ತೋಂಟದಾರ್ಯ ಜಗದ್ಗುರು ಲಿಂ.ಸಿದ್ದಲಿಂಗಶ್ರೀಗಳ ಬಗ್ಗೆ ವಿರೋಧ: ಮಾಳಗಿ ಖಂಡನೆ
ಹಾವೇರಿ : ತೋಂಟದಾರ್ಯ ಜಗದ್ಗುರು ಲಿಂ. ಸಿದ್ದಲಿಂಗ ಮಹಾಸ್ವಾಮಿಗಳವರ ಕಾರ್ಯವೈಖರಿಯನ್ನು ಮನಗಂಡು ಅಟಲ ಬಿಹಾರಿ ವಾಜಪೇಯಿ ಅವರು ಪ್ರಧಾನ ಮಂತ್ರಿ ಇದ್ದ ಸಂದರ್ಭದಲ್ಲಿ ಪೂಜ್ಯರಿಗೆ ರಾಷ್ಟ್ರೀಯ ಕೋಮು ಸೌಹಾರ್ದತೆಯ ಪ್ರಶಸ್ತಿ ನೀಡಿ ಗೌರವಿಸಿದ್ದರು. ನಾಡನ್ನು ಸರ್ವಜನಾಂಗದ ತೋಟವನ್ನಾಗಿಸು ನಿಟ್ಟಿಲ್ಲಿ ಅನೇಕ ಕಾರ್ಯಗಳನ್ನು ಕೈಗೊಂಡಿದ್ದರು. ಅಂತ ಪೂಜ್ಯರ ಬಗ್ಗೆ ಕೆಲವೊಂದು ಜನ ವಿರೋಧ ಮಾಡುತ್ತಿರುವುದನ್ನು ಲಿಡ್ಕರ್ ನಿಗಮದ ಮಾಜಿ ಉಪಾಧ್ಯಕ್ಷ ಡಿ.ಎಸ್. ಮಾಳಗಿ ಖಂಡಿಸಿದರು.
ಬುಧವಾರ ನಗರದ ಪ್ರವಾಸಿ ಮಂದಿರದಲ್ಲಿ ಶ್ರೀ ಶಿವಶರಣ ಮಾದಾರ ಚನ್ನಯ್ಯ ವೇದಿಕೆ ವತಿಯಿಂದ ಆಯೋಜಿಸಿದ್ದ ತೋಂಟದಾರ್ಯ ಜಗದ್ಗುರು ಲಿಂ. ಸಿದ್ದಲಿಂಗ ಮಹಾಸ್ವಾಮಿಗಳವರ ೭೫ನೇ ಹುಟ್ಟುಹಬ್ಬವನ್ನು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
ಲಿಂ. ಸಿದ್ದಲಿಂಗ ಮಹಾಸ್ವಾಮಿಗಳವರು ಡಂಬಳ ಗ್ರಾಮದಲ್ಲಿ ಮಾದಿಗರಿಗೆ ಮಠದ ವತಿಯಿಂದ ಭೂಮಿ ನೀಡಿ, ಬೋರವೆಲ್ಲ ಹಾಕಿಸಿ, ಮನೆ ಕಟ್ಟಿಕೊಟ್ಟಿಸಿಕೊಟ್ಟಿದ್ದರು. ಸರ್ವಧರ್ಮ ಸಮನ್ವಯತೆ ವಿಶ್ವಗುರು ಬಸವಣ್ಣನವರ ತತ್ವ ಸಿದ್ದಾಂತದ ಪರಿಪಾಲಕರಾಗಿ ನೆಲ, ಜಲ ಭಾಷೆಯ ಬಗ್ಗೆ ದೃಢಸಂಕಲ್ಪ ಹೊಂದಿದ್ದರು, ಕನ್ನಡದ ಜಗದ್ಗುರು ಎಂದು ಪ್ರಖ್ಯಾತರಾಗಿದ್ದರು ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾದಿಗರ ಸಮಾಜದ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಉಡಚಪ್ಪ ಮಾಳಗಿ, ಮುಖಂಡರಾದ ವಿಜಯಕುಮಾರ ಹುಲಿಕಂತಿಮಠ, ಶೆಟ್ಟಿ ವಿಭೂತಿ, ಜಗದೀಶ ಹರಿಜನ, ಹನಮಂತಪ್ಪ ನಾಗಮ್ಮನವರ, ಮಂಜುನಾಥ ಮಾಳಗಿ, ಜಗದೀಶ ಕರಬಸಣ್ಣನವರ, ಶಿವಾನಂದ ಕರಬಸಣ್ಣನವರ, ಹನುಮೇಶ ಹರಿಜನ, ನಿರಂಜನ ಹಾಗೂ ಇತರರು ಇದ್ದರು.
