ಹಾವೇರಿ: ಸಾಂತ್ವನ ಮಹಿಳಾ ಕೇಂದ್ರದ ಅನುದಾನ ಬಿಡುಗಡೆಗೆ ಲಂಚ, ಸಿಡಿಪಿಓ-ಡಾಟಾ ಎಂಟ್ರಿಗ ಲೋಕಾ ಬಲೆಗೆ
ಹಾವೇರಿ: ಮಹಿಳಾ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರದ ಅನದಾನ ಬಿಡುಗಡೆಮಾಡಿರುವುದಕ್ಕೆ ೧೦ಸಾವಿರರೂ ಲಂಚದ ಹಣವನ್ನುಪಡೆದು ಕೊಳ್ಳುವಾಗ ಸಿಡಿಪಿಓ ಹಾಗೂ ಡಾಟಾ ಎಂಟ್ರಿ ಆಪರೇಟ್ ಲೋಕಾಯುಕ್ತರ ಬಲೆಗೆ ಬಿದ್ದಿರುವ ಘಟನೆ ಶನಿವಾರ ಜಿಲ್ಲೆಯ ಹಿರೇಕೆರೂರು ಪಟ್ಟಣದಲ್ಲಿ ನಡೆದಿದೆ.
ಹಾವೇರಿಯ ಸಂತೋಷ ಸು ಹಿರೇಕೆರೂರಲ್ಲಿ ಸ್ಫೂರ್ತಿ ಶಿಕ್ಷಣ & ಗ್ರಾಮೀಣ ಅಭಿವೃದ್ದಿ ಸಂಸ್ಥೆಯಿಂದ ಮಹಿಳಾ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರವನ್ನು ನಡೆಸುತ್ತಿದ್ದು, ಸದರಿ ಕೇಂದ್ರಕ್ಕೆ ಸರ್ಕಾರದಿಂದ ಒಂದು ಆರ್ಥಿಕ ವರ್ಷದಲ್ಲಿ ಒಟ್ಟು ೪ ಕಂತುಗಳ ಮೂಲಕ ಅನುದಾನ ಬರುತ್ತಿದ್ದು, ಸನ್ ೨೦೨೩-೨೪ ನೇ ಸಾಲಿನ ೨ನೇ ಕಂತಿನ ಅನುದಾನವನ್ನು ಬಿಡುಗಡೆಗೊಳಿಸಿದ್ದಕ್ಕೆ ಹಿರೇಕೆರೂರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಜಯಶ್ರೀ ಪಾಟೀಲ್ ಅವರು ೧೦% ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.
ಫೆ.೧೭-೨೦೨೪ ರಂದು ಹಿರೇಕೆರೂರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯ ಡಾಟಾ ಎಂಟ್ರಿ ಆಪರೇಟರ್ ರಾಜು ಪೂಜಾರ ಮೂಲಕ ರೂ ೧೦,೦೦೦/- ಲಂಚದ ಹಣವನ್ನು ಪಡೆದುಕೊಳ್ಳುವಾಗ ಕರ್ನಾಟಕ ಲೋಕಾಯುಕ್ತ ಡಿವೈಎಸ್ಪಿ ಬಿ.ಪಿ ಚಂದ್ರಶೇಖರ ನೇತೃತ್ವದಲ್ಲಿ
ನ ತಂಡವು ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿ ಈ ಇಬ್ಬರನ್ನು ಟ್ರ್ಯಾಪ್ ಮಾಡಿದ್ದು, ಹಿರೇಕೆರೂರ ನಗರದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ.
ದಾಳಿಯಲ್ಲಿ ತನಿಖಾಧಿಕಾರಿಗಳಾದ ಪೊಲೀಸ್ ನಿರೀಕ್ಷಕರುಗಳಾದಮುಸ್ತಾಕ್ ಅಹ್ಮದ್ ಶೇಖ, ಆಂಜನೇಯ ಎನ್. ಎಚ್, ಮಂಜುನಾಥ ಪಂಡಿತ್ ಪಿ ಎನ್, ಹಾಗೂ ಸಿಬ್ಬಂದಿ ಎಮ್.ಕೆ. ನದಾಫ, ಬಿ.ಎಮ್. ಕರ್ಜಗಿ, ಎಮ್.ಕೆ. ಲಕ್ಷೇಶ್ವರ, ಆನಂದ ಶಳಕಲ್ಲ, ಎಸ್.ಎನ್ ಕಡಕೋಳ, ಬಿ.ಎಸ್. ಸಂಕಣ್ಣನವರ, ಎನ್.ಬಿ. ಪಾಟೀಲ್, ಎ.ಜಿ. ಶೆಟ್ಟರ್, ಎಮ್.ಎಸ್. ಕೊಂಬಳಿ, ರಮೇಶ ಗೆಜ್ಜೆಹಳ್ಳಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು. ಸದರಿ ಆರೋಪಿತರನ್ನು , ತನಿಖೆ ಮುಂದುವರೆದಿದೆ.