ಹಾವೇರಿಯ ಬಳಿ ಚಿರತೆಮರಿಗಳು ಪತ್ತೆ
ಹಾವೇರಿ: ಕಬ್ಬು ಕಟಾವು ಮಾಡುತ್ತಿದ್ದ ವೇಳೆ ಎರಡು ಪುಟ್ಟ ಚಿರತೆಮರಿಗಳು ಕಬ್ಬು ಕಟಾವು ಕಾರ್ಮಿಕರ ಕಣ್ಣಿಗೆ ಬಿದ್ದಿದ್ದು, ಹೊಲದ ಮಾಲೀಕರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಒಪ್ಪಿಸಿದ ಘಟನೆ ಭಾನುವಾರ ಹಾವೇರಿ ಯ ಬಳಿಯ ಕುಳೇನೂರು ಗ್ರಾಮದಲ್ಲಿ ನಡೆದಿದೆ.
ಕುಳೇನೂರುಗ್ರಾಮದ ಜಗದೀಶ್ ಮತ್ತಿಹಳ್ಳಿಎನ್ನುವವರ ಹೊಲದಲ್ಲಿ ಕಬ್ಬು ಕಟಾವು ಮಾಡುತ್ತಿದ್ದ ವೇಳೆ ಕಾರ್ಮಿಕರ ಕಣ್ಣಿಗೆಜೋಡಿ ಚಿರತೆಮರಿಗಳು ಕಂಡಿವೆ. ತಕ್ಷಣವೇ ವಿಷಯವನ್ನು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಕಬ್ಬಿನ ಹೊಲಕ್ಕೆ ಭೇಟಿ ನೀಡಿದ ಆರ್ ಎಫ್ ಓ ಮಾಹಾಂತೇಶ ನ್ಯಾಮತಿಚಿರತೆಮರಿಗಳನ್ನು ಪಡೆದು ತಾಯಿಚಿರತೆ ಬಂದುಮರಿಗಳನ್ನು ತಗೆದುಕೊಂಡಹೋಗುತ್ತದೆ ಎಂದು ದೂರದಲ್ಲಿ ನಿಂತು ತಮ್ಮ ಸಿಬ್ಬಂದಿ ಜೊತೆಗೆ ಕಾಯ್ದು ನಿಂತರು.
ಸಂಜೆ ವೇಳೆ ಬಂದ ತಾಯಿಚಿರತೆ ಒಂದು ಮರಿಯನ್ನು ತೆಗೆದುಕೊಂಡು ಹೋಗಿದೆ.ಇನ್ನೊಂದು ಮರಿ ಕಬ್ಬಿನ ಹೊಲದಲ್ಲಿ ಇದ್ದು, ಅರಣ್ಯ ಇಲಾಖೆಯ ವರು ತಾಯಿ ಚಿರತೆ ಬರುವಿಕೆಗಾಗಿ ದೂರದಲ್ಲಿ ಕಾಯುತ್ತಿದ್ದಾರೆ.