ಹಾವೇರಿಯ ರಾಕ್‌ಸ್ಟಾರ್‌ಕೊಬ್ಬರಿ ಹೋರಿ ಇನ್ನಿಲ್ಲ, ಸಹಸ್ರಾರು ಅಭಿಮಾನಿಗಳ ಅಂತಿಮ ನಮನ

Date:

 

ಹಾವೇರಿಯ ರಾಕ್‌ಸ್ಟಾರ್‌ಕೊಬ್ಬರಿ ಹೋರಿ ಇನ್ನಿಲ್ಲ, ಸಹಸ್ರಾರು ಅಭಿಮಾನಿಗಳ ಅಂತಿಮ ನಮನ
ಹಾವೇರಿ: ಸಹಸ್ರಾರು ಅಭಿಮಾನಿಗಳನ್ನು ಹೊಂದಿದ್ದ ಹಾವೇರಿಯ ನಾಗೇಂದ್ರನಮಟ್ಟಿಯ ಚಿಕ್ಕಪ್ಪ ಅಜ್ಜಪ್ಪ ದೊಡ್ಡತಳವಾರ ಅವರ ನೆಚ್ಚಿನ ಕೊಬ್ಬರಿ ಹೋರಿ ರಾಕ್‌ಸ್ಟಾರ್-೧೦೫ ಕೊಬ್ಬರಿ ಹೋರಿ ಏ. ೬ ರಂದು ಶನಿವಾರ ರಾತ್ರಿ ೯-೩೦ರ ಸುಮಾರಿಗೆ ಸಾವನ್ನಪ್ಪಿದ ಘಟನೆ ಹಾವೇರಿಯಲ್ಲಿ ನಡೆದಿದೆ. ಭಾನುವಾರ ನಾಗೇಂದ್ರಮನಟ್ಟಿಯ ಶಿಬಾರದ ಹತ್ತಿರ ಅಗಲಿದ ಹೋರಿಯ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನಂತರ ಟ್ಯಾಕ್ಟರ್‌ನಲ್ಲಿ ರಾಕ್‌ಸ್ಟಾರ್‌ಕೊಬ್ಬರಿ ಹೋರಿ ಪಾರ್ಥಿವ ಶರೀರದ ಮೆರವಣಿಗೆಯನ್ನು ನಡೆಸಲಾಯಿತು.
ಸಾವಿರಾರು ಅಭಿಮಾನಿಗಳ ಶೋಕ ಸಾಗರದ ಮಧ್ಯೆ ನಾಗೇಂದ್ರಮನಟ್ಟಿಯಿಂದ ಆರಂಭವಾದ ಮೆರವಣಿಗೆಯ ಎಪಿಎಂಸಿಯನ್ನು ಬಳಿಸಿಹುಕ್ಕೇರಿಮಠz ಮುಂಭಾಗದಲ್ಲಿನ ಎಂಜಿ ರಸ್ತೆಯ ಹಾಯ್ದು, ಗಾಂಧಿ ವೃತ್ತ, ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸಂಚರಿಸಿ ಹಳೆಊರು, ಹೊಸಮನಿ ರಸ್ತೆ, ಸುಭಾಸ ಸರ್ಕಲ್‌ಮಾರ್ಗದಿಂದ ರೈಲ್ವೇ ಸ್ಟೇಶನ್ ಮಾರ್ಗದಿಂದ ಶಿವಬಸವನಗರದಲ್ಲಿ ಹಾಯ್ದು ಮರಳಿ ನಾಗೇಂದ್ರಮನಟ್ಟಿಗೆ ತರಲಾಯಿತು. ಸಂಜೆ ಶಿಬಾರದ ಬಳಿ ಸಹಸ್ರರು ಅಭಿಮಾನಿಗಳ ಕಣ್ಣೀರಧಾರೆಯ ನಡುವೆ ರಾಕ್‌ಸ್ಟಾರ್‌ಕೊಬ್ಬರಿ ಹೋರಿಯ ಅಂತ್ಯ ಕ್ರಿಯೆ ನೆರವೇರಿತು.
