ಹಾವೇರಿ: ಚಿನ್ನದ ನಾಣ್ಯ ನೀಡುವುದಾಗಿ ೨೫ಲಕ್ಷರೂ ವಂಚನೆ

Date:

ಚಿತ್ರ ಕೃಪೆ;ಅಂತರ್‌ಜಾಲ.

ಹಾವೇರಿ: ಚಿನ್ನದ ನಾಣ್ಯ ನೀಡುವುದಾಗಿ ೨೫ಲಕ್ಷರೂ ವಂಚನೆ
ಹಾವೇರಿ: ಚಿನ್ನದನಾಣ್ಯಗಳಿವೆ ಎಂದು ನಂಬಿಸಿ ವಂಚಿಸಿರುವ ಅನೇಕ ಪ್ರಕರಣಗಳು ವರದಿಯಾಗಿವೆ, ಆದರೂ ಸಹ ಜನತೆ ಕಡಿಮೆ ಬೆಲೆಗೆ ಚಿನ್ನದ ನಾಣ್ಯಗಳು ಸಿಗುತ್ತವೆ ಎಂದು ವಂಚಕರ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡ ಪ್ರಕರಣಗಳು ನಡೆಯುತ್ತಲೇ ಇವೆ. ಇದೀಗ ಬೆಂಗಳೂರು ಮೂಲಕ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಲಕ್ಷ್ಮಣ ಸಿ ಚನ್ನಬಸವಯ್ಯ ಎನ್ನುವವರು ೨೫ಲಕ್ಷರೂಗಳನ್ನು ಕಳೆದುಕೊಂಡಿರುವ ಘಟನೆ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಕಾಮನಹಳ್ಳಿ ಹತ್ತಿರ ಸೆ.೯ರಂದು ನಡೆದಿದೆ.
ಲಕ್ಷ್ಮಣ ಅವರಿಗೆ ಆರೋಪಿ ಕುಮಾರ ಹಾಗೂ ಏಳು ಜನರು ಎನ್ನುವವ ೭೭೬೦೭೯೬೩೦೫ ಮೊಬೈಲ್‌ನಂಬರ ಮೂಲಕ ಕರೆ ಮಾಡಿ ಮಾತನಾಡುತ್ತಾ ತನಗೆ ಪರಿಚಯದ ತಾತನ ಹತ್ತಿರ ಚಿನ್ನ ಇರುತ್ತದೆ. ಅದನ್ನು ನೀವು ಕಡಿಮೆ ಬೆಲೆಗೆ ಖರೀದಿ ಮಾಡಿದರೇ ಮುದಕ ಮನುಷ್ಯನ ಇಬ್ಬರು ಹೆಣ್ಣು ಮಕ್ಕಳ ಮದುವೆಗೆ ಹಾಗೂ ಅವರ ಮನೆ ಕಟ್ಟಿಕೊಳ್ಳಲು ಸಹಾಯ ಮಾಡಿದಂತೆ ಆಗುತ್ತದೆ, ನನಗೂ ಸಹ ಸಹಾಯ ಆಗುತ್ತದೆ ಎಂದು ಹೇಳುತ್ತಾ ನಂಬಿಕೆ ಬರುವಂತೆ ಮಾತನಾಡಿದ್ದಾರೆ.
