ಹಾವೇರಿಯ ತಹಶೀಲ್ದಾರ ಕಚೇರಿಯ ಶಿರಸ್ತೇದಾರ ಕು.ನಾಗರತ್ನಾ ಕಾಳೆ ಅಮಾನತುಗೊಳಿಸಿ ಆಯುಕ್ತರ ಆದೇಶ
ಹಾವೇರಿ: ಇಲ್ಲಿನ ತಹಶೀಲ್ದಾರ ಕಚೇರಿಯಲ್ಲಿ ಶಿರಸ್ತೇದಾರರಾಗಿದ್ದ ಕು. ನಾಗರತ್ನಾ ಕಾಳೆ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು ೧೯೫೭ ರ ನಿಯಮ (೯(೧)(೩) ರನ್ವಯ ಸೇವೆಯಿಂದ ಅಮಾನತ್ತಿನಲ್ಲಿರಿಸಿ ಜೂನ್.೨೮ರಂದು ಬೆಳಗಾವಿಯ ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಕು.ನಾಗರತ್ನಾ ಕಾಳೆ ಸದರಿಯವರು ಅಮಾನತ್ತಿನ ಅವಧಿಯಲ್ಲಿ ಕರ್ನಾಟಕ ನಾಗರೀಕ ಸೇವಾ ನಿಯಮಗಳು ೧೯೫೮ ರ ನಿಯಮ ೯೮(೧) ರನ್ವಯ ಜೀವನಾಧಾರ ಭತ್ಯೆಯನ್ನು ಪಡೆಯಲು ಅರ್ಹರಿರುತ್ತಾರೆ. ಸದರಿ ನೌಕರರು ಅಮಾನತ್ತಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರಿಯ ಅನುಮತಿಯನ್ನು ಪಡೆಯದೇ ಕೇಂದ್ರಸ್ಥಾನವನ್ನು ಬಿಡತಕ್ಕದ್ದಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಹಿನ್ನಲೆ: ದಿ:೨೫-೦೫-೨೦೨೩ ರಂದು ಲೋಕಾಯುಕ್ತ ಉಪಾಧೀಕ್ಷಕರು ಹಾವೇರಿ ಇವರು ತಹಶೀಲ್ದಾರ ಹಾವೇರಿ ಇವರ ಕಚೇರಿಗೆ ಆಕಸ್ಮಿಕ ಭೇಟಿ ನೀಡಿದ ಸಮಯದಲ್ಲಿ ಕಾರ್ಯಾಲಯದ ಅಭಿಲೇಖಾಲಯದಲ್ಲಿ ವಿರೇಶ ಮಳಗಾವಿ ಮತ್ತು ರವಿಚಂದ್ರ ಮಾಳಗಿ ಎಂಬ ಇಬ್ಬರು ಅನಧಿಕೃತ ವ್ಯಕ್ತಿಗಳು ಕೆಲಸ ನಿರ್ವಹಿಸುತ್ತಿದ್ದು, ಅವರನ್ನು ವಿಚಾರಿಸಲಾಗಿ ಅವರಿಬ್ಬರೂ ಬಹಳ ವರ್ಷಗಳಿಂದ ಅಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಮೇಲ್ವಿಚಾರಕ ಶಿರಸ್ತೇದಾರ ಆದ ಕುನಾಗರತ್ನಾ ಕಾಳೆ ಇವರು ಪ್ರತಿದಿನ ತಲಾ ೨೦೦ ರೂ. ರಿಂದ ೨೫೦ ರೂ. ವೇತನ ರೂಪವಾಗಿ ಕೊಡುತ್ತಿದ್ದರೆಂದು ತಿಳಿಸಿರುತ್ತಾರೆ.
ಕಂದಾಯ ಇಲಾಖೆಯ ಮಹತ್ವದ ಕಡತಗಳು ಮತ್ತು ಶಾಶ್ವತ ಕಡತಗಳು ಇರುವಂತ ಅಭಿಲೇಖಾಲಯದಲ್ಲಿ ಅನಧಿಕೃತ ವ್ಯಕ್ತಿಗಳಿಗೆ ಪ್ರವೇಶ ನೀಡಿ ದಾಖಲೆಗಳನ್ನು ಶೋಧಿಸಿ ದೃಡೀಕೃತ ನಕಲನ್ನು ಸಿದ್ಧಪಡಿಸಿಕೊಳ್ಳಲು ಕಾನೂನು ಬಾಹಿರವಾಗಿ ನೇಮಿಸಿಕೊಂಡಿರುವುದು ಅತಿ ಗಂಭೀರ ವಿಷಯವಾಗಿರುತ್ತದೆ.
