ಶೋಷಿತರ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿಗಾಗಿ ಜಾತಿ ಗಣತಿ ಜಾರಿಯಾಗಲಿ : ಪೇಲನವರ

Date:

ಶೋಷಿತರ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿಗಾಗಿ ಜಾತಿ ಗಣತಿ ಜಾರಿಯಾಗಲಿ : ಪೇಲನವರ
ಹಾವೇರಿ: ಹಿಂದುಳಿದ ಆಯೋಗ ಈಗಾಗಲೇ ರಾಜ್ಯ ಸರಕಾರಕ್ಕೆ ಜಾತಿ ಜನ ಗಣತಿ ವರದಿ ನೀಡಿಯಾಗಿದೆ.  ಈ ವರದಿಯನ್ನು ಅಂಗೀಕರಿಸಿ ಮುಂದೇನು ಮಾಡಬೇಕು ಎಂದು ನಿರ್ಧರಿಸುವ ಜವಾಬ್ದಾರಿ ರಾಜ್ಯ ಸರ್ಕಾರದ ಮುಂದಿದೆ. ಆದರೆ, ಈ ವರದಿಯ ಬಗ್ಗೆ ಪರ ವಿರೋಧ ಚರ್ಚೆಗಳು ನಡೆದಿದ್ದು, ಕೆಲವರು ಸರ್ಕಾರವನ್ನು ಕೆಡುವುವ ಮಾತುಗಳನ್ನಾಡಿದ್ದಾರೆ. ಆದರೆ ಜಾತಿ ಗಣತಿ ವಿರೋಧಿಸುವವರಿಗೆ ಮೇಲ್ನೋಟಕ್ಕೆ ನಿಜವಾದ ಶೋಷಿತರ ಬಗ್ಗೆ ಕಾಳಜಿ ಇಲ್ಲದಿರುವುದು ಗೊತ್ತಾಗುತ್ತದೆ ಎಂದು  ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಬಸವರಾಜ ಪೇಲನವರ ತಿಳಿಸಿದ್ದಾರೆ.
ಜಾತಿ ಗಣತಿ ವಿರೋಧಿಸುವವರಿಗೆ ಬೇಕಾಗಿರುವುದು ತಮ್ಮ ತಮ್ಮ ಜಾತಿಯ ಅಂಕಿ-ಸAಖ್ಯೆಯ ಬಗ್ಗೆ ಕಾಳಜಿಯೇ ಹೊರತು ನೀಜವಾದ ಶೋಷಿತರ ಬಗ್ಗೆ ಕಾಳಜಿಯಿಂದಲ್ಲ.  ಈ ಹಿಂದೆ ಎಲ್.ಜಿ.ಹಾವನೂರು ನೀಡಿದ್ದ ಹಿಂದುಳಿದ ವರ್ಗದ ಪ್ರಥಮ ವರದಿಹಾವನೂರು ಆಯೋಗದವರದಿಯ ಬಗ್ಗೆಯೋ ಅನೇಕರು ವಿರೋಧಿಸಿದ್ದರು. ಈವರದಿಯನ್ನು ಸದನದಲ್ಲಿ ದಹಿಸಲಾಯಿತು. ತದನಂತರ ಬಂದ ಅನೇಕ ಹಿಂದುಳಿದ ವರ್ಗಗಳ ವರದಿಗೆ ವಿರೋಧಗಳು ವ್ಯಕ್ತವಾಗಿದ್ದವು.
ಶ್ರೇಣಿಕೃತ ವ್ಯವಸ್ಥೆಯ ನಮ್ಮ ದೇಶದಲ್ಲಿ, ರಾಜ್ಯಗಳಲ್ಲಿ ಜನ ಗಣತಿ ಜಾತಿ ಗಣತಿ ನಡೆಸುವುದು ತಪ್ಪಲ್ಲ. ಜಾತಿಗಣತಿಯ ಉದ್ದೇಶ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ಸಿಗಬೇಕು. ಶತ-ಶತಮಾನಗಳಿಂದ ಶೋಷಿಣೆೆಗೆ ಒಳಗಾದ ಜನರು, ಪ್ರಾಣಿಗಳಿಗಿಂತ ಕಡೆಯಾಗಿ ಜೀವನ ನಡೆಸಿದ, ನಡೆಸುತ್ತಿರುವ  ಜನರಿಗೆ ಸಮಪಾಲು-ಸಮಾಬಾಳು ಸಿಗಬೇಕೆನ್ನುವುದಾಗಿದೆ. ಈ ಜನರು  ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿ ಕಡೆಗೆ ಮುಖಮಾಡಬೇಕೆನ್ನುವುದಾಗಿದೆ ಹೊರತು ರಾಜಕೀಯ ಬೇಳೆ ಬೇಯಿಸಿ ಕೊಳ್ಳುವ ಜಾತಿ ಲೆಕ್ಕಾಚಾರವಾಗಬಾರದು.
ಒಂದು ದೇಶ ಅಥವಾ ರಾಜ್ಯದಲ್ಲಿ ಈ ಜನ ಗಣತಿ..ಲೆಕ್ಕಾಚಾರ ಅಗತ್ಯವಿದೆ. ಬಹುಮುಖ್ಯವಾಗಿ ಸರ್ಕಾರದ ಹತ್ತಾರು ಸವಲತ್ತುಗಳು ಜನರಿಗೆ ಹಂಚುವಾಗ ಸುಮ್ಮನೆ ನೀಡಲಿಲ್ಲ. ಅವರ ಜಾತಿ, ಶಿಕ್ಷಣ, ಆರ್ಥಿಕತೆ ಸಾಮಾಜಿಕ ಸ್ಥಾನ ಮಾನವನ್ನೆಲ್ಲ ನೋಡಿಕೊಂಡೆ ಹಂಚಿದ್ದಾರೆ ಅನ್ನುವುದು ಸತ್ಯ. ಹಾಗಾದರೆ ಈ ಸವಲತ್ತುಗಳು ಎಷ್ಟರ ಮಟ್ಟಿಗೆ ಅವರಿಗೆ ತಲುಪಿದೆ, ತಲುಪಲಿಲ್ಲ ಅನ್ನುವುದನ್ನು ತಿಳಿಯ ಬೇಕಾದರೆ ಇಂತಹ ಸಮೀಕ್ಷೆಯ ವರದಿಯ ಅನಿವಾರ್ಯತೆ ಇದೆ.
ಮುಖ್ಯ ಮಂತ್ರಿ ಸಿದ್ದರಾಮಯ್ಯನವರು “ಇದೊಂದು ರಾಜ್ಯದ ಜನಗಣತಿಯ ಲೆಕ್ಕಾಚಾರ ಅಷ್ಟೇ ಎನ್ನುತ್ತಾರೆ.  ಈ ವರದಿ ತಯಾರಿಸಿದ ಹಿಂದುಳಿದ ಆಯೋಗದ ಮಾಜಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಹೇಳುತ್ತಾರೆ ” ಈ ವರದಿಯನ್ನು ಓದಿದ ಮೇಲೆ ಅಭಿಪ್ರಾಯ ನೀಡಿ ಓದದೆ ಹೇಗೆ ಅಭಿಪ್ರಾಯ ನೀಡುತ್ತೀರಿ.. ತಪ್ಪಾಗಿದ್ದರೆ ಸರಿಮಾಡೋಣ ಅನ್ನುವ ಸಮಾಧಾನಕರ ಹೇಳಿಕೆ ನೀಡಿದ್ದಾರೆ.
