“ರಸಗೊಬ್ಬರಕ್ಕಾಗಿ ಗೋಲಿಬಾರ್ ನಡೆದ ಹಾವೇರಿಯಲ್ಲಿ ಮತ್ತೆ ರಸಗೊಬ್ಬರಕ್ಕೆ ಹಾಹಾಕಾರ”!

Date:

ರಸಗೊಬ್ಬರಕ್ಕಾಗಿ ಗೋಲಿಬಾರ್ ನಡೆದ ಹಾವೇರಿಯಲ್ಲಿ ಮತ್ತೆ ರಸಗೊಬ್ಬರಕ್ಕೆ ಹಾಹಾಕಾರ”!
* ವ್ಯಾಪಾರಿಗಳಿಂದ ಕೃತಕ ಅಭಾವ ಸೃಷ್ಟಿಸಿ ಹಗಲು ದರೋಡೆ! * ಇಬ್ಬರು ರೈತರ ಹೆಣ ಬಿದ್ದರೂ ಎಚ್ಚತ್ತುಕೊಳ್ಳದ ಸರ್ಕಾರ-ಕೃಷಿ ಇಲಾಖೆ
ಹಾವೇರಿ: ಕೃಷಿ ಪ್ರಧಾನ ಜಿಲ್ಲೆಯಾಗಿರುವ ಹಾವೇರಿಜಿಲ್ಲೆಯಲ್ಲಿ ಇದೀಗ ಮುಂಗಾರು ಹಂಗಾಮ ಆರಂಭವಾಗಿದ್ದು, ಭೂಮಿಯನ್ನು ಬಿತ್ತಲು ಹದಾ ಮಾಡಿಟ್ಟುಕೊಂಡಿರುವ ರೈತ ಸಮೂಹ  ಮುಂಗಾರು ಉತ್ತಮವಾಗಿ ಆರಂಭವಾಗಿರುವ ಕಾರಣಕ್ಕೆ ಬಿತ್ತನೆ ಕಾರ್ಯ ಕೈಗೊಳ್ಳುತ್ತಿದ್ದಾರೆ. ಪ್ರತಿವರ್ಷದಂತೆ ಪ್ರಸಕ್ತ ವರ್ಷವೂ ಸಹ ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕಾಗಿ ಹಾಹಾಕಾರ ಆರಂಭವಾಗಿದೆ. ರೈತರು ಡಿಎಪಿ ರಸಗೊಬ್ಬರಕ್ಕೆ ಬೇಡಿಕೆ ಇಡುತ್ತಿರುವುದನ್ನು ಮನಗಂಡು ಜಿಲ್ಲೆಯ ಕೆಲವು ರಸಗೊಬ್ಬರ ವ್ಯಾಪಾರಿಗಳು ಡಿಎಪಿ ರಸೊಬ್ಬರದ ಕೃತಕ ಅಭಾವವನ್ನು ಸೃಷ್ಟಿಸಿ ಹೆಚ್ಚಿನ ಬೆಲೆಗೆ  ಮಾರಾಟ ಮಾಡುತ್ತಿರುವು  ಆರೋಪಗಳು ಕೇಳಿ ಬಂದಿವೆ.
ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕಾಗಿ ಜೂನ್ ೧೦- ೨೦೦೮ ರಂದು ಹಾವೇರಿಯ ಹೊಸಮನಿ ಸಿದ್ದಪ್ಪವೃತ್ತದಲ್ಲಿ ರೈತರು ನಡೆಸುತ್ತಿದ್ದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ ಪೊಲೀಸರು ನಡೆಸಿದ ಗೋಲಿಬಾರ್‌ಗೆ ಇಬ್ಬರು ರೈತರು ಸಾವನ್ನಪ್ಪಿದ್ದರು. ಗುಂಡೇಟಿನಿಂದ ೨೦ಕ್ಕೂ ಅಧಿಕ ಜನರು ಗಾಯಗೊಂಡಿದ್ದರು. ಈ ದುರ್ಘಟನೆಯಿಂದ ಪಾಠ ಕಲಿಯದ ಸರ್ಕಾರ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವ ಕಾರಣಕ್ಕೆ ಇದೀಗ ಮತ್ತೆ ಹಾವೇರಿಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಅಭಾವ ಸೃಷ್ಟಿಯಾಗಿದ್ದು, ರೈತರು ತಮಗಿಷ್ಟದ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಖರೀದಿಸಲು ಪರದಾಡುತ್ತಿದ್ದಾರೆ.
