ಸಮಾಜ ಪರಿವರ್ತನೆಗಾಗಿ ಶ್ರಮಿಸುತ್ತಿರುವ ದಲಿತ ಮುಖಂಡ ನಿಂಗಪ್ಪ ಗಾಳೆಮ್ಮನವರ
ಕ್ರಿಯಾಶೀಲತೆ ಯಾರ ಸೊತ್ತು ಅಲ್ಲ, ಕ್ರಿಯಾಶೀಲತೆ, ಸೃಜನಶೀಲತೆ ಹಾಗೂ ಚಾಣಾಕ್ಷ ಬುದ್ಧಿಯನ್ನು ಸಮರ್ಪಕವಾಗಿ ಸಂಯೋಜಿಸಿ ಕೆಲಸ ಮಾಡಿದಾಗ ಯಶಸ್ಸು ಸುಲಭವಾಗಿ ಸಿಗುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿದ್ದಾರೆ ದಲಿತ ಮುಖಂಡ ನಿಂಗಪ್ಪ ಗಾಳೆಮ್ಮನವರ.
ಬಡದಲಿತ ಕುಟುಂಬದಲ್ಲಿ ೨೨-೦೭-೧೯೮೦ರಲ್ಲಿ ಜನಿಸಿದ ಇವರು ಬಾಲ್ಯದಲ್ಲಿಯೇ ಹಸಿವು, ಬಡತನ, ಸಂಕಟ, ಸಾಮಾಜಿಕ ಶೋಷಣೆಗಳಲ್ಲಿ ಮಿಂದೆದ್ದವರು. ಇವರ ತಾಯಿ ಹನುಮವ್ವ-ತಂದೆ ನಾಗಪ್ಪ ಇವರ ಸ್ವಂತ ಊರು ಶಿಗ್ಗಾವತಾಲೂಕಿನ ಅಂದಲಗಿ ಎನ್ನುವ ಪುಟ್ಟಗ್ರಾಮ. ನಿಂಗಪ್ಪ ಅವರು ತಾಯಿಯ ತವರೂರು ಹಾನಗಲ್ಲ ತಾಲೂಕಿನ ಅಕ್ಕಿ ಆಲೂರಿನ ಅಜ್ಜ-ಅಮ್ಮನ ಆಶ್ರಯದಲ್ಲಿ ಇವರು ಬೆಳೆದರು.
ಶಿಕ್ಷಣದ ಬಗ್ಗೆ ಅರಿವು ಹೊಂದಿದ್ದ ಅಜ್ಜ-ಅಜ್ಜಿ ಇವರಿಗೆ ಶಿಕ್ಷಣ ಕೊಡಿಸಿದ ಪರಿಣಾಮ ನಿಂಗಪ್ಪ ಪದವಿಧರರಾಗಲು ಸಾಧ್ಯವಾಯಿತು. ಇವರು ಪದವಿಧರರಾಗಿ ಯಾವುದಾದರೂ ಉದ್ಯೋಗ ಹಿಡಿಯಬಹುದಿತ್ತು. ಆದರೆ ಇವರು ಅನುಭವಿಸಿದ ನೋವು, ಸಂಕಟಗಳು, ಸಾಮಾಜಿಕ ಶೋಷಣೆ ಇವರಲ್ಲಿನ ಹೋರಾಟಗಾರನನ್ನು ಬಡಿದೆಬ್ಬಿಸಿದವು. ಹೀಗಾಗಿ ಇವರು ಆಯ್ದುಕೊಂಡ ಕಾಯಕ ಕೃಷಿ. ವಿದ್ಯಾರ್ಥಿಜೀವನದಲ್ಲಿಯೇ ಹೋರಾಟವನ್ನು ಮೈಗೂಡಿಸಿಕೊಂಡಿದ್ದ ನಿಂಗಪ್ಪ ಶೋಷಣೆಯ ವಿರುದ್ಧ ಸೆಟೆದುನಿಂತು ಕೆಲವರ ಕೆಂಗಣ್ಣಿಗೆ ಗುರಿಯಾಗಿ ಊರನ್ನು ತೊರೆಯಬೇಕಾದ ಪ್ರಸಂಗಗಳು ಸಹ ಎದುರಾದವು. ಅವುಗಳನ್ನು ದಿಟ್ಟತನದಿಂದ ಎದುರಿಸಿ ಬದುಕುಕಟ್ಟಿಕೊಂಡವರು ನಿಂಗಪ್ಪ ಗಾಳೆಮ್ಮನವರ.