ಈ ಜಾತಿ ಜನಗಣತಿ ಲೆಕ್ಕಾಚಾರದ ಬಗ್ಗೆ ಈಗ ಯಾಕೆ ಇಷ್ಟೊಂದು ಸ್ವರ ಅಪಸ್ವರಗಳು ಹುಟ್ಟಿ ಕೊಂಡಿದ್ದಾವೆ. ಇದಕ್ಕೆ ಬಲವಾದ ಕಾರಣ ಕರ್ನಾಟಕದ ತಳ ಸ್ಪರ್ಶಿ ಜಾತಿ ಜಾತಿ ನಡುವಿನ ರಾಜಕೀಯ ಮೇಲಾಟವೇ ಇದಕ್ಕೆ ಕಾರಣ ಅನ್ನುವುದು ಸ್ಪಷ್ಟ. ಈಗಾಗಲೇ ರಾಜ್ಯದ ಪ್ರಬಲ ಜಾತಿಗಳು ಅನ್ನಿಸಿಕೊಂಡ ಲಿಂಗಾಯತ ಮತ್ತು ಒಕ್ಕಲಿಗರು ನಾವು ಜಾತಿವಾರು ಲೆಕ್ಕಾಚಾರದಲ್ಲಿ ಮುಂದಿದ್ದೇವೆ ಹಾಗಾಗಿ ನಮಗೆ ರಾಜಕೀಯವಾಗಿ ಸಿಗಬೇಕಾದ ಸ್ಥಾನ ಮಾನಕ್ಕೆ ಎಂದು ಚ್ಯುತಿ ಬರಬಾರದು. ಒಂದು ವೇಳೆ ಹಿಂದುಳಿದ ವರ್ಗದ ಕ್ರೋಢಿಕೃತ ಜಾತಿ ಜನಗಣತಿ ನಮ್ಮನ್ನುಮೀರಿಸಿ ಬಿಟ್ಟರೆ ಇನ್ನೊಂದು ಪ್ರಬಲವಾದ ರಾಜಕೀಯ ಶಕ್ತಿ ಹುಟ್ಟಿ ಕೊಳ್ಳುವ ಸಾಧ್ಯತೆ ಅವರನ್ನು ಕಾಡಲು ಶುರುಮಾಡಿದೆ.
ಅದರಲ್ಲೂ ಸಿಎಂ ಸಿದ್ದರಾಮಯ್ಯ  ಅಂದರೆ ಅದು” ಅಹಿಂದ” ಪರ್ಯಾಯ ಶಕ್ತಿಯಾಗಿ ಹೊರ ಹೊಮ್ಮಬಹುದು ಅನ್ನುವ ಹೆದರಿಕೆ ಎಲ್ಲಾ ಪಕ್ಷಗಳಿರುವ ಲಿಂಗಾಯತ-ಒಕ್ಕಲಿಗರ ಹಿರಿಯ ನಾಯಕರನ್ನು ಕಾಡಲು ಶುರುಮಾಡಿದೆ. ಅದೇ ರೀತಿಯಲ್ಲಿ ಈ ಎರಡು ಪ್ರಬಲ ಜಾತಿಗೆ ಸೇರದ ಜಾತಿಗಳಲ್ಲಿ ಈ ಜಾತಿ ಜನಗಣತಿ ಲೆಕ್ಕಾಚಾರದ ಬಗ್ಗೆ ಅಷ್ಟೇನು ಅಪಸ್ವರವಿಲ್ಲ. ಈ ರಾಜಕೀಯ ಮೇಲಾಟದಲ್ಲಿ ಹಿಂದುತ್ವ ಸಿದ್ಧಾಂತ ನಂಬಿಕೊAಡಿರುವ ರಾಜಕೀಯ ನಿಷ್ಣಾತರಿಗೆ ಹಿಂದುತ್ವ ಅಲೆ ಈ ಜಾತಿ ಲೆಕ್ಕಾಚಾರದಲ್ಲಿ ಕಲುಷಿತಗೊಳ್ಳಬಹುದಾ ಅನ್ನುವ ಹೆದರಿಕೆಯೂ ಅವರನ್ನು ಕಾಡಲು ಶುರುಮಾಡಿದೆ.
