ಹಾವೇರಿ:ಅಪ್ರಾಪ್ತ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ, ಬಾಲಕರಿಗೆ 25 ವರ್ಷ ಕಠಿಣ ಶಿಕ್ಷೆ,3ಲಕ್ಷರೂ ದಂಡ

Date:

ಹಾವೇರಿ:ಅಪ್ರಾಪ್ತ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ, ಬಾಲಕರಿಗೆ 25 ವರ್ಷ ಕಠಿಣ ಶಿಕ್ಷೆ,3ಲಕ್ಷರೂ ದಂಡ
ಹಾವೇರಿ: ಅಪ್ರಾಪ್ತ ಬಾಲಕಿಯ
 ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆಮಾಡಿದ ಬಾಲಕರಿಗೆ 25 ವರ್ಷ ಕಠಿಣ ಶಿಕ್ಷೆ,3ಲಕ್ಷರೂ ದಂಡ ವಿಧಿಸಿ ಹಾವೇರಿಯ ಮಾನ್ಯ ವಿಶೇಷ ಸತ್ರ ನ್ಯಾಯಾಲಯ (ಎಫ್.ಟಿ.ಎಸ್.ಸಿ-1) ದ ನ್ಯಾಯಾಧೀಶರಾದ ಶ್ರೀ ನಿಂಗೌಡ ಪಾಟೀಲ ಅವರು ತೀರ್ಪು ನೀಡಿದ್ದಾರೆ
ಜಿಲ್ಲೆಯ ರಾಣೇಬೆನ್ನೂರಲ್ಲಿ
ದಿನಾಂಕ 19-11-2016 ರಂದು ಸಂಜೆ 6-00 ಗಂಟೆಯಿಂದ ರಾತ್ರಿ 8-00 ಗಂಟೆ ನಡುವಿನ ಅವಧಿಯಲ್ಲಿ ನೊಂದ ಬಾಲಕಿ ಅಪ್ರಾಪ್ತಳು ಎಂದು ತಿಳಿದೂ 1 ಮತ್ತು 2ನೇ ಕಾನೂನು ಸಂಘರ್ಷಕ್ಕೊಳಗಾದ ಬಾಲಕರಿಬ್ಬರೂ ಬಾಲಕಿ ಒಬ್ಬಳೇ ಮನೆಯಲ್ಲಿರುವುದನ್ನು ಗಮನಿಸಿ ಸದರಿ ಬಾಲಕರಿಬ್ಬರೂ ತಮ್ಮ ಏಕೋದ್ದೇಶದಿಂದ ಅಜೀವ ಕಾರಾವಾಸದ ದಂಡನೀಯ ಅಪರಾಧ ಮಾಡುವ ಉದ್ದೇಶದೊಂದಿಗೆ ಫಿರ್ಯಾದಿದಾರರ ಮನೆಯನ್ನು ಅಕ್ರಮ ಪ್ರವೇಶ ಮಾಡಿ ನೊಂದ ಬಾಲಕಿಯನ್ನು ಸ್ಟೋರ ರೂಮಿಗೆ ಎಳೆದುಕೊಂಡು ಹೋಗಿ ದೌರ್ಜನ್ಯ ಎಸಗಿ‌ ನೊಂದ ಬಾಲಕಿಯ ಕುತ್ತಿಗೆಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದರು.
ಈ ಅಪರಾಧಗಳಿಗಾಗಿ ರಾಣೇಬೆನ್ನೂರು ಶಹರ ಪೋಲೀಸ ಠಾಣೆ ಸಿ.ಪಿ.ಆಯ್
ರವೀಂದ್ರ ಕುರುಬಗಟ್ಟಿ ಅವರು ತನಿಖೆ ಕೈಗೊಂಡು ಇಬ್ಬರೂ ಕಾನೂನು ಸಂಘರ್ಷಕ್ಕೊಳಗಾದ ಬಾಲಕರ ಮೇಲೆ ಕಲಂ: 376-ಡಿ, 302, 450 ಸಹಕಲಂ.34 ಐಪಿಸಿ ಕಲಂ.4, 6. 12 ಪೋಕೋ ಕಾಯ್ದೆ ಅಡಿಯಲ್ಲಿ ಮಾನ್ಯ ನ್ಯಾಯಾಲಯಕ್ಕೆ ಸದರಿ ಬಾಲಕರಿಬ್ಬರ ವಿರುದ್ಧ ದೋಷಾರೋಪಣಾ ಪತ್ರವನ್ನು ಬಾಲನ್ಯಾಯ ಮಂಡಳಿಗೆ ಸಲ್ಲಿಸಿದ್ದರು.
