಸನೆಯ ನಂಟು!

ಯಾಲಕ್ಕಿ ಕಂಪಿನ ನಗರ ಹಾವೇರಿಗೆ ಅಂಟುತ್ತಿರುವ ರೌಡಿಗಳ ರಕ್ತವಾಸನೆಯ ನಂಟು! ಹಾವೇರಿ: ದಾಸರು,...

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...