“ಒಂದಡೆ ಸರ್ಕಾರ, ಜಿಲ್ಲಾಡಳಿತ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆ ಇಲ” ಎಂದು ಹೇಳುತ್ತಿದೆ. ಆದರೆ ನಿಜವಾದ ಸಂಗತಿಯೇ ಬೇರೆಯಾಗಿದೆ. ಬಿತ್ತನೆಗೆ ಬೇಕಾದ ಬೀಜ-ಗೊಬ್ಬರಗಳ ಖರೀದಿಗೆ ರೈತ ಸಮೂಹ ಮುಂದಾಗಿರುವ ಕಾರಣಕ್ಕೆ ಅದರಲ್ಲೂ ಹಾವೇರಿ ಜಿಲ್ಲೆಯ ಹಾವೇರಿ ತಾಲೂಕಿನ ರೈತರು ಬಿತ್ತನೆಯ ಕಾಲಕ್ಕೆ ಡಿಎಪಿ ರಸಗೊಬ್ಬರವನ್ನು ಮುಂಗಾರು ಹಂಗಾಮಿನಲ್ಲಿ ಬಿತ್ತುವ ಬೀಜಗಳ ಜೊತೆಗೆ ಉಪಯೋಗಿಸುತ್ತಾ ಬಂದಿದ್ದು, ಇದೀಗ ರೈತರು ಡಿಎಪಿ ಗೊಬ್ಬರ ಖರೀದಿಗೆ ಮುಂದಾಗಿರುವುದನ್ನು ಕಂಡು ಕೆಲವು ಗೊಬ್ಬರ ಮಾರಾಟ ಮಾಡುವ ವ್ಯಾಪಾರಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಅಸ್ತ್ರವಾಗಿ ಬಳಸಿಕೊಂಡ ಹೆಚ್ಚಿನ ದರಕ್ಕೆ ಮಾರುತ್ತಿರುವುದು ಗುಟ್ಟಾಗೇನು ಉಳಿದಿಲ್ಲ.
ಗುಪ್ತಸ್ಥಳಗಳಲ್ಲಿ ಗೊಬ್ಬರ ಸಂಗ್ರಹ: ರಾಸಾಯನಿಕ ಗೊಬ್ಬರ ಮಾರಾಟ ಮಾಡುವ ಅಂಗಡಿಗಳ ಮಾಲೀಕರು ಏಪ್ರಿಲ್ ತಿಂಗಳಲ್ಲಿ ಡಿಎಪಿ ಗೊಬ್ಬರವನ್ನು ಖರೀದಿಸಿ ಕೆಲವು ಗುಪ್ತ ಸ್ಥಳಗಳಲ್ಲಿ ಸಂಗ್ರಹಿಸಿಟ್ಟಿದ್ದು, ಮೇ ತಿಂಗಳ ಪೂರ್ವ ಮುಂಗಾರು ಆರಂಭದಲ್ಲಿ ರಸಗೊಬ್ಬರದ ಕೃತಕ ಅಭಾವವನ್ನು ಸೃಷ್ಟಿಸಿ ಹಾವೇರಿಯ ರೈತರಲ್ಲಿ   ಡಿಎಪಿ ಗೊಬ್ಬರದ ಹಾಹಾಕಾರಕ್ಕೆ ಕಾರಣರಾಗಿದ್ದಾರೆ.
ಗಬ್ಬರದ ದರ ಎಷ್ಟು?: ಇದೀಗ ೫೦ ಕೆಜಿ ತೂಕದ ಒಂದು ಚೀಲ ಡಿಎಪಿ ಗೊಬ್ಬರ ಬೆಲೆ ೧,೪೦೦ರೂಗಳೆಂದು ಸರ್ಕಾರ ನಿಗದಿಪಡಿಸಿದೆ. ಸರ್ಕಾರದ ಆದೇಶವನ್ನು ಚಾಪೆ ಕೆಳಗೆ ಮಾಡಿ, ರಂಗೋಲಿ ಕೆಳಗೆ ನುಸುಳುವ ವ್ಯಪಾರಿಗಳು ಒಂದು ಚೀಲ ಡಿಎಪಿ ಗೊಬ್ಬರಕ್ಕೆ ರೈತರು ಬೇಡಿಕೆ ಇಟ್ಟಲ್ಲಿ ಡಿಎಪಿ ಜೊತೆಗೆ ೨.೫ ಕೆಜಿ ತೂಕದ ಸೆಟ್‌ರೈಟ್ ರಾಸಾಯನಿಕಗಳ  ಒಂದು ಪಾಕೆಟ್ ತೆಗೆದುಕೊಳ್ಳಲೇಬೇಕು, ಇದು ಕಡ್ಡಾಯ!.
ಡಿಎಪಿ ಜೊತೆಗೆ ಸೆಟ್‌ರೈಟ್ ಖರೀದಿ ಕಡ್ಡಾಯ:  ಈ ಸೆಟ್‌ರೈಟ್ ರಾಸಾಯನಿಕ ಪಾಕೆಟ್ ದರ ೫೦೦ ರಿಂದ ೭೦೦ ರೂಪಾಯಿಗಳವರೆಗೆ ನಿಗದಿ ಪಡಿಸಿದ್ದಾರೆ ವ್ಯಾಪಾರಿಗಳು. ಇದರ ಅಸಲಿ ದರ ೨೦೦ರೂಗಳಾಗಬಹುದು, ಇದರ ಅವಶ್ಯಕತೆ ರೈತರಿಗೆ ಇರುವುದಿಲ್ಲ. ಒಟ್ಟಿನಲ್ಲಿ ಒಂದು ಚೀಲ ಡಿಎಪಿ ಗೊಬ್ಬರ ಖರೀದಿಸಬೇಕಾದಲ್ಲಿ ೧೪೦೦ ಗಳಿಂದ ೨೧೦೦ ನೂರು ಕಡ್ಡಾಯವಾಗಿ ರಸಗೊಬ್ಬರ ವ್ಯಾಪಾರಿಗಳಿಗೆ ಪಾವತಿಸಲೇಬೇಕು. ಇಲ್ಲದಿದ್ದರೆ ಗೊಬ್ಬರ ಇಲ್ಲ, ಡಿಎಪಿ ಗೊಬ್ಬರ ಬಂದಿಲ್ಲ ಎಂದು ಹಾವೇರಿಯ ಬಹುತೇಕ ಎಲ್ಲಾ ಗೊಬ್ಬರದ ವ್ಯಾಪಾರಸ್ಥರು ಕೈಮುಗಿದು ಹೇಳುತ್ತಾರೆ.
