ಸಮಗಾರ ಬಂಧುಗಳು ಜಾತಿ ಸಮೀಕ್ಷೆಯಲ್ಲಿ ಕಡ್ಡಾಯವಾಗಿ ಸಮಗಾರ(ಚಮ್ಮಾರ) ಎಂದು ಬರೆಸಿ: ಜಗದೀಶ ಬೆಟಗೇರಿ
ಹಾವೇರಿ : ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ದಾಸ್ ಅವರ ಏಕ ವಿಚಾರಣಾ ಆಯೋಗ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ವರ್ಗೀಕರಣ-೨೦೨೫ಕ್ಕೆ ಸಂಬಂಧಿಸಿದಂತೆ ಮೇ. ೫ ರಿಂದ ಮೂರು ಹಂತದಲ್ಲಿ ಪರಿಶಿಷ್ಟ ಜಾತಿ ಸಮುದಾಯ ವಿವಿಧ ಅಂಶಗಳ ಬಗ್ಗೆ ದತ್ತಾಂಶಗಳನ್ನು ಶೇಖರಿಸಲು ಸಮೀಕ್ಷೆ ಕಾರ್ಯ ಕೈಗೊಂಡಿದ್ದು, ರಾಜ್ಯಾದ್ಯಂತ ಇರುವ ಸಮಗಾರ ಬಂಧುಗಳು ಜಾತಿ ಸಮೀಕ್ಷೆಯಲ್ಲಿ ಕಡ್ಡಾಯವಾಗಿ ಸಮಗಾರ(ಚಮ್ಮಾರ) ಎಂದು ಬರೆಸುವಂತೆ ಕರ್ನಾಟಕ ರಾಜ್ಯ ಸಮಗಾರ (ಚಮ್ಮಾರ) ಹರಳಯ್ಯ ಸಂಘದ ರಾಜ್ಯಾಧ್ಯಕ್ಷ ಜಗದೀಶ ಬೆಟಗೇರಿ ಮನವಿ ಮಾಡಿದ್ದಾರೆ.
ಈ ಬಗ್ಗೆ ಶನಿವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮೇ. ೫ ರಿಂದ ಮೇ ೧೭ರವರೆಗೆ ಮೊದಲ ಹಂತ, ಎರಡನೇ ಹಂತದಲ್ಲಿ ಮೇ ೧೯ ರಿಂದ ಮೇ ೨೧ರವರೆಗೆ, ಮೇ ೧೯ ರಿಂದ ಮೇ ೨೩ರವರೆಗೆ ಮೂರನೇ ಹಂತದ ಗಣತಿ ಜರುಗಲಿದ್ದು, ಸಮಗಾರ ಜಾತಿ ಒಂದೇ ಒಂದು ವ್ಯಕ್ತಿ ಅಥವಾ ಕುಟುಂಬ ಈ ಜಾತಿ ಸಮೀಕ್ಷೆಯಿಂದ ಹೊರಗೆ ಉಳಿದರೆ ಅದರ ಪರಿಣಾಮವನ್ನು ಶತಶತಮಾನಗಳವರೆಗೂ ಎದುರಿಸಬೇಕಾಗುತ್ತದೆ.
ಸಮೀಕ್ಷೆಗೆ ಬರುವ ಅಧಿಕಾರಿಗಳು/ಸಿಬ್ಬಂದಿಗಳು ತಮ್ಮನ್ನು ಪರಿಶಿಷ್ಟ ಜಾತಿಯಲ್ಲಿ ತಾವು ಯಾವ ಜಾತಿಗೆ ಸೇರುತ್ತೀರೆಂದು ಪ್ರಶ್ನಿಸಿದಾಗ ತಾವುಗಳು ಚಮರ, ಚಂಬರ, ಚಮಗರ, ಹರಳಯ್ಯ, ಹರಳಿ, ಮಾಚಿಗರ್, ಮೋಜಿಗಾರ, ಮೋಚಿ, ಮುಚ್ಚಿ, ತೆಲಗುಮೋಚಿ, ಕಾವಟಿಮೋಚಿ, ರೋಹಿದಾಸ್, ರೋಹಿತ್, ಸಮ್ಗರ್ ಎಂದು ಹೇಳಿದರೆ ಅದರಲ್ಲಿ ತಮ್ಮ ಮೂಲ ಜಾತಿಯನ್ನು ಕೇಳುತ್ತಾರೆ. ಆಗ ಸಮಾಜದ ಬಂಧುಗಳು ತಪ್ಪದೆ ಸಮಗಾರ (ಚಮ್ಮಾರ) ಎಂದು ಕಡ್ಡಾಯವಾಗಿ ಸಮೀಕ್ಷೆಯಲ್ಲಿ ಬರೆಸಬೇಕು.
