ಹಾವೇರಿ: ಲಂಚ ಸ್ವೀಕರಿಸುವಾಗ ಡಿಡಿಪಿಐ ಅಂದಾನಪ್ಪ ವಡಿಗೇರಿ -ಎಸ್ಡಿಎ ದತ್ತಾತ್ರೇಯ ಕುಂಟೆ ಬಂಧನ
ಹಾವೇರಿ: ಹಾವೇರಿ ಜಿಲ್ಲೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಅಂದಾನಪ್ಪ ವಡಿಗೇರಿ ಹಾಗೂ ದತ್ತಾತ್ರೇಯ ಕುಂಟೆ, ದ್ವಿ.ದ.ಸ ಅವರು
ನಿವೃತ್ತಿ ವೇತನದ ಫೈಲನ್ನು ಎ.ಜಿ ರವರ ಕಛೇರಿಗೆ ರವಾನಿಸಲು ಲಂಚ್ ಸ್ವೀಕರಿಸುವ ವೇಳೆ ಲೋಕಾಯುಕ್ತರ ಬಲೆಗೆ ಬಿದ್ದಿರುವೇಳೆ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಪಿರ್ಯಾದುದಾರರ ನಿವೃತ್ತ ಶಿಕ್ಷಕರಾದ ಮೊಹಮ್ಮದ್ ಜಾಫರ್ ಖಾನ ಲೋದಿ ಸಾ ರಟ್ಟಿಹಳ್ಳಿ ನಿವೃತ್ತಿ ವೇತನದ ಫೈಲನ್ನು ಎ.ಜಿ ರವರ ಕಛೇರಿಗೆ ರವಾನಿಸಲು, ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದು, ಈ ಬಗ್ಗೆ ನೀಡಿದ ಲಿಖಿತ ದೂರಿನ ಮೇಲೆ ದಿನಾಂಕ 21-07-2023 ರಂದು ಹಾವೇರಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದಕ್ಕಾಗಿ ಬ್ರಷ್ಟಾಚಾರ ನಿಯಂತ್ರಣಕಾಯ್ದೆ ಅಡಿ ಪ್ರಕರಣ ದಾಖಲಾಗಿ ತನಿಖೆ ಕೈಗೊಂಡಿದ್ದು ಇರುತ್ತದೆ.
ಈ ದಿವಸ ದಿನಾಂಕ 21-07-2023 ರಂದು ಸಂಜೆ ನಿವೃತ್ತಿ ವೇತನದ ಫೈಲನ್ನು ಪರಿಶೀಲಿಸಿ ಸಹಿ ಮಾಡಲು ಲಂಚದ ಹಣಕ್ಕೆ ಬೇಡಿಕೆ ಇಟ್ಟು, ಲಂಚದ ಹಣ ಪಡೆಯುವಾಗ ಶ್ರೀ ಅಂದಾನಪ್ಪ ವಡಿಗೇರಿ, DDPI ಹಾಗೂ ಶ್ರೀ ದತ್ತಾತ್ರೇಯ ಕುಂಟೆ, SDA ಇವರು ಹಾವೇರಿ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಛೇರಿಯಲ್ಲಿ ಪಿರ್ಯಾದಿದಾರರಿಂದ do7,000/- ಲಂಚದ ಹಣವನ್ನು ಪಡೆದುಕೊಳ್ಳುತ್ತಿರುವಾಗ ಯಶಸ್ವಿಯಾಗಿ ಟ್ರ್ಯಾಪ್ ಮಾಡಿದ್ದು ಇರುತ್ತದೆ. ತನಿಖೆ ಮುಂದುವರೆದಿರುತ್ತದೆ. ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿರುವ ಡಿ.ಡಿ.ಪಿ.ಐ ಕಚೇರಿಯಲ್ಲಿ ನಿವೃತ್ತ ಶಿಕ್ಷಕರು ಇವರ ಪೆನಿಷನ್ ಹಣ ನೀಡುವದಕ್ಕೆ ಹಾವೇರಿ ಡಿ.ಡಿ.ಪಿ.ಐ ಹಾಗೂ ಡಿ.ಡಿ.ಪಿ.ಐ ಕಚೇರಿಯ. ಎಸ್.ಡಿ.ಎ ದತ್ತಾತ್ರೇಯ ಕುಂಟೆ ಇವರು ಹಣದ 7 ಸಾವಿರ ಹಣದ ಬೇಡಿಕೆ ಇಟ್ಟಿದ್ದು ಈ ದಿವಸ ಪಿರ್ಯಾದಿ ಎಮ್.ಎಚ್. ಲೋದಿ ನಿವೃತ್ತ ಶಿಕ್ಷಕರು 7 ಸಾವಿರ ರೂಪಾಯಿ ಕೊಡುವಾಗ ಬಿ.ಪಿ.ಚಂದ್ರಶೇಖರ ಹಾವೇರಿ ಲೋಕಾಯುಕ್ತ ಪೊಲೀಸ್ ಠಾಣೆಯ. ಡಿ.ಎಸ್.ಪಿ. ಇವರ ನೇತೃತ್ವದಲ್ಲಿ ಸಿಬ್ಬಂದಿಗಳು ದಾಳಿ ಮಾಡಿ ಇಬ್ಬರೂ ಆರೋಪಿತರನ್ನು ವಶಕ್ಕೆ ಪಡೆದುಕೊಂಡಿತ್ತಾರೆ. ಈ ಕುರಿತು ಹಾವೇರಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.