ಖೊಟ್ಟಿ ಬಿತ್ತನೆ ಬೀಜ, ಗೊಬ್ಬರ ಮಾರಾಟ: ಜಿಲ್ಲೆಯಲ್ಲಿ  ತಮಿಳುನಾಡು ಮೂಲದ ಖೊಟ್ಟಿ ಗೊಬ್ಬರ ಹಾಗೂ ಬಿತ್ತನೆ ಬೀಜ ಮಾರಾಟ ಮಾಡುವ ಪ್ರಕರಣಗಳು ನಡೆದಿದ್ದು,  ಕೃಷಿ ಇಲಾಖೆಯ ಅಧಿಕಾರಿಗಳೆ ಕಳೆದ ಎರಡು ವರ್ಷಗಳ ಹಿಂದೆ ದಾಳಿಮಾಡಿ ಪತ್ತೆ ಹಚ್ಚಿದ್ದರು. ಈ ಖೊಟ್ಟಿ ಬೀಜ ಹಾಗೂ ಖೊಟ್ಟಿ ರಸಗೊಬ್ಬರವನ್ನು ಬಳಸಿದ ಅನೇಕ ರೈತರು ಬೆಳೆ ಬರದೇ ಸಾಲಾಭಾದೆಯಿಂದ ನಲುಗಿ ಹೋಗಿದ್ದರು. ಸಾಲು ಸಾಲು ರೈತ ಆತ್ಮಹತ್ಯೆಗಳು ಜಿಲ್ಲೆಯಲ್ಲಿ ವರದಿ ಯಾಗಿದ್ದವು.
ಬಿತ್ತನೆ ಬೀಜ ಹಾಗೂ ರಸ ಗೊಬ್ಬರದ ಡೀಲ್?; ಬಿತ್ತನೆ ಬೀಜ ಹಾಗೂ ರಸ ಗೊಬ್ಬರದ ಪ್ರಮಾಣಿಕರಣವನ್ನು ಯಾರು ಮಾಡುತ್ತಾರೋ? ಹೇಗೆ ಮಾಡುತ್ತಾರೋ? ಮುಗ್ದ ರೈತರಿಗೆ ತಿಳಿಯುವುದಿಲ್ಲ. ಆದರೆ ಬಿತ್ತನೆ ಬೀಜ ಹಾಗೂ ರಸ ಗೊಬ್ಬರz ವಹಿವಾಟಿಗೆ ಸಂಬಂಧಿಸಿದಂತೆ ಡೀಲ್‌ನಲ್ಲಿ ಲಕ್ಷಾಂತರ ರೂಗಳು ಕೈಯಿಂದ ಕೈಗೆ ಬದಲಾಗುವುದಂತು ಸುಳ್ಳಲ್ಲ.   ಹಾವೇರಿ ಜಿಲ್ಲೆಯ ಕೆಲವ ಭ್ರಷ್ಟ ಕೃಷಿ ಅಧಿಕಾರಿಗಳು ಕಳಪೆ ಬೀಜ, ಕಳಪೆ ಗೊಬ್ಬರ, ಕಳಪೆ ಕ್ರಿಮಿನಾಶಕ ಮಾರುವ ಕೆಲವು ಅಂಗಡಿಗಳ ಮಾಲಕರ ಪರವಾಗಿ ಇರುವ ಕಾರಣಕ್ಕೆ ಬಿತ್ತನೆ ಬೀಜ ಹಾಗೂ ರಸ ಗೊಬ್ಬರದ ಕೃತಕ ಅಭಾವ, ನಕಲಿ ಬೀಜ, ಗೊಬ್ಬರದ ವಹಿವಾಟ ನಿರಂತರವಾಗಿ ನಡೆದುಕೊಂಡು ಬಂದಿದೆ. ಬೇಲಿಯೇ ಎದ್ದು ಹೊಲ ಮೇಯ್ದರೆ ಹೊಲವನ್ನು ಕಾಪಾಡುವವರು ಯಾರು?, ಈ ಕೃಷಿಯಲ್ಲಿ ಇಲಾಖೆಯ ಅಧಿಕಾರಿಗಳು ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಎನ್ನುವುದು ರೈತರ ಪ್ರಶ್ನೆಯಾಗಿದೆ.
ಏನು ಮಾಡುತ್ತಿವೆ ರೈತ ಸಂಘಟನೆಗಳು?: ಬಿತ್ತನೆ ಬೀಜ, ಗೊಬ್ಬರ, ಬೆಳೆಗಳಿಗೆ ದರ ನಿಗದಿ ಹೀಗೆ ರೈತರು ಸಂಕಷ್ಟಕ್ಕೆ ಸಿಲುಕಿದ ವೇಳೆ ಜಿಲ್ಲೆಯ ರೈತ ಸಂಘಟನೆಗಳು ಬೀದಿಗಳಿದು ಹೋರಾಟ ಮಾಡುತ್ತವೆ. ರೈತರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತವೆ. ಆದರೆ ಮುಂಗಾರು ಹಂಗಾಮಿನಲ್ಲಿ ಗೊಬ್ಬರದ ಕೃತಕ ಅಭಾವ ಸೃಷ್ಟಿಯಾಗಿರುವ ಈ ಸಂದರ್ಭದಲ್ಲಿ ಸರ್ಕಾರವನ್ನು, ಜಿಲ್ಲಾಡಳಿತ, ಕೃಷಿ ಇಲಾಖೆಯನ್ನು ಎಚ್ಚರಿಸುವು ಕೆಲಸವನ್ನು ಏಕೆ ಮಾಡುವುದಿಲ್ಲ? ಎನ್ನುವುದು ರೈತರ ಪ್ರಶ್ನೆಯಾಗಿದೆ. ಅವಗಡಗಳು ನಡೆಯುವ ಮುನ್ನವೇ ರೈತರ ಪರವಾಗಿ ರೈತ ಸಂಘಟನೆಗಳು ಹೋರಾಟ ಮಾಡುವ ಮೂಲಕ ಜಿಲ್ಲಾಡಳಿತವನ್ನು ಕೃಷಿ ಇಲಾಖೆಯ ಎನ್ನು ಎಚ್ಚರಿಸಬೇಕಿದೆ.