ಚಿಕ್ಕಪ್ಪ ದೊಡ್ಡತಳವಾರ ಅವರ ಮನೆಗೆ ೨೦೧೧ರಲ್ಲಿ ಬಂದಿದ್ದ ರಾಕ್‌ಸ್ಟಾರ್‌ಕೊಬ್ಬರಿ ಹೋರಿ ಕಳೆದ ೧೪ ವರ್ಷಗಳಿಂದ ಬೇಸಾಯದ ಜೊತೆಗೆ ಕೊಬ್ಬರಿ ಹೋರಿ ಓಟದ ಸ್ಪರ್ಧೆ, ಗಾಡಾ ಸ್ಪರ್ಧೆಯಲ್ಲಿ ಭಾಗವಹಿಸುತ್ತಾ ಹಲವಾರು ಬಹುಮಾನಗಳನ್ನು ಮುಡಿಗೇರಿಸಿಕೊಳ್ಳುತ್ತಾ ಬಂದಿತ್ತು. ೨೦ವರ್ಷಗಳ ಕಾಲ ಬದುಕಿದ್ದ ರಾಕ್‌ಸ್ಟಾರ್ ಕಳೆದ ಎರಡು ತಿಂಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿತ್ತು. ಕೆಲ ದಿನಗಳಿಂದ ನೆಲಕಟ್ಟಿದ ಹೋರಿಯನ್ನು ಜೋಪಾನವಾಗಿ ಕಾಪಾಡುತ್ತಾ ಬಂದಿದ್ದ ಹೋರಿಯ ಮಾಲಕ ಚಿಕ್ಕಪ್ಪ ಹಾಗೂ ಅವರ ಸಹೋದರರು, ಮನೆಯ ಮಂದಿ ನಿತ್ಯ ಹೋರಿಯ ಕಾಳಜಿ ಮಾಡುತ್ತಾ , ಉಪಚರಿಸುತ್ತಾ ಬಂದಿದ್ದರು.
ನೂರಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಬಹುಮಾನಗಳನ್ನು ಗೆಲ್ಲುವು ಮೂಲಕ ತನ್ನ ಸೌಮ್ಯ ಸ್ವಭಾವದಿಂದ ಸಹಸ್ರಾರು ಅಭಿಮಾನಿಗಳನ್ನು ರಾಕ್‌ಸ್ಟಾರ್‌ಕೊಬ್ಬರಿ ಹೋರಿ ಹೊಂದಿತ್ತು. ಅಭಿಮಾನಿಗಳ ಪಾಲಿನ ಮೆಚ್ಚಿನ ಕೊಬ್ಬರಿ ಹೋರಿಯಾಗಿದ್ದ ರಾಕ್‌ಸ್ಟಾರ್ ಹೋರಿಯ ಓಟದ ಖ್ಯಾತಿ ಪರರಾಜ್ಯಗಳಿಗೂ ಹಬ್ಬಿತ್ತು. ತಮಿಳುನಾಡು, ಮಹಾರಾಷ್ಟ್ರದಲ್ಲಿ ಹಾಗೂ ರಾಜ್ಯದ ವಿವಿಧ ಕಡೆಗಳಲ್ಲಿ ನಡೆಯುವ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ರಾಕ್ ಸ್ಟಾರ್ ಭಾಗವಹಿಸಿದ್ದು ವಿಶೇಷ. ರಾಕ್‌ಸ್ಟಾರ್ ಹೋರಿ ಸಿನೇಮಾ ದಲ್ಲಿಯು ಸಹ ಪಾತ್ರವನ್ನು ನಿರ್ವಹಿಸಿತ್ತು. ನಟ ವಿಜಯರಾಘವೇಂದ್ರ ಅಭಿನಯದ ಜಗಮೆಚ್ಚಿದಮಗ ಚಲನಚಿತ್ರದಲ್ಲಿ ಅಭಿನಯಿಸಿತ್ತು.