ವಂಚಕರು ಸೆ.೦೪ ರಂದು ಹೂವಿನಹಡಗಲಿ ತಾಲೂಕ ಹೊಳಲ ಗ್ರಾಮಕ್ಕೆ ಲಕ್ಷ್ಮಣ ಅವರನ್ನು ಕರೆಸಿಕೊಂಡು ಬಂಗಾರದ ನಾಣ್ಯಗಳನ್ನು ತೋರಿಸಿದ್ದು, ಇವುಗಳನ್ನು ಲಕ್ಷ್ಮಣ ನೋಡಿ ನಂಬಿದ್ದಾರೆ. ಮರಳಿ ಬೆಂಗಳೂರಿಗೆ ಹೋಗಿ ರಾಬಿನ್ ಅನ್ನುವರು ಸೇರಿಕೊಂಡು ಒಟ್ಟು ೨೫.೦೦.೦೦೦/-ರೂ ಹಣವನ್ನು ಸೇರಿಸಿ ತೆಗೆದುಕೊಂಡು ದಿ: ೦೯ ರಂದು ೯-೩೦ ಜಿಲ್ಲೆಯ ಶಿಗ್ಗಾವಿಗೆ ಆಗಮಿಸಿದ್ದಾರೆ.
ಈ ವೇಳೆ ಆರೋಪಿತರಿಗೆ ಕರೆ ಮಾಡಿದಾಗ ಅವರು ಹೆದ್ದಾರಿಯ ಪಕ್ಕದ ಸರ್ವೀಸ್ ರಸ್ತೆಯ ಹಿಡಿದು ಮುಂದೆ ಬರುವಂತೆ ತಿಳಿಸಿ, ಅಲ್ಲಿ ಲಕ್ಷ್ಮಣ ಮತ್ತು ರಾಬಿನ್ ಅವರನ್ನು ಭೇಟಿಯಾಗಿ ಅವರಿಂದ ಒಟ್ಟು ೨೫.೦೦.೦೦೦/- ರೂಪಾಯಿ ಹಣವನ್ನು ಪಡೆದುಕೊಂಡು, ನೀವು ಇಲ್ಲಿಯೇ ಇರಿ ನಾವು ಬಂಗಾರವನ್ನು ತೆಗೆದುಕೊಂಡು ಬರುತ್ತೇವೆಂದು ತಿಳಿಸಿ, ಹೋದವರು ಮರಳಿ ಬಾರದೇ ೨೫ಲಕ್ಷರೂಗಳೊಂದಿಗೆ ಪರಾರಿಯಾಗಿದ್ದಾರೆ. ಈಬಗ್ಗೆ ಶಿಗ್ಗಾವಿ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