ಹಾವೇರಿಜಿಲ್ಲೆ ಶಾಪಗ್ರಸ್ತವೇ?-ರೈತರಿಗೆ ನ್ಯಾಯಕೊಡಿಸುವವರು ಯಾರು?


ನನಗೆ ಒಕ್ಕಲುತನ ಬಿಟ್ಟರೇ ಬೇರೆ ಕೆಲಸ ಗೊತ್ತಿಲ್ಲ. ನಮ್ಮ ಪೂರ್ವಿಕರು ಕೃಷಿಯಿಂದಲೇ ಬದುಕು ಕಟ್ಟಿಕೊಂಡಿದ್ದಾರೆ. ಅವರಿಂದ ನಾನು ಕೃಷಿಯಲ್ಲಿ ತೊಡಗಿಸಿಕೊಂಡು ನಾಲ್ಕು ದಶಕಗಳು ಕಳೆದಿವೆ. ಕೃಷಿ ಕ್ಷೇತ್ರದ ಬಿಕ್ಕಟ್ಟುಗಳು ನಾನಾ ನಮೂನಿಯಲ್ಲಿ ರೈತರನ್ನು ಕಾಡುತ್ತವೆ. ಮಳೆ ಬಂದಾಗ ಒಂದು ಚಿಂತೆ, ಮಳೆ ಹೋದಾU ಇನ್ನೊಂದು ಚಿಂತೆ, ಬೆಳೆ ಬಂದರೆ ಉತ್ತಮ ದರ ಇರುವುದಿಲ್ಲ, ದರ ಇದ್ದರೇ ಬೆಳೆ ಇರುವುದಿಲ್ಲ. ಬಿತ್ತನೆ ಹಂಗಾಮ ಬಂದಾಗೊಮ್ಮೆ ಬಿತ್ತನೆ ಬೀಜ ಹಾಗೂ ಗೊಬ್ಬರದ ಸಮಸ್ಯೆ ರೈತರನ್ನು ಕಾಡುತ್ತಲೇ ಇರುತ್ತದೆ ಎಂದು ಹಾವೇರಿಯ ಪ್ರಗತಿಪರ ರೈತ ಶಿವಯೋಗಿ ಬೆನ್ನೂರು ಬೇಸರ ವ್ಯಕ್ತಪಡಿಸಿದರು.
ಸರ್ಕಾರ ಕೃಷಿ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸದೇ ಇರುವುದು ಈ ಎಲ್ಲ ಸಮಸ್ಯೆಗಳಿಗೆ ಕಾರಣವಾಗಿದೆ. ಹಾವೇರಿಜಿಲ್ಲೆ  ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ರೈತರಿಗೆ ಸಕಾಲಕ್ಕೆ ಬಿತ್ತನೆ ಬೀಜ ಹಾಗೂ ಗೊಬ್ಬರವನ್ನು ಒದಗಿಸಿ ಕೊಡುವುದು ಸರ್ಕಾರದ, ಜಿಲ್ಲಾಡಳಿತದ, ಕೃಷಿ ಇಲಾಖೆಯ ಕರ್ತವ್ಯವಾಗಿದೆ.  ರೈತರನ್ನು ಹಗಲು ದರೋಡೆ ಮಾಡುತ್ತಿರುವ ವ್ಯಾಪಾರಿಗಳ ಬಗ್ಗೆ ಜಿಲ್ಲೆಯ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು  ಗಮನ ಹರಿಸಿಕ್ರಮ ಕೈಗೊಂಡು ಹಗಲು ದರೋಡೆ ನಿಲ್ಲಿಸಬಹುದೆಂಬ ಆಸೆ ನನ್ನದಾಗಿದೆ.
ಹಾವೇರಿ ಜಿಲ್ಲೆ ಪ್ರತಿವರ್ಷ ಬಿತ್ತನೆ ಹಂಗಾಮ ಆರಂಭದಲ್ಲಿ ಬಿತ್ತನೆ ಬೀಜ ಹಾಗೂ ಕಾಂಪ್ಲೆಕ್ಸ್ ಗೊಬ್ಬರಗಳ ಅಭಾವ ಸೃಷ್ಟಿ ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಹಾವೇರಿಯಲ್ಲಿ ಗೊಬ್ಬರಕ್ಕಾಗಿ ಎರಡು ಹೆಣಗಳು ಬಿದ್ದಿವೆ. ಆದರೂ ಸರ್ಕಾರ, ಅಧಿಕಾರಿಗಳು ಪಾಠ ಕಲಿತಿಲ್ಲ. ಹಾವೇರಿ ಜಿಲ್ಲೆ ಒಂದು ರೀತಿ ಶಾಪಗ್ರಸ್ತಜಿಲ್ಲೆಯಂತಾಗಿದೆ. ಕಳೆದ ಎರಡು ದಶಕಗಳಿಂದ ಬಿತ್ತನೆ ಬೀಜ, ಗೊಬ್ಬರದ ಸಮಸ್ಯೆ ಇದೆ. ಈ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗದಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.
ಹಾವೇರಿಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ್ ಪಾಟೀಲ್ ದೂರದ ವಿಜಯಪುರದ ಜಿಲ್ಲೆಯರಾಗಿರುವುದರಿಂದ ಇಲ್ಲಿನ ಸಮಸ್ಯೆಗಳು ಅವರಿಗೆ ತಲುಪಿ, ಅವರು ಇಲ್ಲಿಗೆ ಬಂದು ಅಧಿಕಾರಿಗಳ ಸಭೆ ನಡೆಸಿ ಕಾಟಾಚಾರದ ಸೂಚನೆಗಳನ್ನು ನೀಡುವಷ್ಟರಲ್ಲಿಯೇ ಬಿತ್ತನೆ ಹಂಗಾಮವೇ ಮೂಗಿದು ಹೋಗಿರುತ್ತದೆ. ಸ್ಥಳೀಯ  ಜನಪ್ರತಿನಿಧಿಗಳು ಈ ಈ ಬಗ್ಗೆ ಗಮನ ಹರಿಸಲು ವಿಫಲರಾಗಿದ್ದಾರೆ.  ಒಬ್ಬ ಅತಿ ಸಣ್ಣ ರೈತ ಒಂದು ಹಂಗಾಮಿನಲ್ಲಿ ೨೫೦೦ ರೂಗಳನ್ನು ಗೊಬ್ಬರಕ್ಕಾಗಿ ಖರ್ಚು ಮಾಡುತ್ತಾನೆಂದರೆ, ಸಾವಿರಾರು ರೈತರ ಗೊಬ್ಬರಕ್ಕಾಗಿ ಖರ್ಚುಮಾಡುವ   ಹಣದ ವಹಿವಾಟು ಎಷ್ಟಿರಬಹುದೆಂದು ಅಂದಾಜಿಸಿದರೇ ಭಯವಾಗುತ್ತದೆ,  ರೈತರ ಹಗಲು ದರೋಡೆ ಮಾಡುವ  ಮಾಫಿಯಾ ಜಾಲವನ್ನು ತಡೆದು, ರೈತರಿಗೆ ಸರ್ಕಾರ ನಿಗದಿಪಡಿಸಿದ ದರದಲ್ಲಿ ಬಿತ್ತನೆ ಬೀಜ ಹಾಗೂ  ರಸಗೊಬ್ಬರ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ರೈತ ಶಿವಯೋಗಿ ಬೆನ್ನೂರ.

