ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ ವಿರುದ್ಧ ವ್ಯಥಾ ಆರೋಪ; ಲಿಂಗಯ್ಯ ಹಿರೇಮಠ
ಹಾವೇರಿ: ೧೧೦ ವರ್ಷಗಳ ಇತಿಹಾಸ ಇರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಈಗಿನ ಸಂದರ್ಭಕ್ಕೆ ತಕ್ಕಂತೆ ಅಮೂಲಾಗ್ರ ಬದಲಾವಣೆ ಅವಶ್ಯವಿತ್ತು. ಡಾ. ಮಹೇಶ ಜೋಶಿಯವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮೇಲೆ ಕಾರ್ಯಕಾರಿ ಸಮಿತಿ ಯ ಸಭೆಗಳಲ್ಲಿ ಚರ್ಚಿಸಿ, ವಿಶೇಷ ಸಾಮಾನ್ಯ ಸಭೆಯಲ್ಲಿ ಒಪ್ಪಿಗೆ ಪಡೆದು ಪ್ರಜಾಪ್ರಭುತ್ವದ ಮಾದರಿಯಲ್ಲೇ ಈಗಾಗಲೇ ಎರಡು ಬಾರಿ ನಿಬಂಧನೆಯನ್ನು ತಿನ್ನುಪಡಿ ಮಾಡಲಾಗಿದೆ. ಡಾ.ಮಹೇಶ ಜೋಶಿ ವಿರುದ್ಧ ವ್ಯಥಾ ಆರೋಪ ಮಾಡುವುದು ಸರಿಯಲ್ಲ ಎಂದು ಹಾವೇರಿ ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗಯ್ಯ ಹಿರೇಮಠ ತಿಳಿಸಿದ್ದಾರೆ.
ಮಂಡ್ಯದಲ್ಲಿ ಜರುಗಿದ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಆದ ಕೆಲವು ಗೊಂದಲಗಳ ಕಾರಣದಿಂದಾಗಿ ಹಾಗೂ ಚುನಾಯಿತ ಅಧ್ಯಕ್ಷರುಗಳ ನಿಧನ, ರಾಜಿನಾಮೆ ಮತ್ತು ಇತರೆ ಆನರ್ಹತೆ ಕಾರಣದಿಂದಾಗಿ ಆ ಹುದ್ದೆಗಳನ್ನು ತುಂಬಲು ಯಾರಿಗೆ ಅಧಿಕಾರಿ ನೀಡಬೇಕೆಂಬ ವಿಷಯಗಳನ್ನು ತುರ್ತಾಗಿ ನಿಬಂಧನೆಗಳಲ್ಲಿ ಸೇರಿಸುವ ಸಲುವಾಗಿ ಮೂರನೇ ಬಾರಿಯು ನಿಬಂಧನೆ ತಿದ್ದುಪಡಿಯ ಅವಶ್ಯ ಬಂದಿರುವುದರಿAದ ಮತ್ತೇ ಕಾರ್ಯಕಾರಿ ಸಮಿತಿಯ ಸಭೆಗಳಲ್ಲಿ ಕೂಲಂಕಶವಾಗಿ ಚರ್ಚಿಸಿ, ಅದನ್ನು ವಿಶೇಷ ಸಾಮಾನ್ಯ ಸಭೆಗೆ ಕೊಂಡೊಯ್ಯಲಾಗುತ್ತಿದೆ.
ಇನ್ನೂ ಮಂಡ್ಯದಲ್ಲಿ ನಡೆದ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಾಡಿರುವ ವೆಚ್ಚಗಳ ಬಗ್ಗೆ, ಲೆಕ್ಕ ನೀಡಲು ಸಮ್ಮೇಳನ ಜರುಗಿದ ೬ ತಿಂಗಳವರೆಗೆ ಕಾಲಾವಕಾಶ ಇರುತ್ತದೆ. ಈ ಬಗ್ಗೆ ಲೆಕ್ಕ ಪರಿಶೋದಕರಿಂದ ವರದಿ ಸಿದ್ಧವಾಗುತ್ತಿದೆ. ಹೀಗಿದ್ದರೂ ಕೂಡ ಜೋಶಿ ಅವರನ್ನು ಉದ್ದೇಶಪೂರ್ವಕವಾಗಿ ವಿರೋಧಿüಸಲಾಗುತ್ತಿದೆ. ಜೋಶಿ ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರುಗಳ ಅಭಿಪ್ರಾಯಗಳನ್ನು ಕ್ರೂಢೀಕರಿಸಿ ನಿರ್ಣಯಗಳನ್ನು ಕೈಗೊಳ್ಳುತ್ತಾರೆ ಎಂಬುದನ್ನು ತಿಳಿಸಲು ಬಯಸುವೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗಯ್ಯ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ ವಿರುದ್ಧ ವ್ಯಥಾ ಆರೋಪ; ಲಿಂಗಯ್ಯ ಹಿರೇಮಠ
