“ಚಿತ್ತಿಮಳೆಗೆ ಕೋಡಿಬಿದ್ದಾಯ್ತು ಹಾವೇರಿ ಹೆಗ್ಗೆರೆ ಕೆರೆ”
ಹಾವೇರಿ ನಾಗರಿಕರಿಗೆ ಒಳ್ಳೆಯ ಸುದ್ದಿ
ಹಾವೇರಿ: ಹಾವೇರಿನಗರದ ಜನತೆಗೆ ಜಲಮೂಲವಾಗಿರುವ ಐತಿಹಾಸಿಕ ಹಾವೇರಿ ಹೆಗ್ಗೆರೆಕೆರೆ ಅ.೧೩ರಂದು ಭಾನುವಾರ ಬೆಳಿಗ್ಗೆ ೮ಗಂಟೆಯ ಸುಮಾರಿಗೆ ಕೆರೆತುಂಬಿ ಕೋಡಿಬಿದ್ದಿದೆ.
ರಾಷ್ಟ್ರೀಯ ಹೆದ್ದಾರಿ ೪೮ಕ್ಕೆ ಹೊಂದಿಕೊಂಡಿರುವ ಕೆರೆಯ ಕೊಡಿ ಪ್ರದೇಶದಲ್ಲಿ ಕೆರೆತುಂಬಿ ನಿದಾನವಾಗಿ ನೀರು ಕೋಡಿಯ ಮೇಲ್ಬಾಗದಿಂದ ಹರಿಯುತ್ತಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿಯ ಸೂಳೆಕೆರೆ ನಂತರ ‘ಹಾವೇರಿ ಹೆಗ್ಗೇರಿ ಕೆರೆ ರಾಜ್ಯದ ಎರಡನೇ ಅತಿ ದೊಡ್ಡ ಕೆರೆ” ಎನ್ನುವ ಹಿರಿದು- ಗರಿಮೆಯ
೬೮೩ ಎಕರೆ ವಿಶಾಲವಾದ ಹೆಗ್ಗೆರೆಕೆರೆ ೨೦೧೯ರಲ್ಲಿ ಹಿಂಗಾರು ಹಂಗಾಮಿನಲ್ಲಿ ಸುರಿದ ವರ್ಷಧಾರೆ ಭರ್ತಿಯಾಗಿತ್ತು. ಇದೀಗ ಸುರಿತುತ್ತಿರುವ ಚಿತ್ತಿಮಳೆಗೆ ಕೆರೆಕೊಡಿ ಬಿದ್ದಿದೆ.
ಮುಂಗಾರು ಆರಂಭದಲ್ಲಿ ತುಂಗಾಮೇಲ್ದಂಡೆ ಯೋಜನೆಯ ಮೂಲಕ ಕೆರೆಗೆ ನೀರು ಹರಿಸಲಾಗಿತ್ತು.
ಹಾವೇರಿ ನಗರಕ್ಕೆ ದಿನದ ಇಪತ್ನಾಲ್ಕು ಗಂಟೆ ನೀರು ಪೂರೈಸುವ ಯೋಜನೆಗೆ ಕೆರೆತಂಬಿರುವುದು ಬಲ ತಂದಿದೆ. ಮಧ್ಯಾಹ್ನ ದ ಹೊತ್ತಿಗೆ ಕೊಡಿ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರುಹರಿಯುವ ಸಾಧ್ಯತೆಗಳಿವೆ.
ಹೆಗ್ಗೆರೆಕೆರೆ ಅಭಿವೃದ್ಧಿಯ ದೃಷ್ಟಿಯಿಂದ ಹೆಗ್ಡೆರಿಕೆರೆ ಹದ್ದುಬಸ್ತ್ ಅಗತ್ಯ;
ಹೆಗ್ಗೆರೆಕೆರೆ ಅಭಿವೃದ್ಧಿಯ ದೃಷ್ಟಿಯಿಂದ ಹದ್ದುಬಸ್ತ್ ಮಾಡುವುದು ಅಗತ್ಯವಾಗಿದೆ.
ಬೇಸಿಗೆಯಲ್ಲಿ ಬೇಕಾದ ನೀರು ಸಂಗ್ರಹಕ್ಕೆ ಒಂದೇ ಸ್ಥಳದಲ್ಲಿ ಅಗತ್ಯ ನೀರು ಸಂಗ್ರಹಕ್ಕಾಗಿ ಬೃಹದಾಕಾರದ ನೀರುಸಂಗ್ರಹ ಜಲಾಗಾರವನ್ನು ನಿರ್ಮಿಸಬೇಕಿದೆ.
