
ಹಾವೇರಿಯಲ್ಲಿ ಅ.೨೬ರಂದು ಹೃದಯರೋಗ ತಪಾಸಣೆ, ರಕ್ತದಾನ ಶಿಬಿರ
ಹಾವೇರಿ: ಎಸ್ಡಿಎಮ್ ನಾರಾಯಣ ಹಾರ್ಟ್ ಸೆಂಟರ್ ಮಂಜುಶ್ರೀ ನಗರ, ಸತ್ತೂರ, ಧಾರವಾಡ ಹಾಗೂ ಜಯ ಕರ್ನಾಟಕ ಸಂಯುಕ್ತ ಆಶ್ರಯದಲ್ಲಿ ನಗರದ ಜಿಲ್ಲಾ ಗುರು ಭವನದಲ್ಲಿ ದಿನಾಂಕ : ೨೬-೦೮-೨೦೨೩ ಶನಿವಾರ,ಬೆಳಿಗ್ಗೆ ೯-೦೦ ರಿಂದ ಮಧ್ಯಾಹ್ನ ೨-೦೦ ರವರೆಗೆ ಉಚಿತ ಹೃದಯ ರೋಗ ತಪಾಸಣೆ ಶಿಬಿರ ಮತ್ತು ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ.
ಎಸ್.ಡಿ.ಎಮ್. ನಾರಾಯಣ ಹಾರ್ಟ್ ಸೆಂಟರ್ ಆಸ್ಪತ್ರೆಯ ತಜ್ಞ ವೈದ್ಯರುಗಳು ತಪಾಸಣೆ ನಡೆಸಲಿದ್ದಾರೆ. ಹೃದಯರೋಗ ಲಕ್ಷಣಗಳನ್ನು ಹೊಂದಿರುವವರು, ಧೂಮಪಾನ ಮಾಡುವವರು, ಸಕ್ಕರೆ ಕಾಯಿಲೆ ಮತ್ತು ೪೫ ವರ್ಷಕ್ಕಿಂತ ಮೇಲ್ಪಟ್ಟವರು ಕಡ್ಡಾಯವಾಗಿ ಇದರ ಸದುಪಯೋಗ ಪಡೆದುಕೊಳ್ಳಲು ಜಯಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ರಮೇಶ ಆನವಟ್ಟಿ-೯೯೮೬೪೭೨೨೯೦, ಸುಭಾಸ್ ಬೆಂಗಳೂರು- ೮೪೯೫೯೯೮೮೯೦ , ಸತೀಶ ಮಡಿವಾಳರ-೭೪೦೬೬೮೭೩೦೮, ಸಂಜಗಾಂಧಿ ಸಂಜೀವಣ್ಣನವರ-೯೯೦೧೬೮೪೫೬೪, ರಮೇಶ ಜಾಲಿಹಾಳ-೯೯೧೬೪೬೯೪೯೯,ಶ್ರೀನಿವಾಸ ಮುಗದೂರ-೯೩೪೩೩೫೬೬೬೬೬, ವಿನಾಯಕ-೯೫೯೧೨೯೮೬೩೬ ಇವರನ್ನು ಸಂಪರ್ಕಿಸಬಹುದಾಗಿದೆ.