ತಹಶೀಲ್ದಾರ ಕಚೇರಿಯಲ್ಲಿ ಹೆಚ್ಚುವರಿಯಾಗಿ ರೂ.೫೦,೦೦೦/- ಹಣ ದೊರೆತಿದ್ದು ವಿಚಾರಣೆ ಸಮಯದಲ್ಲಿ ಈ ಹಣವು ಕು. ನಾಗರತ್ನ ಕಾಳೆ ಶಿರಸ್ತೇದಾರ ಇವರಿಗೆ ಸೇರಿದ್ದು ಇರುತ್ತದೆ ಎಂದು ತಿಳಿಸಿರುತ್ತಾರೆ. ಸದರಿ ಶಿರಸ್ತೇದಾರರಾದ ಕು. ನಾಗರತ್ನ ಕಾಳೆ ಅವರು ನಗರು ವಹಿಯಲ್ಲಿ ರೂ. ೧೦೦ ಅಂತಾ ನಗದು ಘೋಷಣೆ ಮಾಡಿ ಸಹಿ ಮಾಡಿದ್ದು ಪರಿಶೀಲನೆ ಕಾಲಕ್ಕೆ ಅವರ ಬಳಿ ಹೆಚ್ಚುವರಿಯಾಗಿ ರೂ.೫೦,೦೦೦ ನಗದು ಹಣ ಸಿಕ್ಕಿರುತ್ತದೆ. ಇದರಿಂದ ಸರ್ಕಾರದ ಸುತ್ತೋಲೆ ದಿ:೦೪-೦೨-೨೦೨೨ ನೇರ ಉಲ್ಲಂಘನೆಯಾಗಿರುತ್ತದೆ.
ಸದರಿ ನೌಕರರು ಶಿರಸ್ತೇದಾರರಾಗಿದ್ದು ಕಚೇರಿಯಲ್ಲಿ ಉಪತಹಶೀಲ್ದಾರ ಅಂತಾ ನಾಮಫಲಕವನ್ನು ಹಾಕಿಕೊಂಡಿರುತ್ತಾರೆ ಎಂದು ಉಪವಿಭಾಗಾಧಿಕಾರಿಗಳು ಹಾವೇರಿ ಇವರು ವರದಿ ಸಲ್ಲಿಸಿ ಸದರಿ ನೌಕರರ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಕೋರಿದ್ದು ಇರುತ್ತದೆ.ಉಪವಿಭಾಗಾಧಿಕಾರಿಗಳು ಹಾವೇರಿ ಇವರು ಸಲ್ಲಿಸಿದ ವಿವರಗಳನ್ನು ಪರಿಶೀಲಿಸಿದಾಗ ಹಾವೇರಿ ತಹಶೀಲ್ದಾರ ಕಚೇರಿಯಲ್ಲಿ ಶಿರಸ್ತೇದಾರರಾಗಿ ಕೆಲಸ ನಿರ್ವಹಿಸುತ್ತಿರುವ ಕು. ನಾಗರತ್ನಾ ಕಾಳೆ ಯಾವುದೇ ಆದೇಶ/ಮಂಜೂರಾತಿ ಇಲ್ಲದೇ ಅನಧಿಕೃತ ವ್ಯಕ್ತಿಗಳನ್ನು ಸರ್ಕಾರಿ ಕಚೇರಿಯಲ್ಲಿ ಹಸ್ತಕ್ಷೇಪ ಮಾಡಲು ಅನುವು ಮಾಡಿಕೊಟ್ಟಿದ್ದಲ್ಲದೇ ಕಚೇರಿಯ ಬಹುಮುಖ್ಯವಾದ ದಾಖಲೆ/ಕಡತಗಳ ದುರುಪಯೋಗಕ್ಕೆ ಕಾರಣವಾಗುವ ರೀತಿಯಲ್ಲಿ ನಿಯಮಬಾಹಿರವಾಗಿ ವರ್ತಿಸಿರುವುದು ಮತ್ತು ನಗದು ಘೋಷಣಾ ವಹಿಯಲ್ಲಿ ನಮೂದಿಸಿದ್ದಕ್ಕಿಂತ ಹೆಚ್ಚಿನ ಹಣವನ್ನು ಹೊಂದಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ.
