ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಲು ಸಿದ್ದ: ಮೋಮಿನಗಾರ
ಹಾವೇರಿ: ಕಳೆದ ಮೂರುದಶಕಗಳಿಂದ ಕಾಂಗ್ರೆಸ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ ಸುದಿರ್ಘವಾಗಿ ಪಕ್ಷದಸೇವೆ ಮಾಡುತ್ತ ಬಂದಿದ್ದೇನೆ. ವಿವಿಧ ಸಂಘ -ಸಂಸ್ಥೆಗಳ ಮೂಲಕ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಕ್ಷೇತ್ರದಲ್ಲಿ ವಿವಿಧ ಹುದ್ದೆ ಪಧಾಧಿಕಾರಿಯಾಗಿ ಸಾರ್ವಜನಿಕರು ಮೆಚ್ಚುವಂತೆ ಸೇವೆ ಮಾಡಿ ಯಶಸ್ಸನ್ನು ಕಂಡಿದ್ದೇನೆ. ಬರುವ ಲೋಕಸಭಾ ಚುನಾವಣೆಯಲ್ಲಿ ಹಾವೇರಿಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಟಿಕೆಟ್ ಬಯಸಿರುವುದಾಗಿ ಅಲ್ಪಸಂಖ್ಯಾತರ ಮುಖಂಡ ಬಾಬುಸಾಬ (ಬಾಬಣ್ಣ) ಮೋಮಿನಗಾರ ತಿಳಿಸಿದ್ದಾರೆ.
ಬರುವ ಲೋಕಸಭಾ ಚುನಾವಣೆಯಲ್ಲಿ ಹಾವೇರಿ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನೀಡುವಂತೆ ಪಕ್ಷದ ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕರಿಗೆ ಮನವಿ ಮಾಡಿರುವೆ. ಕಳೆದ ೩೩ ವರ್ಷಗಳಿಂದ ಕಾಂಗ್ರೆಸ ಪಕ್ಷದಲ್ಲಿ ವಿವಿಧ ಚುನಾವಣೆಗಳಲ್ಲಿ ಕಾಂಗ್ರೆಸ ಪಕ್ಷವ ಗೆಲ್ಲಿಸಲು ಶ್ರಮಿಸಿ ಮುಂಚೂಣಿಯಲ್ಲಿ ಕೆಲಸ ಮಾಡಿರುವೆ. ಹಾವೇರಿ ನಗರಸಭೆ ಸದಸ್ಯನಾಗಿ ಎರಡುಬಾರಿ ಸೇವೆ ಮಾಡಿದ್ದೇನೆ. ನಗರಸಭೆಯ ವಿರೋಧಪಕ್ಷದ ನಾಯಕನಾಗಿ,ಈಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಮಸೂತಿ, ಚರ್ಚ ಜೀರ್ಣೋದ್ದಾರ ಸಮಿತಿಯ ಸದಸ್ಯನಾಗಿ ಸೇವೆ ಮಾಡಿರುವೆ.
ನಾಡು-ನುಡಿಗಾಗಿ ಮುಂಚೂಣಿಯಲ್ಲಿ ಹೋರಾಟ ಮಾಡಿರುವೆ. ನಾನು ಬಿ.ಎ.ಪದವೀಧರನಿದ್ದು, ಹಾವೇರಿಯ ಶಿವಾಜಿನಗರ ದನಿವಾಸಿಯಾಗಿರುವೆ, ಮೇಲಾಗಿ ಸ್ಥಳೀಯನಾಗಿರುವೆ. ಅಖಂಡ ಧಾರವಾಡ ಜಿಲ್ಲೆಯ ಯುವ ಕಾಂಗ್ರೆಸ ಜಿಲ್ಲಾ ಉಪಾಧ್ಯಕ್ಷನಾಗಿ, ಜಿಲ್ಲಾ ಪ್ರದಾನ ಕಾರ್ಯದರ್ಶಿಯಾಗಿ, ಕಾಂಗ್ರೆಸ ಅಲ್ಪಸಂಖ್ಯಾತರ ಮೋರ್ಚಾ ಜಿಲ್ಲಾ ಅಧ್ಯಕ್ಷನಾಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ರಾಜ್ಯ ಮೋರ್ಚಾ ಕಾರ್ಯದರ್ಶಿಯಾಗಿ ಪಕ್ಷದ ಸಂಘಟನೆಯಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡಿರುವೆ. ಹಾವೇರಿ ಜಿಲ್ಲಾ ಕಾಂಗ್ರೇಸ ಪಕ್ಷದ ಜಿಲ್ಲಾ ವಕ್ತಾರರಾಗಿ ಜಿಲ್ಲೆಯಲ್ಲಿ ಕಾಂಗ್ರೆಸ ಪಕ್ಷವನ್ನು ಬೆಳೆಸಲು ತನು, ಮನ, ದನ ಶ್ರಮ ಹಾಕಿ ಕೆಲಸ ಮಾಡಿ ಪಕ್ಷಕ್ಕೆ ದುಡಿದಿದ್ದೇನೆ.