ರಾಕ್‌ಸ್ಟಾರ್ ಹೋರಿಯಲ್ಲಿ ದೈವತ್ವವನ್ನು ಕಂಡಿದ್ದರು: ರಾಕ್‌ಸ್ಟಾರ್ ಹೋರಿಯಲ್ಲಿ ಅಖಾಡದಲ್ಲಿ ಅಬ್ಬರಿಸುತ್ತಿತ್ತು, ಅದರ ಅರ್ಭಟ ನೋಡಿ ಅನೇಕರು ಅದರ ಹತ್ತಿರ ಹೋಗಲು ಭಯ ಪಡುತ್ತಿದ್ದರು. ಆದರೆ ಅಖಾಡದಿಂದ ಹೊರಕ್ಕೆ ಬಂದಮೇಲೆ ರಾಕ್‌ಸ್ಟಾರ್ ಚಿಕ್ಕಮಕ್ಕಳ ಹಾಗೆ ಇರುತ್ತಿತ್ತು. ಯಾರೆ ಕರೆದರು ಹೋಗಿ ಅವರ ಬಳಿ ನಿಲ್ಲುತ್ತಿತ್ತು. ಹೋರಿ ಸ್ಪರ್ಧೆಗೆ ಹೊರಟಾಗ ಸಾವಿರಾರು ಕೊಬ್ಬರಿ ಹೋರಿ ಪ್ರೇಮಿಗಳು ಅದನ್ನು ಹಿಂಬಾಲಿಸುತ್ತಿದ್ದರು. ಹೋರಿಸ್ಪರ್ಧೆಗೆ ತೆರಳಿದ ಸಂದರ್ಭದಲ್ಲಿ ಆಯಾ ಭಾಗದ ಗ್ರಾಮೀಣ ಹಾಗೂ ಶಹರ ಪ್ರದೇಶಗಳಲ್ಲಿ ಮಹಿಳೆಯರು, ಮಕ್ಕಳು, ಎಲ್ಲಾ ವಯೋಮಾನದವರು ಈ ಹೋರಿಯಲ್ಲಿ ದೈವತ್ವವನ್ನು ಕಂಡು ಪೂಜಿಸುತ್ತಿದ್ದರು.
ಹಾವೇರಿ, ಧಾರವಾಡ, ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ರಾಕ್‌ಸ್ಟಾರ್‌ಕೊಬ್ಬರಿ ಹೋರಿ ಅಭಿಮಾನಿಗಳಿದ್ದು, ಅವರು ತಮ್ಮ ಮನೆಗಳಲ್ಲಿ, ಸಾರ್ವಜನಿಕ ಪ್ರದೇಶಗಳಲ್ಲಿ ರಾಕ್‌ಸ್ಟಾರ್‌ಕೊಬ್ಬರಿ ಹೋರಿಯ ಭಾವಚಿತ್ರಗಳನ್ನು ಚಿತ್ರಿಸುವ ಮೂಲಕ ಈ ಹೋರಿಯ ಮೇಲೆ ಭಾವನಾತ್ಮಕ ಪ್ರೀತಿ ಹೊಂದಿದ್ದರು.
ಗಣ್ಯರಿಂದ ಅಂತಿಮ ನಮನ: ಹಾವೇರಿಯ ರಾಕ್‌ಸ್ಟಾರ್‌ಕೊಬ್ಬರಿ ಹೋರಿ ಸಾವನ್ನಪ್ಪಿದ ಸುದ್ದಿ ತಿಳಿದು ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಲಮಾಣಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ ಬೊಮ್ಮಾಯಿ, ಆನಂದ ಗಡ್ಡದ್ದೇವರಮಠ, ಸಂಜೀವಕುಮಾರ ನೀರಲಗಿ, ಗವಿಸಿದ್ದಪ್ಪ ದ್ಯಾಮಣ್ಣನವರ, ವೆಂಕಟೇಶ ನಾರಾಯಣಿ ಸೇರಿದಂತೆ ಅನೇಕರು ನಾಗೇಂದ್ರಮನಟ್ಟಿಗೆ ಆಗಮಿಸಿ ರಾಕ್‌ಸ್ಟಾರ್‌ಕೊಬ್ಬರಿ ಹೋರಿಗೆ ಅಂತಿಮ ನಮನ ಸಲ್ಲಿಸಿದರು.