ಆಗಸ್ಟ್.೩೦-೨೦೨೪ರಂದು ಹಾವೇರಿಯ ಐತಿಹಾಸಿಕ ಹೆಗ್ಗರೆಕರೆಗೆ
ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಪ್ರವಾಸೋಧ್ಯಮ ಸಚಿವ ಎಚ್.ಕೆ.ಪಾಟೀಲರು , ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರು, ಶಾಸಕರಾದ ರುದ್ರಪ್ಪ ಲಮಾಣಿ, ಬಸವರಾಜ್ ಶಿವಣ್ಣನವರ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ನಗರಸಭಾ ಸದಸ್ಯ ಸಂಜೀವಕುಮಾರ ನೀಲಗಿರಿ ಮತ್ತಿತರರು ಬಾಗಿನ ಅರ್ಪಿಸಿದ್ದರು.
ಐತಿಹಸಿಕ ಹೆಗ್ಗರೆಕೆರೆಯ ಅಭಿವೃದ್ಧಿಗೆ ಹಾಗೂ ಪಕ್ಷಿಧಾಮವನ್ನಾಗಿ ಘೋಷಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಜರುಗಿಸುವ ಭರವಸೆ ನೀಡಿದ್ದರು. “ಐತಿಹಾಸಿಕ ಹೆಗ್ಗರೆಕೆರೆಯಲ್ಲಿನ ಜೀವ ವೈವಿಧ್ಯತೆಗಳನ್ನು ಕಂಡು ಹೆಗ್ಗೆರೆಕೆರೆಯನ್ನು ‘ಜೀವ ವೈವಿಧ್ಯಗಳ ತಾಣ” ಎಂದು ಘೋಷಣೆ ಮಾಡಲಾಗಿದೆ. ಇದು ಕೇವಲ ಕಾಗದಲ್ಲಿ ಮಾತ್ರ ಉಳಿದಿದೆ. .
ಹೆಗ್ಗರಿ ಕೆರೆಯ ಹೂಳನ್ನು ತೆಗೆಸುವ ಮೂಲಕ ಮಾಡಬೇಕು. ಪ್ರವಾಸಿತಾಣವನ್ನಾಗಿ ಅಭಿವೃದ್ಧಿ ಪಡಿಸಬೇಕು. ಈ ಐತಿಹಾಸಿಕ ಹೆಗ್ಗೆರೆಕೆರೆಗೆ ಪ್ರತಿ ವರ್ಷ ದೂರದ ಆಸ್ಟ್ರೇಲಿಯಾ, ಮಂಗೋಲಿಯಾ, ಶ್ರೀಲಂಕಾ, ಜಿಂಬಾಬ್ವೆ, ನ್ಯೂಜಿಲಾಂಡ್ ಸೇರಿದಂತೆ ಮತ್ತಿತರ ದೇಶಗಳಿಂದ ಹಾಗೂ ಬೇರೆ ರಾಜ್ಯಗಳಿಂದ “ಬಾರ್ ಹೆಡೆಡ್ ಗೂಸ್”, ಸ್ಯಾಂಡ್ ಗ್ರೂಪ್”, ಗಾಲಾದ ಬಣ್ಣದ ಕಬ್ಬಕ್ಕಿಗಳು”, ಕೆಂಚಪಕ್ಷಿಗಳು”, “ಜೆಂಬಂಡ್ ಸ್ಪಾರ್ಕ, ಸ್ಪೂನ್ ಬೆಲ್, ಜಾವುಹಳ್ಳಿ, ನೀರುನಾಯಗಳು” ಹೀಗೆ ತರೇವಾರಿ ಪಕ್ಷಿಗಳು, ಪ್ರಾಣಿಗಳು ಇಲ್ಲಿಗೆ ವಲಸೆ ಬರುತ್ತವೆ.
“ಪ್ರಾಣಿ-ಪಕ್ಷಿಗಳ ಸುರಕ್ಷತೆ ಇಲ್ಲಿ ಯಾವುದೇ ಕ್ರಮಗಳನ್ನು ತೆಗೆದುಕೊಂಡಿರುವುದಿಲ್ಲ” “ಹೀಗಾಗಿ ಅನೇಕ ಅಪರೂಪದ ಪ್ರಾಣಿ- ಪಕ್ಷಿಗಳು ಬೇಟೆಗಾರರಿಗೆ ಬಲಿಯಾಗುತ್ತವೆ. ಇತ್ತೀಚೆಗೆ ನೀರು ನಾಯಿಯ ಹತ್ಯೆ ಮಾಡಲಾಗಿತ್ತು. ವನ್ಯಜೀವಿ ಗಳ ರಕ್ಷಣೆಗೆ ಕ್ರಮವಾಗಬೇಕು, ಗದಗ ಜಿಲ್ಲೆಯ ಮಾಗಡಿ ಕರೆಯ ಮಾದರಿಯಲ್ಲಿ ಹೆಗ್ಗೆರೆಕೆರೆ ಅಭಿವೃದ್ಧಿ ಮಾಡಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು.