LEAVE A REPLY

Please enter your comment!
Please enter your name here

Subscribe

spot_imgspot_img

Popular

ರಸಗೊಬ್ಬರಕ್ಕಾಗಿ ಗೋಲಿಬಾರ್ ನಡೆದ ಹಾವೇರಿಯಲ್ಲಿ ಮತ್ತೆ ರಸಗೊಬ್ಬರಕ್ಕೆ ಹಾಹಾಕಾರ”!
* ವ್ಯಾಪಾರಿಗಳಿಂದ ಕೃತಕ ಅಭಾವ ಸೃಷ್ಟಿಸಿ ಹಗಲು ದರೋಡೆ! * ಇಬ್ಬರು ರೈತರ ಹೆಣ ಬಿದ್ದರೂ ಎಚ್ಚತ್ತುಕೊಳ್ಳದ ಸರ್ಕಾರ-ಕೃಷಿ ಇಲಾಖೆ
ಹಾವೇರಿ: ಕೃಷಿ ಪ್ರಧಾನ ಜಿಲ್ಲೆಯಾಗಿರುವ ಹಾವೇರಿಜಿಲ್ಲೆಯಲ್ಲಿ ಇದೀಗ ಮುಂಗಾರು ಹಂಗಾಮ ಆರಂಭವಾಗಿದ್ದು, ಭೂಮಿಯನ್ನು ಬಿತ್ತಲು ಹದಾ ಮಾಡಿಟ್ಟುಕೊಂಡಿರುವ ರೈತ ಸಮೂಹ  ಮುಂಗಾರು ಉತ್ತಮವಾಗಿ ಆರಂಭವಾಗಿರುವ ಕಾರಣಕ್ಕೆ ಬಿತ್ತನೆ ಕಾರ್ಯ ಕೈಗೊಳ್ಳುತ್ತಿದ್ದಾರೆ. ಪ್ರತಿವರ್ಷದಂತೆ ಪ್ರಸಕ್ತ ವರ್ಷವೂ ಸಹ ಜಿಲ್ಲೆಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕಾಗಿ ಹಾಹಾಕಾರ ಆರಂಭವಾಗಿದೆ. ರೈತರು ಡಿಎಪಿ ರಸಗೊಬ್ಬರಕ್ಕೆ ಬೇಡಿಕೆ ಇಡುತ್ತಿರುವುದನ್ನು ಮನಗಂಡು ಜಿಲ್ಲೆಯ ಕೆಲವು ರಸಗೊಬ್ಬರ ವ್ಯಾಪಾರಿಗಳು ಡಿಎಪಿ ರಸೊಬ್ಬರದ ಕೃತಕ ಅಭಾವವನ್ನು ಸೃಷ್ಟಿಸಿ ಹೆಚ್ಚಿನ ಬೆಲೆಗೆ  ಮಾರಾಟ ಮಾಡುತ್ತಿರುವು  ಆರೋಪಗಳು ಕೇಳಿ ಬಂದಿವೆ.
ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕಾಗಿ ಜೂನ್ ೧೦- ೨೦೦೮ ರಂದು ಹಾವೇರಿಯ ಹೊಸಮನಿ ಸಿದ್ದಪ್ಪವೃತ್ತದಲ್ಲಿ ರೈತರು ನಡೆಸುತ್ತಿದ್ದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿ ಪೊಲೀಸರು ನಡೆಸಿದ ಗೋಲಿಬಾರ್‌ಗೆ ಇಬ್ಬರು ರೈತರು ಸಾವನ್ನಪ್ಪಿದ್ದರು. ಗುಂಡೇಟಿನಿಂದ ೨೦ಕ್ಕೂ ಅಧಿಕ ಜನರು ಗಾಯಗೊಂಡಿದ್ದರು. ಈ ದುರ್ಘಟನೆಯಿಂದ ಪಾಠ ಕಲಿಯದ ಸರ್ಕಾರ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವ ಕಾರಣಕ್ಕೆ ಇದೀಗ ಮತ್ತೆ ಹಾವೇರಿಯಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಅಭಾವ ಸೃಷ್ಟಿಯಾಗಿದ್ದು, ರೈತರು ತಮಗಿಷ್ಟದ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಖರೀದಿಸಲು ಪರದಾಡುತ್ತಿದ್ದಾರೆ.
