
- ಹಾವೇರಿ ವಿವಿಗೆ ಸಿಂಡಿಕೇಟ್ ಸದಸ್ಯರಾಗಿ
ಡಾ.ರಮೇಶ ತೆವರಿ ನೇಮಕ
ಹಾವೇರಿ: ಇಲ್ಲಿನ ಹಾವೇರಿ ವಿವಿ ಸಿಂಡಿಕೇಟ್
ಹಾಗೂ ವಿದ್ಯಾವಿಷಯಕ ಪರಿಷತ್ತಿನ ಸಮಿತಿಗೆ
ಸದಸ್ಯರಾಗಿ ಬಂಕಾಪುರದ ಸರ್ಕಾರಿ ಪ್ರಥಮ
ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ರಮೇಶ.
ಎನ್.ತೆವರಿ ಅವರನ್ನು ನೇಮಿಸಿ ಹಾವೇರಿ
ವಿವಿ ಕುಲಪತಿ ಪ್ರೊ.ಸುರೇಶ ಎಸ್.
ಜಂಗಮಶೆಟ್ಟಿ ಅಧಿಸೂಚನೆ ಹೊರಡಿಸಿದ್ದಾರೆ.
ಪ್ರಸ್ತುತ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ರಮೇಶ
ತೆವರಿ ಈ ಹಿಂದೆ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದ ಸಿಂಡಿಕೇಟ್
ಸದಸ್ಯರಾಗಿ, ಪಠ್ಯಕ್ರಮ ರಚನಾ ಸಮಿತಿಯ ಸದಸ್ಯರಾಗಿ ಹಾಗೂ ಹಾವೇರಿ
ಜಿಲ್ಲಾ ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷರಾಗಿ, ಹಾವೇರಿಯಲ್ಲಿ ಜರುಗಿದ
ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಸ್ಮರಣ ಸಂಚಿಕೆಯ ಸಹಕಾರ್ಯ
ದರ್ಶಿ ಯಾಗಿ ಹೀಗೆ ಇನ್ನಿತರ ಸಾಹಿತ್ಯಪರ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ಕಾರ್ಯನಿರ್ವಹಿಸಿದ ಅನುಭವನ ಹೊಂದಿರುತ್ತಾರೆ. ಈ
ಸಂದರ್ಭದಲ್ಲಿ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿಗಳು ಅಭಿನಂದಿದ್ದಾರೆ.