ಸಮಗಾರ ಸಮಾಜದ ಪ್ರತಿ ವ್ಯಕ್ತಿ ಮತ್ತು ಕುಟುಂಬಗಳನ್ನು ಜಾತಿ ಸಮೀಕ್ಷೆಗೆ ಒಳಪಡಿಸುವ ಜವಾಬ್ದಾರಿ ಕರ್ನಾಟಕ ರಾಜ್ಯ ಸಮಗಾರ(ಚಮ್ಮಾರ) ಹರಳಯ್ಯ ಸಂಘದ ಜಿಲ್ಲಾ ಸಮಿತಿಗಳು ಮತ್ತು ತಾಲೂಕಾ ಸಮಿತಿಗಳ ಪದಾಧಿಕಾರಿಗಳ ಮೇಲಿದ್ದು, ಪದಾಧಿಕಾರಿಗಳು ಜಾತಿ ಸಮೀಕ್ಷೆ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಸಮಾಜದ ಬಂಧುಗಳಲ್ಲಿ ಸಮೀಕ್ಷೆ ವೇಳೆ ತಪ್ಪದೆ ಸಮಗಾರ (ಚಮ್ಮಾರ) ಎಂದು ಕಡ್ಡಾಯವಾಗಿ ನಮೂದಿಸಲು ಅರಿವು ಮತ್ತು ಜಾಗ್ರತಿ ಮೂಡಿಸುವಂತೆ ಜಗದೀಶ ಬೆಟಗೇರಿ ಮನವಿ ಮಾಡಿದ್ದಾರೆ.
ಸಮಗಾರ ಬಂಧುಗಳು ಜಾತಿ ಸಮೀಕ್ಷೆಯಲ್ಲಿ ಕಡ್ಡಾಯವಾಗಿ ಸಮಗಾರ(ಚಮ್ಮಾರ) ಎಂದು ಬರೆಸಿ: ಜಗದೀಶ ಬೆಟಗೇರಿ
Date:
ಸಮಗಾರ ಬಂಧುಗಳು ಜಾತಿ ಸಮೀಕ್ಷೆಯಲ್ಲಿ ಕಡ್ಡಾಯವಾಗಿ ಸಮಗಾರ(ಚಮ್ಮಾರ) ಎಂದು ಬರೆಸಿ: ಜಗದೀಶ ಬೆಟಗೇರಿ
ಹಾವೇರಿ : ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ದಾಸ್ ಅವರ ಏಕ ವಿಚಾರಣಾ ಆಯೋಗ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ವರ್ಗೀಕರಣ-೨೦೨೫ಕ್ಕೆ ಸಂಬಂಧಿಸಿದಂತೆ ಮೇ. ೫ ರಿಂದ ಮೂರು ಹಂತದಲ್ಲಿ ಪರಿಶಿಷ್ಟ ಜಾತಿ ಸಮುದಾಯ ವಿವಿಧ ಅಂಶಗಳ ಬಗ್ಗೆ ದತ್ತಾಂಶಗಳನ್ನು ಶೇಖರಿಸಲು ಸಮೀಕ್ಷೆ ಕಾರ್ಯ ಕೈಗೊಂಡಿದ್ದು, ರಾಜ್ಯಾದ್ಯಂತ ಇರುವ ಸಮಗಾರ ಬಂಧುಗಳು ಜಾತಿ ಸಮೀಕ್ಷೆಯಲ್ಲಿ ಕಡ್ಡಾಯವಾಗಿ ಸಮಗಾರ(ಚಮ್ಮಾರ) ಎಂದು ಬರೆಸುವಂತೆ ಕರ್ನಾಟಕ ರಾಜ್ಯ ಸಮಗಾರ (ಚಮ್ಮಾರ) ಹರಳಯ್ಯ ಸಂಘದ ರಾಜ್ಯಾಧ್ಯಕ್ಷ ಜಗದೀಶ ಬೆಟಗೇರಿ ಮನವಿ ಮಾಡಿದ್ದಾರೆ.
ಈ ಬಗ್ಗೆ ಶನಿವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮೇ. ೫ ರಿಂದ ಮೇ ೧೭ರವರೆಗೆ ಮೊದಲ ಹಂತ, ಎರಡನೇ ಹಂತದಲ್ಲಿ ಮೇ ೧೯ ರಿಂದ ಮೇ ೨೧ರವರೆಗೆ, ಮೇ ೧೯ ರಿಂದ ಮೇ ೨೩ರವರೆಗೆ ಮೂರನೇ ಹಂತದ ಗಣತಿ ಜರುಗಲಿದ್ದು, ಸಮಗಾರ ಜಾತಿ ಒಂದೇ ಒಂದು ವ್ಯಕ್ತಿ ಅಥವಾ ಕುಟುಂಬ ಈ ಜಾತಿ ಸಮೀಕ್ಷೆಯಿಂದ ಹೊರಗೆ ಉಳಿದರೆ ಅದರ ಪರಿಣಾಮವನ್ನು ಶತಶತಮಾನಗಳವರೆಗೂ ಎದುರಿಸಬೇಕಾಗುತ್ತದೆ.
ಸಮೀಕ್ಷೆಗೆ ಬರುವ ಅಧಿಕಾರಿಗಳು/ಸಿಬ್ಬಂದಿಗಳು ತಮ್ಮನ್ನು ಪರಿಶಿಷ್ಟ ಜಾತಿಯಲ್ಲಿ ತಾವು ಯಾವ ಜಾತಿಗೆ ಸೇರುತ್ತೀರೆಂದು ಪ್ರಶ್ನಿಸಿದಾಗ ತಾವುಗಳು ಚಮರ, ಚಂಬರ, ಚಮಗರ, ಹರಳಯ್ಯ, ಹರಳಿ, ಮಾಚಿಗರ್, ಮೋಜಿಗಾರ, ಮೋಚಿ, ಮುಚ್ಚಿ, ತೆಲಗುಮೋಚಿ, ಕಾವಟಿಮೋಚಿ, ರೋಹಿದಾಸ್, ರೋಹಿತ್, ಸಮ್ಗರ್ ಎಂದು ಹೇಳಿದರೆ ಅದರಲ್ಲಿ ತಮ್ಮ ಮೂಲ ಜಾತಿಯನ್ನು ಕೇಳುತ್ತಾರೆ. ಆಗ ಸಮಾಜದ ಬಂಧುಗಳು ತಪ್ಪದೆ ಸಮಗಾರ (ಚಮ್ಮಾರ) ಎಂದು ಕಡ್ಡಾಯವಾಗಿ ಸಮೀಕ್ಷೆಯಲ್ಲಿ ಬರೆಸಬೇಕು.
ಸಮಗಾರ ಸಮಾಜದ ಪ್ರತಿ ವ್ಯಕ್ತಿ ಮತ್ತು ಕುಟುಂಬಗಳನ್ನು ಜಾತಿ ಸಮೀಕ್ಷೆಗೆ ಒಳಪಡಿಸುವ ಜವಾಬ್ದಾರಿ ಕರ್ನಾಟಕ ರಾಜ್ಯ ಸಮಗಾರ(ಚಮ್ಮಾರ) ಹರಳಯ್ಯ ಸಂಘದ ಜಿಲ್ಲಾ ಸಮಿತಿಗಳು ಮತ್ತು ತಾಲೂಕಾ ಸಮಿತಿಗಳ ಪದಾಧಿಕಾರಿಗಳ ಮೇಲಿದ್ದು, ಪದಾಧಿಕಾರಿಗಳು ಜಾತಿ ಸಮೀಕ್ಷೆ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಸಮಾಜದ ಬಂಧುಗಳಲ್ಲಿ ಸಮೀಕ್ಷೆ ವೇಳೆ ತಪ್ಪದೆ ಸಮಗಾರ (ಚಮ್ಮಾರ) ಎಂದು ಕಡ್ಡಾಯವಾಗಿ ನಮೂದಿಸಲು ಅರಿವು ಮತ್ತು ಜಾಗ್ರತಿ ಮೂಡಿಸುವಂತೆ ಜಗದೀಶ ಬೆಟಗೇರಿ ಮನವಿ ಮಾಡಿದ್ದಾರೆ.