ಹಾವೇರಿಜಿಲ್ಲೆಯ ಶಾಸಕರಿಗೆ ಸಿಗುವುದೇ ದೀಪಾವಳಿ ಗಿಫ್ಟ್ !, ಐವರಲ್ಲಿ ನಿಗಮ-ಮಂಡಳಿಯ ಅಧ್ಯಕ್ಷ ಸ್ಥಾನ ಯಾರಿಗೆ?
ಹಾವೇರಿ : ಸಚಿವ ಸ್ಥಾನ ವಂಚಿತ ಶಾಸಕರು, ವಿಧಾನ ಪರಿಷತ್ ಸದಸ್ಯರಿಗೆ ನಿಗಮ -ಮಂಡಳಿಗಳಿಗೆ ನೇಮಕ ಮಾಡವ ಚರ್ಚೆ ಬೆಂಗಳೂರಿನ ರಾಜಕೀಯ ಅಂಗಳದಲ್ಲಿ ತೀವೃಗತಿಯಲ್ಲಿ ನಡೆದಿದ್ದು, ಹಾವೇರಿಜಿಲ್ಲೆಯಲ್ಲಿ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದು, ಇವರಲ್ಲಿ ಯಾರಿಗೂ ಸಹ ಸಚಿವ ಸ್ಥಾನ ಸಗಿಲಿಲ್ಲ. ಇದೀಗ ನಡೆದಿರುವ ನಿಗಮ-ಮಂಡಳಿಗಳಿಗೆ ಅಧ್ಯಕ್ಷ ನೇಮಕದಲ್ಲಿ ಆದ್ಯತೆ ಸಿಗಲಿದೇಯಾ?ಹಾಗಾದರೇ ಯಾರಿಗೆ ಸಿಗಲಿದೆ ನಿಗಮ-ಮಂಡಳಿಯ ಅಧ್ಯಕ್ಷ ಸ್ಥಾನ ಎನ್ನುವ ಕೂತುಹಲ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರಲ್ಲಿದೆ.
ನಿಗಮ -ಮಂಡಳಿ ನೇಮಕಾತಿಗೆ ಹೈಕಮಾಂಡ್ ಒಪ್ಪಿಗೆ ಸೂಚಿಸಿದ್ದು, ನಿಗಮ ಮಂಡಳಿಯಲ್ಲಿ ಅಧ್ಯಕ್ಷ ಸ್ಥಾನ ಅಥವಾ ಎರಡೂವರೆ ವರ್ಷದ ನಂತರ ಸಚಿವ ಸ್ಥಾನ ಬೇಕೆ ಎಂಬ ಆಯ್ಕೆಯನ್ನು ಶಾಸಕರ ಮುಂದಿಡುವಂತೆ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ನಾಯಕರಿಗೆ ಸೂಚಿಸಿದೆ ಎನ್ನಲಾಗಿದೆ. ಎರಡೂವರೆ ವರ್ಷದ ನಂತರ ಸಚಿವ ಸಂಪುಟ ಪುನಾರಚನೆ ಆಗಲಿದ್ದು, ಆಗ ಸಚಿವರಾಗುವವರು ಈಗ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಪಡೆಯುವಂತಲ್ಲ. ಸಚಿವ ಸ್ಥಾನ ಬೇಡವೆಂದಾದಲ್ಲಿ ನಿಗಮದ ಅಧಿಕಾರ ನೀಡಲಾಗುವುದು ಎನ್ನಲಾಗಿದೆ.
ಎರಡೂ ವರ್ಷಗಳ ಬಳಿಕ ಸಚಿವ ಸಂಪುಟ ಪುನರ್ರಚನೆಯಾಗಲಿದೆ. ಆಗ ಸಚಿವರಾಗ ಬಯಸುವವರು ಮೊದಲಾರ್ಧದಲ್ಲಿ ನಿಗಮ-ಮಂಡಳಿಯ ಅಧ್ಯಕ್ಷ ಸ್ಥಾನ ಪಡೆಯುವಂತಿಲ್ಲ. ಸಚಿವ ಸ್ಥಾನ ಬೇಡವೆಂದಾದರೆ ಮಾತ್ರ, ನಿಗಮದ ಅಧಿಕಾರ ನೀಡಲಾಗುವುದು. ಆಕಾಂಕ್ಷಿ ಶಾಸಕರಿಂದ ಇದನ್ನು ಖಚಿತ ಪಡಿಸಿಕೊಂಡು ನೇಮಕ ಮಾಡಬೇಕು. ಈಗ ನಿಗಮ-ಮಂಡಳಿಗೆ ನೇಮಕ ಮಾಡಿ, ಎರಡೂವರೆ ವರ್ಷಗಳ ಬಳಿಕ ಸಚಿವ ಸ್ಥಾನವನ್ನೂ ನೀಡಿದರೆ, ಕೆಲವರಿಗಷ್ಟೇ ಅಧಿಕಾರ ಸಿಕ್ಕಂತಾಗುತ್ತದೆ. ಮೊದಲ ಬಾರಿಗೆ ಆಯ್ಕೆಯಾದವರಿಗೂ ಅವಕಾಶ ಸಿಗಬೇಕಾದರೆ ಈ ಸೂತ್ರ ಅನ್ವಯಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಮುಖ್ಯಮಂತ್ರಿಗೆ ಈ ಸೂಚನೆ ಬಂದಿದೆ ಎಂದು ಮೂಲಗಳು ಖಚಿತಪಡಿಸಿವೆ.