Date:
ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ ವಿರುದ್ಧ ವ್ಯಥಾ ಆರೋಪ; ಲಿಂಗಯ್ಯ ಹಿರೇಮಠ
ಹಾವೇರಿ: ೧೧೦ ವರ್ಷಗಳ ಇತಿಹಾಸ ಇರುವ ಕನ್ನಡ ಸಾಹಿತ್ಯ ಪರಿಷತ್ತಿಗೆ ಈಗಿನ ಸಂದರ್ಭಕ್ಕೆ ತಕ್ಕಂತೆ ಅಮೂಲಾಗ್ರ ಬದಲಾವಣೆ ಅವಶ್ಯವಿತ್ತು. ಡಾ. ಮಹೇಶ ಜೋಶಿಯವರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮೇಲೆ ಕಾರ್ಯಕಾರಿ ಸಮಿತಿ ಯ ಸಭೆಗಳಲ್ಲಿ ಚರ್ಚಿಸಿ, ವಿಶೇಷ ಸಾಮಾನ್ಯ ಸಭೆಯಲ್ಲಿ ಒಪ್ಪಿಗೆ ಪಡೆದು ಪ್ರಜಾಪ್ರಭುತ್ವದ ಮಾದರಿಯಲ್ಲೇ ಈಗಾಗಲೇ ಎರಡು ಬಾರಿ ನಿಬಂಧನೆಯನ್ನು ತಿನ್ನುಪಡಿ ಮಾಡಲಾಗಿದೆ. ಡಾ.ಮಹೇಶ ಜೋಶಿ ವಿರುದ್ಧ ವ್ಯಥಾ ಆರೋಪ ಮಾಡುವುದು ಸರಿಯಲ್ಲ ಎಂದು ಹಾವೇರಿ ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗಯ್ಯ ಹಿರೇಮಠ ತಿಳಿಸಿದ್ದಾರೆ.
ಮಂಡ್ಯದಲ್ಲಿ ಜರುಗಿದ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಆದ ಕೆಲವು ಗೊಂದಲಗಳ ಕಾರಣದಿಂದಾಗಿ ಹಾಗೂ ಚುನಾಯಿತ ಅಧ್ಯಕ್ಷರುಗಳ ನಿಧನ, ರಾಜಿನಾಮೆ ಮತ್ತು ಇತರೆ ಆನರ್ಹತೆ ಕಾರಣದಿಂದಾಗಿ ಆ ಹುದ್ದೆಗಳನ್ನು ತುಂಬಲು ಯಾರಿಗೆ ಅಧಿಕಾರಿ ನೀಡಬೇಕೆಂಬ ವಿಷಯಗಳನ್ನು ತುರ್ತಾಗಿ ನಿಬಂಧನೆಗಳಲ್ಲಿ ಸೇರಿಸುವ ಸಲುವಾಗಿ ಮೂರನೇ ಬಾರಿಯು ನಿಬಂಧನೆ ತಿದ್ದುಪಡಿಯ ಅವಶ್ಯ ಬಂದಿರುವುದರಿAದ ಮತ್ತೇ ಕಾರ್ಯಕಾರಿ ಸಮಿತಿಯ ಸಭೆಗಳಲ್ಲಿ ಕೂಲಂಕಶವಾಗಿ ಚರ್ಚಿಸಿ, ಅದನ್ನು ವಿಶೇಷ ಸಾಮಾನ್ಯ ಸಭೆಗೆ ಕೊಂಡೊಯ್ಯಲಾಗುತ್ತಿದೆ.
ಇನ್ನೂ ಮಂಡ್ಯದಲ್ಲಿ ನಡೆದ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಾಡಿರುವ ವೆಚ್ಚಗಳ ಬಗ್ಗೆ, ಲೆಕ್ಕ ನೀಡಲು ಸಮ್ಮೇಳನ ಜರುಗಿದ ೬ ತಿಂಗಳವರೆಗೆ ಕಾಲಾವಕಾಶ ಇರುತ್ತದೆ. ಈ ಬಗ್ಗೆ ಲೆಕ್ಕ ಪರಿಶೋದಕರಿಂದ ವರದಿ ಸಿದ್ಧವಾಗುತ್ತಿದೆ. ಹೀಗಿದ್ದರೂ ಕೂಡ ಜೋಶಿ ಅವರನ್ನು ಉದ್ದೇಶಪೂರ್ವಕವಾಗಿ ವಿರೋಧಿüಸಲಾಗುತ್ತಿದೆ. ಜೋಶಿ ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರುಗಳ ಅಭಿಪ್ರಾಯಗಳನ್ನು ಕ್ರೂಢೀಕರಿಸಿ ನಿರ್ಣಯಗಳನ್ನು ಕೈಗೊಳ್ಳುತ್ತಾರೆ ಎಂಬುದನ್ನು ತಿಳಿಸಲು ಬಯಸುವೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗಯ್ಯ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.