ಯುವ ಜನಾಂಗಕ್ಕೆ ಮಾರ್ಗಸೂಚಿ ನೀಡುವ ವಿಚಾರಧಾರಗಳುಳ್ಳ ಕಾವ್ಯ ಸಂಕಲನ “ಮನವಾಣಿಗಳು ಕಾವ್ಯಕೃತಿ”

Date:

ಯುವ ಜನಾಂಗಕ್ಕೆ ಮಾರ್ಗಸೂಚಿ ನೀಡುವ ವಿಚಾರಧಾರಗಳುಳ್ಳ ಕಾವ್ಯ ಸಂಕಲನ “ಮನವಾಣಿಗಳು ಕಾವ್ಯಕೃತಿ”

ಇಲ್ಲಿಯ ಸರಕಾರಿ ಅಲ್ಪಸಂಖ್ಯಾತರ ಮೋರಾರ್ಜಿ ದೇಸಾಯಿ ಬಾಲಕಿಯರ ವಸತಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾಗಿರುವ ಸೋಮನಾಥ ಡಿ ಅವರ ಮನವಾಣಿಗಳು ಚೊಚ್ಚಲು ಕೃತಿ. ಇದರಲ್ಲಿ ೨೯೪ ವಿಚಾರ ಚುಟುಕು ಕವಿತೆಗಳಿವೆ. ಮೊನಚಾದ ಭಾಷಿಕ ಶಕ್ತಿಯಿಂದ ಕಟ್ಟಿಕೊಟ್ಟ ರಚನೆಗಳಿವು.
ಸೋಮನಾಥ ಶರಣ ವಿಚಾರಧಾರೆಗೆ ಹೊಂದಿಕೊಂಡವರು. ಅವರ ವಚನಗಳಿಂದ ಪ್ರಭಾವಿತರಾಗಿ ಒಂದು ಸಂದೇಶವನ್ನು ಸಮಾಜಕ್ಕೆ ಕೊಡಬೇಕೆಂದು ಮನವಾಣಿಗಳು ಕೃತಿಯನ್ನು ಬರೆದಿದ್ದಾರೆ. ಆಧ್ಯಾತ್ಮ, ಜೀವನಪ್ರೀತಿ, ಕುಟುಂಬ ಜೀವನ, ಧನಾತ್ಮಕ ಚಿಂತನೆ ಹಾಗೂ ವೈಚಾರಿಕ ಭಾವನೆಗಳು ಇಲ್ಲಿಯ ಕವಿತೆಗಳಲ್ಲಿ ಅವಿತುಕೊಂಡಿವೆ.
ಮನವಾಣಿಗೆಂದು ಅವರು ಆಯ್ಕೆ ಮಾಡಿಕೊಂಡ ವಿಷಯಗಳು ತುಂಬ ವಿಶಿಷ್ಟವಾಗಿವೆ. ಧರ್ಮಜೀವನ ಮೌಲ್ಯ, ದೇವರು, ವ್ಯಕ್ತಿ, ಮನಸ್ಸು, ಉತ್ತಮ ಸಂಸ್ಕಾರ, ಯುವಕರು, ಮನುಷ್ಯತ್ವ, ಕರ್ತವ್ಯ, ವಿನಯ ಶೀಲತೆ ಮುಂತಾದವುಗಳಿಲ್ಲಿವೆ.
ಗಣಿತದ ಸಮಸ್ಯೆಗಳಲ್ಲಿ
ಅಡಿಗಿರುವ ಉತ್ತರಕ್ಕೆ
ಜೀವನದ ಸಮಸ್ಯೆಗಳಲ್ಲಿ
ಅಡಗಿರುವ ಪರಿಹಾರಕ್ಕೆ
ಸೂಕ್ತ ಸೂತ್ರ ಹಚ್ಚು
ಅಂದಾಗ ಮಾತ್ರ ಫಲಿತಾಂಶ ನಿಖರವಾಗಿ ಬರುತ್ತದೆ.

