ಶೀಘ್ರವೇ ಎಲ್ಲ ತಹಶೀಲ್ದಾರ ಕಚೇರಿ ಆಟೋಮಿಷನ್ ವ್ಯವಸ್ಥೆ: ಸಚಿವ ಕೃಷ್ಣ ಬೈರೇಗೌಡ
ಹಾವೇರಿ: ಹಕ್ಕು ಬದಲಾವಣೆ ಹೊರತುಪಡಿಸಿ ಉಳಿದ ಎಲ್ಲ ವಿಷಯಗಳ ಕುರಿತಂತೆ ಸಾರ್ವಜನಿಕರಿಗೆ ಪಾರದರ್ಶಕ ಸೇವೆ ನೀಡುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ತಹಶೀಲ್ದಾರ ಕಚೇರಿಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಆಟೋಮಿಷನ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವು ಎಂದು ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಹೇಳಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಕಂದಾಯ ಇಲಾಖೆಯಲ್ಲಿ ಸುಧಾರಣೆ ತರಲಾಗುವುದು. ಕಂದಾಯ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ಜನರಿಗೆ ಕಚೇರಿ ಅಲೆದಾಟ ತಪ್ಪಿಸಿ ಕಡತಗಳ ತ್ವರಿತವಿಲೇವಾರಿ, ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸುಧಾರಣೆ ತರಲಾಗುವುದು ಎಂದು ಹೇಳಿದರು.
ಪೋಡಿ ಪ್ರಕರಣಗಳ ತ್ವರಿತ ವಿಲೇವಾರಿಗೆ ಆಂದೋಲನದ ಮಾದರಿಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಇತ್ಯರ್ಥಪಡಿಸಬೇಕು. ಏಕ ವ್ಯಕ್ತಿ ಪೋಡಿ ಪ್ರಕರಣದಲ್ಲಿ ಅವರು ವ್ಯಕ್ತಿಗತವಾಗಿ ಅರ್ಜಿ ಸಲ್ಲಿಸಬೇಕು ಎಂಬ ಮನೋಧೋರಣೆಯಿಂದ ಎಲ್ಲ ತಹಶೀಲ್ದಾರಗಳು ಹೊರಬರಬೇಕು. ಸಾರ್ವಜನಿಕರಿಗೆ ತ್ವರಿತವಾಗಿ ಸ್ಪಂದಿಸುವAತೆ ತಾಕೀತು ಮಾಡಿದರು.
ಬಗರಹುಕುಂ ವಿಲೇವಾರಿ: ಬಗರಹುಕುಂ ಜಮೀನುಗಳಿಗೆ ಸಾಗುವಳಿ ಚೀಟಿ ನೀಡುವ ಕುರಿತಂತೆ ತ್ವರಿತವಾಗಿ ಬಗರಹುಕುಂ ಕಮೀಟಿಗಳನ್ನು ರಚಿಸಬೇಕಾಗಿದೆ. ಎಲ್ಲ ಜನಪ್ರತಿನಿಧಿಗಳು ಸಮಿತಿ ಸದಸ್ಯರ ವಿವರಗಳನ್ನು ಸಲ್ಲಿಸಬೇಕು. ಫಾರಂ ೫೭ರಡಿ ಅರ್ಜಿ ಸಲ್ಲಿಸಿದ ಸಾಗುವಳಿದಾರರಿಗೆ ಸರ್ಕಾರದ ಮಾರ್ಗಸೂಚಿಯಂತೆ ಜಮೀನಿನ ಹಕ್ಕುಪತ್ರ ನೀಡುವ ಕಾರ್ಯ ಆರು ತಿಂಗಳೊಳಗಾಗಿ ಪೂರ್ಣಗೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಆರಂಭದಲ್ಲೇ ಸೂಚನೆ ನೀಡಿದ್ದರು. ಈಗಾಗಲೇ ಐದು ತಿಂಗಳು ಪೂರ್ಣಗೊಂಡಿದೆ. ಬಡವರಿಗೆ ಸಹಾಯಮಾಡುವುದು ನಮ್ಮ ಸಂಕಲ್ಪವಾಗಿದೆ. ಈ ತಿಂಗಳಾAತ್ಯಕ್ಕೆ ಈ ಕಾರ್ಯ ಪೂರ್ಣಗೊಳ್ಳಬೇಕು. ಅರ್ಹರಿಗೆ ಡಿಜಿಟಿಲ್ ಸಾಗುವಳಿಪತ್ರ ನೀಡಬೇಕು ಹಾಗೂ ಹಂಚಿಕೆಯಾದ ಜಮೀನನ ಮಾಲೀಕತ್ವ ನೋಂದಣಿ ಮಾಡಿಸಿಕೊಡಬೇಕು. ಈ ನಿಟ್ಟಿನಲ್ಲಿ ಎಲ್ಲ ತಹಶೀಲ್ದಾರಗಳು ಕ್ರಮವಹಿಸುವಂತೆ ಸೂಚನೆ ನೀಡಿದರು.