೨೦೦೦ಇಸ್ವಿಯಲ್ಲಿ ದಲಿತ ಚಳವಳಿಯಲ್ಲಿ ಗುರುತಿಸಿಕೊಂಡರು. ದಲಿತ ಸಂಘರ್ಷ ಸಮಿತಿ ಇಬ್ಬಾಗವಾದ ವೇಳೆ ಇವರು ಡಿ.ಜಿ.ಸಾಗರ ಬಣದಲ್ಲಿ ಗುರುತಿಸಿಕೊಂಡರು. ಜಿಲ್ಲಾ ಸಂಘಟನಾ ಸಂಚಾಲಕರಾಗಿ ಹಾವೇರಿಜಿಲ್ಲೆಯಲ್ಲಿ ದಲಿತ ಚಳುವಳಿಗಳಲ್ಲಿ ಇಂದು ನಿಂಗಪ್ಪ ಗಾಳೆಮ್ಮನವರ ಸೈದ್ದಾಂತಿಕ ಬದ್ದತೆಯೊಂದಿಗೆ ತೊಡಗಿಸಿಕೊಂಡು ಚಳುವಳಿಗೆ ಸಾಂಸ್ಕ್ರತಿಕ ರೂಪವನ್ನು ನೀಡುವ ಮೂಲಕ ಪ್ರಮುಖಶಕ್ತಿಯಾಗಿ ಬೆಳೆಯುತ್ತಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿ ಡಾ.ಅಂಬೇಡ್ಕರ್ ವಿಚಾರಗಳಿಂದ ಪ್ರಭಾವಿತರಾಗಿ ಅಂಬೇಡ್ಕರ್ ಚಿಂತನೆಯೊಂದಿಗೆ ಶೋಷಿತ ಸಮುದಾಯದ ವಿಮೋಚನೆಗಾಗಿ ಶೋಷಿತ ವರ್ಗದ ಮನಪರಿವರ್ತನೆಗಾಗಿ ಒಟ್ಟು ಸಮಾಜ ಪರಿವರ್ತನೆಗಾಗಿ ಸಾಮಾಜಿಕ ಸಂಘಟನೆಗಳ ಜಾಗ್ರತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಲೇ ದಲಿತ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಮೂಲಕ ಭರವಸೆಯ ನಾಯಕರಾಗಿ ಹೊರ ಹೊಮ್ಮುತ್ತಿದ್ದಾರೆ.
ಸಮಕಾಲೀನ ದಲಿತ ಮತ್ತು ದಲಿತೇತರ ಅಹಿಂದ್ ವಿದ್ಯಾವಂತರನ್ನು ಈ ವರ್ಗದ ಜನರ ಜೊತೆಗೆ ನಿರಂತರ ಒಡನಾಟ, ಮನ ಪರಿವರ್ತನೆಯ ಮಾರ್ಗದಲ್ಲಿ ತಮ್ಮ ಚಿಂತನೆಯತ್ತ ವಾಲುವಂತೆ ಮಾಡಿ ಹಾವೇರಿ ಜಿಲ್ಲೆಯಲ್ಲಿ ಗಣನೀಯ ಸಂಖ್ಯೆಯ ಚಿಂತಕ ಬಳಗವನ್ನು ಸೃಷ್ಟಿಸಿಕೊಂಡಿರುವ ನಿಂಗಪ್ಪ ಗಾಳೆಮ್ಮನವರ ಸಂಘಟನಾ ಚತುರ ಎನ್ನುವುದರಲ್ಲಿ ಎರಡು ಮಾತಿಲ್ಲ.
ಜನಜಾಗೃತಿ ಜಾಥಾ, ಜಾನಪದ, ದೊಡ್ಡಾಟ, ಸಣ್ಣಾಟ, ಸಾಂಸ್ಕ್ರತಿಕ ಕಾರ್ಯಕ್ರಮ, ಗಣ್ಯರ ಜಯಂತಿ, ಹುಟ್ಟುಹಬ್ಬ, ತರಬೇತಿ ಶಿಬಿರ, ವಿಚಾರ ಸಂಕಿರಣ, ಮೂಢನಂಬಿಕೆ, ಅಂಧಶೃದ್ಧೆಯ ಬಗ್ಗೆ ಕಮ್ಮಟಗಳಂಥ ವಿಚಾರ ಕೇಂದ್ರಿತ ಕಾರ್ಯಕ್ರಮಗಳ ಮೂಲಕ ತಾವು ನಂಬಿದ ವಿಚಾರಧಾರೆಯತ್ತ ದಲಿತ ವರ್ಗವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬುದ್ಧ, ಬಸವ, ಅಂಬೇಡ್ಕರರನ್ನು ಎದೆಗಿಳಿಸಿಕೊಂಡಿರುವ ಇವರು ರಾಜ್ಯಮಟ್ಟ, ರಾಷ್ಟ್ರ ಮಟ್ಟದ ಸಮಾವೇಶ, ಸಮ್ಮೇಳನಗಳ ಅಧಿವೇಶನಗಳಲ್ಲಿ ಪ್ರಬುದ್ಧ ವಿಚಾರ ಮಂಡನೆಗೈದು ಓರಗೆಯ ಸಮಾನ ಚಿಂತಕರ ಬಳಗವನ್ನೇ ಸೃಷ್ಠಿಸಿಕೊಂಡಿದ್ದಾರೆ.
ತಮ್ಮ ಪ್ರಬುದ್ಧ ವಿಚಾರಗಳಿಂದ ನಾಡಿನ ಅನೇಕ ಅಂಬೇಡ್ಕರ್ ವಾದಿಗಳ, ಸಮಾಜವಾದಿಗಳ, ಹೋರಾಟಗಾರರ ಚಿಂತಕರ, ಬುದ್ಧಿಜೀವಿಗಳ, ವಿಚಾರವಾದಿಗಳ, ಸಾಹಿತಿಗಳ, ಜನಪದ ಚಿಂತಕರ, ಪತ್ರಕರ್ತರ, ಬರಹಗಾರರ ಆತ್ಮೀಯ ಒಡನಾಟ ಸಂಪಾದಿಸಿರುವ ನಿಂಗಪ್ಪ ದಲಿತರ ಮೇಲೆ ದಬ್ಬಾಳಿಕೆ, ಹಲ್ಲೆ ನಡೆದ ಸಂದರ್ಭಲ್ಲಿ ಗಟ್ಟಿ ನಿಲುವು ತಳೆದು ಧಿಕ್ಕಾರ ಕೂಗುವವರಲ್ಲಿ ಇವರು ಮೊದಲಿಗರಾಗಿದ್ದಾರೆ.