,ಸದರಿ ಪ್ರಕರಣವು ಪೋಕ್ಸ
 ವಿಶೇಷ ನ್ಯಾಯಾಲಯ, ಎಫ್.ಟಿ.ಎಸ್.ಸಿ.-1, ಹಾವೇರಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು ಇರುತ್ತದೆ.
ಸದರಿ ಪ್ರಕರಣದಲ್ಲಿ ಕಾನೂನು ಸಂಘರ್ಷಕ್ಕೊಳಗಾದ ಎರಡೂ ಬಾಲಕರ (ಪ್ರಸ್ತುತ ವಯಸ್ಕರಾಗಿದ್ದು) ಮೇಲೆ ಹೊರಿಸಲಾದ ಅಪಾದನೆಗಳಾದ ಕಲಂ: 376-ಡಿ, 302, 450 ಸಹಕಲಂ.34 ಐಪಿಸಿ ಕಲಂ.4, 6, 12 ಪೋಕ್ಸ ಕಾಯ್ದೆ ರಡಿಯಲ್ಲಿ ಅಪಾದನೆಗಳನ್ನು ಅಭಿಯೋಜನೆಯು ರುಜುವಾತುಪಡಿಸಿರುತ್ತದೆ ಎಂದು ಹಾವೇರಿಯ ಮಾನ್ಯ ವಿಶೇಷ ಸತ್ರ ನ್ಯಾಯಾಲಯ (ಎಫ್.ಟಿ.ಎಸ್.ಸಿ-1) ದ ನ್ಯಾಯಾಧೀಶರಾದ ಶ್ರೀ ನಿಂಗೌಡ ಪಾಟೀಲ ಅವರು ಸದರಿ 1, 2 ನೇ ಕಾನೂನು ಸಂಘರ್ಷಕ್ಕೊಳಗಾದ ಬಾಲಕರಿಗೆ 25 ವರ್ಷಗಳ ಕಠಿಣ ಕಾರಾವಾಸ ಶಿಕ್ಷೆ ಮತ್ತು ಒಟ್ಟು ತಲಾ ರೂ 3,00,000/- ಗಳ ದಂಡವನ್ನು ವಿಧಿಸಿರುತ್ತಾರೆ.
 ಸದರಿ ದಂಡದ ಹಣದಲ್ಲಿ ಮೃತ ನೊಂದಬಾಲಕಿಯ ತಾಯಿ, ತಮ್ಮನಿಗೆ ರೂ. 3,00,000/- ಗಳ ಪರಿಹಾರ ಹಾಗೂ ಕರ್ನಾಟಕ ಸರ್ಕಾರದ ನೊಂದವರ ಪರಿಹಾರ ನಿಧಿ ಯೋಜನೆಯಡಿ ಇರುವ ಪರಿಹಾರ ನಿಧಿಯಿಂದ ಕರ್ನಾಟಕ ಸರ್ಕಾರವು ನೊಂದ ಬಾಲಕಿಯ ತಾಯಿ, ತಮ್ಮನಿಗೆ ರೂ. 10,00,000/- (ಹತ್ತು ಲಕ್ಷ ರೂಪಾಯಿ) ಗಳ ಪರಿಹಾರವನ್ನು ನೀಡಬೇಕೆಂದು ಆದೇಶ ಮಾಡಿ ದಿನಾಂಕ: 08-11-2024 ರಂದು ತೀರ್ಪು ನೀಡಿರುತ್ತಾರೆ.
ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ  ವಿಜಯಕುಮಾರ ಶಂಕರಗೌಡ ಪಾಟೀಲ್ ವಿಶೇಷ ಸರ್ಕಾರಿ ಅಭಿಯೋಜಕರು ಪ್ರಕರಣ ನಡೆಸಿ ವಾದ ಮಂಡಿಸಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

ಹಾವೇರಿ:ಅಪ್ರಾಪ್ತ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ, ಬಾಲಕರಿಗೆ 25 ವರ್ಷ ಕಠಿಣ ಶಿಕ್ಷೆ,3ಲಕ್ಷರೂ ದಂಡ
ಹಾವೇರಿ: ಅಪ್ರಾಪ್ತ ಬಾಲಕಿಯ
 ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆಮಾಡಿದ ಬಾಲಕರಿಗೆ 25 ವರ್ಷ ಕಠಿಣ ಶಿಕ್ಷೆ,3ಲಕ್ಷರೂ ದಂಡ ವಿಧಿಸಿ ಹಾವೇರಿಯ ಮಾನ್ಯ ವಿಶೇಷ ಸತ್ರ ನ್ಯಾಯಾಲಯ (ಎಫ್.ಟಿ.ಎಸ್.ಸಿ-1) ದ ನ್ಯಾಯಾಧೀಶರಾದ ಶ್ರೀ ನಿಂಗೌಡ ಪಾಟೀಲ ಅವರು ತೀರ್ಪು ನೀಡಿದ್ದಾರೆ
ಜಿಲ್ಲೆಯ ರಾಣೇಬೆನ್ನೂರಲ್ಲಿ
ದಿನಾಂಕ 19-11-2016 ರಂದು ಸಂಜೆ 6-00 ಗಂಟೆಯಿಂದ ರಾತ್ರಿ 8-00 ಗಂಟೆ ನಡುವಿನ ಅವಧಿಯಲ್ಲಿ ನೊಂದ ಬಾಲಕಿ ಅಪ್ರಾಪ್ತಳು ಎಂದು ತಿಳಿದೂ 1 ಮತ್ತು 2ನೇ ಕಾನೂನು ಸಂಘರ್ಷಕ್ಕೊಳಗಾದ ಬಾಲಕರಿಬ್ಬರೂ ಬಾಲಕಿ ಒಬ್ಬಳೇ ಮನೆಯಲ್ಲಿರುವುದನ್ನು ಗಮನಿಸಿ ಸದರಿ ಬಾಲಕರಿಬ್ಬರೂ ತಮ್ಮ ಏಕೋದ್ದೇಶದಿಂದ ಅಜೀವ ಕಾರಾವಾಸದ ದಂಡನೀಯ ಅಪರಾಧ ಮಾಡುವ ಉದ್ದೇಶದೊಂದಿಗೆ ಫಿರ್ಯಾದಿದಾರರ ಮನೆಯನ್ನು ಅಕ್ರಮ ಪ್ರವೇಶ ಮಾಡಿ ನೊಂದ ಬಾಲಕಿಯನ್ನು ಸ್ಟೋರ ರೂಮಿಗೆ ಎಳೆದುಕೊಂಡು ಹೋಗಿ ದೌರ್ಜನ್ಯ ಎಸಗಿ‌ ನೊಂದ ಬಾಲಕಿಯ ಕುತ್ತಿಗೆಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದರು.
ಈ ಅಪರಾಧಗಳಿಗಾಗಿ ರಾಣೇಬೆನ್ನೂರು ಶಹರ ಪೋಲೀಸ ಠಾಣೆ ಸಿ.ಪಿ.ಆಯ್
ರವೀಂದ್ರ ಕುರುಬಗಟ್ಟಿ ಅವರು ತನಿಖೆ ಕೈಗೊಂಡು ಇಬ್ಬರೂ ಕಾನೂನು ಸಂಘರ್ಷಕ್ಕೊಳಗಾದ ಬಾಲಕರ ಮೇಲೆ ಕಲಂ: 376-ಡಿ, 302, 450 ಸಹಕಲಂ.34 ಐಪಿಸಿ ಕಲಂ.4, 6. 12 ಪೋಕೋ ಕಾಯ್ದೆ ಅಡಿಯಲ್ಲಿ ಮಾನ್ಯ ನ್ಯಾಯಾಲಯಕ್ಕೆ ಸದರಿ ಬಾಲಕರಿಬ್ಬರ ವಿರುದ್ಧ ದೋಷಾರೋಪಣಾ ಪತ್ರವನ್ನು ಬಾಲನ್ಯಾಯ ಮಂಡಳಿಗೆ ಸಲ್ಲಿಸಿದ್ದರು.