“ಒಂದಡೆ ಸರ್ಕಾರ, ಜಿಲ್ಲಾಡಳಿತ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಕೊರತೆ ಇಲ” ಎಂದು ಹೇಳುತ್ತಿದೆ. ಆದರೆ ನಿಜವಾದ ಸಂಗತಿಯೇ ಬೇರೆಯಾಗಿದೆ. ಬಿತ್ತನೆಗೆ ಬೇಕಾದ ಬೀಜ-ಗೊಬ್ಬರಗಳ ಖರೀದಿಗೆ ರೈತ ಸಮೂಹ ಮುಂದಾಗಿರುವ ಕಾರಣಕ್ಕೆ ಅದರಲ್ಲೂ ಹಾವೇರಿ ಜಿಲ್ಲೆಯ ಹಾವೇರಿ ತಾಲೂಕಿನ ರೈತರು ಬಿತ್ತನೆಯ ಕಾಲಕ್ಕೆ ಡಿಎಪಿ ರಸಗೊಬ್ಬರವನ್ನು ಮುಂಗಾರು ಹಂಗಾಮಿನಲ್ಲಿ ಬಿತ್ತುವ ಬೀಜಗಳ ಜೊತೆಗೆ ಉಪಯೋಗಿಸುತ್ತಾ ಬಂದಿದ್ದು, ಇದೀಗ ರೈತರು ಡಿಎಪಿ ಗೊಬ್ಬರ ಖರೀದಿಗೆ ಮುಂದಾಗಿರುವುದನ್ನು ಕಂಡು ಕೆಲವು ಗೊಬ್ಬರ ಮಾರಾಟ ಮಾಡುವ ವ್ಯಾಪಾರಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಅಸ್ತ್ರವಾಗಿ ಬಳಸಿಕೊಂಡ ಹೆಚ್ಚಿನ ದರಕ್ಕೆ ಮಾರುತ್ತಿರುವುದು ಗುಟ್ಟಾಗೇನು ಉಳಿದಿಲ್ಲ.
ಗುಪ್ತಸ್ಥಳಗಳಲ್ಲಿ ಗೊಬ್ಬರ ಸಂಗ್ರಹ: ರಾಸಾಯನಿಕ ಗೊಬ್ಬರ ಮಾರಾಟ ಮಾಡುವ ಅಂಗಡಿಗಳ ಮಾಲೀಕರು ಏಪ್ರಿಲ್ ತಿಂಗಳಲ್ಲಿ ಡಿಎಪಿ ಗೊಬ್ಬರವನ್ನು ಖರೀದಿಸಿ ಕೆಲವು ಗುಪ್ತ ಸ್ಥಳಗಳಲ್ಲಿ ಸಂಗ್ರಹಿಸಿಟ್ಟಿದ್ದು, ಮೇ ತಿಂಗಳ ಪೂರ್ವ ಮುಂಗಾರು ಆರಂಭದಲ್ಲಿ ರಸಗೊಬ್ಬರದ ಕೃತಕ ಅಭಾವವನ್ನು ಸೃಷ್ಟಿಸಿ ಹಾವೇರಿಯ ರೈತರಲ್ಲಿ   ಡಿಎಪಿ ಗೊಬ್ಬರದ ಹಾಹಾಕಾರಕ್ಕೆ ಕಾರಣರಾಗಿದ್ದಾರೆ.
ಗಬ್ಬರದ ದರ ಎಷ್ಟು?: ಇದೀಗ ೫೦ ಕೆಜಿ ತೂಕದ ಒಂದು ಚೀಲ ಡಿಎಪಿ ಗೊಬ್ಬರ ಬೆಲೆ ೧,೪೦೦ರೂಗಳೆಂದು ಸರ್ಕಾರ ನಿಗದಿಪಡಿಸಿದೆ. ಸರ್ಕಾರದ ಆದೇಶವನ್ನು ಚಾಪೆ ಕೆಳಗೆ ಮಾಡಿ, ರಂಗೋಲಿ ಕೆಳಗೆ ನುಸುಳುವ ವ್ಯಪಾರಿಗಳು ಒಂದು ಚೀಲ ಡಿಎಪಿ ಗೊಬ್ಬರಕ್ಕೆ ರೈತರು ಬೇಡಿಕೆ ಇಟ್ಟಲ್ಲಿ ಡಿಎಪಿ ಜೊತೆಗೆ ೨.೫ ಕೆಜಿ ತೂಕದ ಸೆಟ್‌ರೈಟ್ ರಾಸಾಯನಿಕಗಳ  ಒಂದು ಪಾಕೆಟ್ ತೆಗೆದುಕೊಳ್ಳಲೇಬೇಕು, ಇದು ಕಡ್ಡಾಯ!.
ಡಿಎಪಿ ಜೊತೆಗೆ ಸೆಟ್‌ರೈಟ್ ಖರೀದಿ ಕಡ್ಡಾಯ:  ಈ ಸೆಟ್‌ರೈಟ್ ರಾಸಾಯನಿಕ ಪಾಕೆಟ್ ದರ ೫೦೦ ರಿಂದ ೭೦೦ ರೂಪಾಯಿಗಳವರೆಗೆ ನಿಗದಿ ಪಡಿಸಿದ್ದಾರೆ ವ್ಯಾಪಾರಿಗಳು. ಇದರ ಅಸಲಿ ದರ ೨೦೦ರೂಗಳಾಗಬಹುದು, ಇದರ ಅವಶ್ಯಕತೆ ರೈತರಿಗೆ ಇರುವುದಿಲ್ಲ. ಒಟ್ಟಿನಲ್ಲಿ ಒಂದು ಚೀಲ ಡಿಎಪಿ ಗೊಬ್ಬರ ಖರೀದಿಸಬೇಕಾದಲ್ಲಿ ೧೪೦೦ ಗಳಿಂದ ೨೧೦೦ ನೂರು ಕಡ್ಡಾಯವಾಗಿ ರಸಗೊಬ್ಬರ ವ್ಯಾಪಾರಿಗಳಿಗೆ ಪಾವತಿಸಲೇಬೇಕು. ಇಲ್ಲದಿದ್ದರೆ ಗೊಬ್ಬರ ಇಲ್ಲ, ಡಿಎಪಿ ಗೊಬ್ಬರ ಬಂದಿಲ್ಲ ಎಂದು ಹಾವೇರಿಯ ಬಹುತೇಕ ಎಲ್ಲಾ ಗೊಬ್ಬರದ ವ್ಯಾಪಾರಸ್ಥರು ಕೈಮುಗಿದು ಹೇಳುತ್ತಾರೆ.