ಅಕ್ಕಿಆಲೂರಿನಲ್ಲಿ ಬೆಳೆದು ತಾಲೂಕು, ಜಿಲ್ಲಾ, ರಾಜ್ಯಮಟ್ಟದಲ್ಲಿ ಹಂತಹಂತವಾಗಿ ಬೆಳೆಯುತ್ತಾ ದಲಿತ ಚಳವಳಿಯಭಾಗವಾಗಿ ಸಂಘಟನೆಯನ್ನು ಬಲಪಡಿಸಲು ಶ್ರಮಿಸಿದ್ದಾರೆ. ಇಂದು ಯಾವುದೇ ಉತ್ತಮ ಕಾರ್ಯಮಾಡಲಿ ಕಾಲೆಳೆಯುವವರ ಸಂಖ್ಯೆಯೇ ಹೆಚ್ಚು. ಆದರೆ ಟೀಕೆಗಳಿಗೆ ತಲೆಕೆಡಿಸಿಕೊಳ್ಳದೇ ಉತ್ತಮ ಕೆಲಸ-ಕಾರ್ಯಗಳ ಮೂಲಕ ಬೆಳಕಿಗೆಬಾರದ ಅನೇಕ ಪ್ರತಿಭೆಗಳಿಗೆ ವೇದಿಕೆ ಒದಗಿಸಿದ್ದಾರೆ. ಇವರ ಗರಡಿಯಲ್ಲಿ ತಯಾರಾದ ಅನೇಕ ಕಲಾವಿದರು ಇಂದು ರಾಜ್ಯಮಟ್ಟದಲ್ಲಿ ಹೆಸರಾಗಿದ್ದಾರೆ.
ನಿಂಗಪ್ಪ ಗಾಳೆಮ್ಮನವರು ಹಲವಾರು ಹೋರಾಟಗಳಲ್ಲಿ ಭಾಗವಹಿಸಿ ಕೆಲವರ ಕೆಂಗಣ್ಣಿಗೆ ಗುರಿಯಾದರು, ಬಗರಹುಕುಂ ಸಾಗುವಳಿ ಹಾಗೂ ದಲಿತರ ಮೇಲೆ ಕೊಲೆ, ದೌರ್ಜನ್ಯಗಳಾದ ಸಂದರ್ಭದಲ್ಲಿ ಹೋರಾಟ ನಡೆಸಿದ ಪರಿಣಾಮ ಜನಪ್ರತಿನಿಧಿಗಳಿಂದ ಸುಳ್ಳು ಕೇಸುಗಳನ್ನು ಇವರು ಎದುರಿಸಬೇಕಾಯಿತು. ಮಡೆ-ಮಡೆ ಸ್ನಾನ ಪದ್ದತಿ ನಿಷೇಧಕ್ಕಾಗಿ ಹೋರಾಟ, ಯುವತಿಯ ಮಾರಾಟಜಾಲದ ವಿರುದ್ಧ ಹೋರಾಟ, ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುವವರ ವಿರುದ್ಧ ಹೋರಾಟ, ಪರಿಶಿಷ್ಟರಿಗೆ ಪ್ರತ್ಯೇಕ ರುದ್ರಭೂಮಿಗಾಗಿ ಹೋರಾಟ, ಭಡ್ತಿ ಮೀಸಲಿಗಾಗಿ, ಪಿಟಿಸಿಎಲ್ ಕಾಯ್ದೆಗಾಗಿ, ಪರಿಶಿಷ್ಟರಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲು ಹೆಚ್ಚಳದ ಬಗ್ಗೆ ಹೀಗೆ ಹಲವಾರು ಹೋರಾಟಗಳಲ್ಲಿ ತಮ್ಮನ್ನು ನಿಂಗಪ್ಪ ಗಾಳೆಮ್ಮನವರ ತೊಡಗಿಸಿಕೊಂಡಿದ್ದಾರೆ.ಹೋರಾಟದ ಹಾದಿಯಲ್ಲಿ ಚಳುವಳಿಯ ಪುಟಗಳಲ್ಲಿ ಇಂಥ ಅನೇಕ ಮಹತ್ವದ ಘಟನೆಗಳು, ಸ್ಮರಣಾರ್ಹ ಸಂಗತಿಗಳು, ಶ್ಲಾಘನಾರ್ಹ ಪ್ರಸಂಗಗಳು, ಉಲ್ಲೇಖಾರ್ಹ ಚಿತ್ರಣಗಳು ಅಗೆದಷ್ಟೂ ಇರಬಹುದೆಂಬುದೂ ಗಮನಾರ್ಹ.
