ಡಿ.೨೪ಕ್ಕೆಹಾವೇರಿಯಲ್ಲಿ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗಮೇಳ
ಹಾವೇರಿ: ಶರಣುಬಸವ ಅಂಗಡಿ ಲಾ ಫರ್ಮ್ ಮತ್ತು ಹಾವೇರಿ ಜಿಲ್ಲಾ ವಾಣೀಜ್ಯೋದ್ಯಮ ಸಂಸ್ಥೆ ಹಾಗೂ ಶ್ರೀ. ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯ, ಹುಕ್ಕೇರಿಮಠ, ಹಾವೇರಿ ಹಾಗೂ ವಿವಿಧ ಮಹಿಳಾ ಒಕ್ಕೂಟಗಳ / ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಡಿ.೨೪ ರಂದು ಇಲ್ಲಿನ ಹುಕ್ಕೇರಿಮಠ ಶ್ರೀಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯದಲ್ಲಿ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗಮೇಳ ಆಯೋಜಿಸಲಾಗಿದೆ ಎಂದು ಶರಣಬಸವ ಅಂಗಡಿ ತಿಳಿಸಿದರು.
ಡಿ.೧೧ರಂದು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಉದ್ಯೋಗಮೇಳದಲ್ಲಿ ಮಹೇಂದ್ರ, ಬ್ರಿಷ್ಟಾನ ಸೇರಿದಂತೆ ಪ್ರತಿಷ್ಟಿತ ಕಂಪನಿಗಳು ಭಾಗವಹಿಸುತ್ತಿವೆ. ಹಾವೇರಿಜಿಲ್ಲೆಯ ವಿದ್ಯಾವಂತ ನಿರುದ್ಯೋಗಿಗಳಿಗೆ ಅನುಕೂಲವಾಗಲಿ ಎಂದು ಈಮೇಳವನ್ನು ಆಯೋಜಿಸಲಾಗಿದೆ. ೫ಸಾವಿರ ಉದ್ಯೋಗಾಂಕ್ಷಿಳಿಗೆ ಉದ್ಯೋಗ ನೀಡುವ ಗುರಿಹೊಂದಲಾಗಿದೆ ಎಂದರು.
ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ರವಿ ಮೆಣಸಿನಕಾಯಿ ಮಾತನಾಡಿ ಯಾವುದೆ ವಿದ್ಯಾರ್ಹತೆ ಹೊಂದಿರುವ ಉದ್ಯೋಗಾಕಾಂಕ್ಷಿಗಳು ಈ ಉದ್ಯೋಗ ಮೇಳದಲ್ಲಿ ನೇರವಾಗಿ ಕ್ಯೂಆರ್ ಕೋಡ್ ಬಳಸಿ ಆನ್ಲೈನ್ ನೋಂದಣಿ ಮೂಲಕ ಭಾಗವಹಿಸಬಹುದು. ಜಿಲ್ಲೆಯಲ್ಲಿ ಕೈಗಾರಿಕೆಗಳು ಕಡಿಮ ಇರುವ ಕಾರಣಕ್ಕೆ ಶರಣುಬಸವ ಅಂಗಡಿ ಲಾ ಫರ್ಮ್ ಆಯೋಜಿಸಿರುವ ಈಉದ್ಯೋಗಮೇಳಕ್ಕೆ ಹಾವೇರಿ ಜಿಲ್ಲಾ ವಾಣೀಜ್ಯೋದ್ಯಮ ಸಂಸ್ಥೆ ಕೈಜೋಡಿಸಿದೆ. ಜಿಲ್ಲೆಯ ನಿರುದ್ಯೋಗಿಗಳು ಒದರ ಪ್ರಯೋಜನ ಪಡೆಯಬೇಕೆಂದರು.
ಹೆಚ್ಚಿನ ಮಾಹಿತಿಗಾಗಿ ಎ. ಬಿ. ಪಾಟೀಲ, ಮೊ.ನಂ: ೬೩೬೨೮೫೭೪೨೬,ಮುತ್ತಣ್ಣ ನವಲಗುಂದ ಮೊ.ನಂ: ೭೫೦೬೩೪೫೪೫೩, ಮೋಹನ ಹರಪನಹಳ್ಳಿ ಮೊ.ನಂ: ೭೪೧೧೨೩೪೮೪೬ ಇವರನ್ನು ಸಂಪರ್ಕಿಸಬಹುದಾಗಿದೆ.
ಡಿ.೨೪ಕ್ಕೆಹಾವೇರಿಯಲ್ಲಿ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗಮೇಳ
Date:
ಡಿ.೨೪ಕ್ಕೆಹಾವೇರಿಯಲ್ಲಿ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗಮೇಳ
ಹಾವೇರಿ: ಶರಣುಬಸವ ಅಂಗಡಿ ಲಾ ಫರ್ಮ್ ಮತ್ತು ಹಾವೇರಿ ಜಿಲ್ಲಾ ವಾಣೀಜ್ಯೋದ್ಯಮ ಸಂಸ್ಥೆ ಹಾಗೂ ಶ್ರೀ. ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯ, ಹುಕ್ಕೇರಿಮಠ, ಹಾವೇರಿ ಹಾಗೂ ವಿವಿಧ ಮಹಿಳಾ ಒಕ್ಕೂಟಗಳ / ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಡಿ.೨೪ ರಂದು ಇಲ್ಲಿನ ಹುಕ್ಕೇರಿಮಠ ಶ್ರೀಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯದಲ್ಲಿ ಜಿಲ್ಲಾ ಮಟ್ಟದ ಬೃಹತ್ ಉದ್ಯೋಗಮೇಳ ಆಯೋಜಿಸಲಾಗಿದೆ ಎಂದು ಶರಣಬಸವ ಅಂಗಡಿ ತಿಳಿಸಿದರು.
ಡಿ.೧೧ರಂದು ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಉದ್ಯೋಗಮೇಳದಲ್ಲಿ ಮಹೇಂದ್ರ, ಬ್ರಿಷ್ಟಾನ ಸೇರಿದಂತೆ ಪ್ರತಿಷ್ಟಿತ ಕಂಪನಿಗಳು ಭಾಗವಹಿಸುತ್ತಿವೆ. ಹಾವೇರಿಜಿಲ್ಲೆಯ ವಿದ್ಯಾವಂತ ನಿರುದ್ಯೋಗಿಗಳಿಗೆ ಅನುಕೂಲವಾಗಲಿ ಎಂದು ಈಮೇಳವನ್ನು ಆಯೋಜಿಸಲಾಗಿದೆ. ೫ಸಾವಿರ ಉದ್ಯೋಗಾಂಕ್ಷಿಳಿಗೆ ಉದ್ಯೋಗ ನೀಡುವ ಗುರಿಹೊಂದಲಾಗಿದೆ ಎಂದರು.
ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ರವಿ ಮೆಣಸಿನಕಾಯಿ ಮಾತನಾಡಿ ಯಾವುದೆ ವಿದ್ಯಾರ್ಹತೆ ಹೊಂದಿರುವ ಉದ್ಯೋಗಾಕಾಂಕ್ಷಿಗಳು ಈ ಉದ್ಯೋಗ ಮೇಳದಲ್ಲಿ ನೇರವಾಗಿ ಕ್ಯೂಆರ್ ಕೋಡ್ ಬಳಸಿ ಆನ್ಲೈನ್ ನೋಂದಣಿ ಮೂಲಕ ಭಾಗವಹಿಸಬಹುದು. ಜಿಲ್ಲೆಯಲ್ಲಿ ಕೈಗಾರಿಕೆಗಳು ಕಡಿಮ ಇರುವ ಕಾರಣಕ್ಕೆ ಶರಣುಬಸವ ಅಂಗಡಿ ಲಾ ಫರ್ಮ್ ಆಯೋಜಿಸಿರುವ ಈಉದ್ಯೋಗಮೇಳಕ್ಕೆ ಹಾವೇರಿ ಜಿಲ್ಲಾ ವಾಣೀಜ್ಯೋದ್ಯಮ ಸಂಸ್ಥೆ ಕೈಜೋಡಿಸಿದೆ. ಜಿಲ್ಲೆಯ ನಿರುದ್ಯೋಗಿಗಳು ಒದರ ಪ್ರಯೋಜನ ಪಡೆಯಬೇಕೆಂದರು.
ಹೆಚ್ಚಿನ ಮಾಹಿತಿಗಾಗಿ ಎ. ಬಿ. ಪಾಟೀಲ, ಮೊ.ನಂ: ೬೩೬೨೮೫೭೪೨೬,ಮುತ್ತಣ್ಣ ನವಲಗುಂದ ಮೊ.ನಂ: ೭೫೦೬೩೪೫೪೫೩, ಮೋಹನ ಹರಪನಹಳ್ಳಿ ಮೊ.ನಂ: ೭೪೧೧೨೩೪೮೪೬ ಇವರನ್ನು ಸಂಪರ್ಕಿಸಬಹುದಾಗಿದೆ.