ಜ.೦೫ ರಿಂದ ೧೦ ರವರೆಗೆ ಹಾವೇರಿ ಹುಕ್ಕೇರಿಮಠದ ನಮ್ಮೂರಜಾತ್ರೆ

Date:

ಜ.೦೫ ರಿಂದ ೧೦ ರವರೆಗೆ ಹಾವೇರಿ ಹುಕ್ಕೇರಿಮಠದ ನಮ್ಮೂರಜಾತ್ರೆ
ಹಾವೇರಿ: ಮರಿ ಕಲ್ಯಾಣ ಖ್ಯಾತಿಯ ಹುಕ್ಕೇರಿಮಠ ಗೌರವ, ಘನತೆ ಹೊಂದಿದೆ. ಕಲೆ, ಸಾಹಿತ್ಯ, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ತನ್ನದೇ ಆದ ಕೊಡುಗೆ ನೀಡಿರುವ ನಾಡಿನ ಪ್ರಮುಖ ಧಾರ್ಮಿಕ ಕೇಂದ್ರವಾಗಿರುವ ಹಾವೇರಿನಗರದ ಶ್ರೀ ಹುಕ್ಕೇರಿಮಠದ ಲಿಂ. ಶಿವಬಸವ ಮಹಾಸ್ವಾಮಿಗಳ ೭೯ನೇ ಹಾಗೂ ಶಿವಲಿಂಗಮಹಾಸ್ವಾಮಿಗಳ ೧೬ನೇ ಪುಣ್ಯ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳು ಜಿ.೦೫ರಿಂದ ಜ.೧೦ರವರಗೆ ನಡೆಯಲಿವೆ ಎಂದು ಹುಕ್ಕೇರಿಮಠದ ಮಠಾಧ್ಯಕ್ಷರಾದ ಸದಾಶಿವ ಮಹಾಸ್ವಾಮೀಜಿ ತಿಳಿಸಿದರು.
ಬುಧವಾರ ಹುಕ್ಕೇರಿಮಠದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಜಾತ್ರೆಯ ವಿವರಗಳನ್ನು ನೀಡಿದ ಅವರು ಉಭಯಶ್ರೀಗಳ ಪುಣ್ಯದಿನಾಚರಣೆಯ ಅಂಗವಾಗಿ ಜ.೦೫ ರಿಂದ ೧೦ ರವರೆಗೆ ಹಾವೇರಿ ಹುಕ್ಕೇರಿಮಠದಲ್ಲಿ ನಮ್ಮೂರಜಾತ್ರೆಯಲ್ಲಿ ವೈಚಾರಿಕ, ಜನೋಪಯೋಗಿ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾಧಕರಿಗೆ ಹಾಗೂ ಅಧಿಕಾರ ವರ್ಗಕ್ಕೆ ಗೌರವ ಸನ್ಮಾನ, ಕಲೆ, ಸಂಸ್ಕ್ರತಿಯ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ.
ರೊಟ್ಟಿ ಜಾತ್ರೆಯು ಸಹ ನಡೆಯಲಿದ್ದು, ಭಕ್ತರು ನೀಡುವ ರೊಟ್ಟಿಗಳನ್ನು ಪ್ರಸಾದಕ್ಕೆ ವಿನಯೋಗಿಸಲಾಗುವುದು ಎಂದು ಅವರು ಜಿ.೧೦ರಂದು ಉಭಯ ಶ್ರೀಗಳ ಭಾವಚಿತ್ರದ ಮೆರವಣಿಗೆ ನಗರದಲ್ಲಿ ನಡೆಯಲಿದ್ದು, ನಾಡಿನ ವಿವಿಧ ಖ್ಯಾತ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ. ೫೦ಸಾವಿರಕ್ಕೂ ಅಧಿಕ ಭಕ್ತಾದಿಗಳು ಉಭಯಶ್ರೀಗಳ ಉತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಾತ್ರಾ ಕಮಿಟಿಯ ಅಧ್ಯಕ್ಷ ಅಶೋಕ್ ಮಗನೂರ್ ಪ್ರಮುಖರಾದ ಎಸ್. ಎಸ್. ಮುಷ್ಟಿ, ಆರ್.ಎಸ್. ಮಾಗನೂರ್, ಮಾಂತಪ್ಪ ಹಲಗಣ್ಣವರ್, ಅಮೃತಮ್ಮ ಶೀಲವಂತರ, ಸಿ.ಜಿ. ತೋಟಣ್ಣನವರ್. ಜಗದೀಶ್ ತುಪ್ಪದ, ಶಿವಯೋಗಿ ವಾಲಿಶೆಟ್ಟರ್, ರಾಜಪ್ಪ ಲಂಬಿ, ಎಸ್.ಸಿ. ಮರಳಿಹಳ್ಳಿ, ಬಿ. ಬಸವರಾಜಪ್ಪ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