ಉಪವಿಭಾಗಾಧಿಕಾರಿಗಳ ವರದಿಯನ್ವಯ ಒಟ್ಟಾರೆಯಾಗಿ ಹಾವೇರಿ ತಾಲೂಕಾ ಕಚೇರಿಯಲ್ಲಿ ಅನಾರೋಗ್ಯಕರ ವಾತಾವರಣ ಸೃಷ್ಟಿಯಾಗಿರುವುದು ಕಂಡುಬರುತ್ತದೆ. ಇದರಿಂದ ಜಿಲ್ಲಾಡಳಿತಕ್ಕೆ ಮುಜುಗರ ಉಂಟಾಗಿದ್ದು ಸುಗಮ ಆಡಳಿತದ ಹಿತದೃಷ್ಟಿಯಿಂದ ಸದರಿ ನೌಕರರನ್ನು ಇಲಾಖಾ ವಿಚಾರಣೆ ಬಾಕಿ ಇರಿಸಿ ತಹಶೀಲ್ದಾರ ಕಚೇರಿಯಲ್ಲಿ ಶಿರಸ್ತೇದಾರರಾಗಿದ್ದ ಕು. ನಾಗರತ್ನಾ ಕಾಳೆ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು ೧೯೫೭ ರ ನಿಯಮ (೯(೧)(೩) ರನ್ವಯ ಸೇವೆಯಿಂದ ಅಮಾನತ್ತಿನಲ್ಲಿರಿಸಿ ಜೂನ್.೨೮ರಂದು ಬೆಳಗಾವಿಯ ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಹಾವೇರಿಯ ತಹಶೀಲ್ದಾರ ಕಚೇರಿಯ ಶಿರಸ್ತೇದಾರ ಕು.ನಾಗರತ್ನಾ ಕಾಳೆ ಅಮಾನತುಗೊಳಿಸಿ ಆಯುಕ್ತರ ಆದೇಶ
Date:
ಹಾವೇರಿಯ ತಹಶೀಲ್ದಾರ ಕಚೇರಿಯ ಶಿರಸ್ತೇದಾರ ಕು.ನಾಗರತ್ನಾ ಕಾಳೆ ಅಮಾನತುಗೊಳಿಸಿ ಆಯುಕ್ತರ ಆದೇಶ
ಹಾವೇರಿ: ಇಲ್ಲಿನ ತಹಶೀಲ್ದಾರ ಕಚೇರಿಯಲ್ಲಿ ಶಿರಸ್ತೇದಾರರಾಗಿದ್ದ ಕು. ನಾಗರತ್ನಾ ಕಾಳೆ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು ೧೯೫೭ ರ ನಿಯಮ (೯(೧)(೩) ರನ್ವಯ ಸೇವೆಯಿಂದ ಅಮಾನತ್ತಿನಲ್ಲಿರಿಸಿ ಜೂನ್.೨೮ರಂದು ಬೆಳಗಾವಿಯ ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಕು.ನಾಗರತ್ನಾ ಕಾಳೆ ಸದರಿಯವರು ಅಮಾನತ್ತಿನ ಅವಧಿಯಲ್ಲಿ ಕರ್ನಾಟಕ ನಾಗರೀಕ ಸೇವಾ ನಿಯಮಗಳು ೧೯೫೮ ರ ನಿಯಮ ೯೮(೧) ರನ್ವಯ ಜೀವನಾಧಾರ ಭತ್ಯೆಯನ್ನು ಪಡೆಯಲು ಅರ್ಹರಿರುತ್ತಾರೆ. ಸದರಿ ನೌಕರರು ಅಮಾನತ್ತಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರಿಯ ಅನುಮತಿಯನ್ನು ಪಡೆಯದೇ ಕೇಂದ್ರಸ್ಥಾನವನ್ನು