ಕಂದಾಯ ಗ್ರಾಮ ರಚನೆ: ತಾಂಡಾ ಉಪ ಗ್ರಾಮ ಹಾಗೂ ಕಂದಾಯ ಗ್ರಾಮಗಳ ರಚನೆಯ ಬಗ್ಗೆ ತಹಶೀಲ್ದಾರಗಳು ನೀಡಿದ ಮಾಹಿತಿಯ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಕಂದಾಯ ಸಚಿವರು, ಸರ್ಕಾರದ ಮಾರ್ಗಸೂಚಿಯಂತೆ ಕಂದಾಯ ಗ್ರಾಮಗಳು ರಚನೆಯಾಗಬೇಕು. ಈ ನಿಟ್ಟಿನಲ್ಲಿ ಸರಿಯಾಗಿ ನೋಟಿಫಿಕೇಷನ್ ಹೊರಡಿಸಲು ಪುನರ್ ಪರಿಶೀಲನೆ ಮಾಡಿ, ಯಾರಿಗೂ ತೊಂದರೆಯಾಗಬಾರದು. ಹಾಗೆ ಗ್ರಾಮಗಳ ವಿಸ್ತರಿಸಿ ಉಪಗ್ರಾಮಗಳ ರಚನೆ, ಖಾಸಗಿ ಜಮೀನಿನಲ್ಲಿ ಮನೆ ನಿರ್ಮಾಣ ಮಾಡಿಕೊಂಡವರಿಗೆ ಹಕ್ಕುಪತ್ರ ನೀಡಿಕೆ ಕುರಿತಾಗಿ ಸರ್ಕಾರದ ಮಾರ್ಗಸೂಚಿಯಂತೆ ಪರಿಶೀಲಿಸಿ ಕ್ರಮವಹಿಸುವಂತೆ ಸೂಚನೆ ನೀಡಿದರು.
ಇ-ಕಚೇರಿ: ಕಂದಾಯ ಇಲಾಖೆಯ ಎಲ್ಲ ಹಂತದ ಕಚೇರಿಗಳಲ್ಲೂ ಇ-ಆಡಳಿತದ ಮೂಲಕ ಕಡತಗಳ ಸ್ವೀಕಾರ ಮತ್ತು ವಿಲೇವಾರಿಮಾಡಬೇಕು. ಕಂದಾಯ ಅಧಿಕಾರಿ ಮೇಲ್ಪಟ್ಟ ಎಲ್ಲ ಕಚೇರಿಗಳಲ್ಲೂ ಇ-ಫೈಲಿಂಗ್ ವ್ಯವಸ್ಥೆ ಜಾರಿಗೊಳ್ಳಬೇಕು. ಯಾರ ಯಾರ ಲಾಗಿನ್ನಲ್ಲಿ ಎಷ್ಟು ದಿನದಿಂದ ಕಡಗಳು ಪೆಂಡಿAಗ್ ಇವೆ ಎಂಬುದನ್ನು ಪರಿಶೀಲನೆ ಮಾಡಬೇಕು. ನಿಗಧಿತ ಅವಧಿಗಿಂತ ಹೆಚ್ಚು ಅವಧಿಯಲ್ಲಿ ಕಡತ ಉಳಿಸಿಕೊಂಡ ವಿಷಯ ನಿರ್ವಾಹಕನಿಗೆ ನೋಟೀಸ್ ಜಾರಿಗೊಳಿಸುವಂತೆ ಸೂಚನೆ ನೀಡಿದರು.
