ಡಾ.ಹನುಮಂತರಾಜುಗೆ ಅಮೆರಿಕದ ಗ್ಲೋಬಲ್ ಡಾಕ್ಟರ್ ಪದವಿ
ಹಾವೇರಿ: ಇಲ್ಲಿನ ಸುಭಾಸ್ ಸರ್ಕಲ್ನ ಸುಭಾಸ್ ಕರ್ಜಗಿ, ಮಾಲತೇಶ ಕರ್ಜಗಿ ಸಹೋದರರ ಅಳಿಯ ಡಾ. ಹನುಮಂತರಾಜು ಅವರ “ಕೃತ್ರಿಮ ಬುದ್ಧಿಮತ್ತೆ” (ಆರ್ಟಿಫಿಶಿಯಲ್ ಇಂಟಲಿಜಿಯನ್ನ) ಕುರಿತಾದ ಸಂಶೋಧನೆಗೆ ಅಮೆರಿಕದ ಜಿನೆವಾ ಗ್ಲೋಬಲ್ ಡಾಕ್ಟರ್ ಆಫ್ ಬ್ಯುಜಿನೆಸ್ ಅಡ್ಮಿನಿಸ್ಟ್ರೇಶನ್ ಇನ್ ಆರ್ಟಿಫಿಶಿಯಲ್ ಇಂಟಲಿಜಿಯನ್ಸ್ ಫ್ರಾಮ್ ಸ್ವಿಸ್ ಸ್ಕೂಲ್ ಆಫ್ ಬ್ಯುಜಿನೆಸ್ ಆಂಡ್ ಮ್ಯಾನೆಜ್ಮೆಂಟ್ ಸಂಸ್ಥೆಯಿಂದ ಹನುಮಂತರಾಜು ಅವರಿಗೆ ಡಾಕ್ಟರೇಟ್ ಪದವಿ ಲಭಿಸಿದೆ.
ಡಾ. ಹನುಮಂತರಾಜು ಹುಟ್ಟಿದ್ದು ರಾಯಚೂರಿನಲ್ಲಿ. ತಂದೆ ನಾರಾಯಣ ಖಾನಾಪೂರ (ನಿವೃತ್ತ ನೌಕರ) ತಾಯಿ ಹುಲಿಗೆಮ್ಮ ಅವರ ಜೇಷ್ಠ ಪುತ್ರ ಪ್ರಾಥಮಿಕ ಶಿಕ್ಷಣ ಆರ್.ಟಿ.ಟಿ.ಎಸ್ ಸ್ಕೂಲ್ ಶಕ್ತಿನಗರ, ಪಿ.ಯು.ಸಿ ಪಾಸ್ ಮಾಡಿದ್ದು ರಾಯಚೂರಿನ ಲಕ್ಷ್ಮೀ ವೆಂಕಟೇಶ ದೇಸಾಯಿ ಕಾಲೇಜ್. ನಂತರ ಇಂಜನೀಯರಿಂಗ ಕಾಲೇಜು ವ್ಯಾಸಂಗ ಯು.ಬಿ.ಡಿ.ಟಿ ಕಾಲೇಜ್ ದಾವಣಗೆರೆ(೨೦೦೩). ನಂತರ ಚೆನೈನ ಅಕ್ವೆಂಚರ್ ಕಂಪನಿಯಲ್ಲಿ ಸಾಪ್ಟವೇರ್ ಇಂಜನೀಯರ್ ಆಗಿ ಸೇವೆ.ಈ ಸಮಯದಲ್ಲಿಯೇ ಹಾವೇರಿಯ ದೀಪಾ ಎಸ್, ಕರ್ಜಗಿ ಅವರ ಜೊತೆ ವಿವಾಹ.
ಚಿಕ್ಕಂದಿನಿಂದಲೂ ಡಾ.ಹನುಮಂತರಾಜು ಅವರಿಗೆ ಡಾಕ್ಟರೇಟ್ ಮಾಡಬೇಕೆಂಬ ಮಹದಾಸೆ. ಅದನ್ನು ಅವರು ತಮ್ಮ ೪೪ ನೆಯ ವಯಸ್ಸಿನಲ್ಲಿ ಸಾಧಿಸಿ ತೋರಿಸಿದ್ದಾರೆ. ಡಾ.ಹನುಮಂತರಾಜು ಅವರ ಪ್ರಕಾರ “ವಯಸ್ಸು ಒಂದು ಸಂಖ್ಯೆ ಮಾತ್ರ ದೃಢನಿರ್ಧಾರ, ಬದ್ಧತೆ ಮತ್ತು ಪರಿಶ್ರಮಗಳಿಂದಾಗಿ ಯಾರು ಏನನ್ನಾದರೂ ಸಾಧಿಸಬಹುದೆಂಬುದು ಅವರ ಅನಿಸಿಕೆ”.
ಯುವಜನರಲ್ಲಿ ಅವರದೊಂದು ಮನವಿ, “ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂದರೆ ಒಳೊಳ್ಳೆ ಧೀಮಂತ ನಾಯಕರ ಪುಸ್ತಕಗಳನ್ನು ಓದಬೇಕು”, ಅವರಿಂದ ಪ್ರೇರಣೆ ಪಡೆದು, ನಿಮ್ಮ ಗುರಿ ಸಾಧಿಸಿ. ಒಂದು ವೈಫಲ್ಯ ಜೀವನದ ಕೊನೆ ಅಲ್ಲ. ಮತ್ತೊಂದು ಅವಕಾಶ ಇದ್ದೇ ಇರುತ್ತದೆ. ಮತ್ತೆ ಮತ್ತೆ ಪ್ರಯತ್ನಿಸಿ ಜಯಶೀಲರಾಗಿರಿ” ಎನ್ನುವ ಅವರು ಇಷ್ಟರಲ್ಲಿಯೇ “ಕೃತ್ರಿಮ ಬುದ್ಧಿಮತ್ತೆ” (ಆರ್ಟಿಫಿಶಿಯಲ್ ಇಂಟಲಿಜಿಯನ್ನ) ಕುರಿತಾದ ಕೆಲವು ಪುಸ್ತಕಗಳನ್ನು ಬಿಡುಗಡೆಗೊಳಿಸ ಬೇಕೆಂದಿದ್ದಾರೆ. ಶ್ರೀಯುತರ ಸಾಧನೆಗೆ ಸುಭಾಸ್ ಕರ್ಜಗಿ, ಮಾಲತೇಶ ಕರ್ಜಗಿ ಸೇರಿದಂತೆ ಅನೇಕರು ಅಭಿನಂದಿಸಿದ್ದಾರೆ.