ಬಿಡತಕ್ಕದ್ದಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಹಿನ್ನಲೆ: ದಿ:೨೫-೦೫-೨೦೨೩ ರಂದು ಲೋಕಾಯುಕ್ತ ಉಪಾಧೀಕ್ಷಕರು ಹಾವೇರಿ ಇವರು ತಹಶೀಲ್ದಾರ ಹಾವೇರಿ ಇವರ ಕಚೇರಿಗೆ ಆಕಸ್ಮಿಕ ಭೇಟಿ ನೀಡಿದ ಸಮಯದಲ್ಲಿ ಕಾರ್ಯಾಲಯದ ಅಭಿಲೇಖಾಲಯದಲ್ಲಿ ವಿರೇಶ ಮಳಗಾವಿ ಮತ್ತು ರವಿಚಂದ್ರ ಮಾಳಗಿ ಎಂಬ ಇಬ್ಬರು ಅನಧಿಕೃತ ವ್ಯಕ್ತಿಗಳು ಕೆಲಸ ನಿರ್ವಹಿಸುತ್ತಿದ್ದು, ಅವರನ್ನು ವಿಚಾರಿಸಲಾಗಿ ಅವರಿಬ್ಬರೂ ಬಹಳ ವರ್ಷಗಳಿಂದ ಅಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಮೇಲ್ವಿಚಾರಕ ಶಿರಸ್ತೇದಾರ ಆದ ಕುನಾಗರತ್ನಾ ಕಾಳೆ ಇವರು ಪ್ರತಿದಿನ ತಲಾ ೨೦೦ ರೂ. ರಿಂದ ೨೫೦ ರೂ. ವೇತನ ರೂಪವಾಗಿ ಕೊಡುತ್ತಿದ್ದರೆಂದು ತಿಳಿಸಿರುತ್ತಾರೆ.
ಕಂದಾಯ ಇಲಾಖೆಯ ಮಹತ್ವದ ಕಡತಗಳು ಮತ್ತು ಶಾಶ್ವತ ಕಡತಗಳು ಇರುವಂತ ಅಭಿಲೇಖಾಲಯದಲ್ಲಿ ಅನಧಿಕೃತ ವ್ಯಕ್ತಿಗಳಿಗೆ ಪ್ರವೇಶ ನೀಡಿ ದಾಖಲೆಗಳನ್ನು ಶೋಧಿಸಿ ದೃಡೀಕೃತ ನಕಲನ್ನು ಸಿದ್ಧಪಡಿಸಿಕೊಳ್ಳಲು ಕಾನೂನು ಬಾಹಿರವಾಗಿ ನೇಮಿಸಿಕೊಂಡಿರುವುದು ಅತಿ ಗಂಭೀರ ವಿಷಯವಾಗಿರುತ್ತದೆ.
ತಹಶೀಲ್ದಾರ ಕಚೇರಿಯಲ್ಲಿ ಹೆಚ್ಚುವರಿಯಾಗಿ ರೂ.೫೦,೦೦೦/- ಹಣ ದೊರೆತಿದ್ದು ವಿಚಾರಣೆ ಸಮಯದಲ್ಲಿ ಈ ಹಣವು ಕು. ನಾಗರತ್ನ ಕಾಳೆ ಶಿರಸ್ತೇದಾರ ಇವರಿಗೆ ಸೇರಿದ್ದು ಇರುತ್ತದೆ ಎಂದು ತಿಳಿಸಿರುತ್ತಾರೆ. ಸದರಿ ಶಿರಸ್ತೇದಾರರಾದ ಕು. ನಾಗರತ್ನ ಕಾಳೆ ಅವರು ನಗರು ವಹಿಯಲ್ಲಿ ರೂ. ೧೦೦ ಅಂತಾ ನಗದು ಘೋಷಣೆ ಮಾಡಿ ಸಹಿ ಮಾಡಿದ್ದು ಪರಿಶೀಲನೆ ಕಾಲಕ್ಕೆ ಅವರ ಬಳಿ ಹೆಚ್ಚುವರಿಯಾಗಿ ರೂ.೫೦,೦೦೦ ನಗದು ಹಣ ಸಿಕ್ಕಿರುತ್ತದೆ. ಇದರಿಂದ ಸರ್ಕಾರದ ಸುತ್ತೋಲೆ ದಿ:೦೪-೦೨-೨೦೨೨ ನೇರ ಉಲ್ಲಂಘನೆಯಾಗಿರುತ್ತದೆ.