ಹಾವೇರಿ ನಾಗರಿಕರಿಗೆ ಒಳ್ಳೆಯ ಸುದ್ದಿ
ಹಾವೇರಿ: ಹಾವೇರಿನಗರದ ಜನತೆಗೆ ಜಲಮೂಲವಾಗಿರುವ ಐತಿಹಾಸಿಕ ಹಾವೇರಿ ಹೆಗ್ಗೆರೆಕೆರೆ ಅ.೧೩ರಂದು ಭಾನುವಾರ ಬೆಳಿಗ್ಗೆ ೮ಗಂಟೆಯ ಸುಮಾರಿಗೆ ಕೆರೆತುಂಬಿ ಕೋಡಿಬಿದ್ದಿದೆ.
ರಾಷ್ಟ್ರೀಯ ಹೆದ್ದಾರಿ ೪೮ಕ್ಕೆ ಹೊಂದಿಕೊಂಡಿರುವ ಕೆರೆಯ ಕೊಡಿ ಪ್ರದೇಶದಲ್ಲಿ ಕೆರೆತುಂಬಿ ನಿದಾನವಾಗಿ ನೀರು ಕೋಡಿಯ ಮೇಲ್ಬಾಗದಿಂದ ಹರಿಯುತ್ತಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿಯ ಸೂಳೆಕೆರೆ ನಂತರ ‘ಹಾವೇರಿ ಹೆಗ್ಗೇರಿ ಕೆರೆ ರಾಜ್ಯದ ಎರಡನೇ ಅತಿ ದೊಡ್ಡ ಕೆರೆ” ಎನ್ನುವ ಹಿರಿದು- ಗರಿಮೆಯ
೬೮೩ ಎಕರೆ ವಿಶಾಲವಾದ ಹೆಗ್ಗೆರೆಕೆರೆ ೨೦೧೯ರಲ್ಲಿ ಹಿಂಗಾರು ಹಂಗಾಮಿನಲ್ಲಿ ಸುರಿದ ವರ್ಷಧಾರೆ ಭರ್ತಿಯಾಗಿತ್ತು. ಇದೀಗ ಸುರಿತುತ್ತಿರುವ ಚಿತ್ತಿಮಳೆಗೆ ಕೆರೆಕೊಡಿ ಬಿದ್ದಿದೆ.
ಮುಂಗಾರು ಆರಂಭದಲ್ಲಿ ತುಂಗಾಮೇಲ್ದಂಡೆ ಯೋಜನೆಯ ಮೂಲಕ ಕೆರೆಗೆ ನೀರು ಹರಿಸಲಾಗಿತ್ತು.
ಹಾವೇರಿ ನಗರಕ್ಕೆ ದಿನದ ಇಪತ್ನಾಲ್ಕು ಗಂಟೆ ನೀರು ಪೂರೈಸುವ ಯೋಜನೆಗೆ ಕೆರೆತಂಬಿರುವುದು ಬಲ ತಂದಿದೆ. ಮಧ್ಯಾಹ್ನ ದ ಹೊತ್ತಿಗೆ ಕೊಡಿ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರುಹರಿಯುವ ಸಾಧ್ಯತೆಗಳಿವೆ.
ಹೆಗ್ಗೆರೆಕೆರೆ ಅಭಿವೃದ್ಧಿಯ ದೃಷ್ಟಿಯಿಂದ ಹೆಗ್ಡೆರಿಕೆರೆ ಹದ್ದುಬಸ್ತ್ ಅಗತ್ಯ;
ಹೆಗ್ಗೆರೆಕೆರೆ ಅಭಿವೃದ್ಧಿಯ ದೃಷ್ಟಿಯಿಂದ ಹದ್ದುಬಸ್ತ್ ಮಾಡುವುದು ಅಗತ್ಯವಾಗಿದೆ.
ಬೇಸಿಗೆಯಲ್ಲಿ ಬೇಕಾದ ನೀರು ಸಂಗ್ರಹಕ್ಕೆ ಒಂದೇ ಸ್ಥಳದಲ್ಲಿ ಅಗತ್ಯ ನೀರು ಸಂಗ್ರಹಕ್ಕಾಗಿ ಬೃಹದಾಕಾರದ ನೀರುಸಂಗ್ರಹ ಜಲಾಗಾರವನ್ನು ನಿರ್ಮಿಸಬೇಕಿದೆ.