ರಾಕ್ ಸ್ಟಾರ್ ಹೋರಿ ನಿಧನಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಬೇಸರ
ಬೆಂಗಳೂರು: ರಾಜ್ಯದಲ್ಲಿಯೇ ಅತಿ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿದ್ದ ನಮ್ಮ ಹಾವೇರಿಯ ಹೆಮ್ಮೆಯ ರಾಕ್ ಸ್ಟಾರ್ ಹೋರಿ ಇನ್ನಿಲ್ಲ ಎಂಬ ಸುದ್ದಿ ಕೇಳಿ ಮನಸ್ಸಿಗೆ ನೋವಾಯಿತು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಹೋರಿ ಬೆದರಿಸುವ ಸ್ಪರ್ಧೆ ಎಲ್ಲಿಯೇ ಇದ್ದರೂ ಅಲ್ಲಿ ರಾಕ್ ಸ್ಟಾರ್ ಇದ್ದಾನೆಂದರೆ ಉಳಿದವರೆಲ್ಲರಿಗೂ ಸೋಲು ಖಚಿತ ಎನ್ನುವಷ್ಟರ ಮಟ್ಟಿಗೆ ರಾಕ್ ಸ್ಟಾರ್ ಹೋರಿ ಜನಪ್ರಿಯವಾಗಿತ್ತು. ಅಗಲಿದ ಅಭಿಮಾನಿಗಳ ನೆಚ್ಚಿನ ರಾಕ್ ಸ್ಟಾರ್ ಗೆ ಅಂತಿಮ ನಮನಗಳು. ಮುಂದಿನ ಜನ್ಮದಲ್ಲಿ ಹೋರಿ ಹಬ್ಬದ ತವರೂರಾಗಿರುವ ಹಾವೇರಿಯಲ್ಲಿಯೇ ಮತ್ತೊಮ್ಮೆ ಹುಟ್ಟಿ ಬಾ ಎಂದು ಪ್ರಾರ್ಥಿಸಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

 

ಹಾವೇರಿಯ ರಾಕ್‌ಸ್ಟಾರ್‌ಕೊಬ್ಬರಿ ಹೋರಿ ಇನ್ನಿಲ್ಲ, ಸಹಸ್ರಾರು ಅಭಿಮಾನಿಗಳ ಅಂತಿಮ ನಮನ
ಹಾವೇರಿ: ಸಹಸ್ರಾರು ಅಭಿಮಾನಿಗಳನ್ನು ಹೊಂದಿದ್ದ ಹಾವೇರಿಯ ನಾಗೇಂದ್ರನಮಟ್ಟಿಯ ಚಿಕ್ಕಪ್ಪ ಅಜ್ಜಪ್ಪ ದೊಡ್ಡತಳವಾರ ಅವರ ನೆಚ್ಚಿನ ಕೊಬ್ಬರಿ ಹೋರಿ ರಾಕ್‌ಸ್ಟಾರ್-೧೦೫ ಕೊಬ್ಬರಿ ಹೋರಿ ಏ. ೬ ರಂದು ಶನಿವಾರ ರಾತ್ರಿ ೯-೩೦ರ ಸುಮಾರಿಗೆ ಸಾವನ್ನಪ್ಪಿದ ಘಟನೆ ಹಾವೇರಿಯಲ್ಲಿ ನಡೆದಿದೆ. ಭಾನುವಾರ ನಾಗೇಂದ್ರಮನಟ್ಟಿಯ ಶಿಬಾರದ ಹತ್ತಿರ ಅಗಲಿದ ಹೋರಿಯ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನಂತರ ಟ್ಯಾಕ್ಟರ್‌ನಲ್ಲಿ ರಾಕ್‌ಸ್ಟಾರ್‌ಕೊಬ್ಬರಿ ಹೋರಿ ಪಾರ್ಥಿವ ಶರೀರದ ಮೆರವಣಿಗೆಯನ್ನು ನಡೆಸಲಾಯಿತು.
ಸಾವಿರಾರು ಅಭಿಮಾನಿಗಳ ಶೋಕ ಸಾಗರದ ಮಧ್ಯೆ ನಾಗೇಂದ್ರಮನಟ್ಟಿಯಿಂದ ಆರಂಭವಾದ ಮೆರವಣಿಗೆಯ ಎಪಿಎಂಸಿಯನ್ನು ಬಳಿಸಿಹುಕ್ಕೇರಿಮಠz ಮುಂಭಾಗದಲ್ಲಿನ ಎಂಜಿ ರಸ್ತೆಯ ಹಾಯ್ದು, ಗಾಂಧಿ ವೃತ್ತ, ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಸಂಚರಿಸಿ ಹಳೆಊರು, ಹೊಸಮನಿ ರಸ್ತೆ, ಸುಭಾಸ ಸರ್ಕಲ್‌ಮಾರ್ಗದಿಂದ ರೈಲ್ವೇ ಸ್ಟೇಶನ್ ಮಾರ್ಗದಿಂದ ಶಿವಬಸವನಗರದಲ್ಲಿ ಹಾಯ್ದು ಮರಳಿ ನಾಗೇಂದ್ರಮನಟ್ಟಿಗೆ ತರಲಾಯಿತು. ಸಂಜೆ ಶಿಬಾರದ ಬಳಿ ಸಹಸ್ರರು ಅಭಿಮಾನಿಗಳ ಕಣ್ಣೀರಧಾರೆಯ ನಡುವೆ ರಾಕ್‌ಸ್ಟಾರ್‌ಕೊಬ್ಬರಿ ಹೋರಿಯ ಅಂತ್ಯ ಕ್ರಿಯೆ ನೆರವೇರಿತು.
ಚಿಕ್ಕಪ್ಪ ದೊಡ್ಡತಳವಾರ ಅವರ ಮನೆಗೆ ೨೦೧೧ರಲ್ಲಿ ಬಂದಿದ್ದ ರಾಕ್‌ಸ್ಟಾರ್‌ಕೊಬ್ಬರಿ ಹೋರಿ ಕಳೆದ ೧೪ ವರ್ಷಗಳಿಂದ ಬೇಸಾಯದ ಜೊತೆಗೆ ಕೊಬ್ಬರಿ ಹೋರಿ ಓಟದ ಸ್ಪರ್ಧೆ, ಗಾಡಾ ಸ್ಪರ್ಧೆಯಲ್ಲಿ ಭಾಗವಹಿಸುತ್ತಾ ಹಲವಾರು ಬಹುಮಾನಗಳನ್ನು ಮುಡಿಗೇರಿಸಿಕೊಳ್ಳುತ್ತಾ ಬಂದಿತ್ತು. ೨೦ವರ್ಷಗಳ ಕಾಲ ಬದುಕಿದ್ದ ರಾಕ್‌ಸ್ಟಾರ್ ಕಳೆದ ಎರಡು ತಿಂಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿತ್ತು. ಕೆಲ ದಿನಗಳಿಂದ ನೆಲಕಟ್ಟಿದ ಹೋರಿಯನ್ನು ಜೋಪಾನವಾಗಿ ಕಾಪಾಡುತ್ತಾ ಬಂದಿದ್ದ ಹೋರಿಯ ಮಾಲಕ ಚಿಕ್ಕಪ್ಪ ಹಾಗೂ ಅವರ ಸಹೋದರರು, ಮನೆಯ ಮಂದಿ ನಿತ್ಯ ಹೋರಿಯ ಕಾಳಜಿ ಮಾಡುತ್ತಾ , ಉಪಚರಿಸುತ್ತಾ ಬಂದಿದ್ದರು.
ನೂರಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಬಹುಮಾನಗಳನ್ನು ಗೆಲ್ಲುವು ಮೂಲಕ ತನ್ನ ಸೌಮ್ಯ ಸ್ವಭಾವದಿಂದ ಸಹಸ್ರಾರು ಅಭಿಮಾನಿಗಳನ್ನು ರಾಕ್‌ಸ್ಟಾರ್‌ಕೊಬ್ಬರಿ ಹೋರಿ ಹೊಂದಿತ್ತು. ಅಭಿಮಾನಿಗಳ ಪಾಲಿನ ಮೆಚ್ಚಿನ ಕೊಬ್ಬರಿ ಹೋರಿಯಾಗಿದ್ದ ರಾಕ್‌ಸ್ಟಾರ್ ಹೋರಿಯ ಓಟದ ಖ್ಯಾತಿ ಪರರಾಜ್ಯಗಳಿಗೂ ಹಬ್ಬಿತ್ತು. ತಮಿಳುನಾಡು, ಮಹಾರಾಷ್ಟ್ರದಲ್ಲಿ ಹಾಗೂ ರಾಜ್ಯದ ವಿವಿಧ ಕಡೆಗಳಲ್ಲಿ ನಡೆಯುವ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ರಾಕ್ ಸ್ಟಾರ್ ಭಾಗವಹಿಸಿದ್ದು ವಿಶೇಷ. ರಾಕ್‌ಸ್ಟಾರ್ ಹೋರಿ ಸಿನೇಮಾ ದಲ್ಲಿಯು ಸಹ ಪಾತ್ರವನ್ನು ನಿರ್ವಹಿಸಿತ್ತು. ನಟ ವಿಜಯರಾಘವೇಂದ್ರ ಅಭಿನಯದ ಜಗಮೆಚ್ಚಿದಮಗ ಚಲನಚಿತ್ರದಲ್ಲಿ ಅಭಿನಯಿಸಿತ್ತು.
ರಾಕ್‌ಸ್ಟಾರ್ ಹೋರಿಯಲ್ಲಿ ದೈವತ್ವವನ್ನು ಕಂಡಿದ್ದರು: ರಾಕ್‌ಸ್ಟಾರ್ ಹೋರಿಯಲ್ಲಿ ಅಖಾಡದಲ್ಲಿ ಅಬ್ಬರಿಸುತ್ತಿತ್ತು, ಅದರ ಅರ್ಭಟ ನೋಡಿ ಅನೇಕರು ಅದರ ಹತ್ತಿರ ಹೋಗಲು ಭಯ ಪಡುತ್ತಿದ್ದರು. ಆದರೆ ಅಖಾಡದಿಂದ ಹೊರಕ್ಕೆ ಬಂದಮೇಲೆ ರಾಕ್‌ಸ್ಟಾರ್ ಚಿಕ್ಕಮಕ್ಕಳ ಹಾಗೆ ಇರುತ್ತಿತ್ತು. ಯಾರೆ ಕರೆದರು ಹೋಗಿ ಅವರ ಬಳಿ ನಿಲ್ಲುತ್ತಿತ್ತು. ಹೋರಿ ಸ್ಪರ್ಧೆಗೆ ಹೊರಟಾಗ ಸಾವಿರಾರು ಕೊಬ್ಬರಿ ಹೋರಿ ಪ್ರೇಮಿಗಳು ಅದನ್ನು ಹಿಂಬಾಲಿಸುತ್ತಿದ್ದರು. ಹೋರಿಸ್ಪರ್ಧೆಗೆ ತೆರಳಿದ ಸಂದರ್ಭದಲ್ಲಿ ಆಯಾ ಭಾಗದ ಗ್ರಾಮೀಣ ಹಾಗೂ ಶಹರ ಪ್ರದೇಶಗಳಲ್ಲಿ ಮಹಿಳೆಯರು, ಮಕ್ಕಳು, ಎಲ್ಲಾ ವಯೋಮಾನದವರು ಈ ಹೋರಿಯಲ್ಲಿ ದೈವತ್ವವನ್ನು ಕಂಡು ಪೂಜಿಸುತ್ತಿದ್ದರು.