ಬಹುಮುಖ್ಯವಾಗಿ ಜನಸಾಮಾನ್ಯರನ್ನು ಕಾಡುತ್ತಿರುವ ಅತಿ ಮುಖ್ಯವಾದ ಇನ್ನೊಂದು ಸಂಶಯದ ಪ್ರಶ್ನೆ ಅಂದರೆ ಈ ಜಾತಿ ಜನಗಣತಿ ನಡೆಸುವ ಸಂದರ್ಭದಲ್ಲಿ ನಮ್ಮ ಮನೆಗೆ ಯಾರು ಕೂಡ ಬಂದು ನಮ್ಮ ವಾಸ ಸ್ಥಾನ, ಜಾತಿ, ಆರ್ಥಿಕತೆ, ಶಿಕ್ಷಣ ಯಾವುದನ್ನು ಸಮೀಕ್ಷೆ ನಡೆಸದೇ ಬರೇ ಚುನಾವಣ ಕಾಲದಲ್ಲಿ ಖಾಸಗಿ ಸಂಸ್ಥೆಗಳು ನಡೆಸುವ ಚುನಾವಣಾ ಪೂರ್ವ ಚುನಾವಣೋತ್ತರ ಸಮೀಕ್ಷೆಯ ತರದಲ್ಲಿ ಫಲಿತಾಂಶ ಕೊಡುವ ತರದಲ್ಲಿ ಸ್ಯಾಂಪಲ್ ಸರ್ವೆ ನಡೆಸಿದ್ದೀರಾ? ಅನ್ನುವ ಮೂಲ ಭೂತವಾದ ಪ್ರಶ್ನೆಯನ್ನು ಸಮೀಕ್ಷೆ ನಡೆಸಿದ ಹಿಂದುಳಿದ ಆಯೋಗದ ಮುಂದಿಟ್ಟಿದ್ದಾರೆ. ಇದಕ್ಕೆ ಸರ್ಕಾರ  ದಾಖಲೆಗಳನ್ನು ನೀಡುವ ಮೂಲಕ  ಉತ್ತರಿಸಬೇಕಾದ ಜವಾಬ್ದಾರಿ ಸರ್ಕಾರದ್ದಾಗಿದೆ ಎಂದು ಬಸವರಾಜ ಪೇಲನವರ ಅಭಿಪ್ರಾಯ ಪಟ್ಟಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

Popular

ಶೋಷಿತರ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿಗಾಗಿ ಜಾತಿ ಗಣತಿ ಜಾರಿಯಾಗಲಿ : ಪೇಲನವರ
ಹಾವೇರಿ: ಹಿಂದುಳಿದ ಆಯೋಗ ಈಗಾಗಲೇ ರಾಜ್ಯ ಸರಕಾರಕ್ಕೆ ಜಾತಿ ಜನ ಗಣತಿ ವರದಿ ನೀಡಿಯಾಗಿದೆ.  ಈ ವರದಿಯನ್ನು ಅಂಗೀಕರಿಸಿ ಮುಂದೇನು ಮಾಡಬೇಕು ಎಂದು ನಿರ್ಧರಿಸುವ ಜವಾಬ್ದಾರಿ ರಾಜ್ಯ ಸರ್ಕಾರದ ಮುಂದಿದೆ. ಆದರೆ, ಈ ವರದಿಯ ಬಗ್ಗೆ ಪರ ವಿರೋಧ ಚರ್ಚೆಗಳು ನಡೆದಿದ್ದು, ಕೆಲವರು ಸರ್ಕಾರವನ್ನು ಕೆಡುವುವ ಮಾತುಗಳನ್ನಾಡಿದ್ದಾರೆ. ಆದರೆ ಜಾತಿ ಗಣತಿ ವಿರೋಧಿಸುವವರಿಗೆ ಮೇಲ್ನೋಟಕ್ಕೆ ನಿಜವಾದ ಶೋಷಿತರ ಬಗ್ಗೆ ಕಾಳಜಿ ಇಲ್ಲದಿರುವುದು ಗೊತ್ತಾಗುತ್ತದೆ ಎಂದು  ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಬಸವರಾಜ ಪೇಲನವರ ತಿಳಿಸಿದ್ದಾರೆ.