ಆಗಸ್ಟ್.೩೦-೨೦೨೪ರಂದು ಹಾವೇರಿಯ ಐತಿಹಾಸಿಕ ಹೆಗ್ಗರೆಕರೆಗೆ
ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಪ್ರವಾಸೋಧ್ಯಮ ಸಚಿವ ಎಚ್.ಕೆ.ಪಾಟೀಲರು , ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರು, ಶಾಸಕರಾದ ರುದ್ರಪ್ಪ ಲಮಾಣಿ, ಬಸವರಾಜ್ ಶಿವಣ್ಣನವರ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ನಗರಸಭಾ ಸದಸ್ಯ ಸಂಜೀವಕುಮಾರ ನೀಲಗಿರಿ ಮತ್ತಿತರರು ಬಾಗಿನ ಅರ್ಪಿಸಿದ್ದರು.
ಐತಿಹಸಿಕ ಹೆಗ್ಗರೆಕೆರೆಯ ಅಭಿವೃದ್ಧಿಗೆ ಹಾಗೂ ಪಕ್ಷಿಧಾಮವನ್ನಾಗಿ ಘೋಷಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಜರುಗಿಸುವ ಭರವಸೆ ನೀಡಿದ್ದರು. “ಐತಿಹಾಸಿಕ ಹೆಗ್ಗರೆಕೆರೆಯಲ್ಲಿನ ಜೀವ ವೈವಿಧ್ಯತೆಗಳನ್ನು ಕಂಡು ಹೆಗ್ಗೆರೆಕೆರೆಯನ್ನು ‘ಜೀವ ವೈವಿಧ್ಯಗಳ ತಾಣ” ಎಂದು ಘೋಷಣೆ ಮಾಡಲಾಗಿದೆ. ಇದು ಕೇವಲ ಕಾಗದಲ್ಲಿ ಮಾತ್ರ ಉಳಿದಿದೆ. .
ಹೆಗ್ಗರಿ ಕೆರೆಯ ಹೂಳನ್ನು ತೆಗೆಸುವ ಮೂಲಕ ಮಾಡಬೇಕು. ಪ್ರವಾಸಿತಾಣವನ್ನಾಗಿ ಅಭಿವೃದ್ಧಿ ಪಡಿಸಬೇಕು. ಈ ಐತಿಹಾಸಿಕ ಹೆಗ್ಗೆರೆಕೆರೆಗೆ ಪ್ರತಿ ವರ್ಷ ದೂರದ ಆಸ್ಟ್ರೇಲಿಯಾ, ಮಂಗೋಲಿಯಾ, ಶ್ರೀಲಂಕಾ, ಜಿಂಬಾಬ್ವೆ, ನ್ಯೂಜಿಲಾಂಡ್ ಸೇರಿದಂತೆ ಮತ್ತಿತರ ದೇಶಗಳಿಂದ ಹಾಗೂ ಬೇರೆ ರಾಜ್ಯಗಳಿಂದ “ಬಾರ್ ಹೆಡೆಡ್ ಗೂಸ್”, ಸ್ಯಾಂಡ್ ಗ್ರೂಪ್”, ಗಾಲಾದ ಬಣ್ಣದ ಕಬ್ಬಕ್ಕಿಗಳು”, ಕೆಂಚಪಕ್ಷಿಗಳು”, “ಜೆಂಬಂಡ್ ಸ್ಪಾರ್ಕ, ಸ್ಪೂನ್ ಬೆಲ್, ಜಾವುಹಳ್ಳಿ, ನೀರುನಾಯಗಳು” ಹೀಗೆ ತರೇವಾರಿ ಪಕ್ಷಿಗಳು, ಪ್ರಾಣಿಗಳು ಇಲ್ಲಿಗೆ ವಲಸೆ ಬರುತ್ತವೆ.
“ಪ್ರಾಣಿ-ಪಕ್ಷಿಗಳ ಸುರಕ್ಷತೆ ಇಲ್ಲಿ ಯಾವುದೇ ಕ್ರಮಗಳನ್ನು ತೆಗೆದುಕೊಂಡಿರುವುದಿಲ್ಲ” “ಹೀಗಾಗಿ ಅನೇಕ ಅಪರೂಪದ ಪ್ರಾಣಿ- ಪಕ್ಷಿಗಳು ಬೇಟೆಗಾರರಿಗೆ ಬಲಿಯಾಗುತ್ತವೆ. ಇತ್ತೀಚೆಗೆ ನೀರು ನಾಯಿಯ ಹತ್ಯೆ ಮಾಡಲಾಗಿತ್ತು. ವನ್ಯಜೀವಿ ಗಳ ರಕ್ಷಣೆಗೆ ಕ್ರಮವಾಗಬೇಕು, ಗದಗ ಜಿಲ್ಲೆಯ ಮಾಗಡಿ ಕರೆಯ ಮಾದರಿಯಲ್ಲಿ ಹೆಗ್ಗೆರೆಕೆರೆ ಅಭಿವೃದ್ಧಿ ಮಾಡಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು.