ಹಾವೇರಿಯಲ್ಲಿ ಸರ್ಜಿ ಆಸ್ಪತ್ರೆಗಳ ಸಮೂಹದ ಸರ್ಜಿ ರೇಣುಕಾ ದೇವಧರ ಆಸ್ಪತ್ರೆ ಆರಂಭ
ಹಾವೇರಿ : ಶಿವಮೊಗ್ಗದ ಸರ್ಜಿ ಆಸ್ಪತ್ರೆಗಳ ಸಮೂಹದ ಅಡಿಯಲ್ಲಿ ಹಾವೇರಿಯ ದೇವಧರ ಆಸ್ಪತ್ರೆಯಲ್ಲಿ ೫೦ಬೆಡ್ಗಳ ಸರ್ಜಿ ರೇಣುಕಾ ದೇವಧರ ಆಸ್ಪತ್ರೆಯನ್ನು ಆರಂಭಿಸಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಹೇಳಿದರು.
ಸೋಮವಾರ ದೇವಧರ ಆಸ್ಪತ್ರೆಯಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶಿವಮೊಗ್ಗದಲ್ಲಿ ೧೦ ವರ್ಷಗಳಲ್ಲಿ ಅತ್ಯಾಧುನಿಕ ಸೌಲಭ್ಯಗಳುಳ್ಲ ೩೦೦ ಬೆಡ್ ಹಾಸ್ಪಿಟಲ್ ಆರಂಭಿಸಲಾಗಿದ್ದು, ನಮ್ಮೆ ೬ನೇ ಶಾಖೆ ಹಾವೇರಿಯಲ್ಲಿ ಆರಂಭವಾಗಿದೆ. ಹಾವೇರಿಯ ದೇವಧರ ಆಸ್ಪತ್ರೆ ಗೆ ೯೭ ವರ್ಷಗಳ ಇತಿಹಾಸ ಹೊಂದಿದೆ. ರೋಗಿಗಳಿಗೆ ಕಡಿಮೆ ದರದಲ್ಲಿ ಉತ್ತಮ ಚಿಕಿತ್ಸೆ ನೀಡುವ ಉದ್ದೇಶ ಹೊಂದಿದ್ದು, ವೆಂಟಿಲೇಶನ್ ಒಂದು ದಿನಕ್ಕೆ ೯೫೦೦ ದರ ನಿಗದಿಮಾಡಿದ್ದೇವೆ. ಹಾವೇರಿ ಸೇರಿದಮತೆ ಸುತ್ತ ಮುತ್ತಲಿನ ಜನತೆಗೆ ಗೆ ಕೈಗೆಟುಕುವ ದರದಲ್ಲಿ ಉತ್ತಮ ಚಿಕಿತ್ಸೆ ನೀಡಲು ಅವಕಾಶದೊರೆತಿದೆ. ಒಳ್ಳೆಯ ಸೇವೆ ಒದಗಿಸುವ ಬದ್ದತೆ ನಮ್ಮದು. ಹಾವೇರಿ ಯಲ್ಲಿ ನರರೋಗ ಮತ್ತು ಹೃದಯ ಚಿಕಿತ್ಸೆ ನೀಡಲು ನಾವು ಮುಂದಾಗಲಿದ್ದೇವೆ ಎಂದರು.