ತೋಂಟದಾರ್ಯ ಜಗದ್ಗುರು ಲಿಂ.ಸಿದ್ದಲಿಂಗಶ್ರೀಗಳ ಬಗ್ಗೆ ವಿರೋಧ: ಮಾಳಗಿ ಖಂಡನೆ
Date:
ತೋಂಟದಾರ್ಯ ಜಗದ್ಗುರು ಲಿಂ.ಸಿದ್ದಲಿಂಗಶ್ರೀಗಳ ಬಗ್ಗೆ ವಿರೋಧ: ಮಾಳಗಿ ಖಂಡನೆ
ಹಾವೇರಿ : ತೋಂಟದಾರ್ಯ ಜಗದ್ಗುರು ಲಿಂ. ಸಿದ್ದಲಿಂಗ ಮಹಾಸ್ವಾಮಿಗಳವರ ಕಾರ್ಯವೈಖರಿಯನ್ನು ಮನಗಂಡು ಅಟಲ ಬಿಹಾರಿ ವಾಜಪೇಯಿ ಅವರು ಪ್ರಧಾನ ಮಂತ್ರಿ ಇದ್ದ ಸಂದರ್ಭದಲ್ಲಿ ಪೂಜ್ಯರಿಗೆ ರಾಷ್ಟ್ರೀಯ ಕೋಮು ಸೌಹಾರ್ದತೆಯ ಪ್ರಶಸ್ತಿ ನೀಡಿ ಗೌರವಿಸಿದ್ದರು. ನಾಡನ್ನು ಸರ್ವಜನಾಂಗದ ತೋಟವನ್ನಾಗಿಸು ನಿಟ್ಟಿಲ್ಲಿ ಅನೇಕ ಕಾರ್ಯಗಳನ್ನು ಕೈಗೊಂಡಿದ್ದರು. ಅಂತ ಪೂಜ್ಯರ ಬಗ್ಗೆ ಕೆಲವೊಂದು ಜನ ವಿರೋಧ ಮಾಡುತ್ತಿರುವುದನ್ನು ಲಿಡ್ಕರ್ ನಿಗಮದ ಮಾಜಿ ಉಪಾಧ್ಯಕ್ಷ ಡಿ.ಎಸ್. ಮಾಳಗಿ ಖಂಡಿಸಿದರು.
ಬುಧವಾರ ನಗರದ ಪ್ರವಾಸಿ ಮಂದಿರದಲ್ಲಿ ಶ್ರೀ ಶಿವಶರಣ ಮಾದಾರ ಚನ್ನಯ್ಯ ವೇದಿಕೆ ವತಿಯಿಂದ ಆಯೋಜಿಸಿದ್ದ ತೋಂಟದಾರ್ಯ ಜಗದ್ಗುರು ಲಿಂ. ಸಿದ್ದಲಿಂಗ ಮಹಾಸ್ವಾಮಿಗಳವರ ೭೫ನೇ ಹುಟ್ಟುಹಬ್ಬವನ್ನು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
ಲಿಂ. ಸಿದ್ದಲಿಂಗ ಮಹಾಸ್ವಾಮಿಗಳವರು ಡಂಬಳ ಗ್ರಾಮದಲ್ಲಿ ಮಾದಿಗರಿಗೆ ಮಠದ ವತಿಯಿಂದ ಭೂಮಿ ನೀಡಿ, ಬೋರವೆಲ್ಲ ಹಾಕಿಸಿ, ಮನೆ ಕಟ್ಟಿಕೊಟ್ಟಿಸಿಕೊಟ್ಟಿದ್ದರು. ಸರ್ವಧರ್ಮ ಸಮನ್ವಯತೆ ವಿಶ್ವಗುರು ಬಸವಣ್ಣನವರ ತತ್ವ ಸಿದ್ದಾಂತದ ಪರಿಪಾಲಕರಾಗಿ ನೆಲ, ಜಲ ಭಾಷೆಯ ಬಗ್ಗೆ ದೃಢಸಂಕಲ್ಪ ಹೊಂದಿದ್ದರು, ಕನ್ನಡದ ಜಗದ್ಗುರು ಎಂದು ಪ್ರಖ್ಯಾತರಾಗಿದ್ದರು ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾದಿಗರ ಸಮಾಜದ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಉಡಚಪ್ಪ ಮಾಳಗಿ, ಮುಖಂಡರಾದ ವಿಜಯಕುಮಾರ ಹುಲಿಕಂತಿಮಠ, ಶೆಟ್ಟಿ ವಿಭೂತಿ, ಜಗದೀಶ ಹರಿಜನ, ಹನಮಂತಪ್ಪ ನಾಗಮ್ಮನವರ, ಮಂಜುನಾಥ ಮಾಳಗಿ, ಜಗದೀಶ ಕರಬಸಣ್ಣನವರ, ಶಿವಾನಂದ ಕರಬಸಣ್ಣನವರ, ಹನುಮೇಶ ಹರಿಜನ, ನಿರಂಜನ ಹಾಗೂ ಇತರರು ಇದ್ದರು.