ಕವಿ ಸೋಮನಾಥ ಗಣಿತವನ್ನು ಬದುಕಿನ ಸಮಸ್ಯೆಗಳಲ್ಲಿ ಸಮೀಕರಸಿ ನೋಡುತ್ತಾರೆ. ಅಂತಿಮವಾಗಿ ಆ ಮೂಲಕವೇ ಅನೇಕ ಪರಿಹಾರಗಳು ಸಿಗುತ್ತವೆ. ಇದೇತೆರನಾಗಿ ಹಲವು ಬಿಡಿ ಪದ್ಯಗಳಲ್ಲಿ ಸಾಮಾಜಿಕ ಕಳಕಳಿಯ ತೋರುವ ವಾಣಿಗಳಿವೆ.
ಕುಲಜಾತಿ ಧರ್ಮ
ವರ್ಗ ವರ್ಣ ಮೀರಿ
ಸೇರಿರುವ ನಿಜವಾದ
ದೇವಾಲಯವೆಂದರೆ ಅದು ಶಾಲೆ
ಅಲ್ಲಿರುವ ಮಕ್ಕಳು ಹೊರಗಡೆ
ಹೋಗುವದರೊಳಗಾಗಿ
ಶಿಕ್ಷಕರು ಅವರನ್ನು ಪರಿಪೂರ್ಣ
ದೇವರನ್ನಾಗಿಸಬೇಕು

ಈ ರೀತಿಯಾಗಿ ಶಿಕ್ಷಣ ಮತ್ತು ಶಿಕ್ಷಕರ ಸಂಬಂಧವನ್ನು ಒಂದು ಫಲಿತರೂಪಕ್ಕೆ ಆಕೃತಿ ಕೊಡುತ್ತಾರೆ. ದೇವರ ಬಗ್ಗೆ ಕೂಡ ಸೋಮನಾಥ ಈ ಕೆಳಗಿನಂತೆ ಚಿಂತಿಸುತ್ತಾರೆ.

ದೇವರಿಗೆ ಬೇಕಿರುವುದು
ಗಿಡಮರಗಳ ಬಳ್ಳಯಿಂದ
ಕಿತ್ತುಕೊಂಡು ಬಂದ ಹೂವುಗಳಲ್ಲ
ನಮ್ಮ ಹೃದಯದಲ್ಲಿ
ಬೆಳೆಯುವ ಸದ್ಗುಣಗಳೆಂಬ
ಚಿಂತನೆಗಳು

ತಾವೊಬ್ಬ ಕಾಲೇಜಿನ ಪ್ರಾಧ್ಯಾಪಕರಾಗಿರುವುದರಿಂದ ಗುರು ಹೇಗಿರಬೇಕೆಂದು ತಮ್ಮ ಮತ್ತೊಂದು ಪದ್ಯದಲ್ಲಿ . .
ವಿದ್ಯಾರ್ಥಿಗಳ ಜ್ಞಾನ
ಸ್ಥಾನಮಾನ ಹಾಗೂ ಜೀವನ
ನನಗಿಂತಲೂ ಉನ್ನತದಲ್ಲಿರಬೇಕೆಂದು
ಆಶಿಸುವ ನಿಸ್ವಾರ್ಥ ಭಾವನೆಯ
ಚೈತನ್ಯ ಸ್ವರೂಪಿಯೇ ಗುರು.

ಒಟ್ಟಾರೆಯಾಗಿ ಕವಿ ಸೋಮನಾಥ ಅವರು ಪರಿಶುದ್ಧವಾದ ಜೀವನ ಬೇಕೆಂಬುದೇ ಅವರ ಕಾವ್ಯದ ತಿರುಳಾಗಿದೆ.
ಹೊಲ ಹಸನಾದಾಗ
ಹೇಗೆ ಮೊಳೆದೋರುತ್ತದೆಯೊ
ಹಾಗೆಯೇ ಶರೀರ ಮನಸ್ಸು
ಶುದ್ಧಿ ಇದ್ದಾಗ ಮಾತ್ರ ಉತ್ತಮ
ವಿಚಾರಗಳು ಹೊರ ಹೊಮ್ಮುತ್ತವೆ.

ಮನವಾಣಿಗಳು ವಿಶೇಷವಾಗಿ ಯುವ ಜನಾಂಗಕ್ಕೆ ಮಾರ್ಗಸೂಚಿ ನೀಡುವ ವಿಚಾರಧಾರಗಳುಳ್ಳ ಕಾವ್ಯ ಸಂಕಲನ. ಪ್ರತಿಯೊಬ್ಬರು ಇದನ್ನು ಓದಿದಾಗ ಹೊಸ ಹೊಸ ವಿಚಾರಗಳು ನಾವೇ ಕಂಡು ಕೊಂಡ ಅನೇಕ ಗೊಂದಲಗಳಿಗೆ ಪರಿಹಾರಗಳನ್ನು ಸೂಚಿಸಬಲ್ಲ ಶಕ್ತಿಯುಳ್ಳದ್ದಾಗಿವೆ.