Popular

ಜ.೦೫ ರಿಂದ ೧೦ ರವರೆಗೆ ಹಾವೇರಿ ಹುಕ್ಕೇರಿಮಠದ ನಮ್ಮೂರಜಾತ್ರೆ
ಹಾವೇರಿ: ಮರಿ ಕಲ್ಯಾಣ ಖ್ಯಾತಿಯ ಹುಕ್ಕೇರಿಮಠ ಗೌರವ, ಘನತೆ ಹೊಂದಿದೆ. ಕಲೆ, ಸಾಹಿತ್ಯ, ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ತನ್ನದೇ ಆದ ಕೊಡುಗೆ ನೀಡಿರುವ ನಾಡಿನ ಪ್ರಮುಖ ಧಾರ್ಮಿಕ ಕೇಂದ್ರವಾಗಿರುವ ಹಾವೇರಿನಗರದ ಶ್ರೀ ಹುಕ್ಕೇರಿಮಠದ ಲಿಂ. ಶಿವಬಸವ ಮಹಾಸ್ವಾಮಿಗಳ ೭೯ನೇ ಹಾಗೂ ಶಿವಲಿಂಗಮಹಾಸ್ವಾಮಿಗಳ ೧೬ನೇ ಪುಣ್ಯ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿರುವ ವಿವಿಧ ಕಾರ್ಯಕ್ರಮಗಳು ಜಿ.೦೫ರಿಂದ ಜ.೧೦ರವರಗೆ ನಡೆಯಲಿವೆ ಎಂದು ಹುಕ್ಕೇರಿಮಠದ ಮಠಾಧ್ಯಕ್ಷರಾದ ಸದಾಶಿವ ಮಹಾಸ್ವಾಮೀಜಿ ತಿಳಿಸಿದರು.
ಬುಧವಾರ ಹುಕ್ಕೇರಿಮಠದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಜಾತ್ರೆಯ ವಿವರಗಳನ್ನು ನೀಡಿದ ಅವರು ಉಭಯಶ್ರೀಗಳ ಪುಣ್ಯದಿನಾಚರಣೆಯ ಅಂಗವಾಗಿ ಜ.೦೫ ರಿಂದ ೧೦ ರವರೆಗೆ ಹಾವೇರಿ ಹುಕ್ಕೇರಿಮಠದಲ್ಲಿ ನಮ್ಮೂರಜಾತ್ರೆಯಲ್ಲಿ ವೈಚಾರಿಕ, ಜನೋಪಯೋಗಿ ಕಾರ್ಯಕ್ರಮ ಆಯೋಜಿಸಲಾಗಿದೆ. ಸಾಧಕರಿಗೆ ಹಾಗೂ ಅಧಿಕಾರ ವರ್ಗಕ್ಕೆ ಗೌರವ ಸನ್ಮಾನ, ಕಲೆ, ಸಂಸ್ಕ್ರತಿಯ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ.
ರೊಟ್ಟಿ ಜಾತ್ರೆಯು ಸಹ ನಡೆಯಲಿದ್ದು, ಭಕ್ತರು ನೀಡುವ ರೊಟ್ಟಿಗಳನ್ನು ಪ್ರಸಾದಕ್ಕೆ ವಿನಯೋಗಿಸಲಾಗುವುದು ಎಂದು ಅವರು ಜಿ.೧೦ರಂದು ಉಭಯ ಶ್ರೀಗಳ ಭಾವಚಿತ್ರದ ಮೆರವಣಿಗೆ ನಗರದಲ್ಲಿ ನಡೆಯಲಿದ್ದು, ನಾಡಿನ ವಿವಿಧ ಖ್ಯಾತ ಕಲಾತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಲಿವೆ. ೫೦ಸಾವಿರಕ್ಕೂ ಅಧಿಕ ಭಕ್ತಾದಿಗಳು ಉಭಯಶ್ರೀಗಳ ಉತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಾತ್ರಾ ಕಮಿಟಿಯ ಅಧ್ಯಕ್ಷ ಅಶೋಕ್ ಮಗನೂರ್ ಪ್ರಮುಖರಾದ ಎಸ್. ಎಸ್. ಮುಷ್ಟಿ, ಆರ್.ಎಸ್. ಮಾಗನೂರ್, ಮಾಂತಪ್ಪ ಹಲಗಣ್ಣವರ್, ಅಮೃತಮ್ಮ ಶೀಲವಂತರ, ಸಿ.ಜಿ. ತೋಟಣ್ಣನವರ್. ಜಗದೀಶ್ ತುಪ್ಪದ, ಶಿವಯೋಗಿ ವಾಲಿಶೆಟ್ಟರ್, ರಾಜಪ್ಪ ಲಂಬಿ, ಎಸ್.ಸಿ. ಮರಳಿಹಳ್ಳಿ, ಬಿ. ಬಸವರಾಜಪ್ಪ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...