ಖೊಟ್ಟಿ ಬಿತ್ತನೆ ಬೀಜ, ಗೊಬ್ಬರ ಮಾರಾಟ: ಜಿಲ್ಲೆಯಲ್ಲಿ  ತಮಿಳುನಾಡು ಮೂಲದ ಖೊಟ್ಟಿ ಗೊಬ್ಬರ ಹಾಗೂ ಬಿತ್ತನೆ ಬೀಜ ಮಾರಾಟ ಮಾಡುವ ಪ್ರಕರಣಗಳು ನಡೆದಿದ್ದು,  ಕೃಷಿ ಇಲಾಖೆಯ ಅಧಿಕಾರಿಗಳೆ ಕಳೆದ ಎರಡು ವರ್ಷಗಳ ಹಿಂದೆ ದಾಳಿಮಾಡಿ ಪತ್ತೆ ಹಚ್ಚಿದ್ದರು. ಈ ಖೊಟ್ಟಿ ಬೀಜ ಹಾಗೂ ಖೊಟ್ಟಿ ರಸಗೊಬ್ಬರವನ್ನು ಬಳಸಿದ ಅನೇಕ ರೈತರು ಬೆಳೆ ಬರದೇ ಸಾಲಾಭಾದೆಯಿಂದ ನಲುಗಿ ಹೋಗಿದ್ದರು. ಸಾಲು ಸಾಲು ರೈತ ಆತ್ಮಹತ್ಯೆಗಳು ಜಿಲ್ಲೆಯಲ್ಲಿ ವರದಿ ಯಾಗಿದ್ದವು.
ಬಿತ್ತನೆ ಬೀಜ ಹಾಗೂ ರಸ ಗೊಬ್ಬರದ ಡೀಲ್?; ಬಿತ್ತನೆ ಬೀಜ ಹಾಗೂ ರಸ ಗೊಬ್ಬರದ ಪ್ರಮಾಣಿಕರಣವನ್ನು ಯಾರು ಮಾಡುತ್ತಾರೋ? ಹೇಗೆ ಮಾಡುತ್ತಾರೋ? ಮುಗ್ದ ರೈತರಿಗೆ ತಿಳಿಯುವುದಿಲ್ಲ. ಆದರೆ ಬಿತ್ತನೆ ಬೀಜ ಹಾಗೂ ರಸ ಗೊಬ್ಬರz ವಹಿವಾಟಿಗೆ ಸಂಬಂಧಿಸಿದಂತೆ ಡೀಲ್‌ನಲ್ಲಿ ಲಕ್ಷಾಂತರ ರೂಗಳು ಕೈಯಿಂದ ಕೈಗೆ ಬದಲಾಗುವುದಂತು ಸುಳ್ಳಲ್ಲ.   ಹಾವೇರಿ ಜಿಲ್ಲೆಯ ಕೆಲವ ಭ್ರಷ್ಟ ಕೃಷಿ ಅಧಿಕಾರಿಗಳು ಕಳಪೆ ಬೀಜ, ಕಳಪೆ ಗೊಬ್ಬರ, ಕಳಪೆ ಕ್ರಿಮಿನಾಶಕ ಮಾರುವ ಕೆಲವು ಅಂಗಡಿಗಳ ಮಾಲಕರ ಪರವಾಗಿ ಇರುವ ಕಾರಣಕ್ಕೆ ಬಿತ್ತನೆ ಬೀಜ ಹಾಗೂ ರಸ ಗೊಬ್ಬರದ ಕೃತಕ ಅಭಾವ, ನಕಲಿ ಬೀಜ, ಗೊಬ್ಬರದ ವಹಿವಾಟ ನಿರಂತರವಾಗಿ ನಡೆದುಕೊಂಡು ಬಂದಿದೆ. ಬೇಲಿಯೇ ಎದ್ದು ಹೊಲ ಮೇಯ್ದರೆ ಹೊಲವನ್ನು ಕಾಪಾಡುವವರು ಯಾರು?, ಈ ಕೃಷಿಯಲ್ಲಿ ಇಲಾಖೆಯ ಅಧಿಕಾರಿಗಳು ಬೆಕ್ಕಿಗೆ ಗಂಟೆ ಕಟ್ಟುವವರು ಯಾರು? ಎನ್ನುವುದು ರೈತರ ಪ್ರಶ್ನೆಯಾಗಿದೆ.
ಏನು ಮಾಡುತ್ತಿವೆ ರೈತ ಸಂಘಟನೆಗಳು?: ಬಿತ್ತನೆ ಬೀಜ, ಗೊಬ್ಬರ, ಬೆಳೆಗಳಿಗೆ ದರ ನಿಗದಿ ಹೀಗೆ ರೈತರು ಸಂಕಷ್ಟಕ್ಕೆ ಸಿಲುಕಿದ ವೇಳೆ ಜಿಲ್ಲೆಯ ರೈತ ಸಂಘಟನೆಗಳು ಬೀದಿಗಳಿದು ಹೋರಾಟ ಮಾಡುತ್ತವೆ. ರೈತರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತವೆ. ಆದರೆ ಮುಂಗಾರು ಹಂಗಾಮಿನಲ್ಲಿ ಗೊಬ್ಬರದ ಕೃತಕ ಅಭಾವ ಸೃಷ್ಟಿಯಾಗಿರುವ ಈ ಸಂದರ್ಭದಲ್ಲಿ ಸರ್ಕಾರವನ್ನು, ಜಿಲ್ಲಾಡಳಿತ, ಕೃಷಿ ಇಲಾಖೆಯನ್ನು ಎಚ್ಚರಿಸುವು ಕೆಲಸವನ್ನು ಏಕೆ ಮಾಡುವುದಿಲ್ಲ? ಎನ್ನುವುದು ರೈತರ ಪ್ರಶ್ನೆಯಾಗಿದೆ. ಅವಗಡಗಳು ನಡೆಯುವ ಮುನ್ನವೇ ರೈತರ ಪರವಾಗಿ ರೈತ ಸಂಘಟನೆಗಳು ಹೋರಾಟ ಮಾಡುವ ಮೂಲಕ ಜಿಲ್ಲಾಡಳಿತವನ್ನು ಕೃಷಿ ಇಲಾಖೆಯ ಎನ್ನು ಎಚ್ಚರಿಸಬೇಕಿದೆ.