ಜಿಲ್ಲೆಯಲ್ಲಿ ಈಹಿಂದೆ ಸಚಿವರಾಗಿ ಕಾರ್ಯನಿರ್ವಹಿಸಿರುವ ಬ್ಯಾಡಗಿ ವಿಧಾನಸಭಾ ಕ್ಷೇತ್ರದ ಶಾಸಕ ಬಸವರಾಜ ಶಿವಣ್ಣನವರು, ಹಾವೇರಿ ಮೀಸಲು ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಇನ್ನೇನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಚಿವ ಸಂಪುಟದಲ್ಲಿ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಿದ್ದತೆಯಲ್ಲಿದ್ದ ರುದ್ರಪ್ಪ ಲಮಾಣಿ ಅವರ ಹೆಸರನ್ನು ಕೊನೆ ಘಳಿಗೆಯಲ್ಲಿ ಕೈಬಿಟ್ಟು, ಅವರಗೆ ವಿಧಾನಸಭೆಯ ಉಪಸಭಾಪತಿ ಸ್ಥಾನ ನೀಡಿ ಸಮಾದಾನ ಪಡಿಸಲಾಯಿತು.
ಇನ್ನುಳಿದಂತೆ ಹಿರೇಕೆರೂರು ಶಾಸಕ ಯು.ಬಿ.ಬಣಕಾರ, ಹಾನಗಲ್ಲ ಕ್ಷೇತ್ರದ ಶಾಸಕ ಶ್ರೀನಿವಾಸ ಮಾನೆ, ರಾಣೇಬೆನ್ನೂರ ಶಾಸಕ ಪ್ರಕಾಶ ಕೋಳಿವಾಡ ಅವರುಗಳಿದ್ದು, ಇವರಲ್ಲಿ ಯಾರೂ ಸಹ ನಿಗಮ -ಮಂಡಳಿಗಳಿಗೆ ಅಧ್ಯಕ್ಷ ರಾಗಲು ಆಸಕ್ತಿ ತೋರುತ್ತಿಲ್ಲ. ಒಂದು ವೇಳೆ ನಿಗಮ -ಮಂಡಳಿಗಳಿಗೆ ಅಧ್ಯಕ್ಷ ಸ್ಥಾನ ಸ್ವೀಕರಿಸಿದರೇ ಮುಂದೆ ಎರಡುವರೆ ವರ್ಷಗಳ ನಂತರ ನಡೆಯಬುದಾದ ಸಚಿವ ಸಂಪುಟದಲ್ಲಿ ಸಚಿವರಾಗುವ ಅವಕಾಶ ಸಿಗದು ಎನ್ನುವ ರಾಜಕೀಯ ಲೆಕ್ಕಾಚಾರವು ಇರಬಹುದು. ಆದರೆ ಜಿಲ್ಲೆಯ ಐವರು ಶಾಸಕರನ್ನು ಮಂತ್ರಿ ಮಾಡುವುದು ಈಗಿನ ರಾಜಕೀಯ ಸಂದರ್ಭದಲ್ಲಿ ಸಾಧ್ಯವಿಲ್ಲ. ವರಿಷ್ಠರು ಜಿಲ್ಲೆಯ ಶಾಸಕರಿಗೆ ನಿಗಮ-ಮಂಡಳಿಯ ಅಧ್ಯಕ್ಷಸ್ಥಾನವನ್ನು ಸ್ವೀಕರಿಸುಂತೆ ಒತ್ತಡ ಹೇರಿ ಬಲವಂತವಾಗಿ ನೀಡಿದ್ದೇ ಆದಲ್ಲಿ ಬಲವಂತದ ಕಡುಬಾಗುತ್ತದೆ.
.