ಜಾತಿ ಗಣತಿ ವಿರೋಧಿಸುವವರಿಗೆ ಬೇಕಾಗಿರುವುದು ತಮ್ಮ ತಮ್ಮ ಜಾತಿಯ ಅಂಕಿ-ಸAಖ್ಯೆಯ ಬಗ್ಗೆ ಕಾಳಜಿಯೇ ಹೊರತು ನೀಜವಾದ ಶೋಷಿತರ ಬಗ್ಗೆ ಕಾಳಜಿಯಿಂದಲ್ಲ.  ಈ ಹಿಂದೆ ಎಲ್.ಜಿ.ಹಾವನೂರು ನೀಡಿದ್ದ ಹಿಂದುಳಿದ ವರ್ಗದ ಪ್ರಥಮ ವರದಿಹಾವನೂರು ಆಯೋಗದವರದಿಯ ಬಗ್ಗೆಯೋ ಅನೇಕರು ವಿರೋಧಿಸಿದ್ದರು. ಈವರದಿಯನ್ನು ಸದನದಲ್ಲಿ ದಹಿಸಲಾಯಿತು. ತದನಂತರ ಬಂದ ಅನೇಕ ಹಿಂದುಳಿದ ವರ್ಗಗಳ ವರದಿಗೆ ವಿರೋಧಗಳು ವ್ಯಕ್ತವಾಗಿದ್ದವು.
ಶ್ರೇಣಿಕೃತ ವ್ಯವಸ್ಥೆಯ ನಮ್ಮ ದೇಶದಲ್ಲಿ, ರಾಜ್ಯಗಳಲ್ಲಿ ಜನ ಗಣತಿ ಜಾತಿ ಗಣತಿ ನಡೆಸುವುದು ತಪ್ಪಲ್ಲ. ಜಾತಿಗಣತಿಯ ಉದ್ದೇಶ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ಸಿಗಬೇಕು. ಶತ-ಶತಮಾನಗಳಿಂದ ಶೋಷಿಣೆೆಗೆ ಒಳಗಾದ ಜನರು, ಪ್ರಾಣಿಗಳಿಗಿಂತ ಕಡೆಯಾಗಿ ಜೀವನ ನಡೆಸಿದ, ನಡೆಸುತ್ತಿರುವ  ಜನರಿಗೆ ಸಮಪಾಲು-ಸಮಾಬಾಳು ಸಿಗಬೇಕೆನ್ನುವುದಾಗಿದೆ. ಈ ಜನರು  ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿ ಕಡೆಗೆ ಮುಖಮಾಡಬೇಕೆನ್ನುವುದಾಗಿದೆ ಹೊರತು ರಾಜಕೀಯ ಬೇಳೆ ಬೇಯಿಸಿ ಕೊಳ್ಳುವ ಜಾತಿ ಲೆಕ್ಕಾಚಾರವಾಗಬಾರದು.
ಒಂದು ದೇಶ ಅಥವಾ ರಾಜ್ಯದಲ್ಲಿ ಈ ಜನ ಗಣತಿ..ಲೆಕ್ಕಾಚಾರ ಅಗತ್ಯವಿದೆ. ಬಹುಮುಖ್ಯವಾಗಿ ಸರ್ಕಾರದ ಹತ್ತಾರು ಸವಲತ್ತುಗಳು ಜನರಿಗೆ ಹಂಚುವಾಗ ಸುಮ್ಮನೆ ನೀಡಲಿಲ್ಲ. ಅವರ ಜಾತಿ, ಶಿಕ್ಷಣ, ಆರ್ಥಿಕತೆ ಸಾಮಾಜಿಕ ಸ್ಥಾನ ಮಾನವನ್ನೆಲ್ಲ ನೋಡಿಕೊಂಡೆ ಹಂಚಿದ್ದಾರೆ ಅನ್ನುವುದು ಸತ್ಯ. ಹಾಗಾದರೆ ಈ ಸವಲತ್ತುಗಳು ಎಷ್ಟರ ಮಟ್ಟಿಗೆ ಅವರಿಗೆ ತಲುಪಿದೆ, ತಲುಪಲಿಲ್ಲ ಅನ್ನುವುದನ್ನು ತಿಳಿಯ ಬೇಕಾದರೆ ಇಂತಹ ಸಮೀಕ್ಷೆಯ ವರದಿಯ ಅನಿವಾರ್ಯತೆ ಇದೆ.