ಸಾಮಾಜಿಕ ಪಿಡುಗುಗಳಿಂದ ಪೀಡಿತರಾಗಿ ಧಾರ್ಮಿಕ, ಸಾಂಸ್ಕೃತಿಕ ಸಂತ್ರಸ್ತರಂತೆ ಬದುಕುತ್ತಿರುವ ಕೆಲವು ದಲಿತರಿಗೆ ತಮ್ಮದೇ ರೀತಿಯಲ್ಲಿ ತಿಳುವಳಿಕೆ ನೀಡುವಲ್ಲಿ ಮಾದರಿಯಾಗಿದ್ದಾರೆ. ಚಳುವಳಿಯ ನಂಟು ಬಿಡದೆ ರಾಜ್ಯದ ಮೂಲೆ ಮೂಲೆಗಳ ಚಳುವಳಿಯ ಸಹಪಾಠಿಗಳು ಮತ್ತು ರಾಜ್ಯ ನಾಯಕರೊಂದಿಗಿನ ಮೂರು ದಶಕದ ಒಡನಾಟವನ್ನು ಜೋಪಾನವಾಗಿ ಉಳಿಸಿಕೊಂಡವರು. ಸಮಾಜ ಪರಿವರ್ತನಾ ಚಳುವಳಿಯ ಅನೇಕ ಪೂರಕ ಕಾರ್ಯಕ್ರಮಗಳಲ್ಲಿ, ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನಗಳಲ್ಲಿ ಅಪಾರ ಅಭಿಮಾನದಿಂದ ಪಾಲ್ಗೊಳ್ಳುತ್ತಿದ್ದಾರೆ.
ದಲಿತರ ಜಾಗೃತಿಗಾಗಿ, ವಿಮೋಚನೆಗಾಗಿ, ಸ್ವಾವಲಂಬನೆಗಾಗಿ ಸ್ವಾಭಿಮಾನಕ್ಕಾಗಿ ಒಂದಾಗಿ ಜಾತಿ ಸಂಘಟನೆಯನ್ನೂ ಕಟ್ಟಿ ದಲಿತರಲ್ಲಿ ಸ್ವಾಭಿಮಾನ ಮೂಡಿಸಲು ಶ್ರಮಿಸಿದ್ದಾರೆ. ಇವರು ಮಾತಿಗೆ ನಿಂತರೆ ಹೇಳಬೇಕಾದ ವಿಚಾರಗಳನ್ನು ಮಸ್ತಕ ಗೋಡೆಯಲ್ಲಿ ಹೋಗಿ ಅಂಟಿಸಿ ಬರುವಂತಿರುತ್ತಾರೆ. ಕೊರೋನಾ ಸಂದರ್ಭದಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಪಡಿತರ ಆಹಾರಧಾನ್ಯಗಳನ್ನು ಬಡದಲಿತ ಕುಟುಂಬಗಳಿಗೆ, ಅಲೆಮಾರಿಗಳಿಗೆ, ವಯೋವೃದ್ದೆರಿಗೆ ವಿತರಿಸುವ ಮೂಲಕ ಸದ್ದಿಲ್ಲದೇ ಮಾನವೀಯ ಕಾರ್ಯವನ್ನು ಇವರು ಕೈಗೊಂಡಿದ್ದಾರೆ. qI ಟೀಕೆಗಳಿಗೆ ಯಾರೂ ಹೊರತಲ್ಲ, ಇವರ ಕ್ರಿಯಾಶೀಲತೆಯ ಚಟುವಟಿಕೆಗಳು ಕೆಲವಮ್ಮೆ ಟೀಕೆಗಳಿಗೆ ಉರಿಯಾಗಿವೆ. ನಿಂಗಪ್ಪ ಗಾಳೆಮ್ಮನವರ ಸದಾ ಒಂದಿಲ್ಲ ಒಂದು ಕೈಗೊಳ್ಳುವ ಕಾರ್ಯಕ್ರಮಗಳು, ಚಟುವಟಿಗಳು, ಚಡಪಡಿಕೆಗಳು ಟೀಕೆಗೆ ಆಹಾರವಾಗಿವೆ.
ಇವರು ಸುದೀರ್ಘ ಹೋರಾಟಕ್ಕೆ ಜಿಲ್ಲಾ ಮಟ್ಟದ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ಉಸ್ತುವಾರಿ ನಿಯಂತ್ರಣ ಸಮಿತಿಯ ಸದಸ್ಯರಾಗಿ ನಾಮನಿರ್ದೇಶನಗೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ಸಾಹಿತ್ಯ, ಸಂಸ್ಕ್ರತಿ, ಕಲೆಗೆ ಸಂಬಂಧಿಸಿದಂತೆ ಡಾ.ಬಿ.ಆರ್.ಅಂಬೇಡ್ಕರ ಜಾನಪದ ವಿದ್ಯಾಕಲಿಕಾ ಸಂಸ್ಥೆ, ಗೌತಮಿಮೌರ್ಯ ಬುದ್ದವಿಹಾರ ಟ್ರಸ್ಟ್, ಮೌರ್ಯ ಮಹಾ ಸಂಸ್ಥಾನ ಎನ್ನುವ ಸಂಸ್ಥೆಗಳನ್ನು ಹುಟ್ಟುಹಾಕಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಹೋರಾಟಗಳನ್ನು ಗುರುತಿಸಿ ಕರ್ನಾಟಕ ದಲಿತ ಪರೊವರ್ತನಾ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.