ಡಾ. ಮಧು ಮಾತನಾಡಿ ತಮ್ಮ ತಾಯಿಗೆ ಸೂಕ್ತ ಚಿಕಿತ್ಸೆ ಸಿಗದ ನೋವು ನನ್ನನ್ನು ಕಾಡುತ್ತಿದೆ. ಹೀಗಾಗಿ ನಾನು ಹಾವೇರಿಯಲ್ಲಿ ಆಸ್ಪತ್ರೆ ಆರಂಭಿಸಿದ್ದು, ದೊಡ್ಡ ನಗರಗಳಲ್ಲಿ ಸಿಗುವ ಚಿಕಿತ್ಸೆ ಹಾವೇರಿಯಲ್ಲಿ ದೊರೆಯಬೇಕೆನ್ನುವ ಮಹಾದಾಸೆಯಿಂದ ಸರ್ಜಿ ಆಸ್ಪತ್ರೆಗಳ ಸಮೂಹದ ಸರ್ಜಿ ರೇಣುಕಾ ದೇವಧರ ಆಸ್ಪತ್ರೆ ಆರಂಭಿಸಿದ್ದು, ಈಗ ೫೦ ಹಾಸಿಗೆ ಈ ಆಸ್ಪತ್ರೆಯನ್ನು ಬರುವದಿನಗಳಲ್ಲಿ ೧೦೦ ಬೆಡ್ ಹಾಸ್ಪಿಟಲ್ನ್ನಾಗಿ ಮಾಡುವುದಾಗಿ ತಿಳಿಸಿದ ಅವರು ತೀವ್ರ ನಿಗಾ ಘಟಕ, ತುರ್ತು ಚಿಕಿತ್ಸಾ, ನವಜಾತ ಶಿಶು ತೀವ್ರ ಘಟಕ, ರೇಡಿಯೋ ಲಜಿ, ಸರ್ಜರಿ ಘಟಕ ಆರಂಭಿಸುತ್ತಿರುವುದಾಗಿ ತಿಳಿಸಿದರು.
ಡಾ. ಸಂಜಯ ದೇವಧರ ಮಾತನಾಡಿ ಸೇವಾಮನೋಭಾವದಿಂದ ನಮ್ಮ ತಂದೆ ಡಾ.ಜಾನ್ ದೇವಧರ ಅವರು ಸೇವೆ ಸಲ್ಲಿಸಿ ಜನಮಾನಸದಲ್ಲಿ ಹೆಸರಾಗಿದ್ದಾರೆ.ಅವರ ಸೇವಾಮನೋಭಾವನೆಯ ಮೂಲಕ ಜಿಲ್ಲೆಯಲ್ಲಿ ಉತ್ತಮ ಚಿಕಿತ್ಸೆ ನೀಡುವಲ್ಲಿ ರೇಣುಕಾ ದೇವಧರ ಆಸ್ಪತ್ರೆ ಮುಂದಾಗಲಿದೆ. ಸಿಟಿ ಸ್ಕ್ಯಾನ್, ಕಾರ್ಡಿಯಾಕ್ ಗೆ ಆದ್ಯತೆ ನೀಡಲಿದ್ದೇವೆ ಎಂದರು.
ಮಾಧುರಿ ದೇವಧರ ಮಾತನಾಡಿ ನಮ್ಮ ಮಾವನವರು ಅಮೇರಿಕಾದಲ್ಲಿ ವೈದ್ಯಕೀಯ ಶಿಕ್ಷಣ ಕಲಿತು ಅಲ್ಲಿನ ಮಾದರಿಯಲ್ಲಿ ಹಾವೇರಿಯಲ್ಲಿ ಆಸ್ಪತ್ರೆ ನಿರ್ಮಿಸಿದ್ದರು. ತಮ್ಮ ಪತಿ ಡಾ.ಜಾನ ದೇವಧರ ಅವರು ಸಹ ವಿದೇಶದಲ್ಲಿ ವೈದ್ಯಕೀಯ ಶಿಕ್ಷಣ ಕಲಿತು ಹಾವೇರಿಯಲ್ಲಿ ಜನತೆಗೆ ಉತ್ತಮ ಚಿಕಿತ್ಸೆ ನೀಡುವ ಮೂಲಕ ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಅವರ ಸೇವಾಮನೋಭಾವವನ್ನು ಸರ್ಜಿ ರೇಣುಕಾ ದೇವಧರ ಆಸ್ಪತ್ರೆಯ ಮೂಲಕ ತಮ್ಮ ಪುತ್ರ ಡಾ. ಸಂಜಯ ದೇವಧರ ಹಾಗೂ ಇತರೇ ವ್ಯದ್ಯರು ಮುಂದುವರೆಸಿರುವುದು ಸಂತಸ ತಂದಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಗದೀಶ ಬಸೇಗೆಣ್ಣಿ ಮತ್ತಿತರರು ಇದ್ದರು.
sub-editor
kourava daily,
haveri