ಶ್ರೀಮತಿ ಸವಿತಾ ಶಿರಗೋಜಿ
ಲೇಖಕಿ, ಗುಲ್ಬರ್ಗಾ

LEAVE A REPLY

Please enter your comment!
Please enter your name here

Subscribe

spot_imgspot_img

Popular

ಯುವ ಜನಾಂಗಕ್ಕೆ ಮಾರ್ಗಸೂಚಿ ನೀಡುವ ವಿಚಾರಧಾರಗಳುಳ್ಳ ಕಾವ್ಯ ಸಂಕಲನ “ಮನವಾಣಿಗಳು ಕಾವ್ಯಕೃತಿ”

ಇಲ್ಲಿಯ ಸರಕಾರಿ ಅಲ್ಪಸಂಖ್ಯಾತರ ಮೋರಾರ್ಜಿ ದೇಸಾಯಿ ಬಾಲಕಿಯರ ವಸತಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾಗಿರುವ ಸೋಮನಾಥ ಡಿ ಅವರ ಮನವಾಣಿಗಳು ಚೊಚ್ಚಲು ಕೃತಿ. ಇದರಲ್ಲಿ ೨೯೪ ವಿಚಾರ ಚುಟುಕು ಕವಿತೆಗಳಿವೆ. ಮೊನಚಾದ ಭಾಷಿಕ ಶಕ್ತಿಯಿಂದ ಕಟ್ಟಿಕೊಟ್ಟ ರಚನೆಗಳಿವು.
ಸೋಮನಾಥ ಶರಣ ವಿಚಾರಧಾರೆಗೆ ಹೊಂದಿಕೊಂಡವರು. ಅವರ ವಚನಗಳಿಂದ ಪ್ರಭಾವಿತರಾಗಿ ಒಂದು ಸಂದೇಶವನ್ನು ಸಮಾಜಕ್ಕೆ ಕೊಡಬೇಕೆಂದು ಮನವಾಣಿಗಳು ಕೃತಿಯನ್ನು ಬರೆದಿದ್ದಾರೆ. ಆಧ್ಯಾತ್ಮ, ಜೀವನಪ್ರೀತಿ, ಕುಟುಂಬ ಜೀವನ, ಧನಾತ್ಮಕ ಚಿಂತನೆ ಹಾಗೂ ವೈಚಾರಿಕ ಭಾವನೆಗಳು ಇಲ್ಲಿಯ ಕವಿತೆಗಳಲ್ಲಿ ಅವಿತುಕೊಂಡಿವೆ.
ಮನವಾಣಿಗೆಂದು ಅವರು ಆಯ್ಕೆ ಮಾಡಿಕೊಂಡ ವಿಷಯಗಳು ತುಂಬ ವಿಶಿಷ್ಟವಾಗಿವೆ. ಧರ್ಮಜೀವನ ಮೌಲ್ಯ, ದೇವರು, ವ್ಯಕ್ತಿ, ಮನಸ್ಸು, ಉತ್ತಮ ಸಂಸ್ಕಾರ, ಯುವಕರು, ಮನುಷ್ಯತ್ವ, ಕರ್ತವ್ಯ, ವಿನಯ ಶೀಲತೆ ಮುಂತಾದವುಗಳಿಲ್ಲಿವೆ.
ಗಣಿತದ ಸಮಸ್ಯೆಗಳಲ್ಲಿ
ಅಡಿಗಿರುವ ಉತ್ತರಕ್ಕೆ
ಜೀವನದ ಸಮಸ್ಯೆಗಳಲ್ಲಿ
ಅಡಗಿರುವ ಪರಿಹಾರಕ್ಕೆ
ಸೂಕ್ತ ಸೂತ್ರ ಹಚ್ಚು
ಅಂದಾಗ ಮಾತ್ರ ಫಲಿತಾಂಶ ನಿಖರವಾಗಿ ಬರುತ್ತದೆ.

ಕವಿ ಸೋಮನಾಥ ಗಣಿತವನ್ನು ಬದುಕಿನ ಸಮಸ್ಯೆಗಳಲ್ಲಿ ಸಮೀಕರಸಿ ನೋಡುತ್ತಾರೆ. ಅಂತಿಮವಾಗಿ ಆ ಮೂಲಕವೇ ಅನೇಕ ಪರಿಹಾರಗಳು ಸಿಗುತ್ತವೆ. ಇದೇತೆರನಾಗಿ ಹಲವು ಬಿಡಿ ಪದ್ಯಗಳಲ್ಲಿ ಸಾಮಾಜಿಕ ಕಳಕಳಿಯ ತೋರುವ ವಾಣಿಗಳಿವೆ.
ಕುಲಜಾತಿ ಧರ್ಮ
ವರ್ಗ ವರ್ಣ ಮೀರಿ
ಸೇರಿರುವ ನಿಜವಾದ
ದೇವಾಲಯವೆಂದರೆ ಅದು ಶಾಲೆ
ಅಲ್ಲಿರುವ ಮಕ್ಕಳು ಹೊರಗಡೆ
ಹೋಗುವದರೊಳಗಾಗಿ
ಶಿಕ್ಷಕರು ಅವರನ್ನು ಪರಿಪೂರ್ಣ
ದೇವರನ್ನಾಗಿಸಬೇಕು

ಈ ರೀತಿಯಾಗಿ ಶಿಕ್ಷಣ ಮತ್ತು ಶಿಕ್ಷಕರ ಸಂಬಂಧವನ್ನು ಒಂದು ಫಲಿತರೂಪಕ್ಕೆ ಆಕೃತಿ ಕೊಡುತ್ತಾರೆ. ದೇವರ ಬಗ್ಗೆ ಕೂಡ ಸೋಮನಾಥ ಈ ಕೆಳಗಿನಂತೆ ಚಿಂತಿಸುತ್ತಾರೆ.

ದೇವರಿಗೆ ಬೇಕಿರುವುದು
ಗಿಡಮರಗಳ ಬಳ್ಳಯಿಂದ
ಕಿತ್ತುಕೊಂಡು ಬಂದ ಹೂವುಗಳಲ್ಲ
ನಮ್ಮ ಹೃದಯದಲ್ಲಿ
ಬೆಳೆಯುವ ಸದ್ಗುಣಗಳೆಂಬ
ಚಿಂತನೆಗಳು

ತಾವೊಬ್ಬ ಕಾಲೇಜಿನ ಪ್ರಾಧ್ಯಾಪಕರಾಗಿರುವುದರಿಂದ ಗುರು ಹೇಗಿರಬೇಕೆಂದು ತಮ್ಮ ಮತ್ತೊಂದು ಪದ್ಯದಲ್ಲಿ . .
ವಿದ್ಯಾರ್ಥಿಗಳ ಜ್ಞಾನ
ಸ್ಥಾನಮಾನ ಹಾಗೂ ಜೀವನ
ನನಗಿಂತಲೂ ಉನ್ನತದಲ್ಲಿರಬೇಕೆಂದು
ಆಶಿಸುವ ನಿಸ್ವಾರ್ಥ ಭಾವನೆಯ
ಚೈತನ್ಯ ಸ್ವರೂಪಿಯೇ ಗುರು.

ಒಟ್ಟಾರೆಯಾಗಿ ಕವಿ ಸೋಮನಾಥ ಅವರು ಪರಿಶುದ್ಧವಾದ ಜೀವನ ಬೇಕೆಂಬುದೇ ಅವರ ಕಾವ್ಯದ ತಿರುಳಾಗಿದೆ.
ಹೊಲ ಹಸನಾದಾಗ
ಹೇಗೆ ಮೊಳೆದೋರುತ್ತದೆಯೊ
ಹಾಗೆಯೇ ಶರೀರ ಮನಸ್ಸು
ಶುದ್ಧಿ ಇದ್ದಾಗ ಮಾತ್ರ ಉತ್ತಮ
ವಿಚಾರಗಳು ಹೊರ ಹೊಮ್ಮುತ್ತವೆ.

ಮನವಾಣಿಗಳು ವಿಶೇಷವಾಗಿ ಯುವ ಜನಾಂಗಕ್ಕೆ ಮಾರ್ಗಸೂಚಿ ನೀಡುವ ವಿಚಾರಧಾರಗಳುಳ್ಳ ಕಾವ್ಯ ಸಂಕಲನ. ಪ್ರತಿಯೊಬ್ಬರು ಇದನ್ನು ಓದಿದಾಗ ಹೊಸ ಹೊಸ ವಿಚಾರಗಳು ನಾವೇ ಕಂಡು ಕೊಂಡ ಅನೇಕ ಗೊಂದಲಗಳಿಗೆ ಪರಿಹಾರಗಳನ್ನು ಸೂಚಿಸಬಲ್ಲ ಶಕ್ತಿಯುಳ್ಳದ್ದಾಗಿವೆ.

ಶ್ರೀಮತಿ ಸವಿತಾ ಶಿರಗೋಜಿ
ಲೇಖಕಿ, ಗುಲ್ಬರ್ಗಾ

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...