ಸಮಾಜ ಪರಿವರ್ತನೆಗಾಗಿ ಶ್ರಮಿಸುತ್ತಿರುವ ದಲಿತ ಮುಖಂಡ ನಿಂಗಪ್ಪ ಗಾಳೆಮ್ಮನವರ
Date:
ಸಮಾಜ ಪರಿವರ್ತನೆಗಾಗಿ ಶ್ರಮಿಸುತ್ತಿರುವ ದಲಿತ ಮುಖಂಡ ನಿಂಗಪ್ಪ ಗಾಳೆಮ್ಮನವರ
ಕ್ರಿಯಾಶೀಲತೆ ಯಾರ ಸೊತ್ತು ಅಲ್ಲ, ಕ್ರಿಯಾಶೀಲತೆ, ಸೃಜನಶೀಲತೆ ಹಾಗೂ ಚಾಣಾಕ್ಷ ಬುದ್ಧಿಯನ್ನು ಸಮರ್ಪಕವಾಗಿ ಸಂಯೋಜಿಸಿ ಕೆಲಸ ಮಾಡಿದಾಗ ಯಶಸ್ಸು ಸುಲಭವಾಗಿ ಸಿಗುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿದ್ದಾರೆ ದಲಿತ ಮುಖಂಡ ನಿಂಗಪ್ಪ ಗಾಳೆಮ್ಮನವರ.
ಬಡದಲಿತ ಕುಟುಂಬದಲ್ಲಿ ೨೨-೦೭-೧೯೮೦ರಲ್ಲಿ ಜನಿಸಿದ ಇವರು ಬಾಲ್ಯದಲ್ಲಿಯೇ ಹಸಿವು, ಬಡತನ, ಸಂಕಟ, ಸಾಮಾಜಿಕ ಶೋಷಣೆಗಳಲ್ಲಿ ಮಿಂದೆದ್ದವರು. ಇವರ ತಾಯಿ ಹನುಮವ್ವ-ತಂದೆ ನಾಗಪ್ಪ ಇವರ ಸ್ವಂತ ಊರು ಶಿಗ್ಗಾವತಾಲೂಕಿನ ಅಂದಲಗಿ ಎನ್ನುವ ಪುಟ್ಟಗ್ರಾಮ. ನಿಂಗಪ್ಪ ಅವರು ತಾಯಿಯ ತವರೂರು ಹಾನಗಲ್ಲ ತಾಲೂಕಿನ ಅಕ್ಕಿ ಆಲೂರಿನ ಅಜ್ಜ-ಅಮ್ಮನ ಆಶ್ರಯದಲ್ಲಿ ಇವರು ಬೆಳೆದರು.
ಶಿಕ್ಷಣದ ಬಗ್ಗೆ ಅರಿವು ಹೊಂದಿದ್ದ ಅಜ್ಜ-ಅಜ್ಜಿ ಇವರಿಗೆ ಶಿಕ್ಷಣ ಕೊಡಿಸಿದ ಪರಿಣಾಮ ನಿಂಗಪ್ಪ ಪದವಿಧರರಾಗಲು ಸಾಧ್ಯವಾಯಿತು. ಇವರು ಪದವಿಧರರಾಗಿ ಯಾವುದಾದರೂ ಉದ್ಯೋಗ ಹಿಡಿಯಬಹುದಿತ್ತು. ಆದರೆ ಇವರು ಅನುಭವಿಸಿದ ನೋವು, ಸಂಕಟಗಳು, ಸಾಮಾಜಿಕ ಶೋಷಣೆ ಇವರಲ್ಲಿನ ಹೋರಾಟಗಾರನನ್ನು ಬಡಿದೆಬ್ಬಿಸಿದವು. ಹೀಗಾಗಿ ಇವರು ಆಯ್ದುಕೊಂಡ ಕಾಯಕ ಕೃಷಿ. ವಿದ್ಯಾರ್ಥಿಜೀವನದಲ್ಲಿಯೇ ಹೋರಾಟವನ್ನು ಮೈಗೂಡಿಸಿಕೊಂಡಿದ್ದ ನಿಂಗಪ್ಪ ಶೋಷಣೆಯ ವಿರುದ್ಧ ಸೆಟೆದುನಿಂತು ಕೆಲವರ ಕೆಂಗಣ್ಣಿಗೆ ಗುರಿಯಾಗಿ ಊರನ್ನು ತೊರೆಯಬೇಕಾದ ಪ್ರಸಂಗಗಳು ಸಹ ಎದುರಾದವು. ಅವುಗಳನ್ನು ದಿಟ್ಟತನದಿಂದ ಎದುರಿಸಿ ಬದುಕುಕಟ್ಟಿಕೊಂಡವರು ನಿಂಗಪ್ಪ ಗಾಳೆಮ್ಮನವರ.