ಮುಖ್ಯ ಮಂತ್ರಿ ಸಿದ್ದರಾಮಯ್ಯನವರು “ಇದೊಂದು ರಾಜ್ಯದ ಜನಗಣತಿಯ ಲೆಕ್ಕಾಚಾರ ಅಷ್ಟೇ ಎನ್ನುತ್ತಾರೆ.  ಈ ವರದಿ ತಯಾರಿಸಿದ ಹಿಂದುಳಿದ ಆಯೋಗದ ಮಾಜಿ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ಹೇಳುತ್ತಾರೆ ” ಈ ವರದಿಯನ್ನು ಓದಿದ ಮೇಲೆ ಅಭಿಪ್ರಾಯ ನೀಡಿ ಓದದೆ ಹೇಗೆ ಅಭಿಪ್ರಾಯ ನೀಡುತ್ತೀರಿ.. ತಪ್ಪಾಗಿದ್ದರೆ ಸರಿಮಾಡೋಣ ಅನ್ನುವ ಸಮಾಧಾನಕರ ಹೇಳಿಕೆ ನೀಡಿದ್ದಾರೆ.
ಈ ಜಾತಿ ಜನಗಣತಿ ಲೆಕ್ಕಾಚಾರದ ಬಗ್ಗೆ ಈಗ ಯಾಕೆ ಇಷ್ಟೊಂದು ಸ್ವರ ಅಪಸ್ವರಗಳು ಹುಟ್ಟಿ ಕೊಂಡಿದ್ದಾವೆ. ಇದಕ್ಕೆ ಬಲವಾದ ಕಾರಣ ಕರ್ನಾಟಕದ ತಳ ಸ್ಪರ್ಶಿ ಜಾತಿ ಜಾತಿ ನಡುವಿನ ರಾಜಕೀಯ ಮೇಲಾಟವೇ ಇದಕ್ಕೆ ಕಾರಣ ಅನ್ನುವುದು ಸ್ಪಷ್ಟ. ಈಗಾಗಲೇ ರಾಜ್ಯದ ಪ್ರಬಲ ಜಾತಿಗಳು ಅನ್ನಿಸಿಕೊಂಡ ಲಿಂಗಾಯತ ಮತ್ತು ಒಕ್ಕಲಿಗರು ನಾವು ಜಾತಿವಾರು ಲೆಕ್ಕಾಚಾರದಲ್ಲಿ ಮುಂದಿದ್ದೇವೆ ಹಾಗಾಗಿ ನಮಗೆ ರಾಜಕೀಯವಾಗಿ ಸಿಗಬೇಕಾದ ಸ್ಥಾನ ಮಾನಕ್ಕೆ ಎಂದು ಚ್ಯುತಿ ಬರಬಾರದು. ಒಂದು ವೇಳೆ ಹಿಂದುಳಿದ ವರ್ಗದ ಕ್ರೋಢಿಕೃತ ಜಾತಿ ಜನಗಣತಿ ನಮ್ಮನ್ನುಮೀರಿಸಿ ಬಿಟ್ಟರೆ ಇನ್ನೊಂದು ಪ್ರಬಲವಾದ ರಾಜಕೀಯ ಶಕ್ತಿ ಹುಟ್ಟಿ ಕೊಳ್ಳುವ ಸಾಧ್ಯತೆ ಅವರನ್ನು ಕಾಡಲು ಶುರುಮಾಡಿದೆ.