ಬಿ ಕರಾಬ್ ಮಂಜೂರಾತಿ: ಬಿ ಕರಾಬ್ ಜಮೀನಿನ ಮಂಜೂರಾತಿ ಕುರಿತಂತೆ ಸರ್ಕಾರದ ಆದೇಶಗಳನ್ನು ಪರಿಶೀಲಿಸಿ ವರದಿ ಸಲ್ಲಿಸಿ. ಯಾವ ಯಾವ ತಾಲೂಕಿನಲ್ಲಿ ಎಷ್ಟು ಬಿ ಕರಾಬ್ ಜಮೀನುಗಳು ಇವೆ ಎಂಬುದರ ಬಗ್ಗೆ ಮಾಹಿತಿ ಸಲ್ಲಿಸಲು ಸೂಚನೆ ನೀಡಿದರು.
ಜಮೀನು ದಾರಿ: ಜಮೀನುಗಳಲ್ಲಿ ದಾರಿ ಸಮಸ್ಯೆ, ಗ್ರಾಮ ನಕಾಶೆಗಳಲ್ಲಿ ಇಲ್ಲದಿದ್ದರೂ ಹೊಲಗಳಿಗೆ ಹೋಗಲು ಪಾರಂಪರಿಕ ಕಾಲುದಾರಿ ಹಾಗೂ ಬಂಡಿ ದಾರಿಗಳಲ್ಲಿ ಸಾಗಲು ಅಡ್ಡಿಪಡಿಸುವ ಪ್ರಕರಣಗಳನ್ನು ಸಿಆರ್ಪಿಸಿ ಅಡಿಯಲ್ಲಿ ತಹಶೀಲ್ದಾರಗಳು ಖುದ್ದಾಗಿ ಸಮಸ್ಯೆಗಳನ್ನು ಪರಿಹರಿಸಬೇಕು. ಹಿಸ್ಸಾ ಹಾಗೂ ಪೋಡಿ ಪ್ರಕರಣಗಳಲ್ಲಿ ಜಮೀನು ವಿಭಾಗಮಾಡಿಕೊಂಡು ನೋಂದಣಿ ಮಾಡಿಸಿಕೊಳ್ಳುವ ಪೂರ್ವದಲ್ಲಿ ಓಡಾಡಲು ದಾರಿಗೆ ಅವಕಾಶ ಮಾಡಿಕೊಡಬೇಕು. ಹಾಗೂ ಬಗರಹುಕುಂ ಜಮೀನು ಮಂಜೂರು ಮಾಡುವಾಗ ಜಮೀನಿಗೆ ತೆರಳಲು ದಾರಿಯನ್ನು ಕಳೆದು ಹಕ್ಕುಪತ್ರ ನೀಡಲು ಕ್ರಮವಹಿಸುವಂತೆ ಸೂಚನೆ ನೀಡಿದರು.