೨೦೦೦ಇಸ್ವಿಯಲ್ಲಿ ದಲಿತ ಚಳವಳಿಯಲ್ಲಿ ಗುರುತಿಸಿಕೊಂಡರು. ದಲಿತ ಸಂಘರ್ಷ ಸಮಿತಿ ಇಬ್ಬಾಗವಾದ ವೇಳೆ ಇವರು ಡಿ.ಜಿ.ಸಾಗರ ಬಣದಲ್ಲಿ ಗುರುತಿಸಿಕೊಂಡರು. ಜಿಲ್ಲಾ ಸಂಘಟನಾ ಸಂಚಾಲಕರಾಗಿ ಹಾವೇರಿಜಿಲ್ಲೆಯಲ್ಲಿ ದಲಿತ ಚಳುವಳಿಗಳಲ್ಲಿ ಇಂದು ನಿಂಗಪ್ಪ ಗಾಳೆಮ್ಮನವರ ಸೈದ್ದಾಂತಿಕ ಬದ್ದತೆಯೊಂದಿಗೆ ತೊಡಗಿಸಿಕೊಂಡು ಚಳುವಳಿಗೆ ಸಾಂಸ್ಕ್ರತಿಕ ರೂಪವನ್ನು ನೀಡುವ ಮೂಲಕ ಪ್ರಮುಖಶಕ್ತಿಯಾಗಿ ಬೆಳೆಯುತ್ತಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿ ಡಾ.ಅಂಬೇಡ್ಕರ್ ವಿಚಾರಗಳಿಂದ ಪ್ರಭಾವಿತರಾಗಿ ಅಂಬೇಡ್ಕರ್ ಚಿಂತನೆಯೊಂದಿಗೆ ಶೋಷಿತ ಸಮುದಾಯದ ವಿಮೋಚನೆಗಾಗಿ ಶೋಷಿತ ವರ್ಗದ ಮನಪರಿವರ್ತನೆಗಾಗಿ ಒಟ್ಟು ಸಮಾಜ ಪರಿವರ್ತನೆಗಾಗಿ ಸಾಮಾಜಿಕ ಸಂಘಟನೆಗಳ ಜಾಗ್ರತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಲೇ ದಲಿತ ಸಮುದಾಯದಲ್ಲಿ ಜಾಗೃತಿ ಮೂಡಿಸುವ ಮೂಲಕ ಭರವಸೆಯ ನಾಯಕರಾಗಿ ಹೊರ ಹೊಮ್ಮುತ್ತಿದ್ದಾರೆ.
ಸಮಕಾಲೀನ ದಲಿತ ಮತ್ತು ದಲಿತೇತರ ಅಹಿಂದ್ ವಿದ್ಯಾವಂತರನ್ನು ಈ ವರ್ಗದ ಜನರ ಜೊತೆಗೆ ನಿರಂತರ ಒಡನಾಟ, ಮನ ಪರಿವರ್ತನೆಯ ಮಾರ್ಗದಲ್ಲಿ ತಮ್ಮ ಚಿಂತನೆಯತ್ತ ವಾಲುವಂತೆ ಮಾಡಿ ಹಾವೇರಿ ಜಿಲ್ಲೆಯಲ್ಲಿ ಗಣನೀಯ ಸಂಖ್ಯೆಯ ಚಿಂತಕ ಬಳಗವನ್ನು ಸೃಷ್ಟಿಸಿಕೊಂಡಿರುವ ನಿಂಗಪ್ಪ ಗಾಳೆಮ್ಮನವರ ಸಂಘಟನಾ ಚತುರ ಎನ್ನುವುದರಲ್ಲಿ ಎರಡು ಮಾತಿಲ್ಲ.
ಜನಜಾಗೃತಿ ಜಾಥಾ, ಜಾನಪದ, ದೊಡ್ಡಾಟ, ಸಣ್ಣಾಟ, ಸಾಂಸ್ಕ್ರತಿಕ ಕಾರ್ಯಕ್ರಮ, ಗಣ್ಯರ ಜಯಂತಿ, ಹುಟ್ಟುಹಬ್ಬ, ತರಬೇತಿ ಶಿಬಿರ, ವಿಚಾರ ಸಂಕಿರಣ, ಮೂಢನಂಬಿಕೆ, ಅಂಧಶೃದ್ಧೆಯ ಬಗ್ಗೆ ಕಮ್ಮಟಗಳಂಥ ವಿಚಾರ ಕೇಂದ್ರಿತ ಕಾರ್ಯಕ್ರಮಗಳ ಮೂಲಕ ತಾವು ನಂಬಿದ ವಿಚಾರಧಾರೆಯತ್ತ ದಲಿತ ವರ್ಗವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬುದ್ಧ, ಬಸವ, ಅಂಬೇಡ್ಕರರನ್ನು ಎದೆಗಿಳಿಸಿಕೊಂಡಿರುವ ಇವರು ರಾಜ್ಯಮಟ್ಟ, ರಾಷ್ಟ್ರ ಮಟ್ಟದ ಸಮಾವೇಶ, ಸಮ್ಮೇಳನಗಳ ಅಧಿವೇಶನಗಳಲ್ಲಿ ಪ್ರಬುದ್ಧ ವಿಚಾರ ಮಂಡನೆಗೈದು ಓರಗೆಯ ಸಮಾನ ಚಿಂತಕರ ಬಳಗವನ್ನೇ ಸೃಷ್ಠಿಸಿಕೊಂಡಿದ್ದಾರೆ.
ತಮ್ಮ ಪ್ರಬುದ್ಧ ವಿಚಾರಗಳಿಂದ ನಾಡಿನ ಅನೇಕ ಅಂಬೇಡ್ಕರ್ ವಾದಿಗಳ, ಸಮಾಜವಾದಿಗಳ, ಹೋರಾಟಗಾರರ ಚಿಂತಕರ, ಬುದ್ಧಿಜೀವಿಗಳ, ವಿಚಾರವಾದಿಗಳ, ಸಾಹಿತಿಗಳ, ಜನಪದ ಚಿಂತಕರ, ಪತ್ರಕರ್ತರ, ಬರಹಗಾರರ ಆತ್ಮೀಯ ಒಡನಾಟ ಸಂಪಾದಿಸಿರುವ ನಿಂಗಪ್ಪ ದಲಿತರ ಮೇಲೆ ದಬ್ಬಾಳಿಕೆ, ಹಲ್ಲೆ ನಡೆದ ಸಂದರ್ಭಲ್ಲಿ ಗಟ್ಟಿ ನಿಲುವು ತಳೆದು ಧಿಕ್ಕಾರ ಕೂಗುವವರಲ್ಲಿ ಇವರು ಮೊದಲಿಗರಾಗಿದ್ದಾರೆ.
