
ಫೆಬ್ರವರಿ ೮-೯ರಂದು ರಾಣೆಬೆನ್ನೂರಿನಲ್ಲಿ ೧೩ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ಸಮ್ಮೇಳನಾಧ್ಯಕ್ಷರಾಗಿ ನಿವೃತ್ತ ಶಿಕ್ಷಕರು – ಸಾಹಿತಿ ಜೆ.ಎಂ. ಮಠದ ಆಯ್ಕೆ
ಹಾವೇರಿ: ಫೆಬ್ರವರಿ ೮ ಮತ್ತು ೯ರಂದು ರಾಣೆಬೆನ್ನೂರಿನಲ್ಲಿ ಜರುಗುವ ೧೩ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ನಿವೃತ್ತ ಶಿಕ್ಷಕರು ಹಾಗೂ ಸಾಹಿತಿ ಜೆ.ಎಂ. ಮಠದ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗಯ್ಯ ಹಿರೇಮಠ ತಿಳಿಸಿದರು.
ಸ್ಥಳೀಯ ದಾನೇಶ್ವರಿ ನಗರದಲ್ಲಿನ ಪದವಿ ಪೂರ್ವ ಕಾಲೇಜುಗಳ ನೌಕರರ ಭವನದಲ್ಲಿ ಜರುಗಿದ ಕಸಾಪ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಹಾವೇರಿ ಜಿಲ್ಲಾ ೧೩ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ರಾಣೆಬೆನ್ನೂರಿನಲ್ಲಿ ಆಯೋಜಿಸಲು ತೀರ್ಮಾನಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಫೆಬ್ರವರಿ ೮ ಮತ್ತು ೯ರಂದು ಆಯೋಜಿಸಲಾಗುವುದು. ಸಮ್ಮೇಳನದ ಅಧ್ಯಕ್ಷರನ್ನಾಗಿ ಜೆ.ಎಂ.ಮಠದ ಅವರನ್ನು ಸರ್ವಾನುಮತದಿಂದ ನೇಮಕ ಮಾಡಲಾಗಿದೆ. ಮಠದ ಅವರು ಕನ್ನಡ ಪರಿಚಾರಕರು. ಶಾಲಾ ಕಾಲೇಜುಗಳಿಗೆ ತೆರಳಿ ಮಕ್ಕಳಿಗೆ ಕನ್ನಡದ ಅರಿವು ಮೂಡಿಸಿದ್ದಾರೆ. ಮಾರ್ಚ್ ತಿಂಗಳ ಕೊನೆಯ ವಾರದೊಳಗೆ ಹಾವೇರಿ ಜಿಲ್ಲಾ ೨ನೇ ಮಹಿಳಾ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗುವುದು ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ವೈ.ಬಿ.ಆಲದಕಟ್ಟಿ, ಸಿ.ಎನ್. ಪಾಟೀಲ, ಬಿ.ಎಂ.ಜಗಾಪುರ,ಎನ್.ಸಿ.ಕಠಾರೆ, ಮಾರುತಿ ತಳವಾರ, ಪ್ರಭಣ್ಣ ಅರಗೋಳ, ಎನ್.ಬಿ. ಕಾಳೆ, ಮಲ್ಲಿಕಾರ್ಜುನ ಹೇರಕಾರ, ಶಂಕರ ಸುತಾರ, ಎಸ್.ಎಲ್.ಕಾಡದೇವರಮಠ, ಈರಣ್ಣ ಬೆಳವಡಿ, ಪೃಥ್ವಿರಾಜ್ ಬೆಟಗೇರಿ, ಎ.ಬಿ.ರತ್ನಮ್ಮ, ಪ್ರಭು ಹಿಟ್ನಳ್ಳಿ ಉಪಸ್ಥಿತರಿದ್ದರು.
ಬಿ.ಪಿ.ಶಿಡೇನೂರ ಸ್ವಾಗತಿಸಿದರು. ವೀರೇಶ ಜಂಬಗಿ ವಂದಿಸಿದರು.