ಮೆಚ್ಚುಗೆ: ಆರ್.ಟಿ.ಸಿ. ಪ್ರಕರಣ ಹಾಗೂ ಕಂದಾಯ ನ್ಯಾಯಾಲಯಗಳ ಪ್ರಕರಣ ಇತ್ಯರ್ಥ ಸೇರಿದಂತೆ ವಿವಿಧ ಕಂದಾಯ ಸೇವೆಗಳಲ್ಲಿ ಇತರ ಜಿಲ್ಲೆಗಳಿಗಿಂತ ಹಾವೇರಿ ಜಿಲ್ಲೆಯಲ್ಲಿ ಉತ್ತಮ ಸಾಧನೆಯಾಗಿರುವ ಕುರಿತಂತೆ ಕಂದಾಯ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಂದಾಯ ಇಲಾಖೆಗೆ ದೊಡ್ಡ ಜವಾಬ್ದಾರಿ: ಕಂದಾಯ ಇಲಾಖೆ ದೊಡ್ಡ ಜವಾಬ್ದಾರಿ ಇರುವ ಇಲಾಖೆ. ಎಲ್ಲರ ಮೇಲೆ ಪರಿಣಾಮ ಬೀರುವ ಇಲಾಖೆ, ಸರ್ಕಾರಕ್ಕೆ ಮಾತೃ ಇಲಾಖೆ, ಎಲ್ಲರ ಮೇಲೆ ಪ್ರಭಾವ ಬೀರುವ ಇಲಾಖೆ. ಕಂದಾಯ ಇಲಾಖೆ ಸರಿಯಾಗಿ ಕೆಲಸಮಾಡಿದರೆ ಜನ ನೆಮ್ಮದಿಯಿಂದ ಬದುಕಲು ಸಾಧ್ಯ. ಸಾರ್ವಜನಿಕರ ಯಾವುದೇ ಒಂದು ಸಣ್ಣ ಪ್ರಕರಣ ವಿಳಂಬ ಮಾಡಿದರೆ ಆ ಪ್ರಕರಣದಿಂದ ಸರ್ಕಾರಕ್ಕೆ ಮುಜುಗರಕ್ಕೆ ಇಡಾಗುತ್ತದೆ. ಈ ನಿಟ್ಟಿನಲ್ಲಿ ಜವಾಬ್ದಾರಿಯಿಂದ ಸಾಮಾಜಿಕ ಕಾಳಜಿಯಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಕಂದಾಯ ಇಲಾಖೆಗೆ ಜನರ ಅಲೆದಾಟ ತಪ್ಪಿಸಬೇಕು. ಜನರಿಗೆ ಹೊರೆಯಾಗುವ ಬದಲು ಪೂರಕವಾಗಿ ಕೆಲಸಮಾಡಲು ಮುಖ್ಯಮಂತ್ರಿಗಳು ಸೂಚನೆ ನೀಡಿದ್ದಾರೆ. ಜನರ ಮನೋಭಾವವನ್ನು ಅರ್ಥಮಾಡಿಕೊಂಡು ಸರ್ಕಾರಕ್ಕೆ ಒಳ್ಳೆಯ ಹೆಸರು ತರುವ ನಿಟ್ಟಿನಲ್ಲಿ ಕೆಲಸಮಾಡಬೇಕು. ಮಾಡೋಣ ಎನ್ನುವ ಬದಲು ಮಾಡ್ತೀವಿ, ಮಾಡಬೇಕು ಎಂಬ ಧನಾತ್ಮಕ ಮನೋಭಾವದಿಂದ ಕೆಲಸಮಾಡಲು ಸಂಕಲ್ಪಮಾಡಿ ಎಂದು ಸಲಹೆ ನೀಡಿದರು.
ನೀರಿನ ಸಮಸ್ಯೆ: ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಖಾಸಗಿ ಕೊಳವೆಬಾವಿಗಳನ್ನು ಗುರುತಿಸಿ ಮಾಲೀಕರೊಂದಿಗೆ ಕರಾರು ಒಪ್ಪಂದ ಮಾಡಿಕೊಳ್ಳಿ. ಸರ್ಕಾರದ ಹಂತದಲ್ಲಿ ಈ ವರ್ಷ ಖಾಸಗಿ ಕೊಳವೆಬಾವಿಗಳ ಮಾಸಿಕ ಬಾಡಿಗೆ ದರವನ್ನು ಹೆಚ್ಚಳಮಾಡಲು ಕ್ರಮವಹಿಸಲಾಗುವುದು. ಹೊಸ ಕೊಳವೆಬಾವಿಗಳ ಬದಲು ಖಾಸಗಿ ಕೊಳವೆಬಾವಿಗಳಿಗೆ ಪೈಪ್ಲೈನ್ ಅಳವಡಿಸಿ ನೀರು ಪೂರೈಕೆ ಮಾಡಲು ಅನುಕೂಲವಾಗಲಿದೆ ಎಂದು ಹೇಳಿದರು.