ಅಕ್ಕಿಆಲೂರಿನಲ್ಲಿ ಬೆಳೆದು ತಾಲೂಕು, ಜಿಲ್ಲಾ, ರಾಜ್ಯಮಟ್ಟದಲ್ಲಿ ಹಂತಹಂತವಾಗಿ ಬೆಳೆಯುತ್ತಾ ದಲಿತ ಚಳವಳಿಯಭಾಗವಾಗಿ ಸಂಘಟನೆಯನ್ನು ಬಲಪಡಿಸಲು ಶ್ರಮಿಸಿದ್ದಾರೆ. ಇಂದು ಯಾವುದೇ ಉತ್ತಮ ಕಾರ್ಯಮಾಡಲಿ ಕಾಲೆಳೆಯುವವರ ಸಂಖ್ಯೆಯೇ ಹೆಚ್ಚು. ಆದರೆ ಟೀಕೆಗಳಿಗೆ ತಲೆಕೆಡಿಸಿಕೊಳ್ಳದೇ ಉತ್ತಮ ಕೆಲಸ-ಕಾರ್ಯಗಳ ಮೂಲಕ ಬೆಳಕಿಗೆಬಾರದ ಅನೇಕ ಪ್ರತಿಭೆಗಳಿಗೆ ವೇದಿಕೆ ಒದಗಿಸಿದ್ದಾರೆ. ಇವರ ಗರಡಿಯಲ್ಲಿ ತಯಾರಾದ ಅನೇಕ ಕಲಾವಿದರು ಇಂದು ರಾಜ್ಯಮಟ್ಟದಲ್ಲಿ ಹೆಸರಾಗಿದ್ದಾರೆ.
ನಿಂಗಪ್ಪ ಗಾಳೆಮ್ಮನವರು ಹಲವಾರು ಹೋರಾಟಗಳಲ್ಲಿ ಭಾಗವಹಿಸಿ ಕೆಲವರ ಕೆಂಗಣ್ಣಿಗೆ ಗುರಿಯಾದರು, ಬಗರಹುಕುಂ ಸಾಗುವಳಿ ಹಾಗೂ ದಲಿತರ ಮೇಲೆ ಕೊಲೆ, ದೌರ್ಜನ್ಯಗಳಾದ ಸಂದರ್ಭದಲ್ಲಿ ಹೋರಾಟ ನಡೆಸಿದ ಪರಿಣಾಮ ಜನಪ್ರತಿನಿಧಿಗಳಿಂದ ಸುಳ್ಳು ಕೇಸುಗಳನ್ನು ಇವರು ಎದುರಿಸಬೇಕಾಯಿತು. ಮಡೆ-ಮಡೆ ಸ್ನಾನ ಪದ್ದತಿ ನಿಷೇಧಕ್ಕಾಗಿ ಹೋರಾಟ, ಯುವತಿಯ ಮಾರಾಟಜಾಲದ ವಿರುದ್ಧ ಹೋರಾಟ, ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುವವರ ವಿರುದ್ಧ ಹೋರಾಟ, ಪರಿಶಿಷ್ಟರಿಗೆ ಪ್ರತ್ಯೇಕ ರುದ್ರಭೂಮಿಗಾಗಿ ಹೋರಾಟ, ಭಡ್ತಿ ಮೀಸಲಿಗಾಗಿ, ಪಿಟಿಸಿಎಲ್ ಕಾಯ್ದೆಗಾಗಿ, ಪರಿಶಿಷ್ಟರಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲು ಹೆಚ್ಚಳದ ಬಗ್ಗೆ ಹೀಗೆ ಹಲವಾರು ಹೋರಾಟಗಳಲ್ಲಿ ತಮ್ಮನ್ನು ನಿಂಗಪ್ಪ ಗಾಳೆಮ್ಮನವರ ತೊಡಗಿಸಿಕೊಂಡಿದ್ದಾರೆ.ಹೋರಾಟದ ಹಾದಿಯಲ್ಲಿ ಚಳುವಳಿಯ ಪುಟಗಳಲ್ಲಿ ಇಂಥ ಅನೇಕ ಮಹತ್ವದ ಘಟನೆಗಳು, ಸ್ಮರಣಾರ್ಹ ಸಂಗತಿಗಳು, ಶ್ಲಾಘನಾರ್ಹ ಪ್ರಸಂಗಗಳು, ಉಲ್ಲೇಖಾರ್ಹ ಚಿತ್ರಣಗಳು ಅಗೆದಷ್ಟೂ ಇರಬಹುದೆಂಬುದೂ ಗಮನಾರ್ಹ.