ನಾನು ಮುಸ್ಲಿಂ ಅಲ್ಪಸಂಖ್ಯಾತನಾಗಿದ್ದು, ಜಿಲ್ಲೆಯಲ್ಲಿ ಮುಸ್ಲಿಂ ಜನಾಂಗದ ಶ್ರೇಯೋಭಿವೃದ್ಧಿಗೆ ಶ್ರಮಿಸಿರುವೆ. ಹಾವೇರಿ-ಗದಗ ಲೋಕಸಬಾ ಕ್ಷೇತ್ರದ ಎಲ್ಲ ವರ್ಗದ ಜನರ ಪ್ರೀತಿ, ವಿಶ್ವಾಸ ಗಳಿಸಿರುವೆ. ಮುಸ್ಲಿಂ ಸಮಾಜದ ಶಿಕ್ಷಣ ಸಂಸ್ಥೆ ಅಂಜುಮನ್ ಸಂಸ್ಥೆ ವಿವಿಧ ಧರ್ಮದ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಸಹ ಸೇವೆ ಮಾಡಿದ್ದೇನೆ.
ನನ್ನ ಸೇವೆಯನಗನು ಪಕ್ಷ ಗುರುತಿಸಿ ನನಗೆ ಒಳ್ಳೆಯ ಸ್ಥಾನ ಮಾನ ನೀಡಬಹುದೆಂದು ನೀರಿಕ್ಷೆಯಲ್ಲಿದ್ದೆ. ಆದರೆ ಇವತ್ತಿನ ರಾಜಕೀಯದಲ್ಲಿ ಇದು ಯಾವುದು ಆಗುತ್ತಿಲ್ಲ. ನಾವೇ ಕೇಳಿ ಸ್ಥಾನ-ಮಾನ ಪಡೆದುಕೊಳ್ಳುವ ಸ್ಥಿತಿ ಇರುವುದರಿಂದ ಸ್ಥಳೀಯ ಮುಸ್ಲಿಂ ಅಲ್ಪಸಂಖ್ಯಾತನಾಗಿರುವ ನನಗ ಹಾವೇರಿಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲ ಅವಕಾಶ ನೀಡುವ ಮೂಲಕ ಕಾಂಗ್ರೆಸ ಪಕ್ಷ ಜಿಲ್ಲೆಯ ಮುಸ್ಲಿಂ ಅಲ್ಪಸಂಖ್ಯಾತರಿಗೆ ಅವಕಾಶ ನೀಡುವಂತೆ ಮನವಿ ಮಾಡಿರುವುದಾಗಿ, ಪಕ್ಷವು ಟಿಕೆಟ್ ನೀಡಿದರೇ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಲು ಸಿದ್ದನಿರುವುದಾಗಿ ಬಾಬುಸಾಬ ಮೋಮಿನಗಾರ ತಿಳಿಸಿದ್ದಾರೆ.
ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಲು ಸಿದ್ದ: ಮೋಮಿನಗಾರ
Date:
ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಲು ಸಿದ್ದ: ಮೋಮಿನಗಾರ
ಹಾವೇರಿ: ಕಳೆದ ಮೂರುದಶಕಗಳಿಂದ ಕಾಂಗ್ರೆಸ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ ಸುದಿರ್ಘವಾಗಿ ಪಕ್ಷದಸೇವೆ ಮಾಡುತ್ತ ಬಂದಿದ್ದೇನೆ. ವಿವಿಧ ಸಂಘ -ಸಂಸ್ಥೆಗಳ ಮೂಲಕ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಕ್ಷೇತ್ರದಲ್ಲಿ ವಿವಿಧ ಹುದ್ದೆ ಪಧಾಧಿಕಾರಿಯಾಗಿ ಸಾರ್ವಜನಿಕರು ಮೆಚ್ಚುವಂತೆ ಸೇವೆ ಮಾಡಿ ಯಶಸ್ಸನ್ನು ಕಂಡಿದ್ದೇನೆ. ಬರುವ ಲೋಕಸಭಾ ಚುನಾವಣೆಯಲ್ಲಿ ಹಾವೇರಿಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಟಿಕೆಟ್ ಬಯಸಿರುವುದಾಗಿ ಅಲ್ಪಸಂಖ್ಯಾತರ ಮುಖಂಡ ಬಾಬುಸಾಬ (ಬಾಬಣ್ಣ) ಮೋಮಿನಗಾರ ತಿಳಿಸಿದ್ದಾರೆ.
ಬರುವ ಲೋಕಸಭಾ ಚುನಾವಣೆಯಲ್ಲಿ ಹಾವೇರಿ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ನೀಡುವಂತೆ ಪಕ್ಷದ ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕರಿಗೆ ಮನವಿ ಮಾಡಿರುವೆ. ಕಳೆದ ೩೩ ವರ್ಷಗಳಿಂದ ಕಾಂಗ್ರೆಸ ಪಕ್ಷದಲ್ಲಿ ವಿವಿಧ ಚುನಾವಣೆಗಳಲ್ಲಿ ಕಾಂಗ್ರೆಸ ಪಕ್ಷವ ಗೆಲ್ಲಿಸಲು ಶ್ರಮಿಸಿ ಮುಂಚೂಣಿಯಲ್ಲಿ ಕೆಲಸ ಮಾಡಿರುವೆ. ಹಾವೇರಿ ನಗರಸಭೆ ಸದಸ್ಯನಾಗಿ ಎರಡುಬಾರಿ ಸೇವೆ ಮಾಡಿದ್ದೇನೆ. ನಗರಸಭೆಯ ವಿರೋಧಪಕ್ಷದ ನಾಯಕನಾಗಿ,ಈಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಮಸೂತಿ, ಚರ್ಚ ಜೀರ್ಣೋದ್ದಾರ ಸಮಿತಿಯ ಸದಸ್ಯನಾಗಿ ಸೇವೆ ಮಾಡಿರುವೆ.
ನಾಡು-ನುಡಿಗಾಗಿ ಮುಂಚೂಣಿಯಲ್ಲಿ ಹೋರಾಟ ಮಾಡಿರುವೆ. ನಾನು ಬಿ.ಎ.ಪದವೀಧರನಿದ್ದು, ಹಾವೇರಿಯ ಶಿವಾಜಿನಗರ ದನಿವಾಸಿಯಾಗಿರುವೆ, ಮೇಲಾಗಿ ಸ್ಥಳೀಯನಾಗಿರುವೆ. ಅಖಂಡ ಧಾರವಾಡ ಜಿಲ್ಲೆಯ ಯುವ ಕಾಂಗ್ರೆಸ ಜಿಲ್ಲಾ ಉಪಾಧ್ಯಕ್ಷನಾಗಿ, ಜಿಲ್ಲಾ ಪ್ರದಾನ ಕಾರ್ಯದರ್ಶಿಯಾಗಿ, ಕಾಂಗ್ರೆಸ ಅಲ್ಪಸಂಖ್ಯಾತರ ಮೋರ್ಚಾ ಜಿಲ್ಲಾ ಅಧ್ಯಕ್ಷನಾಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ, ರಾಜ್ಯ ಮೋರ್ಚಾ ಕಾರ್ಯದರ್ಶಿಯಾಗಿ ಪಕ್ಷದ ಸಂಘಟನೆಯಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡಿರುವೆ. ಹಾವೇರಿ ಜಿಲ್ಲಾ ಕಾಂಗ್ರೇಸ ಪಕ್ಷದ ಜಿಲ್ಲಾ ವಕ್ತಾರರಾಗಿ ಜಿಲ್ಲೆಯಲ್ಲಿ ಕಾಂಗ್ರೆಸ ಪಕ್ಷವನ್ನು ಬೆಳೆಸಲು ತನು, ಮನ, ದನ ಶ್ರಮ ಹಾಕಿ ಕೆಲಸ ಮಾಡಿ ಪಕ್ಷಕ್ಕೆ ದುಡಿದಿದ್ದೇನೆ.