ಅದರಲ್ಲೂ ಸಿಎಂ ಸಿದ್ದರಾಮಯ್ಯ  ಅಂದರೆ ಅದು” ಅಹಿಂದ” ಪರ್ಯಾಯ ಶಕ್ತಿಯಾಗಿ ಹೊರ ಹೊಮ್ಮಬಹುದು ಅನ್ನುವ ಹೆದರಿಕೆ ಎಲ್ಲಾ ಪಕ್ಷಗಳಿರುವ ಲಿಂಗಾಯತ-ಒಕ್ಕಲಿಗರ ಹಿರಿಯ ನಾಯಕರನ್ನು ಕಾಡಲು ಶುರುಮಾಡಿದೆ. ಅದೇ ರೀತಿಯಲ್ಲಿ ಈ ಎರಡು ಪ್ರಬಲ ಜಾತಿಗೆ ಸೇರದ ಜಾತಿಗಳಲ್ಲಿ ಈ ಜಾತಿ ಜನಗಣತಿ ಲೆಕ್ಕಾಚಾರದ ಬಗ್ಗೆ ಅಷ್ಟೇನು ಅಪಸ್ವರವಿಲ್ಲ. ಈ ರಾಜಕೀಯ ಮೇಲಾಟದಲ್ಲಿ ಹಿಂದುತ್ವ ಸಿದ್ಧಾಂತ ನಂಬಿಕೊAಡಿರುವ ರಾಜಕೀಯ ನಿಷ್ಣಾತರಿಗೆ ಹಿಂದುತ್ವ ಅಲೆ ಈ ಜಾತಿ ಲೆಕ್ಕಾಚಾರದಲ್ಲಿ ಕಲುಷಿತಗೊಳ್ಳಬಹುದಾ ಅನ್ನುವ ಹೆದರಿಕೆಯೂ ಅವರನ್ನು ಕಾಡಲು ಶುರುಮಾಡಿದೆ.
ಬಹುಮುಖ್ಯವಾಗಿ ಜನಸಾಮಾನ್ಯರನ್ನು ಕಾಡುತ್ತಿರುವ ಅತಿ ಮುಖ್ಯವಾದ ಇನ್ನೊಂದು ಸಂಶಯದ ಪ್ರಶ್ನೆ ಅಂದರೆ ಈ ಜಾತಿ ಜನಗಣತಿ ನಡೆಸುವ ಸಂದರ್ಭದಲ್ಲಿ ನಮ್ಮ ಮನೆಗೆ ಯಾರು ಕೂಡ ಬಂದು ನಮ್ಮ ವಾಸ ಸ್ಥಾನ, ಜಾತಿ, ಆರ್ಥಿಕತೆ, ಶಿಕ್ಷಣ ಯಾವುದನ್ನು ಸಮೀಕ್ಷೆ ನಡೆಸದೇ ಬರೇ ಚುನಾವಣ ಕಾಲದಲ್ಲಿ ಖಾಸಗಿ ಸಂಸ್ಥೆಗಳು ನಡೆಸುವ ಚುನಾವಣಾ ಪೂರ್ವ ಚುನಾವಣೋತ್ತರ ಸಮೀಕ್ಷೆಯ ತರದಲ್ಲಿ ಫಲಿತಾಂಶ ಕೊಡುವ ತರದಲ್ಲಿ ಸ್ಯಾಂಪಲ್ ಸರ್ವೆ ನಡೆಸಿದ್ದೀರಾ? ಅನ್ನುವ ಮೂಲ ಭೂತವಾದ ಪ್ರಶ್ನೆಯನ್ನು ಸಮೀಕ್ಷೆ ನಡೆಸಿದ ಹಿಂದುಳಿದ ಆಯೋಗದ ಮುಂದಿಟ್ಟಿದ್ದಾರೆ. ಇದಕ್ಕೆ ಸರ್ಕಾರ  ದಾಖಲೆಗಳನ್ನು ನೀಡುವ ಮೂಲಕ  ಉತ್ತರಿಸಬೇಕಾದ ಜವಾಬ್ದಾರಿ ಸರ್ಕಾರದ್ದಾಗಿದೆ ಎಂದು ಬಸವರಾಜ ಪೇಲನವರ ಅಭಿಪ್ರಾಯ ಪಟ್ಟಿದ್ದಾರೆ.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...