,ಸದರಿ ಪ್ರಕರಣವು ಪೋಕ್ಸ
 ವಿಶೇಷ ನ್ಯಾಯಾಲಯ, ಎಫ್.ಟಿ.ಎಸ್.ಸಿ.-1, ಹಾವೇರಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು ಇರುತ್ತದೆ.
ಸದರಿ ಪ್ರಕರಣದಲ್ಲಿ ಕಾನೂನು ಸಂಘರ್ಷಕ್ಕೊಳಗಾದ ಎರಡೂ ಬಾಲಕರ (ಪ್ರಸ್ತುತ ವಯಸ್ಕರಾಗಿದ್ದು) ಮೇಲೆ ಹೊರಿಸಲಾದ ಅಪಾದನೆಗಳಾದ ಕಲಂ: 376-ಡಿ, 302, 450 ಸಹಕಲಂ.34 ಐಪಿಸಿ ಕಲಂ.4, 6, 12 ಪೋಕ್ಸ ಕಾಯ್ದೆ ರಡಿಯಲ್ಲಿ ಅಪಾದನೆಗಳನ್ನು ಅಭಿಯೋಜನೆಯು ರುಜುವಾತುಪಡಿಸಿರುತ್ತದೆ ಎಂದು ಹಾವೇರಿಯ ಮಾನ್ಯ ವಿಶೇಷ ಸತ್ರ ನ್ಯಾಯಾಲಯ (ಎಫ್.ಟಿ.ಎಸ್.ಸಿ-1) ದ ನ್ಯಾಯಾಧೀಶರಾದ ಶ್ರೀ ನಿಂಗೌಡ ಪಾಟೀಲ ಅವರು ಸದರಿ 1, 2 ನೇ ಕಾನೂನು ಸಂಘರ್ಷಕ್ಕೊಳಗಾದ ಬಾಲಕರಿಗೆ 25 ವರ್ಷಗಳ ಕಠಿಣ ಕಾರಾವಾಸ ಶಿಕ್ಷೆ ಮತ್ತು ಒಟ್ಟು ತಲಾ ರೂ 3,00,000/- ಗಳ ದಂಡವನ್ನು ವಿಧಿಸಿರುತ್ತಾರೆ.
 ಸದರಿ ದಂಡದ ಹಣದಲ್ಲಿ ಮೃತ ನೊಂದಬಾಲಕಿಯ ತಾಯಿ, ತಮ್ಮನಿಗೆ ರೂ. 3,00,000/- ಗಳ ಪರಿಹಾರ ಹಾಗೂ ಕರ್ನಾಟಕ ಸರ್ಕಾರದ ನೊಂದವರ ಪರಿಹಾರ ನಿಧಿ ಯೋಜನೆಯಡಿ ಇರುವ ಪರಿಹಾರ ನಿಧಿಯಿಂದ ಕರ್ನಾಟಕ ಸರ್ಕಾರವು ನೊಂದ ಬಾಲಕಿಯ ತಾಯಿ, ತಮ್ಮನಿಗೆ ರೂ. 10,00,000/- (ಹತ್ತು ಲಕ್ಷ ರೂಪಾಯಿ) ಗಳ ಪರಿಹಾರವನ್ನು ನೀಡಬೇಕೆಂದು ಆದೇಶ ಮಾಡಿ ದಿನಾಂಕ: 08-11-2024 ರಂದು ತೀರ್ಪು ನೀಡಿರುತ್ತಾರೆ.
ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ  ವಿಜಯಕುಮಾರ ಶಂಕರಗೌಡ ಪಾಟೀಲ್ ವಿಶೇಷ ಸರ್ಕಾರಿ ಅಭಿಯೋಜಕರು ಪ್ರಕರಣ ನಡೆಸಿ ವಾದ ಮಂಡಿಸಿದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...