ನಾನು ಮುಸ್ಲಿಂ ಅಲ್ಪಸಂಖ್ಯಾತನಾಗಿದ್ದು, ಜಿಲ್ಲೆಯಲ್ಲಿ ಮುಸ್ಲಿಂ ಜನಾಂಗದ ಶ್ರೇಯೋಭಿವೃದ್ಧಿಗೆ ಶ್ರಮಿಸಿರುವೆ. ಹಾವೇರಿ-ಗದಗ ಲೋಕಸಬಾ ಕ್ಷೇತ್ರದ ಎಲ್ಲ ವರ್ಗದ ಜನರ ಪ್ರೀತಿ, ವಿಶ್ವಾಸ ಗಳಿಸಿರುವೆ. ಮುಸ್ಲಿಂ ಸಮಾಜದ ಶಿಕ್ಷಣ ಸಂಸ್ಥೆ ಅಂಜುಮನ್ ಸಂಸ್ಥೆ ವಿವಿಧ ಧರ್ಮದ ಸಂಸ್ಥೆಗಳಲ್ಲಿ ಪದಾಧಿಕಾರಿಯಾಗಿ ಸಹ ಸೇವೆ ಮಾಡಿದ್ದೇನೆ.
ನನ್ನ ಸೇವೆಯನಗನು ಪಕ್ಷ ಗುರುತಿಸಿ ನನಗೆ ಒಳ್ಳೆಯ ಸ್ಥಾನ ಮಾನ ನೀಡಬಹುದೆಂದು ನೀರಿಕ್ಷೆಯಲ್ಲಿದ್ದೆ. ಆದರೆ ಇವತ್ತಿನ ರಾಜಕೀಯದಲ್ಲಿ ಇದು ಯಾವುದು ಆಗುತ್ತಿಲ್ಲ. ನಾವೇ ಕೇಳಿ ಸ್ಥಾನ-ಮಾನ ಪಡೆದುಕೊಳ್ಳುವ ಸ್ಥಿತಿ ಇರುವುದರಿಂದ ಸ್ಥಳೀಯ ಮುಸ್ಲಿಂ ಅಲ್ಪಸಂಖ್ಯಾತನಾಗಿರುವ ನನಗ ಹಾವೇರಿಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲ ಅವಕಾಶ ನೀಡುವ ಮೂಲಕ ಕಾಂಗ್ರೆಸ ಪಕ್ಷ ಜಿಲ್ಲೆಯ ಮುಸ್ಲಿಂ ಅಲ್ಪಸಂಖ್ಯಾತರಿಗೆ ಅವಕಾಶ ನೀಡುವಂತೆ ಮನವಿ ಮಾಡಿರುವುದಾಗಿ, ಪಕ್ಷವು ಟಿಕೆಟ್ ನೀಡಿದರೇ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಲು ಸಿದ್ದನಿರುವುದಾಗಿ ಬಾಬುಸಾಬ ಮೋಮಿನಗಾರ ತಿಳಿಸಿದ್ದಾರೆ.