ಸಹೃದಯರ ಅಂತರಂಗವನ್ನು ಅರಳಿಸಿದ ಶರಣ ಹಡಪದ ಅಪ್ಪಣ್ಣನ ನಾಟಕ
ಹಾವೇರಿ : ಶರಣರ ಚಿಂತನೆ ಸಾಮಾಜಿಕ ನ್ಯಾಯದ ರಹದಾರಿಯಲ್ಲಿ, ಬಸವಣ್ಣನವರ ಅಪ್ತನಾಗಿ ಅನುಭವ ಮಂಟಪದ ಆಧ್ಯಾತ್ಮಿಕ ಚೇತನ, ಧೀರ ದಿಟ್ಟ ನಡೆಯಲ್ಲಿ ವಚನಗಳ ಸಂರಕ್ಷಣೆಗೆ ಕಂಕಟಬದ್ಧ ವಚನಕಾರರ ಕ್ರಾಂತಿಯನ್ನು ಸಾರುವ ವೈಚಾರಿಕ ಶರಣ ಹಡಪದ ಅಪ್ಪಣ್ಣ ನಾಟಕ ಸಹೃದಯರ ಅಂತರಂಗವನ್ನು ಅರಳಿಸಿತು.
ಹಾವೇರಿಯ ಹಂಚಿನಮನಿ ಆರ್ಟ ಗ್ಯಾಲರಿಯಲ್ಲಿ ಅಖಿಲ ಭಾರತ ಶರಣ ಸಾ”ತ್ಯ ಪರಷತ್ತು, ಬಸವ ಬಳಗ, ಕನ್ನಡತಿ ಕಲಾ ತಂಡದ ಸಂಯುಕ್ತ ಆಶ್ರಯದಲ್ಲಿ ನಡೆದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದ ಅಂಗವಾಗಿ ಕನ್ನಡತಿ ಕಲಾ ತಂಡ ಅಭಿನುಸಿದ ವೈಚಾರಿಕ ಶರಣ ಹಡಪದ ಅಪ್ಪಣ್ಣ ನಾಟಕ ೧೨ ನೇ ಶತಮಾನದ ಶರಣರ ಹೋರಾಟ, ಸಮಾನತೆಗಾಗಿ ಪಟ್ಟ ಸಂಕಷ್ಟ, ಬಸವಣ್ಣನವರ ಆದರ ಆತಿಥ್ಯ, ಮೇಲು ಕೀಳಿಲ್ಲದ ಮಾನವ ಧರ್ಮದ ಅರಿವು, ಹೆಣ್ಣು ಗಂಡೆಂಬ ಭೇದ”ಲ್ಲದೆ ಎಲ್ಲರನ್ನೂ ಮನುಷ್ಯರಾಗಿ ನೋಡುವ ಸತ್ಯ ಸಂಕಲ್ಪವನ್ನು ಸಾರಿ ಹೇಳಿತು.
ಬದುಕೆಂಬುದು ಪರೋಪಕಾರದ ಜೊತೆಗೆ ಕೂಡಿ ಬಾಳುವ, ಎಲ್ಲರ ನೋ”ನಲ್ಲಿ ನಾವು ಸಾಂತ್ವನದ ಸಹಕಾರ ನೀಡುವ, ಸಹಕಾರ ಧರ್ಮದಲ್ಲಿ ನಂಬಿಗೆ ಇಡುವ, ಸತ್ಯ ಶೀಲ ಬದುಕಿಗೆ ಎಲ್ಲರೂ ಸಾಕ್ಷಿಯಾಗಬೇಕು. ಗುರು ಲಿಂಗ ಜಂಗಮ ಪ್ರೇಮದ ನಡೆ ನುಡಿ ನಮ್ಮದಾಗಬೇಕು. ಒಳಿತಿಗಾಗಿ ಅಂಜದ ಅಳುಕದ ನಡೆ ನಮ್ಮದಾಗಬೇಕು ಎಂಬ ಸತ್ಯಗಳನ್ನು ನಾಟಕ ಬಿಚ್ಚಿ ಹೇಳಿತು.
ಶಿಕ್ಷಕ ಸಾ”ತಿ ಜಿ.ಎಂ.ಓಂಕಾರಣ್ಣನವರ ರಚಿಸಿದ ನಾಟಕವನ್ನು ಕಲಾ”ದೆ ಲತಾ ಪಾಟೀಲ ನಿರ್ದೇಶಿಸಿದರು. ಶರಣ ಶರಣೆಯರ ಪಾತ್ರದಲ್ಲಿ ಪ್ರಶಾಂತ ತಡಸದ, ಷಣ್ಮುಖಪ್ಪ ಹಾದಿಮನಿ, ಅನಿತಾ ಉಪಲಿ, ಮಂಜುನಾಥ, ರಂಜನಾ ಭಟ್, ಅಕ್ಕಮಹಾದೇ” ಹಾನಗಲ್ಲ, ಚಂದ್ರು ದೊಡ್ಡಮನಿ, “ನಯ್, ನಾಗರಾಜ ಬೆಂಡೀಗೇರಿ, ಅಣ್ಣಪ್ಪ ಕರಡಿ ಆಭಿನುಸಿದರು.
ನಂತರ ನಡೆದ ಸಂವಾದದಲ್ಲಿ “.ಜಿ.ಯಳಗೇರಿ, ಪರಿಮಳ ಜೈನ್, ಎನ್.ಬಿ.ಕಾಳೆ, ಶಿವಬಸಪ್ಪ ಮುದ್ದಿ, ಕೆ.ಆರ್.”ರೇಮಠ ಮಾತನಾಡಿ, ಅತ್ಯಂತ ಸರಳ ನಿರೂಪಣೆಯಲ್ಲಿ ಸಾಮಾಜಿಕ ಸತ್ಯಗಳನ್ನು ವಚನಗಳ ರಚನೆಯೂ ಒಳಗೊಂಡ ಶರಣ ಜೀವನದ ಪರಿಯನ್ನು ಇಲ್ಲಿ ಮನೋಜ್ಞವಾಗಿ ಅಭಿನುಸಲಾಗಿದೆ. ಹಡಪದ ಅಪ್ಪಣ್ಣನವರ ಸತ್ಯನಿಷ್ಠ, ಕಾಯಕ ಧರ್ಮವನ್ನು ಅಚ್ಚುಕಟ್ಟಾಗಿ ನಿರೂಪಿಸಲಾಗಿದೆ. ಇಂತಹ ನಾಟಕಗಳು ಮನೆ ಮನೆಯ ಮಾತಾಗಿ ಸಾಮಾಜಿಕ ತಲ್ಲಣಗಳನ್ನು ತಡೆದು ಉತ್ತಮ ಸಮಾಜ ನಿರ್ಮಾಣಕ್ಕೆ ಹಾದಿಯಾಗಬೇಕು ಎಂದರು. ನಾಟಕದೊಳಗೆ ಪ್ರಶಾಂತ ತಡಸದ, ಷಣ್ಮುಖಪ್ಪ ಹಾದಿಮನಿ ಕಲಾ”ದರ ವಚನಗಳ ಗಾನ ನಿರೂಪಣೆ ಸಹೃದಯರ ಮನ ಸಂತೋಸಿತು.