LEAVE A REPLY

Please enter your comment!
Please enter your name here

Subscribe

spot_imgspot_img

Popular

ಚಿತ್ರ ಕೃಪೆ;ಅಂತರ್‌ಜಾಲ.

ಹಾವೇರಿ: ಚಿನ್ನದ ನಾಣ್ಯ ನೀಡುವುದಾಗಿ ೨೫ಲಕ್ಷರೂ ವಂಚನೆ
ಹಾವೇರಿ: ಚಿನ್ನದನಾಣ್ಯಗಳಿವೆ ಎಂದು ನಂಬಿಸಿ ವಂಚಿಸಿರುವ ಅನೇಕ ಪ್ರಕರಣಗಳು ವರದಿಯಾಗಿವೆ, ಆದರೂ ಸಹ ಜನತೆ ಕಡಿಮೆ ಬೆಲೆಗೆ ಚಿನ್ನದ ನಾಣ್ಯಗಳು ಸಿಗುತ್ತವೆ ಎಂದು ವಂಚಕರ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡ ಪ್ರಕರಣಗಳು ನಡೆಯುತ್ತಲೇ ಇವೆ. ಇದೀಗ ಬೆಂಗಳೂರು ಮೂಲಕ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಲಕ್ಷ್ಮಣ ಸಿ ಚನ್ನಬಸವಯ್ಯ ಎನ್ನುವವರು ೨೫ಲಕ್ಷರೂಗಳನ್ನು ಕಳೆದುಕೊಂಡಿರುವ ಘಟನೆ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಕಾಮನಹಳ್ಳಿ ಹತ್ತಿರ ಸೆ.೯ರಂದು ನಡೆದಿದೆ.
ಲಕ್ಷ್ಮಣ ಅವರಿಗೆ ಆರೋಪಿ ಕುಮಾರ ಹಾಗೂ ಏಳು ಜನರು ಎನ್ನುವವ ೭೭೬೦೭೯೬೩೦೫ ಮೊಬೈಲ್‌ನಂಬರ ಮೂಲಕ ಕರೆ ಮಾಡಿ ಮಾತನಾಡುತ್ತಾ ತನಗೆ ಪರಿಚಯದ ತಾತನ ಹತ್ತಿರ ಚಿನ್ನ ಇರುತ್ತದೆ. ಅದನ್ನು ನೀವು ಕಡಿಮೆ ಬೆಲೆಗೆ ಖರೀದಿ ಮಾಡಿದರೇ ಮುದಕ ಮನುಷ್ಯನ ಇಬ್ಬರು ಹೆಣ್ಣು ಮಕ್ಕಳ ಮದುವೆಗೆ ಹಾಗೂ ಅವರ ಮನೆ ಕಟ್ಟಿಕೊಳ್ಳಲು ಸಹಾಯ ಮಾಡಿದಂತೆ ಆಗುತ್ತದೆ, ನನಗೂ ಸಹ ಸಹಾಯ ಆಗುತ್ತದೆ ಎಂದು ಹೇಳುತ್ತಾ ನಂಬಿಕೆ ಬರುವಂತೆ ಮಾತನಾಡಿದ್ದಾರೆ.
ವಂಚಕರು ಸೆ.೦೪ ರಂದು ಹೂವಿನಹಡಗಲಿ ತಾಲೂಕ ಹೊಳಲ ಗ್ರಾಮಕ್ಕೆ ಲಕ್ಷ್ಮಣ ಅವರನ್ನು ಕರೆಸಿಕೊಂಡು ಬಂಗಾರದ ನಾಣ್ಯಗಳನ್ನು ತೋರಿಸಿದ್ದು, ಇವುಗಳನ್ನು ಲಕ್ಷ್ಮಣ ನೋಡಿ ನಂಬಿದ್ದಾರೆ. ಮರಳಿ ಬೆಂಗಳೂರಿಗೆ ಹೋಗಿ ರಾಬಿನ್ ಅನ್ನುವರು ಸೇರಿಕೊಂಡು ಒಟ್ಟು ೨೫.೦೦.೦೦೦/-ರೂ ಹಣವನ್ನು ಸೇರಿಸಿ ತೆಗೆದುಕೊಂಡು ದಿ: ೦೯ ರಂದು ೯-೩೦ ಜಿಲ್ಲೆಯ ಶಿಗ್ಗಾವಿಗೆ ಆಗಮಿಸಿದ್ದಾರೆ.
ಈ ವೇಳೆ ಆರೋಪಿತರಿಗೆ ಕರೆ ಮಾಡಿದಾಗ ಅವರು ಹೆದ್ದಾರಿಯ ಪಕ್ಕದ ಸರ್ವೀಸ್ ರಸ್ತೆಯ ಹಿಡಿದು ಮುಂದೆ ಬರುವಂತೆ ತಿಳಿಸಿ, ಅಲ್ಲಿ ಲಕ್ಷ್ಮಣ ಮತ್ತು ರಾಬಿನ್ ಅವರನ್ನು ಭೇಟಿಯಾಗಿ ಅವರಿಂದ ಒಟ್ಟು ೨೫.೦೦.೦೦೦/- ರೂಪಾಯಿ ಹಣವನ್ನು ಪಡೆದುಕೊಂಡು, ನೀವು ಇಲ್ಲಿಯೇ ಇರಿ ನಾವು ಬಂಗಾರವನ್ನು ತೆಗೆದುಕೊಂಡು ಬರುತ್ತೇವೆಂದು ತಿಳಿಸಿ, ಹೋದವರು ಮರಳಿ ಬಾರದೇ ೨೫ಲಕ್ಷರೂಗಳೊಂದಿಗೆ ಪರಾರಿಯಾಗಿದ್ದಾರೆ. ಈಬಗ್ಗೆ ಶಿಗ್ಗಾವಿ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...