ಹಾವೇರಿ, ಧಾರವಾಡ, ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ರಾಕ್‌ಸ್ಟಾರ್‌ಕೊಬ್ಬರಿ ಹೋರಿ ಅಭಿಮಾನಿಗಳಿದ್ದು, ಅವರು ತಮ್ಮ ಮನೆಗಳಲ್ಲಿ, ಸಾರ್ವಜನಿಕ ಪ್ರದೇಶಗಳಲ್ಲಿ ರಾಕ್‌ಸ್ಟಾರ್‌ಕೊಬ್ಬರಿ ಹೋರಿಯ ಭಾವಚಿತ್ರಗಳನ್ನು ಚಿತ್ರಿಸುವ ಮೂಲಕ ಈ ಹೋರಿಯ ಮೇಲೆ ಭಾವನಾತ್ಮಕ ಪ್ರೀತಿ ಹೊಂದಿದ್ದರು.
ಗಣ್ಯರಿಂದ ಅಂತಿಮ ನಮನ: ಹಾವೇರಿಯ ರಾಕ್‌ಸ್ಟಾರ್‌ಕೊಬ್ಬರಿ ಹೋರಿ ಸಾವನ್ನಪ್ಪಿದ ಸುದ್ದಿ ತಿಳಿದು ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಲಮಾಣಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಪುತ್ರ ಭರತ ಬೊಮ್ಮಾಯಿ, ಆನಂದ ಗಡ್ಡದ್ದೇವರಮಠ, ಸಂಜೀವಕುಮಾರ ನೀರಲಗಿ, ಗವಿಸಿದ್ದಪ್ಪ ದ್ಯಾಮಣ್ಣನವರ, ವೆಂಕಟೇಶ ನಾರಾಯಣಿ ಸೇರಿದಂತೆ ಅನೇಕರು ನಾಗೇಂದ್ರಮನಟ್ಟಿಗೆ ಆಗಮಿಸಿ ರಾಕ್‌ಸ್ಟಾರ್‌ಕೊಬ್ಬರಿ ಹೋರಿಗೆ ಅಂತಿಮ ನಮನ ಸಲ್ಲಿಸಿದರು.

ರಾಕ್ ಸ್ಟಾರ್ ಹೋರಿ ನಿಧನಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಬೇಸರ
ಬೆಂಗಳೂರು: ರಾಜ್ಯದಲ್ಲಿಯೇ ಅತಿ ಹೆಚ್ಚು ಅಭಿಮಾನಿಗಳನ್ನು ಸಂಪಾದಿಸಿದ್ದ ನಮ್ಮ ಹಾವೇರಿಯ ಹೆಮ್ಮೆಯ ರಾಕ್ ಸ್ಟಾರ್ ಹೋರಿ ಇನ್ನಿಲ್ಲ ಎಂಬ ಸುದ್ದಿ ಕೇಳಿ ಮನಸ್ಸಿಗೆ ನೋವಾಯಿತು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಹೋರಿ ಬೆದರಿಸುವ ಸ್ಪರ್ಧೆ ಎಲ್ಲಿಯೇ ಇದ್ದರೂ ಅಲ್ಲಿ ರಾಕ್ ಸ್ಟಾರ್ ಇದ್ದಾನೆಂದರೆ ಉಳಿದವರೆಲ್ಲರಿಗೂ ಸೋಲು ಖಚಿತ ಎನ್ನುವಷ್ಟರ ಮಟ್ಟಿಗೆ ರಾಕ್ ಸ್ಟಾರ್ ಹೋರಿ ಜನಪ್ರಿಯವಾಗಿತ್ತು. ಅಗಲಿದ ಅಭಿಮಾನಿಗಳ ನೆಚ್ಚಿನ ರಾಕ್ ಸ್ಟಾರ್ ಗೆ ಅಂತಿಮ ನಮನಗಳು. ಮುಂದಿನ ಜನ್ಮದಲ್ಲಿ ಹೋರಿ ಹಬ್ಬದ ತವರೂರಾಗಿರುವ ಹಾವೇರಿಯಲ್ಲಿಯೇ ಮತ್ತೊಮ್ಮೆ ಹುಟ್ಟಿ ಬಾ ಎಂದು ಪ್ರಾರ್ಥಿಸಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...