ಸಾಮಾಜಿಕ ಪಿಡುಗುಗಳಿಂದ ಪೀಡಿತರಾಗಿ ಧಾರ್ಮಿಕ, ಸಾಂಸ್ಕೃತಿಕ ಸಂತ್ರಸ್ತರಂತೆ ಬದುಕುತ್ತಿರುವ ಕೆಲವು ದಲಿತರಿಗೆ ತಮ್ಮದೇ ರೀತಿಯಲ್ಲಿ ತಿಳುವಳಿಕೆ ನೀಡುವಲ್ಲಿ ಮಾದರಿಯಾಗಿದ್ದಾರೆ. ಚಳುವಳಿಯ ನಂಟು ಬಿಡದೆ ರಾಜ್ಯದ ಮೂಲೆ ಮೂಲೆಗಳ ಚಳುವಳಿಯ ಸಹಪಾಠಿಗಳು ಮತ್ತು ರಾಜ್ಯ ನಾಯಕರೊಂದಿಗಿನ ಮೂರು ದಶಕದ ಒಡನಾಟವನ್ನು ಜೋಪಾನವಾಗಿ ಉಳಿಸಿಕೊಂಡವರು. ಸಮಾಜ ಪರಿವರ್ತನಾ ಚಳುವಳಿಯ ಅನೇಕ ಪೂರಕ ಕಾರ್ಯಕ್ರಮಗಳಲ್ಲಿ, ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನಗಳಲ್ಲಿ ಅಪಾರ ಅಭಿಮಾನದಿಂದ ಪಾಲ್ಗೊಳ್ಳುತ್ತಿದ್ದಾರೆ.
ದಲಿತರ ಜಾಗೃತಿಗಾಗಿ, ವಿಮೋಚನೆಗಾಗಿ, ಸ್ವಾವಲಂಬನೆಗಾಗಿ ಸ್ವಾಭಿಮಾನಕ್ಕಾಗಿ ಒಂದಾಗಿ ಜಾತಿ ಸಂಘಟನೆಯನ್ನೂ ಕಟ್ಟಿ ದಲಿತರಲ್ಲಿ ಸ್ವಾಭಿಮಾನ ಮೂಡಿಸಲು ಶ್ರಮಿಸಿದ್ದಾರೆ. ಇವರು ಮಾತಿಗೆ ನಿಂತರೆ ಹೇಳಬೇಕಾದ ವಿಚಾರಗಳನ್ನು ಮಸ್ತಕ ಗೋಡೆಯಲ್ಲಿ ಹೋಗಿ ಅಂಟಿಸಿ ಬರುವಂತಿರುತ್ತಾರೆ. ಕೊರೋನಾ ಸಂದರ್ಭದಲ್ಲಿ ಸಾರ್ವಜನಿಕರ ಸಹಕಾರದೊಂದಿಗೆ ಪಡಿತರ ಆಹಾರಧಾನ್ಯಗಳನ್ನು ಬಡದಲಿತ ಕುಟುಂಬಗಳಿಗೆ, ಅಲೆಮಾರಿಗಳಿಗೆ, ವಯೋವೃದ್ದೆರಿಗೆ ವಿತರಿಸುವ ಮೂಲಕ ಸದ್ದಿಲ್ಲದೇ ಮಾನವೀಯ ಕಾರ್ಯವನ್ನು ಇವರು ಕೈಗೊಂಡಿದ್ದಾರೆ. qI ಟೀಕೆಗಳಿಗೆ ಯಾರೂ ಹೊರತಲ್ಲ, ಇವರ ಕ್ರಿಯಾಶೀಲತೆಯ ಚಟುವಟಿಕೆಗಳು ಕೆಲವಮ್ಮೆ ಟೀಕೆಗಳಿಗೆ ಉರಿಯಾಗಿವೆ. ನಿಂಗಪ್ಪ ಗಾಳೆಮ್ಮನವರ ಸದಾ ಒಂದಿಲ್ಲ ಒಂದು ಕೈಗೊಳ್ಳುವ ಕಾರ್ಯಕ್ರಮಗಳು, ಚಟುವಟಿಗಳು, ಚಡಪಡಿಕೆಗಳು ಟೀಕೆಗೆ ಆಹಾರವಾಗಿವೆ.
ಇವರು ಸುದೀರ್ಘ ಹೋರಾಟಕ್ಕೆ ಜಿಲ್ಲಾ ಮಟ್ಟದ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ಉಸ್ತುವಾರಿ ನಿಯಂತ್ರಣ ಸಮಿತಿಯ ಸದಸ್ಯರಾಗಿ ನಾಮನಿರ್ದೇಶನಗೊಂಡು ಕಾರ್ಯನಿರ್ವಹಿಸುತ್ತಿದ್ದಾರೆ. ಸಾಹಿತ್ಯ, ಸಂಸ್ಕ್ರತಿ, ಕಲೆಗೆ ಸಂಬಂಧಿಸಿದಂತೆ ಡಾ.ಬಿ.ಆರ್.ಅಂಬೇಡ್ಕರ ಜಾನಪದ ವಿದ್ಯಾಕಲಿಕಾ ಸಂಸ್ಥೆ, ಗೌತಮಿಮೌರ್ಯ ಬುದ್ದವಿಹಾರ ಟ್ರಸ್ಟ್, ಮೌರ್ಯ ಮಹಾ ಸಂಸ್ಥಾನ ಎನ್ನುವ ಸಂಸ್ಥೆಗಳನ್ನು ಹುಟ್ಟುಹಾಕಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಹೋರಾಟಗಳನ್ನು ಗುರುತಿಸಿ ಕರ್ನಾಟಕ ದಲಿತ ಪರೊವರ್ತನಾ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.