ಬೆಳೆಹಾನಿ: ಬೆಳೆಹಾನಿ ಸಮೀಕ್ಷೆಯಲ್ಲಿ ಯಾವುದೇ ಲೋಪವಾಗಬಾರದು. ಸಮೀಕ್ಷೆ ಕಾರ್ಯ ಪೂರ್ಣಗೊಂಡು ಪರಿಹಾರ ನೀಡುವ ಸಂದರ್ಭದಲ್ಲಿ ಕೆಲ ರೈತರು ಕೈಬಿಟ್ಟು ಹೋಗಿದೆ, ಸೇರಿಸಿ ಎಂಬ ಮನವಿಯನ್ನು ಸ್ವೀಕರಿಸುವುದಿಲ್ಲ. ಸೇರ್ಪಡೆಗೆ ಅವಕಾಶವಿಲ್ಲ. ಬೆಳೆ ಸರ್ವೇ ವಿವರ, ರೈತನ ಸರ್ವೇ ವಿವರ, ಬೆಳೆಹಾನಿ ವಿಸ್ತೀರ್ಣವನ್ನು ಫ್ರೂಟ್ ಐಡಿಯಲ್ಲಿ ಸೆರೆಹಿಡಿದು ಅಪ್ಲೋಡ್ ಮಾಡಬೇಕು. ಬೆಳೆ ವಿವರ ತಪ್ಪಾಗಿ ದಾಖಲಾಗಿದ್ದರೆ ಸರಿಪಡಿಸಬೇಕು. ಆರ್.ಟಿ.ಸಿ.ಗಳಿಗೆ ಆಧಾರ್ ಲಿಂಕ್ ಆಗಬೇಕು. ತಕ್ಷಣ ಎಲ್ಲವನ್ನೂ ಸರಿಪಡಿಸಿ ನಿಖರವಾದ ರೈತರ ಬೆಳೆ ಮಾಹಿತಿ, ವಿಸ್ತೀರ್ಣವನ್ನು ಕ್ರಾಸ್ ಸರ್ವೇಮಾಡಿ ಅಪ್ಡೇಟ್ ಮಾಡಲು ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಸೂಚನೆ ನೀಡಿದರು.
ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯ ಹಾಗೂ ಕೃಷಿ ಮಾರುಕಟ್ಟೆ ಸಚಿವರು ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ ಮಾತನಾಡಿ, ಹಾವೇರಿ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಕಂದಾಯ ಸಚಿವರ ನೇತೃತ್ವದಲ್ಲಿ ಸಭೆ ಕರೆಯಬೇಕು. ನಾವೆಲ್ಲ ಭಾಗವಹಿಸುತ್ತೇವೆ . ಶಾಶ್ವತ ಪರಿಹಾರ ಕಂಡುಕೊಳ್ಳಲು ಮನವಿ ಮಾಡಿಕೊಂಡರು.
ಮೇ, ಜೂನ್ ತಿಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಬಹುದು. ಈ ನಿಟ್ಟಿನಲ್ಲಿ ಸರಿಯಾಗಿ ಕ್ರಮವಹಿಸಿ. ಜನರ ಸಮಸ್ಯೆಗಳಿಗೆ ಅಧಿಕಾರಿಗಳ ಹಂತದಲ್ಲೇ ಪರಿಹಾರ ಒದಗಿಸಬೇಕು. ಜನಪ್ರತಿನಿಧಿಗಳ ಬಳಿ ಜನರನ್ನು ಕಳುಹಿಸುವ ಮನೋಭಾವ ಅಧಿಕಾರಿಗಳು ಕೈ ಬಿಡಬೇಕು ಎಂದು ಸೂಚನೆ ನೀಡಿದರು.
ಹಾವೇರಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ನಿವಾರಣೆಗೆ ಬೆಂಗಳೂರು ಹಂತದಲ್ಲಿ ಪ್ರತ್ಯೇಕ ಸಭೆ ಕರೆಯುವಂತೆ ಕಂದಾಯ ಸಚಿವರಿಗೆ ಮನವಿ ಮಾಡಿಕೊಂಡರು.
ರೈತರಿಗೆ ಹಲವು ಭರವಸೆಗಳನ್ನು ನಾವು ನೀಡಿದ್ದೇವೆ. ಕಂದಾಯ ಸಚಿವರು ಭರವಸೆ ನೀಡಿದ್ದಾರೆ. ಎಲ್ಲರೂ ರೈತರ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಬೇಕು. ವಿಮೆಗೆ ಹೆಚ್ಚು ರೈತರನ್ನು ನೋಂದಾಯಿಸಿ ಇಂತಹ ಸಂಕಷ್ಟ ಸಂದರ್ಭದಲ್ಲಿ ರೂ.೧೨೪ ಕೋಟಿ ಮಧ್ಯಂತರ ಪರಿಹಾರ ದೊರಕಿದೆ. ಅಧಿಕಾರಿಗಳ ಶ್ರಮವನ್ನು ನಾನು ಅಭಿನಂಧಿಸುತ್ತೇನೆ ಎಂದು ಹೇಳಿದರು.
ಸಭೆಯಲ್ಲಿ ವಿಧಾನಸಭೆ ಉಪಾಧ್ಯಕ್ಷರಾದ ರುದ್ರಪ್ಪ ಲಮಾಣಿ, ಶಾಸಕರಾದ ಬಸವರಾಜ ಶಿವಣ್ಣನವರ, ಯು.ಬಿ.ಬಣಕಾರ, ಶ್ರೀನಿವಾಸ ಮಾನೆ, ಕಂದಾಯ ಇಲಾಖೆ ಆಯುಕ್ತರಾದ ಪಿ.ಸುನೀಲ್ಕುಮಾರ, ಬೆಳಗಾವಿ ಪ್ರಾದೇಶಿಕ ಆಯುಕ್ತರಾದ ಸಂಜಯ ಶೆಟ್ಟೆಣ್ಣನವರ, ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಗೋಪಾಲ ಇತರರು ಉಪಸ್ಥಿತರಿದ್ದರು.
ರಾಣೇಬೆನ್ನೂರು ತಹಶೀಲ್ದಾರ ಕಚೇರಿ- ಕಾಗಿನೆಲೆ ಉಪ ತಹಶೀಲ್ದಾರ ನಾಡ ಕಚೇರಿಗೆ ಕೃಷ್ಣ ಬೈರೇಗೌಡ ಭೇಟಿ
ಸಾರ್ವಜನಿಕರ ಸಮಸ್ಯೆಗಳ ಶೀಘ್ರ ಪರಿಹಾರಕ್ಕೆ ಅಧಿಕಾರಿಗಳಿಗೆ ಸೂಚನೆ
ಹಾವೇರಿ:ನ.೦೨(ಕರ್ನಾಟಕ ವಾರ್ತೆ): ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಗುರುವಾರ ಬೆಂಗಳೂರನಿAದ ಹಾವೇರಿಗೆ ಆಗಮಿಸುವ ಮಾರ್ಗಮಧ್ಯದಲ್ಲಿ ರಾಣೇಬೆನ್ನೂರು ತಹಶೀಲ್ದಾರ ಕಚೇರಿ ಹಾಗೂ ಕಾಗಿನೆಲೆ ಉಪ ತಹಶೀಲ್ದಾರ ನಾಡ ಕಚೇರಿಗೆ ಅನಿರೀಕ್ಷಿತ ಭೇಟಿ ನೀಡಿ, ಕಚೇರಿಗಳ ಕಡತಗಳ ನಿರ್ವಹಣೆ ಹಾಗೂ ವಿವಿಧ ದಾಖಲೆಗಳನ್ನು ಪರಿಶೀಲಿಸಿದ ಅವರು, ಸಾರ್ವಜನಿಕರ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ರಾಣೇಬೆನ್ನೂರ ತಹಶೀಲ್ದಾರ ಕಚೇರಿಯ ಪಡಸಾಲೆ ಕೊಠಡಿ, ಕಾಗದ ರಹಿತ ಆಡಳಿತ ವಿಭಾಗ, ಲೆಕ್ಕ ಪತ್ರ ಶಾಖೆ, ಭೂ ದಾಖಲೆಗಳ ವಿಭಾಗ, ಡಿಜಿಟಲ್ ರೆಕಾರ್ಡ್ ವಿಭಾಗಕ್ಕೆ ತೆರಳಿ ದಾಖಲೆಗಳನ್ನು ಪರಿಶೀಲಿಸಿದ ಅವರು, ರೆಕಾರ್ಡ್ ರೂಂನಲ್ಲಿ ಅಭಿಲೇಖಾಲಯದ ಇಂಡೆಕ್ಸ್ ಪರಿಶೀಲನೆಗೆ ಇರಿಸಲಾಗಿದ್ದ ಯಂತ್ರವನ್ನು ಈವರೆಗೂ ಉಪಯೋಗಿಸದ ಕಾರಣ ಅಧಿಕಾರಿಗಳನ್ನು ತರಾಟೆಗೆ ತೆದುಕೊಂಡರು. ಪಡಲಾಸೆ ಕೊಠಡಿ ಮುಚ್ಚಿರುವುದಕ್ಕೆ ಕಾರಣ ಕೇಳಿದವರು, ಕಚೇರಿಗೆ ಆಗಮಿಸುವ ಸಾರ್ವಜನಿಕರೊಂದಿಗೆ ಸೌರ್ಜನ್ಯದಿಂದ ವರ್ತಿಸಿ ಅವರ ಸಮಸ್ಯೆಗಳನ್ನು ಆಲಿಸಿ ಸಮಸ್ಯೆಗಳ ಪಾರಿಹಾರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಕಚೇರಿಯನ್ನು ಸ್ವಚ್ಛವಾಗಟ್ಟುಕೊಳ್ಳಬೇಕು ಎಂದು ಸೂಚನೆ ನೀಡಿದರು.
ನಂತರ ಕಾಗಿನೆಲೆ ಉಪ ತಹಶೀಲ್ದಾರ ನಾಡ ಕಚೇರಿಗೆ ಭೇಟಿ ನೀಡಿದ ಅವರು, ಈ ಕಚೇರಿ ವ್ಯಾಪ್ತಿಯಲ್ಲಿ ೧೧ ಗ್ರಾಮ ಪಂಚಾಯತಿಗಳಿದ್ದು, ಮೂರು ಗ್ರಾ.ಪಂ.ಗಳಿಗೆ ಓರ್ವ ಗ್ರಾಮ ಲೆಕ್ಕಾಧಿಕಾರಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾರ್ವಜನಿಕರಿಗೆ ತೊಂದರೆಯಾಗದAತೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ಪಡೆಯಲು ಕಚೇರಿಗೆ ಬರುವ ಸಾರ್ವಜನಿಕರ ಅರ್ಜಿಗಳನ್ನು ತುರ್ತು ವಿಲೇವಾರಿ ಮಾಡಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಶಾಸಕ ಬಸವರಾಜ ಶಿವಣ್ಣನವರ, ಶ್ರೀನಿವಾಸ ಮಾನೆ, ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ, ಹಾವೇರಿ ಉಪವಿಭಾಗಾಧಿಕಾರಿ ಡಾ.ಚನ್ನಪ್ಪ, ರಾಣೇಬೆನ್ನೂರು ಹಾಗೂ ಬ್ಯಾಡಗಿ ತಹಶೀಲ್ದಾರಗಳು ಉಪಸ್ಥಿತರಿದ್ದರು.