ಹಾವೇರಿಜಿಲ್ಲೆ ಶಾಪಗ್ರಸ್ತವೇ?-ರೈತರಿಗೆ ನ್ಯಾಯಕೊಡಿಸುವವರು ಯಾರು?


ನನಗೆ ಒಕ್ಕಲುತನ ಬಿಟ್ಟರೇ ಬೇರೆ ಕೆಲಸ ಗೊತ್ತಿಲ್ಲ. ನಮ್ಮ ಪೂರ್ವಿಕರು ಕೃಷಿಯಿಂದಲೇ ಬದುಕು ಕಟ್ಟಿಕೊಂಡಿದ್ದಾರೆ. ಅವರಿಂದ ನಾನು ಕೃಷಿಯಲ್ಲಿ ತೊಡಗಿಸಿಕೊಂಡು ನಾಲ್ಕು ದಶಕಗಳು ಕಳೆದಿವೆ. ಕೃಷಿ ಕ್ಷೇತ್ರದ ಬಿಕ್ಕಟ್ಟುಗಳು ನಾನಾ ನಮೂನಿಯಲ್ಲಿ ರೈತರನ್ನು ಕಾಡುತ್ತವೆ. ಮಳೆ ಬಂದಾಗ ಒಂದು ಚಿಂತೆ, ಮಳೆ ಹೋದಾU ಇನ್ನೊಂದು ಚಿಂತೆ, ಬೆಳೆ ಬಂದರೆ ಉತ್ತಮ ದರ ಇರುವುದಿಲ್ಲ, ದರ ಇದ್ದರೇ ಬೆಳೆ ಇರುವುದಿಲ್ಲ. ಬಿತ್ತನೆ ಹಂಗಾಮ ಬಂದಾಗೊಮ್ಮೆ ಬಿತ್ತನೆ ಬೀಜ ಹಾಗೂ ಗೊಬ್ಬರದ ಸಮಸ್ಯೆ ರೈತರನ್ನು ಕಾಡುತ್ತಲೇ ಇರುತ್ತದೆ ಎಂದು ಹಾವೇರಿಯ ಪ್ರಗತಿಪರ ರೈತ ಶಿವಯೋಗಿ ಬೆನ್ನೂರು ಬೇಸರ ವ್ಯಕ್ತಪಡಿಸಿದರು.
ಸರ್ಕಾರ ಕೃಷಿ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸದೇ ಇರುವುದು ಈ ಎಲ್ಲ ಸಮಸ್ಯೆಗಳಿಗೆ ಕಾರಣವಾಗಿದೆ. ಹಾವೇರಿಜಿಲ್ಲೆ  ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ರೈತರಿಗೆ ಸಕಾಲಕ್ಕೆ ಬಿತ್ತನೆ ಬೀಜ ಹಾಗೂ ಗೊಬ್ಬರವನ್ನು ಒದಗಿಸಿ ಕೊಡುವುದು ಸರ್ಕಾರದ, ಜಿಲ್ಲಾಡಳಿತದ, ಕೃಷಿ ಇಲಾಖೆಯ ಕರ್ತವ್ಯವಾಗಿದೆ.  ರೈತರನ್ನು ಹಗಲು ದರೋಡೆ ಮಾಡುತ್ತಿರುವ ವ್ಯಾಪಾರಿಗಳ ಬಗ್ಗೆ ಜಿಲ್ಲೆಯ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು  ಗಮನ ಹರಿಸಿಕ್ರಮ ಕೈಗೊಂಡು ಹಗಲು ದರೋಡೆ ನಿಲ್ಲಿಸಬಹುದೆಂಬ ಆಸೆ ನನ್ನದಾಗಿದೆ.
ಹಾವೇರಿ ಜಿಲ್ಲೆ ಪ್ರತಿವರ್ಷ ಬಿತ್ತನೆ ಹಂಗಾಮ ಆರಂಭದಲ್ಲಿ ಬಿತ್ತನೆ ಬೀಜ ಹಾಗೂ ಕಾಂಪ್ಲೆಕ್ಸ್ ಗೊಬ್ಬರಗಳ ಅಭಾವ ಸೃಷ್ಟಿ ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಹಾವೇರಿಯಲ್ಲಿ ಗೊಬ್ಬರಕ್ಕಾಗಿ ಎರಡು ಹೆಣಗಳು ಬಿದ್ದಿವೆ. ಆದರೂ ಸರ್ಕಾರ, ಅಧಿಕಾರಿಗಳು ಪಾಠ ಕಲಿತಿಲ್ಲ. ಹಾವೇರಿ ಜಿಲ್ಲೆ ಒಂದು ರೀತಿ ಶಾಪಗ್ರಸ್ತಜಿಲ್ಲೆಯಂತಾಗಿದೆ. ಕಳೆದ ಎರಡು ದಶಕಗಳಿಂದ ಬಿತ್ತನೆ ಬೀಜ, ಗೊಬ್ಬರದ ಸಮಸ್ಯೆ ಇದೆ. ಈ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಾಗದಿರುವುದು ನಿಜಕ್ಕೂ ಬೇಸರದ ಸಂಗತಿಯಾಗಿದೆ.
ಹಾವೇರಿಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ್ ಪಾಟೀಲ್ ದೂರದ ವಿಜಯಪುರದ ಜಿಲ್ಲೆಯರಾಗಿರುವುದರಿಂದ ಇಲ್ಲಿನ ಸಮಸ್ಯೆಗಳು ಅವರಿಗೆ ತಲುಪಿ, ಅವರು ಇಲ್ಲಿಗೆ ಬಂದು ಅಧಿಕಾರಿಗಳ ಸಭೆ ನಡೆಸಿ ಕಾಟಾಚಾರದ ಸೂಚನೆಗಳನ್ನು ನೀಡುವಷ್ಟರಲ್ಲಿಯೇ ಬಿತ್ತನೆ ಹಂಗಾಮವೇ ಮೂಗಿದು ಹೋಗಿರುತ್ತದೆ. ಸ್ಥಳೀಯ  ಜನಪ್ರತಿನಿಧಿಗಳು ಈ ಈ ಬಗ್ಗೆ ಗಮನ ಹರಿಸಲು ವಿಫಲರಾಗಿದ್ದಾರೆ.  ಒಬ್ಬ ಅತಿ ಸಣ್ಣ ರೈತ ಒಂದು ಹಂಗಾಮಿನಲ್ಲಿ ೨೫೦೦ ರೂಗಳನ್ನು ಗೊಬ್ಬರಕ್ಕಾಗಿ ಖರ್ಚು ಮಾಡುತ್ತಾನೆಂದರೆ, ಸಾವಿರಾರು ರೈತರ ಗೊಬ್ಬರಕ್ಕಾಗಿ ಖರ್ಚುಮಾಡುವ   ಹಣದ ವಹಿವಾಟು ಎಷ್ಟಿರಬಹುದೆಂದು ಅಂದಾಜಿಸಿದರೇ ಭಯವಾಗುತ್ತದೆ,  ರೈತರ ಹಗಲು ದರೋಡೆ ಮಾಡುವ  ಮಾಫಿಯಾ ಜಾಲವನ್ನು ತಡೆದು, ರೈತರಿಗೆ ಸರ್ಕಾರ ನಿಗದಿಪಡಿಸಿದ ದರದಲ್ಲಿ ಬಿತ್ತನೆ ಬೀಜ ಹಾಗೂ  ರಸಗೊಬ್ಬರ ಪೂರೈಕೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎನ್ನುತ್ತಾರೆ ರೈತ ಶಿವಯೋಗಿ ಬೆನ್ನೂರ.

LEAVE A REPLY

Please enter your comment!
Please enter your name here

Subscribe

spot_imgspot_img

More like this
Related

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ

ಹಾವೇರಿ:  ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ ಹಾವೇರಿ: ಜಿಲ್ಲೆಯ ನಾಲ್ಕು...

ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೋವಿಡ್ ವಾರ್ಡ

-ಹಾವೇರಿ : ವೃದ್ದನಿಗೆ ಕೊರೊನಾ ಪಾಸಿಟಿವ್, ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ...

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ

ಹೋರಾಟ ಬೆಂಬಲಿಸಿದ ಜನ ಪ್ರತಿನಿಧಿಗಳಿಗೆ ಪೌರ ನೌಕರರ ಕೃತಜ್ಞತೆ ಹಾವೇರಿ; ವಿವಿಧ ಬೇಡಿಕೆಗಳ...