ಸದರಿ ನೌಕರರು ಶಿರಸ್ತೇದಾರರಾಗಿದ್ದು ಕಚೇರಿಯಲ್ಲಿ ಉಪತಹಶೀಲ್ದಾರ ಅಂತಾ ನಾಮಫಲಕವನ್ನು ಹಾಕಿಕೊಂಡಿರುತ್ತಾರೆ ಎಂದು ಉಪವಿಭಾಗಾಧಿಕಾರಿಗಳು ಹಾವೇರಿ ಇವರು ವರದಿ ಸಲ್ಲಿಸಿ ಸದರಿ ನೌಕರರ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಕೋರಿದ್ದು ಇರುತ್ತದೆ.ಉಪವಿಭಾಗಾಧಿಕಾರಿಗಳು ಹಾವೇರಿ ಇವರು ಸಲ್ಲಿಸಿದ ವಿವರಗಳನ್ನು ಪರಿಶೀಲಿಸಿದಾಗ ಹಾವೇರಿ ತಹಶೀಲ್ದಾರ ಕಚೇರಿಯಲ್ಲಿ ಶಿರಸ್ತೇದಾರರಾಗಿ ಕೆಲಸ ನಿರ್ವಹಿಸುತ್ತಿರುವ ಕು. ನಾಗರತ್ನಾ ಕಾಳೆ ಯಾವುದೇ ಆದೇಶ/ಮಂಜೂರಾತಿ ಇಲ್ಲದೇ ಅನಧಿಕೃತ ವ್ಯಕ್ತಿಗಳನ್ನು ಸರ್ಕಾರಿ ಕಚೇರಿಯಲ್ಲಿ ಹಸ್ತಕ್ಷೇಪ ಮಾಡಲು ಅನುವು ಮಾಡಿಕೊಟ್ಟಿದ್ದಲ್ಲದೇ ಕಚೇರಿಯ ಬಹುಮುಖ್ಯವಾದ ದಾಖಲೆ/ಕಡತಗಳ ದುರುಪಯೋಗಕ್ಕೆ ಕಾರಣವಾಗುವ ರೀತಿಯಲ್ಲಿ ನಿಯಮಬಾಹಿರವಾಗಿ ವರ್ತಿಸಿರುವುದು ಮತ್ತು ನಗದು ಘೋಷಣಾ ವಹಿಯಲ್ಲಿ ನಮೂದಿಸಿದ್ದಕ್ಕಿಂತ ಹೆಚ್ಚಿನ ಹಣವನ್ನು ಹೊಂದಿರುವುದು ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ.
ಉಪವಿಭಾಗಾಧಿಕಾರಿಗಳ ವರದಿಯನ್ವಯ ಒಟ್ಟಾರೆಯಾಗಿ ಹಾವೇರಿ ತಾಲೂಕಾ ಕಚೇರಿಯಲ್ಲಿ ಅನಾರೋಗ್ಯಕರ ವಾತಾವರಣ ಸೃಷ್ಟಿಯಾಗಿರುವುದು ಕಂಡುಬರುತ್ತದೆ. ಇದರಿಂದ ಜಿಲ್ಲಾಡಳಿತಕ್ಕೆ ಮುಜುಗರ ಉಂಟಾಗಿದ್ದು ಸುಗಮ ಆಡಳಿತದ ಹಿತದೃಷ್ಟಿಯಿಂದ ಸದರಿ ನೌಕರರನ್ನು ಇಲಾಖಾ ವಿಚಾರಣೆ ಬಾಕಿ ಇರಿಸಿ ತಹಶೀಲ್ದಾರ ಕಚೇರಿಯಲ್ಲಿ ಶಿರಸ್ತೇದಾರರಾಗಿದ್ದ ಕು. ನಾಗರತ್ನಾ ಕಾಳೆ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕರ್ನಾಟಕ ನಾಗರೀಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು ೧೯೫೭ ರ ನಿಯಮ (೯(೧)(೩) ರನ್ವಯ ಸೇವೆಯಿಂದ ಅಮಾನತ್ತಿನಲ್ಲಿರಿಸಿ ಜೂನ್.೨೮ರಂದು ಬೆಳಗಾವಿಯ ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದಾರೆ.