ಹಾವೇರಿಲೋಕಸಭಾ ಕ್ಷೇತ್ರದ ಮೇಲೆ ಕೋಟೆಪ್ಪಗಳ ಕಣ್ಣು….. ಮಂಕಾದ ಸ್ಥಳೀಯರು!
ಹಾವೇರಿ: ಅದ್ಯಾವ ನಿಗೂಡ ಕಾರಣಕ್ಕೆ ಸಂಸದ ಶಿವಕುಮಾರ ಉದಾಸಿ ೨೦೨೪ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ನಿರ್ಧಾರ ಪ್ರಕಟಿಸಿದರೋ ಗೊತ್ತಿಲ್ಲ. ಆವರ ನಿಧಾರ ಪ್ರಕಟವಾಗುತ್ತಿದ್ದಂತೇಯೆ ಹಾವೇರಿಲೋಕಸಭಾ ಕ್ಷೇತ್ರದ ಮೇಲೆ ಕೋಟೆಪ್ಪಂದಿರಕಣ್ಣು ಬಿದ್ದಿದೆ. ದಿನಕ್ಕೊಬ್ಬರು ಟಿಕೆಟ್ ಆಕಾಂಕ್ಷಿಗಳು ಹುಟ್ಟಿಕೊಳ್ಳುತ್ತಿದ್ದಾರೆ. ಕೆಲವುಕೋಟೆಪ್ಪಂದಿರ ಮನೆಗಳಲ್ಲಿ ನೋಟಗಳನ್ನು ಏಣಿಸುವ ಯಂತ್ರಗಳು ಸಹ ಇವೆ. ಇನ್ನು ಯರ್ಯಾರಮನೆಯಲ್ಲಿ ಏನೇನಿವೆಯೋ ತಿಳಿಯದು. ಬರುವ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಹಣದ ಮಳೆಯಂತು ಸುರಿಯುವುದು ಪಕ್ಕಾ ಆಗುತ್ತಿದೆ. ಈ ಮಧ್ಯೆ ಕ್ಷೇತ್ರದಲ್ಲಿ ಸ್ಥಳೀಯ ಟಿಕೆಟ್ ಆಕಾಂಕ್ಷಿಗಳು ಮಂಕಾದಂತೆ ಕಾಣುತ್ತಿದ್ದಾರೆ.
ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವಂತೆ ಚುನಾವಣಾ ಅಭ್ಯರ್ಥಿಗಳ ಸಂಖ್ಯೆಯು ದಿನದಿಂದ ದಿನಕ್ಕೆ ಎಲ್ಲ ಪಕ್ಷಗಳಲ್ಲೂ ಹೆಚ್ಚಾಗುತ್ತಿರುವುದು ಪಕ್ಷದ ನಾಯಕರಿಗೆ ಹೆಡ್ಡೆಕ್ ಎಂಬಂತಾಗಿದೆ. ವಿಶೇಷವಾಗಿ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಗಳು ಟಿಕೆಟ್ ಬಯಸುತ್ತಿರುವುದು ಭಾವೈಕ್ಷತೆಯ ನಾಡು, ಉತ್ತರ ಕರ್ನಾಟಕದ ಹೆಬ್ಬಾಗಿಲು, ಯಾಲಕ್ಕಿ ನಾಡು ಎಂತಲೇ ಕರೆಯಲ್ಪಡುವ ಹಾವೇರಿ ಕ್ಷೇತ್ರವು ಒಂದಾಗಿದೆ. ಈ ಕ್ಷೇತ್ರದಿಂದ ಸತತವಾಗಿ ಬಿಜೆಪಿ ಪಕ್ಷದಿಂದ ೩ ಬಾರಿ ಆಯ್ಕೆಯಾಗರುವ ಹಾಲಿ ಸಂಸದ ಶಿವಕುಮಾರ ಉದಾಸಿಯವರು ೨೦೨೪ರ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಎಂದು ಘೋಷಣೆ ಮಾಡಿದ್ದು ಈ ಕ್ಷೇತ್ರದಲ್ಲಿ ಆಕಾಂಕ್ಷಿಗಳ ಪಟ್ಟಿ ಬೆಳೆಯುಲು ಇನ್ನೊಂದು ಕಾರಣ.
ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಹೆಬ್ಬಾಗಿಲು ಹಾವೇರಿ ಜಿಲ್ಲೆ. ಕಲೆ, ಸಾಹಿತ್ಯ, ಸಂಗೀತ, ಸಂಸ್ಕ್ರತಿ ಮುಂತಾದ ಕ್ಷೇತ್ರಗಳಲ್ಲಿ ತನ್ನದೇ ಆದ ಪರಂಪರೆಯನ್ನು ಹೊಂದಿರುವ ಹಾವೇರಿಜಿಲ್ಲೆಯ೫ ಮತ್ತು ಗದಗ ಜಿಲ್ಲೆಯ ೩ವಿಧಾನಸಭಾ ಕ್ಷೇತ್ರಗಳನ್ನು ಸೇರಿಸಿ ಹಾವೇರಿ ಲೋಕಸಭಾ ಕ್ಷೇತ್ರವನ್ನು ರಚನೆ ಮಾಡಲಾಗಿದೆ. ಮೊದಲು ಧಾರವಾಡ ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಇವು ಒಳಪಡುತ್ತಿದ್ದವು. ೨೦೦೮ರಲ್ಲಿ ಗದಗ ಜಿಲ್ಲೆಯ ಮೂರು, ಹಾವೇರಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳನ್ನು ಸೇರಿಸಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರ ರಚನೆ ಆಯಿತು. ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಅಂದಾಜು ಜನಸಂಖ್ಯೆ ೨೨ಲಕ್ಷ, ಇವರಲ್ಲಿ ಶೇ ೧೬ರಷ್ಟು ಎಸ್ಸಿ, ಶೇ ೯ರಷ್ಟು ಎಸ್ಟಿ ಸಮುದಾಯದವರು ಇದ್ದಾರೆ. ಅಂದಾಜು ೧೭ರಿಂದ ೧೮ಲಕ್ಷದವರೆಗೆ ಮತದಾರರು ಇದ್ದಾರೆ.
ಈ ಕ್ಷೇತ್ರವು ಕೋಮುಸೌಹಾರ್ದತೆಗೆ ಹೆಸರಾಗಿದೆ. ಆದರೆ ಇತ್ತೀಚಿನ ಮೂರ್ನಾಲ್ಕು ತಿಂಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದಾಗ ಹಳೆತಲೆಮಾರಿನ ಜನರಲ್ಲಿ ಬೇಸರ ಮಡುಗಟ್ಟಿದೆ. ಈ ಕ್ಷೇತ್ರದಲ್ಲಿ ಜಾತಿಯ ವಿಷ ಬೀಜ ಈ ಹಿಂದೆ ಎಂದು ಮುನ್ನಲೆಗೆ ಬಂದಿರಲಿಲ್ಲ, ಆದರೆ ಇತ್ತೀಚಿನ ಬೆಳವಣಿಗೆಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಜಾತಿ, ಜಾತಿಗಳ ನಡುವೆ ಕಂದಕ ಸೃಷ್ಟಿಸುವ ಕಾರ್ಯಕ್ರಮಗಳು, ಮೆರವಣಿಗೆ, ಉರುಣುಗೆಗಳು ಸದ್ದಿಲ್ಲದೇ ಮುನ್ನಲೆಗೆ ಬಂದು ನಿಂತಿವೆ. ಬೇಸರದ ಸಂಗತಿಯಂದರೆ ಈ ರೀತಿಯ ಕಂದಕ ಸೃಷ್ಟಿಸುವ ಕಾರ್ಯಕ್ರಮಗಳಿಗೆ ಕೆಲವು ಮಠ-ಮಂದಿರಗಳ ಹೆಸರು ಬಳಸಿಕೊಳ್ಳಲಾಗುತ್ತಿದೆ ಇನ್ನು ಕೇಳಬೇಕೆ, ಚುನಾವಣೆಯಲ್ಲಿ ಮತಗಳ ವ್ಯಪಾರಿಗಳು ತಮ್ಮ ಅಂಗಡಿಯನ್ನು ತೆರೆದಿಟ್ಟುಕೊಂಡು ಮತಗಳ ವ್ಯಾಪಾರ-ವಹಿವಾಟು ನಡೆಸುತ್ತಿದ್ದಾರೆ.
ಈಗಾಗಲೇ ಆ ಕಾರ್ಯಕ್ರಮ ಈ ಕಾರ್ಯಕ್ರಮ ಎಂದು ಲಕ್ಷಾಂತರಹಣವನ್ನು ಕೋಟೆಪ್ಪಂದಿರು ಖರ್ಚುಮಾಡುತ್ತಿದ್ದಾರೆ. ಇತ್ತೀಚೆಗೆ ಹಾವೇರಿನಗರದ ಹೈಸ್ಕೂಲ್ ಮೈದಾನದಲ್ಲಿ ನಡೆದ ಕಾರ್ಯಕ್ರಮವೇ ಇದಕ್ಕೆ ಸಾಕ್ಷಿಯಾಗಿದೆ. ಕಾರ್ಯಕ್ರಮಕ್ಕೆ ಭಾಗವಹಿಸುವ ಹೆಣ್ಣು ಮಕ್ಕಳಿಗೆ ರೆಷ್ಮೇಸೀರೆ, ಸ್ಟಿಲ್ ಬಿಂದಿಗೆ, ಯುವಕರಿಗೆ ಚಡ್ಡಿ, ಬನಿಯನ್, ಶಾಲುಗಳು ಮೇಲೆ ಭರ್ಜರಿ ಊಟದ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು. ಆದರೆ ಯಾಕೋ? ಏನು? ಮಾಡಿದ ಅಡುಗೆ ಮಾತ್ರ ಪೂರ್ಣಪ್ರಮಾಣದಲ್ಲಿ ಖರ್ಚಾಗದೇ ಹಾಗೆ ಉಳಿದಿತ್ತು. ಅಂದು ಹಾವೇರಿಯ ಹಳೆ ಪಿ.ಬಿ,ರಸ್ತೆಯ ಇಕ್ಕೆಳಗಳಲ್ಲಿದ್ದ ಅಂಗಡಿಗಳಲ್ಲಿ ಭರ್ಜರಿ ವ್ಯಾಪಾರ ವಹಿವಾಟು ನಡೆದಿತ್ತು.
ಹೊರಗಡೆಯಿಂದ ಬಂದಿರುವ ಕೋಟೆಪ್ಪಂದಿರು ಚುನಾವಣೆಯ ಹಿನ್ನಲೆಯಲ್ಲಿ ಕೊಡುಗೈದಾನಿಗಳಾಗಿರುವುದು ಸ್ಥಳೀಯ ಸಜ್ಜನ ರಾಜಕಾರಣಿಗಳಿಗೆ ಮಂಕುಕವಿದಂತಾಗಿದೆ. ಚುನಾವಣೆಯ ಬರುವುದಕ್ಕಿಂದ ಮೊದಲೆ ಹೀಗೆ, ಇನ್ನು ಟಿಕೆಟ್ ಘೋಷಣೆಯಾದರೇ ಇನ್ನು ಹೇಗೆ ಎನ್ನುವ ಪ್ರಶ್ನೆ ಸ್ಥಳೀಯರನ್ನು ಕಾಡುತ್ತಿದೆ.
ಹಾವೇರಿಲೋಕಸಭಾ ಕ್ಷೇತ್ರದ ಮೇಲೆ ಕೋಟೆಪ್ಪಗಳ ಕಣ್ಣು….. ಮಂಕಾದ ಸ್ಥಳೀಯರು!
Date:
ಹಾವೇರಿಲೋಕಸಭಾ ಕ್ಷೇತ್ರದ ಮೇಲೆ ಕೋಟೆಪ್ಪಗಳ ಕಣ್ಣು….. ಮಂಕಾದ ಸ್ಥಳೀಯರು!
ಹಾವೇರಿ: ಅದ್ಯಾವ ನಿಗೂಡ ಕಾರಣಕ್ಕೆ ಸಂಸದ ಶಿವಕುಮಾರ ಉದಾಸಿ ೨೦೨೪ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ನಿರ್ಧಾರ ಪ್ರಕಟಿಸಿದರೋ ಗೊತ್ತಿಲ್ಲ. ಆವರ ನಿಧಾರ ಪ್ರಕಟವಾಗುತ್ತಿದ್ದಂತೇಯೆ ಹಾವೇರಿಲೋಕಸಭಾ ಕ್ಷೇತ್ರದ ಮೇಲೆ ಕೋಟೆಪ್ಪಂದಿರಕಣ್ಣು ಬಿದ್ದಿದೆ. ದಿನಕ್ಕೊಬ್ಬರು ಟಿಕೆಟ್ ಆಕಾಂಕ್ಷಿಗಳು ಹುಟ್ಟಿಕೊಳ್ಳುತ್ತಿದ್ದಾರೆ. ಕೆಲವುಕೋಟೆಪ್ಪಂದಿರ ಮನೆಗಳಲ್ಲಿ ನೋಟಗಳನ್ನು ಏಣಿಸುವ ಯಂತ್ರಗಳು ಸಹ ಇವೆ. ಇನ್ನು ಯರ್ಯಾರಮನೆಯಲ್ಲಿ ಏನೇನಿವೆಯೋ ತಿಳಿಯದು. ಬರುವ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಹಣದ ಮಳೆಯಂತು ಸುರಿಯುವುದು ಪಕ್ಕಾ ಆಗುತ್ತಿದೆ. ಈ ಮಧ್ಯೆ ಕ್ಷೇತ್ರದಲ್ಲಿ ಸ್ಥಳೀಯ ಟಿಕೆಟ್ ಆಕಾಂಕ್ಷಿಗಳು ಮಂಕಾದಂತೆ ಕಾಣುತ್ತಿದ್ದಾರೆ.
ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವಂತೆ ಚುನಾವಣಾ ಅಭ್ಯರ್ಥಿಗಳ ಸಂಖ್ಯೆಯು ದಿನದಿಂದ ದಿನಕ್ಕೆ ಎಲ್ಲ ಪಕ್ಷಗಳಲ್ಲೂ ಹೆಚ್ಚಾಗುತ್ತಿರುವುದು ಪಕ್ಷದ ನಾಯಕರಿಗೆ ಹೆಡ್ಡೆಕ್ ಎಂಬಂತಾಗಿದೆ. ವಿಶೇಷವಾಗಿ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಗಳು ಟಿಕೆಟ್ ಬಯಸುತ್ತಿರುವುದು ಭಾವೈಕ್ಷತೆಯ ನಾಡು, ಉತ್ತರ ಕರ್ನಾಟಕದ ಹೆಬ್ಬಾಗಿಲು, ಯಾಲಕ್ಕಿ ನಾಡು ಎಂತಲೇ ಕರೆಯಲ್ಪಡುವ ಹಾವೇರಿ ಕ್ಷೇತ್ರವು ಒಂದಾಗಿದೆ. ಈ ಕ್ಷೇತ್ರದಿಂದ ಸತತವಾಗಿ ಬಿಜೆಪಿ ಪಕ್ಷದಿಂದ ೩ ಬಾರಿ ಆಯ್ಕೆಯಾಗರುವ ಹಾಲಿ ಸಂಸದ ಶಿವಕುಮಾರ ಉದಾಸಿಯವರು ೨೦೨೪ರ ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ಎಂದು ಘೋಷಣೆ ಮಾಡಿದ್ದು ಈ ಕ್ಷೇತ್ರದಲ್ಲಿ ಆಕಾಂಕ್ಷಿಗಳ ಪಟ್ಟಿ ಬೆಳೆಯುಲು ಇನ್ನೊಂದು ಕಾರಣ.
ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಹೆಬ್ಬಾಗಿಲು ಹಾವೇರಿ ಜಿಲ್ಲೆ. ಕಲೆ, ಸಾಹಿತ್ಯ, ಸಂಗೀತ, ಸಂಸ್ಕ್ರತಿ ಮುಂತಾದ ಕ್ಷೇತ್ರಗಳಲ್ಲಿ ತನ್ನದೇ ಆದ ಪರಂಪರೆಯನ್ನು ಹೊಂದಿರುವ ಹಾವೇರಿಜಿಲ್ಲೆಯ೫ ಮತ್ತು ಗದಗ ಜಿಲ್ಲೆಯ ೩ವಿಧಾನಸಭಾ ಕ್ಷೇತ್ರಗಳನ್ನು ಸೇರಿಸಿ ಹಾವೇರಿ ಲೋಕಸಭಾ ಕ್ಷೇತ್ರವನ್ನು ರಚನೆ ಮಾಡಲಾಗಿದೆ. ಮೊದಲು ಧಾರವಾಡ ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಇವು ಒಳಪಡುತ್ತಿದ್ದವು. ೨೦೦೮ರಲ್ಲಿ ಗದಗ ಜಿಲ್ಲೆಯ ಮೂರು, ಹಾವೇರಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳನ್ನು ಸೇರಿಸಿ ಹಾವೇರಿ-ಗದಗ ಲೋಕಸಭಾ ಕ್ಷೇತ್ರ ರಚನೆ ಆಯಿತು. ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಅಂದಾಜು ಜನಸಂಖ್ಯೆ ೨೨ಲಕ್ಷ, ಇವರಲ್ಲಿ ಶೇ ೧೬ರಷ್ಟು ಎಸ್ಸಿ, ಶೇ ೯ರಷ್ಟು ಎಸ್ಟಿ ಸಮುದಾಯದವರು ಇದ್ದಾರೆ. ಅಂದಾಜು ೧೭ರಿಂದ ೧೮ಲಕ್ಷದವರೆಗೆ ಮತದಾರರು ಇದ್ದಾರೆ.
ಈ ಕ್ಷೇತ್ರವು ಕೋಮುಸೌಹಾರ್ದತೆಗೆ ಹೆಸರಾಗಿದೆ. ಆದರೆ ಇತ್ತೀಚಿನ ಮೂರ್ನಾಲ್ಕು ತಿಂಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದಾಗ ಹಳೆತಲೆಮಾರಿನ ಜನರಲ್ಲಿ ಬೇಸರ ಮಡುಗಟ್ಟಿದೆ. ಈ ಕ್ಷೇತ್ರದಲ್ಲಿ ಜಾತಿಯ ವಿಷ ಬೀಜ ಈ ಹಿಂದೆ ಎಂದು ಮುನ್ನಲೆಗೆ ಬಂದಿರಲಿಲ್ಲ, ಆದರೆ ಇತ್ತೀಚಿನ ಬೆಳವಣಿಗೆಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಜಾತಿ, ಜಾತಿಗಳ ನಡುವೆ ಕಂದಕ ಸೃಷ್ಟಿಸುವ ಕಾರ್ಯಕ್ರಮಗಳು, ಮೆರವಣಿಗೆ, ಉರುಣುಗೆಗಳು ಸದ್ದಿಲ್ಲದೇ ಮುನ್ನಲೆಗೆ ಬಂದು ನಿಂತಿವೆ. ಬೇಸರದ ಸಂಗತಿಯಂದರೆ ಈ ರೀತಿಯ ಕಂದಕ ಸೃಷ್ಟಿಸುವ ಕಾರ್ಯಕ್ರಮಗಳಿಗೆ ಕೆಲವು ಮಠ-ಮಂದಿರಗಳ ಹೆಸರು ಬಳಸಿಕೊಳ್ಳಲಾಗುತ್ತಿದೆ ಇನ್ನು ಕೇಳಬೇಕೆ, ಚುನಾವಣೆಯಲ್ಲಿ ಮತಗಳ ವ್ಯಪಾರಿಗಳು ತಮ್ಮ ಅಂಗಡಿಯನ್ನು ತೆರೆದಿಟ್ಟುಕೊಂಡು ಮತಗಳ ವ್ಯಾಪಾರ-ವಹಿವಾಟು ನಡೆಸುತ್ತಿದ್ದಾರೆ.
ಈಗಾಗಲೇ ಆ ಕಾರ್ಯಕ್ರಮ ಈ ಕಾರ್ಯಕ್ರಮ ಎಂದು ಲಕ್ಷಾಂತರಹಣವನ್ನು ಕೋಟೆಪ್ಪಂದಿರು ಖರ್ಚುಮಾಡುತ್ತಿದ್ದಾರೆ. ಇತ್ತೀಚೆಗೆ ಹಾವೇರಿನಗರದ ಹೈಸ್ಕೂಲ್ ಮೈದಾನದಲ್ಲಿ ನಡೆದ ಕಾರ್ಯಕ್ರಮವೇ ಇದಕ್ಕೆ ಸಾಕ್ಷಿಯಾಗಿದೆ. ಕಾರ್ಯಕ್ರಮಕ್ಕೆ ಭಾಗವಹಿಸುವ ಹೆಣ್ಣು ಮಕ್ಕಳಿಗೆ ರೆಷ್ಮೇಸೀರೆ, ಸ್ಟಿಲ್ ಬಿಂದಿಗೆ, ಯುವಕರಿಗೆ ಚಡ್ಡಿ, ಬನಿಯನ್, ಶಾಲುಗಳು ಮೇಲೆ ಭರ್ಜರಿ ಊಟದ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು. ಆದರೆ ಯಾಕೋ? ಏನು? ಮಾಡಿದ ಅಡುಗೆ ಮಾತ್ರ ಪೂರ್ಣಪ್ರಮಾಣದಲ್ಲಿ ಖರ್ಚಾಗದೇ ಹಾಗೆ ಉಳಿದಿತ್ತು. ಅಂದು ಹಾವೇರಿಯ ಹಳೆ ಪಿ.ಬಿ,ರಸ್ತೆಯ ಇಕ್ಕೆಳಗಳಲ್ಲಿದ್ದ ಅಂಗಡಿಗಳಲ್ಲಿ ಭರ್ಜರಿ ವ್ಯಾಪಾರ ವಹಿವಾಟು ನಡೆದಿತ್ತು.
ಹೊರಗಡೆಯಿಂದ ಬಂದಿರುವ ಕೋಟೆಪ್ಪಂದಿರು ಚುನಾವಣೆಯ ಹಿನ್ನಲೆಯಲ್ಲಿ ಕೊಡುಗೈದಾನಿಗಳಾಗಿರುವುದು ಸ್ಥಳೀಯ ಸಜ್ಜನ ರಾಜಕಾರಣಿಗಳಿಗೆ ಮಂಕುಕವಿದಂತಾಗಿದೆ. ಚುನಾವಣೆಯ ಬರುವುದಕ್ಕಿಂದ ಮೊದಲೆ ಹೀಗೆ, ಇನ್ನು ಟಿಕೆಟ್ ಘೋಷಣೆಯಾದರೇ ಇನ್ನು ಹೇಗೆ ಎನ್ನುವ ಪ್ರಶ್ನೆ ಸ್ಥಳೀಯರನ್ನು ಕಾಡುತ್ತಿದೆ.